Skip to main content

Posts

Showing posts from January, 2026

ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ | ಶಾಸಕ ಸಿದ್ದು ಸವದಿ

 ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ  |  ಶಾಸಕ ಸಿದ್ದು ಸವದಿ ತೇರದಾಳ: ಒಂದು ರಾಜ್ಯ ಅಥವಾ ದೇಶವಾಗಲಿ ಸುರಕ್ಷಿತವಾಗಿರಬೇಕಾದರೆ ಅಲ್ಲಿ ಒಂದು ಒಳ್ಳೆಯ ಆಢಳಿತವಿರಬೇಕು. ಒಳ್ಳೆಯ ಆಢಳಿತ ನಡೆಸಬೇಕಾದರೆ ಅಲ್ಲಿ ಒಂದು ಸರ್ವಶ್ರೇಷ್ಠವಾದ ಆಢಳಿತ ಗ್ರಂಥವೆ ಬೇಕಾಗುತ್ತದೆ. ಅಂತಹ ಶ್ರೇಷ್ಠವಾದ ಗ್ರಂಥವೆAದರೆ ಅದುವೇ ನಮ್ಮ ಸಂವಿಧಾನ ಎಂದು ಶಾಸಕ ಸಿದ್ದು ಸವದಿ ಹೇಳಿದರು.                  ಪಟ್ಟಣದಲ್ಲಿ ನಿನ್ನೆ ಜನೇವರಿ ೨೬ ಗಣರಾಜ್ಯೋತ್ಸವದ ನಿಮಿತ್ಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೭೭ ನೇ ಗಣರಾಜ್ಯೋತ್ಸದಲ್ಲಿ ಗೌರವವಂದನೆ ಸ್ವಿಕರಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಸಾವಿರಾರು ಜಾತಿಗಳಿವೆ ಹಲವಾರು ದರ್ಮಗಳಿವೆ. ವಿವಿಧ ಭಾಷೆಗಳಿವೆ, ವಿವಿಧ ಧಾರ್ಮಿಕ ಆಚರಣೆಗಳಿವೆ, ಸಂಪ್ರದಾಯಗಳು ಹೀಗೇ ಎಷ್ಟೇ ವಿವಿಧತೆಯಿದ್ದರೂ ಯಾವುದೇ ಧರ್ಮಕ್ಕಾಗಲಿ, ಜಾತಿಗಾಗಲಿ, ಆಚರಣೆಗಾಗಲಿ ಒಂದಿಷ್ಟೂ ಧಕ್ಕೆಯಾಗದ ರೀತಿಯಲ್ಲಿ ಸಂವಿಧಾನ ರಚಿಸಿ ಡಾ.ಬಾಬಾಸಾಹೇಬರು ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದರು. ನಮ್ಮ ದೇಶದಲ್ಲಿ ಸಾಕಷ್ಟು ಹಬ್ಬಗಳಿವೆ ಆದರೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರö್ಯದಿನೋತ್ಸವ ಮಾತ್ರ ಅತ್ಯಂತ ಪರಮಪವಿತ್ರ ಹಬ್ಬಗಳಾಗಿವೆ. ಇಲ್ಲಿ ಯಾವುದೇ ಧರ್ಮವಿಲ್ಲ ಜಾತಿ ಇಲ್ಲ, ಮೇಲಿಲ್ಲ ಕೀಳಿಲ್ಲ, ನಾವೆಲ್ಲರೂ ಭಾರತೀಯ...

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ :

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ ತೇರದಾಳ : ದೇವರು ಸೃಷ್ಠಿಸಿದ ಬದುಕು ಹರಿಯುವ ನೀರಿನಂತಿದ್ದು, ಪ್ರತಿ ಕ್ಷಣ ನಮ್ಮ ಬದುಕಿನಲ್ಲಿ ಯಶಸ್ಸು ಸಂಕಲನವಾದರೆ ವಯಸ್ಸು ವ್ಯವಕಲನವಾಗಿ,ಗೆದ್ದವರಿಗೆ ಖುಷಿ ಸೋತವರಿಗೆ ದು:ಖ ಹೀಗೆ ನೋವು ನಲಿವುಗಳ ಸಮ್ಮಿಲನವೇ ಬದುಕಾಗಿದ್ದು,ಕೆಟ್ಟದನ್ನು ದೂರವಿಟ್ಟು ಒಳ್ಳೆಯದನ್ನು ಸನಿಹಕ್ಕೆ ಬರಮಾಡಿಕೊಂಡು ಸುಂದರ ಬದುಕಿಗಾಗಿ ಸಂಕಲ್ಪ ತಾಳುವುದೇ ಹೊಸ ವರ್ಷಾಚರಣೆಯ ಮೂಲ ಆಶಯವಾಗಿದೆಯಂದು ಶಿಕ್ಷಕ ಶೀತಲ ನಂದೆಪ್ಪನವರ ಅಭಿಮತವನ್ನು ವ್ಯಕ್ತಪಡಿಸಿದರು. ಸಮೀಪದ ಹಳಿಂಗಳಿ ಗ್ರಾಮದ ವಿದ್ಯಾಕಾಶಿ ಶ್ರೀ ಸದ್ಗುರು ಶರಣಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ ಹೊಸವರ್ಷಾಚರಣೆಯ ಸಂಭ್ರಮವನ್ನು ಸಸಿಗೆ ನಿರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗತಿಸಿ ಹೋದ ವರುಷದ ಕಹಿ ನೆನಪುಗಳನ್ನು ಕಟ್ಟೆಯ ಮೇಲೆ ಬಿಟ್ಟು ಸಿಹಿ ನೆನಪುಗಳನ್ನು ರಟ್ಟೆಯಲ್ಲಿ ತೆಗೆದುಕೊಂಡು ಹೊಸ ವರುಷದಲ್ಲಿ ಉತ್ತಮ ಕಾಯಕವನ್ನು ನಿರ್ವಹಿಸಿ ಏಕಾಗ್ರತೆಯಿಂದ ಅಧ್ಯಯನವನ್ನು ಕೈಗೊಂಡು ಕಲಿಸಿದ ಶಾಲೆ,ಗುರುಗಳು ಹಾಗೂ ಹೆತ್ತವರಿಗೆ ಉತ್ತಮ ಕೀರ್ತಿ ತರುವುದರೊಂದಿಗೆ ಸ್ವಾವಲಂಬಿ ಬದುಕಿಗೆ ಉತ್ತಮ ವೇದಿಕೆಯನ್ನು ನಿರ್ಮಿಸಿಕೊಂಡು ಪ್ರತಿಯೊಬ್ಬರು ಆದರ್ಶ ವಿದ್ಯಾರ್ಥಿಗಳಾಗಬೇಕೆಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಂಜನಾ.ಯು ಅಬಕಾರ ...