Skip to main content

Posts

Showing posts from August, 2022

ನಗರಗಳಲ್ಲಿ ಗಣೇಶ ಪ್ರತಿಷ್ಠಾನ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ವಾಗಿ ಶಾಂತಿಪಾಲನಾ ಸಭೆ

  ವರದಿ ಮಹಿಬೂಬ್ ಬಾರಿಗಡ್ಡಿ  ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ಮಹಾಲಿಂಗಪುರ್ ಹಾಗೂ ತೇರದಾಳ ನಗರಗಳಲ್ಲಿ ಗಣೇಶ್ ಪ್ರತಿಷ್ಠಾಪನೆ ಹಾಗೂ ಅವುಗಳ ವಿಸರ್ಜನೆ ಮಾಡುವುದು ಕುರಿತು ,ಬನಹಟ್ಟಿ ನಗರ ಪೊಲೀಸ್ ಠಾಣೆಯಲ್ಲಿ ಸರ್ವಧರ್ಮ ಶಾಂತಿಪಾಲನಾ ಸಭೆ ನಡೆಯಿತು . ಈ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಅಶೋಕ್ ಗುಡಿಮನಿ ,ಸರ್ಕಾರದ ಸುತ್ತೋಲೆಯಂತೆ ಗರಿಷ್ಠ ಐದು ಅಡಿ ಎತ್ತರದ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಇದಕ್ಕಿಂತ ಹೆಚ್ಚು ಅಡಿ ಪ್ರತಿಷ್ಠಾಪನೆ ಮಾಡುವುದು ಸರ್ಕಾರ ನಿರ್ಬಂಧನೆ ಮಾಡಲಾಗಿದೆ ಹಾಗೂ ಮಣ್ಣಿನ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಪ್ಲಾಸ್ಟರ್ ನಲ್ಲಿ ಮಾಡಿದಂತ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿದರು . ಕಂದಾಯ  ಇಲಾಖೆ ,ಪೊಲೀಸ್ ಇಲಾಖೆ ,ವಿದ್ಯುತ್ ಇಲಾಖೆ, ನಗರಸಭೆ ಇಲಾಖೆ , ಫೈಯರ್ ಗ್ರೇಡ್ ಇಲಾಖೆ  , 5 ಇಲಾಖೆ ಅಧಿಕಾರಿಗಳ ತಂಡ ಏಕಗವಾಕ್ಷಿ ಪದ್ಧತಿ ರೂಪದಲ್ಲಿ ಅತಿ ಶೀಘ್ರವಾಗಿ ಪ್ರತಿಷ್ಠಾಪನೆಯ ಪರವಾನಿಗೆಯನ್ನು ಕೊಡತಕ್ಕಂಥ ವ್ಯವಸ್ಥೆಯನ್ನು ಸರ್ಕಾರದ ಆದೇಶದಂತೆ ನಾವು ಈಗಾಗಲೇ ಚಾಲನೆ ಮಾಡಿದ್ದೇವೆ ಎಂದು ಹೇಳಿದರು  . ಈ ಶಾಂತಿಪಾಲನೆ ಸಭೆಯಲ್ಲಿಮಾತನಾಡಿದ ಬನಹಟ್ಟಿ ಪೊಲೀಸ್ ಠಾಣೆಯ ಸಿಪಿಐ ವೀರೇಶ್ ಮಠಪತಿ ,ವಿಸರ್ಜನೆ ಸಲುವಾಗಿ ಕೊಟ್ಟಿರುವಂತಹ ಮಾರ್ಗದಲ್ಲಿ ಯ...

ದಲಿತರು ಮತ್ತು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಖಂಡಿಸಿ , ಬೃಹತ್ ಪ್ರತಿಭಟನೆ*

kalaam express news KALAAM EXPRESS NEWS ವರದಿ ಮಹಿಬೂಬ್ ಬಾರಿಗಡ್ಡಿ   ದೇಶದಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ಖಂಡಿಸಿ,  ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಗರದಲ್ಲಿ ರ್ಯಾಲಿ ಮೂಲಕ ಭಾರಿ ಪ್ರತಿಭಟನೆ ಮಾಡಿದರು . ಈ ಪ್ರತಿಭಟನೆಯ ರ್ಯಾಲಿಯು ನಗರದ ,, ಬಸ್ ನಿಲ್ದಾಣದ ಹತ್ತಿರ ಗಣಪತಿ ದೇವಾಲಯದಿಂದ   ಚಾಲನೆಗೊಂಡು ,ನಗರದ  ಕಿತ್ತೂರಾಣಿ ಚೆನ್ನಮ್ಮ ಹಾಗೂ ಮಹಾತ್ಮ ಗಾಂಧಿ ಸರ್ಕಲ್ ಪುರಸಭೆವರೆಗೆ ಘೋಷಣೆಗಳ ಮೂಲಕ  ಭಾರಿ  ಪ್ರತಿಭಟನೆ ನಡೆಸಿ ,ನಂತರ  ಪುರಸಭೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಿದರು   . ಈ ಪ್ರತಿಭಟನೆಯನ್ನು ಉದ್ದೇಶಿಸಿ ಅಲ್ಪಸಂಖ್ಯಾತರ ಮುಖಂಡ ಜಾವೇದ್ ಭಾಗವಾನ್ ಮಾತನಾಡಿದರು . ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಯಮನಪ್ಪ ಗುಣದಾಳ ನಗರದ ಅಲ್ಪಸಂಖ್ಯಾತರ ಮುಖಂಡರಾದ ಜಾವೇದ್ ಭಗವಾನ್ ಪರಶುರಾಮ್ ಮೇತ್ರಿ , ಮುಬಾರಕ್ ಅಲ್ಲಾಖಾನ್ ,ಸಿಂಹ ಮೇತ್ರಿ  ,ಭೀಮ್ ಆರ್ಮಿಯ ಮುಖಂಡರು ಲವಿತ್ ಮೇತ್ರಿ ಸಂಜು ಕಂಬಾಗಿ ,ಡಿಎಸ್ಎಸ್ ಹರಿಜನ್ ಮುಖಂಡರಾದ ಸುನಿಲ್ ಹರಿಜನ್ ,ಅರ್ಜುನ್ ದೊಡ್ಮನಿ ,  ಭೀಮ್ಸಿ ಮಾವಿನ ಹಿಂದಿ ಬಸು ಮಾವಿನಹಿಂದಿ ,ಸಿರಾಜುದ್ದೀನ್ ಮುಜಾವರ ,ಯಾಸೀನ್  ಬಳಗಾರ ,   ಯುನುಸ್ ಬೀಳಗಿ   ,...

