Skip to main content

Posts

Showing posts from September, 2022

ಬನಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಶಾಲಾ ಆವರಣದಲ್ಲಿ ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ*

*ವಿಜ್ರಂಭಣೆಯಿಂದ ಜರುಗಿದ ಪ್ರತಿಭಾ ಕಾರಂಜಿಹಾಗೂ ಕಲೋತ್ಸವ*   ರಬಕವಿ-ಬನಹಟ್ಟಿ :   ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಆವರಣದಲ್ಲಿ ಪ್ರತಿಭಾ ಕಾರಂಜಿ ಬಹಳ ಅದ್ದೂರಿಯಾಗಿ ನಡೆಯಿತು . ಈ ಪ್ರತಿಭಾಕಾರಂಜಿಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ , ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ ,ಹಾಗೂ ಉರ್ದು ಸಮೂಹ ಸಂಪನ್ಮೂಲ ಕೇಂದ್ರ ರಬಕವಿ ,  ಇವರ ಜಂಟಿ  ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಅವರಣದಲ್ಲಿ ವಲಯ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋಸ್ತವ ಕಾರ್ಯಕ್ರಮವು ಬಹಳ  ಅದ್ದೂರಿಯಾಗಿ ಜರುಗಿತು . ಪ್ರತಿಭಾಕಾರಂಜಿಯ ಕಾರ್ಯಕ್ರಮವನ್ನು ಎಲ್ಲರೂ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ  ಉದ್ಘಾಟನೆಯಾಯಿತು . ಈ ಪ್ರತಿಭಾಕಾರಂಜಿಯ ಕಾರ್ಯಕ್ರಮದಲ್ಲಿ ತೇರದಾಳ ,ಹನಗಂಡಿ ,ರಬಕವಿ ಬನಹಟ್ಟಿ ,ಹಿಪ್ಪರಗಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು .  ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಹಾಸ್ಯ ಚುಟುಕು  ,ಕ್ವಿಸ್ ಕಾಂಪಿಟೇಶನ್ , ಕವಾಲಿ ,ರಂಗೋಲಿ ಸ್ಪರ್ಧೆ ಕಲಾಕೃತಿ ಮಣ್ಣಿನಿಂದ ಮಾಡಿದ ವಸ್ತುಗಳು , ಇವೆಲ್ಲವೂ ಪ್ರತಿಭಾ ಕಾರಂಜಿಯ ವೇದಿಕೆಯ  ಮೂಲಕ ,ತಮ್ಮ ಪ್ರತಿಭೆಯನ್ನು ತೋರಿಸಿದರು...

ಬನಹಟ್ಟಿ ನಗರದಲ್ಲಿ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ n.g.o. ಉದ್ಘಾಟನೆ :

