Skip to main content

Posts

Showing posts from December, 2025

ಬುಲ್ಡೋಜರ್ ರಾಜಕಾರಣಕ್ಕೆ ಎಸ್ ಡಿ ಪಿ ಐ ತೀವ್ರ ಖಂಡನೆ :

ಬೆಂಗಳೂರಿನ ಫಕೀರ್ ಲೇಔಟ್ ನಿರಾಶ್ರಿತರ ಪರವಾಗಿ ತೇರದಾಳದಲ್ಲಿ SDPI ಬೃಹತ್ ಪ್ರತಿಭಟನೆ ಬುಲ್ಡೋಜರ್ ರಾಜಕಾರಣಕ್ಕೆ ತೀವ್ರ ಖಂಡನೆ ತೇರದಾಳ: ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮನೆಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಧ್ವಂಸಗೊಳಿಸಿ ಅವರನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರದ ಅಮಾನವೀಯ **“ಬುಲ್ಡೋಜರ್ ರಾಜಕಾರಣ”**ವನ್ನು ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಜದ್ ಖಾನ್ ಇನಾಮದಾರ ಅವರು, “ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡವರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿದೆ. ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸದೇ ಮನೆಗಳನ್ನು ನೆಲಸಮಗೊಳಿಸಿರುವುದು ಸಂವಿಧಾನ ವಿರೋಧಿ ನಡೆ. ನಿರಾಶ್ರಿತರಿಗೆ ತಕ್ಷಣ ಪುನರ್ವಸತಿ ಕಲ್ಪಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಬಾರಕ್ ಅಲ್ಲಾ ಖಾನ್ ಮಾತನಾಡಿ, ಸರ್ಕಾರ ಕೇವಲ ಬಡವರನ್ನೇ ಗುರಿಯಾಗಿಸಿಕೊಂಡು ಬುಲ್ಡೋಜರ್ ಪ್ರಯೋಗ ಮಾಡುತ್ತಿದೆ. ಅಧಿಕಾರವು ಬಡವರಿಗೆ ಆಸರೆಯಾಗಲು ಇರಬೇಕೇ ಹೊರತು, ಅವರನ್ನು ಅನಾಥರನ್ನಾಗಿ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ...

ನಿಧನ ವಾರ್ತೆ : ಹಳಂಗಳಿ ಗ್ರಾಮದ ಮುಸ್ಲಿಂ ಧರ್ಮದ ಹಿರಿಯರಾದ ಚಾಂದಸಾಬ ಕ ಲಾಡಖಾನ ನಿಧನ.

ನಿಧನ ವಾರ್ತೆ ಚಾಂದಸಾಬ ಕ ಲಾಡಖಾನ   ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ಮುಸ್ಲಿಂ ಸಮುದಾಯದ ಧರ್ಮ ಗುರು ಚಾಂದಸಾಬ ಕಬೀರಸಾಬ ಲಾಡಖಾನ ನಿಧನರಾಗಿದ್ದು,ಮೃತರಿಗೆ ೪ ಜನ ಹೆಣ್ಣುಮಕ್ಕಳು ಹಾಗೂ ಒರ್ವ ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಇವರ ಅಕಾಲಿಕ ಮರಣಕ್ಕೆ ಹಳಿಂಗಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಕಂಬನಿ ಮಿಡಿದಿದ್ದು, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊಂದಿಗೆ ಗೌರವಾರ್ಪನೆಯನ್ನು ಸಲ್ಲಿಸಲಾಯಿತು.

ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ || ಏಕ ಪಕ್ಷಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಿoದ ಖಂಡನೆ |

ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ ಏಕ ಪಕ್ಷಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಿoದ ಖಂಡನೆ | ತೇರದಾಳ 26  :ಬರೀ ಹೋರಾಟದಿಂದಲೇ ಪ್ರತಿಯೊಂದನ್ನು ಪಡೆಯುವ ದೌರ್ಭಾಗ್ಯವುಳ್ಳ ತೇರದಾಳ ತಾಲೂಕಿಗೆ ಬಹುದಿನಗಳ ನಂತರ ಸರಕಾರದ ವರದಾನವಾಗಿ ಮಂಜೂರಾದ ಅಗ್ನಿ ಶಾಮಕ ಠಾಣೆಯ ಕಟ್ಟಡದ ಶಂಕು ಸ್ಥಾಪನೆ ಸದ್ದಿಲ್ಲದೇ ಏಕಪಕ್ಷೀಯವಾಗಿ ತರಾತುರಿಯಲ್ಲಿ ಕೈಗೊಂಡಿರುವುದು ಸಂಶಯಕ್ಕೆ ಕಾರಣವಾಗಿದ್ದು, ಪಕ್ಷಾತೀತವಾಗಿ ಹಬ್ಬದಂತೆ ನೆರವೇರಬೇಕಾದ ಈ ಕಾರ್ಯಕ್ರಮವು ರಾಜಕೀಯ ನಾಯಕರ ಹಗ್ಗಜಗ್ಗಾಟದಲ್ಲಿ ಸ್ಮಶಾನ ಸದೃಶ್ಯವಾಗಿದ್ದು, ಕನಿಷ್ಠ ಸೌಜನ್ಯಕ್ಕಾದರೂ ಸ್ಥಳೀಯ ಪುರ ಸಭೆ ಅಧ್ಯಕ್ಷರು ಹಾಗೂ ಇತರ ಯಾವುದೇ ಪದಾಧಿಕಾರಿಗಳಿಗೆ ಮಾಹಿತಿ ಇಲ್ಲದೇ ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಶಂಕು ಸ್ಥಾಪನೆ ನೆರವೇರಿಸಿರುವುದನ್ನ ಖಂಡಿಸುವುದಾಗಿ ತಾಲೂಕಾ ಪ-ಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ನೇಮಣ್ಣಾ ಸಾವಂತನವರ ಆಕ್ರೋಶವನ್ನು ವ್ಯಕ್ತಪಡಿಸಿದರು.             ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಅನುಪಾಲನೆ ಮುಖ್ಯವಾಗಿದ್ದು,ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿಗೆ ಪಕ್ಷದ ಲೇಬಲ್ ಬದಲಾಗಿ ಸರ್ಕಾರದ ಲೇಬಲ್ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಕಾರ...

ಉಪವಾಸ ಸತ್ಯಾಗ್ರಹ ವೇದಿಕೆಗೆ ಬೆಂಬಲ ಸೂಚಿಸಿದ ರಬಕವಿ ಬನಹಟ್ಟಿ ನಗರದ ಆಟೋ ಚಾಲಕರು :

ಉಪವಾಸ ಸತ್ಯಾಗ್ರಹ ವೇದಿಕೆಗೆ ಬೆಂಬಲ ಸೂಚಿಸಿದ ಆಟೋ ಚಾಲಕರು :* .  ರಬಕವಿ - ಬನಹಟ್ಟಿ :  ನಗರದಲ್ಲಿ ರಬಕವಿ - ಬನಹಟ್ಟಿ ಮಹೇಶವಾಡಗಿ ಸೇತುವೆಯ ತ್ವರಿತ ಪೂರ್ಣ ಕಾಮಗಾರಿಗೆ ಅಗ್ರಹಿಸಿ , ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ  ನಡೆಯುತ್ತಾ ಇದೆ . ಈ ಸೇತುವೆಯು ಹಲವಾರು ವರ್ಷಗಳ ಹಿಂದೆಯೇ ಚಾಲನೆಗೊಂಡು ಬಳಿಕ ಸ್ಥಗಿತಗೊಂಡಿದ್ದನ್ನು ವಿರೋಧಿಸಿ , ಹಲವು ಬಾರಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗದೆ ಉಪವಾಸ ಸತ್ಯಾಗ್ರಹ ಒಂದೇ ದಾರಿ ಎಂದು ಭಾವಿಸಿ ಜನಸಾಮಾನ್ಯರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ . ನಗರದ ಶಂಕರಲಿಂಗ್ ದೇವಸ್ಥಾನದ ಹತ್ತಿರ ವೇದಿಕೆಯಲ್ಲಿ ಸತ್ಯಾಗ್ರಹ ನಿರತ ಡಾ. ರವಿ ಜಮಖಂಡಿ ಇವರ ಮುಖಂಡತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ವೇದಿಕೆಗೆ ಅವಳಿ ನಗರಗಳ ರಬಕವಿ  - ಬನಹಟ್ಟಿ ಆಟೋ ಚಾಲಕರ ಹಾಗೂ ಮಾಲಕರ ಸಂಘಟನೆಗಳ ಒಕ್ಕೂಟವು ಬೆಂಬಲವನ್ನು ಸೂಚಿಸಿದರು.  ಈ ಸಂದರ್ಭದಲ್ಲಿ ಬನಹಟ್ಟಿ ಶ್ರೀ ಕಾಡಸಿದ್ದೇಶ್ವರ ಆಟೋ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷ ರಂಜಾನ್ ಗೋರಿ, ಉಪಾಧ್ಯಕ್ಷ ಸುಭಾಷ್ ಪಾರ್ಥನಹಳ್ಳಿ ಸಿದ್ದಲಿಂಗ್ ಪಾಟೀಲ್ , ಗನಶೇದ್ ಹನಗಂಡಿ,  ಮುಸ್ತಾಕ ಪೆಂಡಾರಿ ,  ಆಕ್ರಂ  ರಾಜನ್ನವರ್, ಸುನಿಲ್ ಗೊಂದ ಕರ್,  ಅನಿಲ ಗೊಂಡಕರ,    ರಬಕವಿ ನಗರ...