ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಪ್ರಸಿದ್ಧ ಪಟಾಕಿ ಜಾತ್ರೆ : ಪಟ್ಟವರ್ಧನ್ ಸರ್ಕಾರ ಕಾಣಿಕೆ ಕೊಟ್ಟ ರಥಕ್ಕೆ ಮದ್ದಿನ ಸುರಿಮಳೆ :
ಬನಹಟ್ಟಿಯ ಪುಣ್ಯದ ತೇರ ಕಾಡಸಿದ್ದನ ಅವತಾರ, ಧನ್ಯ ಧನ್ಯ ಮಾನವ ಜನ್ಮ , ಧನ್ಯ ಧನ್ಯ ಮಾನವ ಜನ್ಮ , ಜಾತ್ರೆ ಬಂತು ಸಡಗರ . ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆಯು ಸಪ್ಟಂಬರ್ 16 ರಿಂದ ಸತತ ಮೂರು ದಿನಗಳ ಕಾಲ ನಡೆಯಲಿದ್ದು , ಮಂಗಳವಾರ ನಡೆಯುವ ರಥೋತ್ಸವದಲ್ಲಿ ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದರ ಮುಖಾಂತರ ಕಾಡಸಿದ್ದನಿಗೆ ಭಕ್ತಿ ಅರ್ಪಣೆ ಮಾಡುತ್ತಾರೆ . ಈ ನಗರದ ಜನ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಈ ತೇರಿನ ಮುಂದುಗಡೆ ಭಯ - ಭಕ್ತಿಯಿಂದ ಮದ್ದು ಸುಡುತ್ತಾರೆ . ಈ ಮದ್ದು ಸುಡುವಧನ್ನು ನೋಡಲಿಕ್ಕೆ ಸಾವಿರಾರು ಜನ ಜಂಗುಳಿ . ಇಷ್ಟು ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದು ಜಿಲ್ಲೆಯಲ್ಲಿಯೇ ಪಟಾಕಿ ಮದ್ದಿನ ಜಾತ್ರೆ ಎಂದು ಪ್ರಸಿದ್ಧ ಹೆಸರುವಾಸಿಯಾಗಿದೆ. ಸುಟ್ಟ ಮದ್ದಿನ ಹೊಗೆ ದಟ್ಟವಾಗಿ ಇಡೀ ನಗರವೇ ಅವರಿಸಿರುತ್ತದೆ. ಜಾತ್ರೆಯ ಮರುದಿನ ಅಂದ್ರೆ ಬುಧವಾರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಇರುತ್ತದೆ. ಈ ಕುಸ್ತಿ ಪಂದ್ಯಾವಳಿ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನ ಸೇರುತ್ತಾರೆ. ಇದೇ ರಾತ್ರಿ ನಾಟಕ - ಬೈಲಾಟ ಅಲ್ಲದೆ ಖ್ಯಾತ ಕನ್ನಡ ಜಾನಪದ ಪ್ರಸಿದ್ಧ ಖ್ಯಾತ ಹಾಡುಗಾರರ ಮನರಂಜನೆ ಕಾರ್ಯಕ್ರಮ ಕೂಡ ವಿಶೇಷವಾಗಿರುತ್ತದೆ. ಮೂರನೇ ದಿನ ಗುರುವಾರ ಅ...