*ಕೊನೆಗೂ ಪತ್ರಕರ್ತರ ಪಾಲಿಗೆ ಮಾಧ್ಯಮ ರಾಮಯ್ಯ ರಾದ ಸಾಮಾಜಿಕ ಹರಿಕಾರ ಮುಖ್ಯಮಂತ್ರಿ* :- ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೂ ಯಾವೊಂದು ಸರ್ಕಾರಗಳು ಪತ್ರಕರ್ತರ ನೋವಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಕಿವಿ ಇದ್ದು ಕುರುಡರಾಗಿದ್ದು ಪ್ರತಿಯೊಬ್ಬ ಪತ್ರಕರ್ತರಿಗೆ ತಿಳಿದಂತ ವಿಚಾರ. ರಾಜ್ಯದ ಪ್ರಮುಖ ಕೆಲ ಪತ್ರಕರ್ತರ ಸಂಘಟನೆಗಳು ಮಾಲಿಕರಿಂದ ಪೇಸ್ಲಿಫ್ ಗಾಗಿ,ಜೀವವಿಮೆ ಕೊಡಿಸುವುದಕ್ಕೆ ತುಟಿ ಪಿಟಕ್ ಎನ್ನದೆ ಸರ್ಕಾರದ ವಿರುದ್ದ ಧ್ವನಿ ಎತ್ತಿ ಹೋರಾಟ ಮಾಡದೇ ಬರೀ ಅವರ ಕಛೇರಿ ಬಾಗಿಲುಗಳನ್ನು ಕಾದ ಫಲದಿಂದ ಇಲ್ಲಿಯವರೆಗೆ ರಾಜ್ಯದ ಗ್ರಾಮಾಂತರ ಪತ್ರಕರ್ತರಿಗೆ ಬಸ್-ಪಾಸ್ ಮರೀಚಿಕೆಯಾಗಿತ್ತು. ಕಳೆದ ಎರೆಡು ವರ್ಷಗಳಿಂದ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಹೋರಾಟದ ಫಲವಾಗಿ ಇಂದು ಪತ್ರಕರ್ತರ ಮೊಗದಲ್ಲಿ ಕೊಂಚ ಸಂತೋಷ ಮೂಡಿರುವುದಂತೂ ಸತ್ಯ. ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗದಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎರೆಡು ಬೃಹತ್ ಪ್ರಮಾಣದ ಧರಣಿ ಪ್ರತಿಭಟನೆ ಹೋರಾಟಗಳು,2023 ಆಗಸ್ಟ್ 14 ರಂದು ಬೆಂಗಳೂರು ನಗರದ ಫ್ರಿಡಂ ಪಾರ್ಕಾ ನಲ್ಲಿ ನಮ್ಮ ಕಾನಿಪ ಧ್ವನಿ ವತಿಯಿಂದ ಸ್ವಾತಂತ್ರ್ಯ ಬಂದಾಗಿನಿಂದ ನಮಗೆ ಇದುವರೆಗೂ ಸ್ವಾತಂತ್ರ್ಯ ಸಿಗದೆ ಮೂಲಭೂತ ಕಾಣದಾಗಿದೆ ಎಂಬ ತೀಕ್ಷ್ಣವಾದ ಹೋರಾಟಕ್ಕೆ ಮಣಿದ ಸಿದ್ದರಾಮಯ್ಯ ನವರ ಸರ್ಕಾರ ದಿನಾಂಕ:-21/8/2023 ರಂದು ಗೃಹ ಕಛೇರಿ ಕೃಷ್ಣಾದಲ್ಲಿ ಸಭೆ ಸೇರಿ ಸುಧೀರ್ಘ ಚರ್...