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದ ನೂತನವಾಗಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ಮಾಡಿದ ಶಾಸಕ ಸನ್ಮಾನ್ಯ ಸಿದ್ದು ಸೌದಿ*

  ವರದಿ  ಮಹಿಬೂಬ್  ಬಾರಿಗಡ್ಡಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ರಬಕವಿ-ಬನಹಟ್ಟಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ , ,ಕ್ಯಾಟರ್ ಪಿಲ್ಲರ  ಫೌಂಡೇಶನ್ ಬೆಂಗಳೂರು ,ಮತ್ತು  ಯುನೈಟೆಡ್ ವೇ   ಬೆಂಗಳೂರು , ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ರಬಕವಿ-ಬನಹಟ್ಟಿ, ಸಮುದಾಯ ಆರೋಗ್ಯ ಕೇಂದ್ರ ರಬಕವಿ ಬನಹಟ್ಟಿ ಇವರ ಸಹಯೋಗದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು .  ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ತೇರದಾಳ ಮತ ಕ್ಷೇತ್ರದ ಶಾಸಕ ಸನ್ಮಾನ್ಯ ಸಿದ್ದು ಸವದಿ ಉದ್ಘಾಟನೆ ಮಾಡಿದರು . ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ಸಿದ್ದು ಸವದಿ ಕಳೆದ ಕೋವಿಡ್-19 ಲ್ಲಿ ಸಾಕಷ್ಟು ಜನರಿಗೆ ಆಕ್ಸಿಜನ ಇಲ್ಲದೆ ಇರುವುದರಿಂದ ಸಾಕಷ್ಟು ಜನರ ಜೀವ ಕಳೆದುಕೊಂಡರು .ಒಂದು ಆಮ್ಲಜನಕದ ಟ್ಯಾಂಕರ್ ಜಿಲ್ಲೆಗೆ ಬಂದರೆ ಜಿಲ್ಲೆಯಲ್ಲಿ ಹಂಚು ಹರಿದು ಹೋಗುವಷ್ಟರಲ್ಲಿ ಸಾಕಷ್ಟು ಜನರು  ಆಮ್ಲಜನಕದ ತೊಂದರೆಗೆ  ಈಡಾಗುತ್ತಿದ್ದರು .ಈಗ ಬಾಗಲಕೋಟ್ ಜಿಲ್ಲೆಯ  ರಬಕವಿ ಬನಹಟ್ಟಿ ಯಲ್ಲಿ  ಆಮ್ಲಜನಕವನ್ನೇ ಅಂದ್ರೆ ಆಕ್ಸಿಜನ್ ನೆ  ಉತ್ಪಾದನೆ ಮ...

_ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಾಲಯ ಉದ್ಘಾಟನೆ_* :

ಬಾಗಲಕೋಟೆ ಆಮ್ ಆದ್ಮಿ ಪಕ್ಷದ ಕಾರ್ಯಾಲಯ ನವನಗರದಲ್ಲಿ ರಾಜ್ಯಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ಸಮ್ಮುಖದಲ್ಲಿ ಅದ್ದೂರಿಯಾಗಿ ಉದ್ಘಾಟನೆಯಾಯಿತು . ಭಾರತ್ ಮಾತಾ ಕಿ ಜೈ ,ಒಂದೇ ಮಾತರಂ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಜಯವಾಗಲಿ , ಅನ್ನುವ ಘೋಷಣೆಗಳನ್ನು ಹೇಳುತ್ತಾ ,ನಗರದ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ , ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಸೇರಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ,ನಗರದ ಪ್ರಮುಖ ಬೀದಿಗಳಲ್ಲಿ ಪಕ್ಷದ ಜೈಕಾರ ಗಳನ್ನು ಕುಗುತ್ತಾ ರ್ಯಾಲಿ ಮೂಲಕ ಸಂಚರಿಸಿ , ಕೊನೆಗೆ ಶ್ರೀನಿವಾಸ್ ಕಲ್ಯಾಣ ಮಂಟಪದಲ್ಲಿ ಸೇರಿದರು . ಬಾಗಲಕೋಟ ಜಿಲ್ಲೆಯ ಪ್ರತಿಯೊಂದು ವಿಧಾನಸಭೆಯ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು   ಹಾಜರಿದ್ದರು . ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ  ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿದರು . ಈ ಕಾರ್ಯಕ್ರಮ ಸಭೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಹಾಗೂ ಖ್ಯಾತ ನ್ಯಾಯವಾದಿ ರಮೇಶ್ ಬದನ್ನೂರು ,ಬೆಳಗಾವಿ ವಲಯದ ಸಂಯೋಜಕರಾದ ತೋಪನ್ನವರ್ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಆಮ್ ಆದ್ಮಿ...