ರಬಕವಿ-ಬನಹಟ್ಟಿ  ವರದಿ ಮಹಿಬೂಬ್  ಬಾರಿಗಡ್ಡಿ  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಬನಹಟ್ಟಿ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಸಾಬ್  ಜಮಾದಾರ್ ಉದ್ಘಾಟನೆ ಮಾಡಿದರು . ಬಳಿಕ ಮಾತನಾಡಿದ ಬುಡನ್ ಜಮಾದಾರ್ n.g.o. ಸಂಸ್ಥೆಯ ಮುಖಾಂತರ ಸಾಮಾಜಿಕ ಕೆಲಸ ಮಾಡಬೇಕಾದರೆ ಯಾವುದೇ ಜಾತಿ ಭೇದ ನೋಡದೆ, ಎಲ್ಲರಿಗೂ ಸಮಾನರಾಗಿ ತಿಳಿದು ಸಾಮಾಜಿಕ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು  ಈ ಸಂದರ್ಭದಲ್ಲಿ ಮಾತನಾಡಿದ ನಗರದ ಅಂಜುಮನ್ ಸಂಸ್ಥೆಯ   ಮಾಜಿ ಅಧ್ಯಕ್ಷ ಸಾಂಗ್ಲಿಕರ್ , ನಗರಗಳಲ್ಲಿ N G O ಸಂಸ್ಥೆಗಳು ಬಹಳಷ್ಟು ಇವೆ .ಆದರೆ ಸೇವೆಗಳ ಹಾಗೂ ಕಾರ್ಯರೂಪದಲ್ಲಿ ಇಲ್ಲ , ಕಾಗದ ರೂಪದಲ್ಲಿ ಮಾತ್ರ ಇವೆ . ಆದ್ದರಿಂದ ನೀವು ಕೂಡ ಕಾಗದ ರೂಪದಲ್ಲಿರದೆ, ಬಡಜನರ ಸೇವೆಗಳ ರೂಪದಲ್ಲಿ ಇರಬೇಕು ಎಂದು ಹೇಳಿದರು . ಈ ಸಂದರ್ಭದಲ್ಲಿ ಫಯಾಜ್ ಅಹ್ಮದ್ ಕೊಯಿಮುತ್ತೂರು  ರವರು ಮಾತನಾಡಿ ,ಈ ಸಂಸ್ಥೆಯು ಜನಪರ ಹಾಗೂ ಬಡಜನರ ಕಾಗಿ  ಸಾಮಾಜಿಕ ಕೆಲಸಗಳಿಗೆ   ನಾವು ನಿಮಗೆ ಸದಾ ಬೆಂಬಲವಾಗಿ ನಿಲ್ಲುತ್ತವೆ ಎಂದು ಹೇಳಿದರು . ಬಳಿಕ ಮಾತನಾಡಿದ ಮಾಜಿ ನಗರಸಭೆ ಸದಸ್ಯ ಮೊಹಮ್ಮದ್ ನಸಿಂ ಮೊಕಾಶಿ,  ಸಂಸ್ಥೆಯವರು ಸಾಮಾಜಿಕ ಸೇವೆಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದ...

ತೇರದಾಳ ಮತ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿರುವ ಆಮ್ ಆದ್ಮಿ ಮುಖಂಡ ಅರ್ಜುನ್ ಹಲಗಿ ಗೌಡರ್

ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿಗೌಡರ್ . ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ನಡೆಸುವಲ್ಲಿ ಸಂಪೂರ್ಣವಾಗಿ ಸಫಲವಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ , ಹೌದು ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನಪರ ವಾದಂತಹ ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ ಇದೇತರಹದ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರದಲ್ಲಿ  ಬಂದ ನಂತರ ಕೊಡಬೇಕೆನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವು ಬರುವ ವಿಧಾನಸಭೆ ಚುನಾವಣೆ 2023ರ ಭರ್ಜರಿ ತಯಾರಾಗಿದೆ ಅನ್ನುವುದರಲ್ಲಿ  ಎರಡು ಮಾತಿಲ್ಲ , ಅದೇ ನಿಟ್ಟಿನಲ್ಲಿ ಬಾಗಲಕೋಟ ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಕಾಂಕ್ಷೆ ಅಭ್ಯರ್ಥಿ ಅರ್ಜುನ್ ಹಲಗಿ ಗೌಡರವರು ಮತಕ್ಷೇತ್ರ ದ್ಯಂತ ಭರ್ಜರಿ ಪ್ರಚಾರ ಮಾಡಿರುವುದನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ವಲಯದಲ್ಲಿ ಆತಂಕ ಎದುರಾಗಿದೆ ಅನ್ನುವುದರಲ್ಲಿ ಯಾವುದೇ ಸಂಶಯವೇ ಇಲ್ಲ , ತೇರದಾಳ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಯಾದ ಅರ್ಜುನ ಹಲಗಿ ಗೌಡ ಹಿಂದೆ ಪೊಲೀಸ್ ಇಲಾಖೆಯಲ್ಲಿ 19 ವರ್ಷ 19 ದಿವಸ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ . ಅವರು ಸಾಮಾಜಿಕವಾಗಿ ಸೇವೆಯನ್ನು ಮಾಡುವುದು ಗೋಸ್ಕರ ರಾಜಕೀಯಕ್ಕೆ ಎಂಟ್ರಿ ಕೊಡಲಿಕ್ಕೆ, ಪೋಲಿಸ್ ಇಲಾಖೆಯಲ್ಲಿ ಸ್ವಯಂ ನಿವೃತ್ತಿ ಘೋಷಿಸಿಕೊಂಡು , ರಾಜಕೀಯ ಕ್ಷ...

ಜಮೀಯತುಲ್ ಉಲೇಮಾ ಹಿಂದ್ ವತಿಯಿಂದ ಜಮಿಯತ್ ಯೂತ್ ಕ್ಲಬ್ ನಿರ್ಮಾಣ ಕುರಿತು ವಿಚಾರ ಸಂಕಿರಣ*

ರಬಕವಿ ಬನಹಟ್ಟಿ ಬಾಗಲ್ಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಬಾರ್ಬೆಟ್ ಮೊಹಲ್ಲಾದ ಜಮೀಯತುಲ್ ಉಲೇಮಾ ಹಿಂದ  ರಬಕವಿ ಬನಹಟ್ಟಿ  ಇವರ ಆಶ್ರಯದಲ್ಲಿ ,ಜಮೀಯತ್ ಯೂತ್ ಕ್ಲಬ್ ರಚನೆ ಕುರಿತು ವಿಚಾರ ಸಂಕಿರಣ ನಡೆಯಿತು . ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀಯತ್ ಉಲೇಮಾ ಇಂದ ರಾಜ್ಯಾಧ್ಯಕ್ಷ ಮೌಲನ ಹುಸೇನ್ ಸಾಬ್ ಮದನಿ ಮಜಾಹರಿ ಕಾಸ್ಮಿ ,ಜಮೀಯತ್  ಉಲೇಮಾ ಹಿಂದ್  ಸಂಘಟನೆಯೂ 1919 ರಲ್ಲಿ ಸ್ಥಾಪನೆಯಾಯಿತು .ಈ ದೇಶವನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ . ದೇಶಕ್ಕಾಗಿ ಸಾವಿರಾರು ಮೌಲ್ವಿಗಳು ಆಫೀಜ ಗಳು ಉಲೇಮಾಗಳು ಈ ದೇಶವನ್ನು ಸ್ವತಂತ್ರವಾಗಿಸಲು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು . ಬಳಿಕ  , ಮಾತನಾಡಿದ ಹಿದಾಯತುಲ್ಲಾ ಸಿದ್ಧಿಕಿ ಯೂತ್ ಕ್ಲಬ್ ಜಿಲ್ಲಾ ತರಬೇತುದಾರ ನ್ಯೂ ದಿಲ್ಲಿ , ಇವರು ಜಮೀಯತ್ ಯೂತ್ ಕ್ಲಬ್  ಬಗ್ಗೆ ಸಂಪೂರ್ಣ ವಿವರಣೆ ನೀಡಿದರು . ಹಾಗೂ ಭಾರತ ಸ್ಕೌಟ್ ಗೈಡ್ ಹಾಗೂ ಜಮೀಯತ್  ಯೂತ್ ಕ್ಲಬ್ ವಿಲೀನವಾಗಿ ,ಜಂಟಿಯಾಗಿ ಎರಡು 216 ದೇಶಗಳಲ್ಲಿ  ಕಾರ್ಯನಿರ್ವಹಿಸುತ್ತಿದೆ . ಈ ಜಮೀಯತ್ ಯೂತ್ ಕ್ಲಬ್  ಮಕ್ಕಳನ್ನು ತರಬೇತಿಯನ್ನು ಕೊಡುತ್ತೇವೆ . ಮಕ್ಕಳು ದೇಶಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಲಿ ಅಂತ ಜಮೀಯತ್ ಯೂತ್ ಕ್ಲಬ್  ಉದ್ದೇಶವಾಗಿದೆ ಎಂದು ನ್ಯೂ ದೆಹಲಿಯ ಸಲೀಂ ತ್ಯಾಗಿ ಮುಖ್ಯ ತರಬೇತುದಾರ ಹೇಳಿದರು...