ಜಮೀರ್ ಅಹಮ್ಮದ್ ಖಾನ್ ಆವರಿಗೆ ಸಚಿವ ಸ್ಥಾನ ನೀಡಲು ಅಗ್ರಹ . ತೇರದಾಳ ( ರಬಕವಿ ) : ರಬಕವಿ ಬನಹಟ್ಟಿ ತಾಲ್ಲೂಕು ಸಮಸ್ತ ಮುಸ್ಲಿಂ ಸಮುದಾಯದಿಂದ ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಅಗ್ರಹಿಸಿದರು . ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಬಾರಿಗಡ್ಡಿ, ಜಮೀರ್ ಅಹಮ್ಮದ್ ಖಾನ್ ರವರು ಕೇವಲ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗದೇ ಸರ್ವಜನಾಂಗದ ನಾಯಕರಾಗಿ ಹೊರಹಮ್ಮಿದ್ದಾರೆ. ಆಯ್ಕೆಯಾಗಿ ಬಂದಿರುವ ಚಾಮರಾಜನಗರ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಕರ್ನಾಟಕದಾದ್ಯಂತ ಜನಪರ ಕೆಲಸಗಳ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿ ಕಾರ್ಯಗಳು ಇದಲ್ಲದೆ , ಜನಸೇವೆ ಮಾಡುತ್ತಿರುವ ಇವರಿಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅಗ್ರಹಿಸಿದರು . ಮೌಲಾನಾ ಮೋಹಸಿನ್ ಅಹಮದ್ ಗೋಕಾಕ್ ಅವರು ಬೀ ಜಡ್ ಜಮೀರ್ ಅಹ್ಮದ್ ಖಾನ್ ಅವರು ಯಾವುದೇ ಸಮುದಾಯಕ್ಕೆ ಸೀಮಿತವಾಗದೆ ಇಡೀ ರಾಜ್ಯದ್ಯಂತ ನಾಯಕರಾಗಿ ಹೊರಹೊಮ್ಮಿದ್ದು , ಡಿಕೆ ಶಿವಕುಮಾರ್ ಅವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಒಂದು ವೇಳೆ ನೀಡದಿದ್ದಲ್ಲಿ , ಮುಂದಿನ ದಿನಮಾನಗಳಲ್ಲಿ ಬೇರೆ ಮಾರ್ಗ ನೋಡಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲ...