ಈಗಿನ ಕಾಲದಲ್ಲಿ ಪೊಲೀಸ್ ಅಧಿಕಾರಿಗಳಾಗಲಿ ಮತ್ತು ಬೇರೆ ಇಲಾಖೆ ಅಧಿಕಾರಿಗಳ ಆಗಲಿ ಅವರಿಗೆ ಪತ್ರಕರ್ತರಂದರೆ ಸ್ವಲ್ಪ ಭಯ ಹೆದರಿಕೆ ಇದ್ದೇ ಇರುತ್ತದೆ ಏಕೆಂದರೆ ತಾವು ಸರ್ಕಾರಿ ಹುದ್ದೆಯಲ್ಲಿ ಇರುವಾಗ ಪತ್ರಕರ್ತರು ಯಾವುದೇ ವಿಡಿಯೋ ಆಗಲಿ ಫೋಟೋಸ್ ಆಗಲಿ ತೆಗೆದುಬಿಟ್ಟು ಪ್ರಿಂಟ್ ಮೀಡಿಯಾದಲ್ಲಾಗಲಿ ಎಲೆಕ್ಟ್ರಿಕ್ ಮೀಡಿಯಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಾಗಲಿ ಸುದ್ದಿಗಳನ್ನು ಮಾಡಿದರೆ , ನಮ್ಮ ಹುದ್ದೆಗೆ ಕಳಂಕ ತರಬಹುದು ಏನೋ ಅನ್ನುವಂತ ಭಯ ಇದ್ದೇ ಇರುತ್ತದೆ . ಆದರೆ ಇಲ್ಲೊಬ್ಬ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯ ಮೇಲೆ ಹಾರೂಗೇರಿ ಕ್ರಾಸ್ ಹತ್ತಿರ ಕೆಲವು ಪೊಲೀಸ್ ಸಿಬ್ಬಂದಿ ಜೊತೆ ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ , ಎಲ್ಲ ದ್ವಿ ಚಕ್ರ ವಾಹನದ ಸವಾರರಿಗೆ ಹಾಗೂ ನಾಲ್ಕು ಚಕ್ರದ ಸವಾರರಿಗೆ ಕೂಡ ವಾಹನದ ಕಾಗದ ಪತ್ರಗಳನ್ನು ತಪಾಸಣೆ ಮಾಡಿ ದಂಡವನ್ನು ವಿಧಿಸುತ್ತಿದ್ದರು . ಅದೇ ರಾಜ್ಯ ಹೆದ್ದಾರಿ ಬನಹಟ್ಟಿಯಿಂದ ಚಿಂಚಲಿ ಪಟ್ಟಣಕ್ಕೆ ಮದುವೆಗೆ ಎಂದು ಹೋಗುತ್ತಿರುವ ನಿಷ್ಠಾವಂತ ಪತ್ರಕರ್ತ ಅವರ ಸ್ಕೂಟಿಯನ್ನು ಸೈಡ್ ಹಾಕಿದರು ಪತ್ರಕರ್ತರಿಗೆ ಒಂದು ಧೈರ್ಯ ಇದ್ದೇ ಇರುತ್ತದೆ ಏನೆಂದರೆ ಪತ್ರಕರ್ತರ ಹತ್ತಿರ ಗುರುತಿನ ಐಡಿ ಕಾರ್ಡ್ ತೋರಿಸಿದರೆ ಸಾಕು ಪೊಲೀಸರ...