Skip to main content

Posts

Showing posts from December, 2024

ಎಸ್‌ ಡಿ ಪಿ ಐ ಪಕ್ಷ ಸುನಾಮಿ ಇದ್ದ ಹಾಗೆ ತಡೆಯೋಕೆ ಬಂದ್ರೆ ಕೊಚ್ಚಿಕೊಂಡು ಹೋಗ್ತೀರಾ ! ಕಾಂಗ್ರೆಸ್ ಪ್ರಭಾವಿ ನಾಯಕನಿಗೆ ಪರೋಕ್ಷ ಟಾಂಗ್ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ :

 ಬಾಗಲಕೋಟೆ  / ತೇರದಾಳ್   :  ಬಾಗಲಕೋಟೆ ಜಿಲ್ಲೆಯ ತೆರದಾಳ ಪಟ್ಟಣದಲ್ಲಿ ಎಸ್ ಡಿ ಪಿ ಐ ತೆರದಾಳ ಮತ ಕ್ಷೇತ್ರ ಘಟಕದ ಆಶ್ರಯದಲ್ಲಿ , ರಾಜ್ಯ ಸೋಶಿಯಲ್ ಡಿಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ  ನೂತನವಾಗಿ ಆಯ್ಕೆಯಾಗಿರುವಂತಹ ರಾಜ್ಯ ನಾಯಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಬಸ್ ನಿಲ್ದಾಣದ ಹತ್ತಿರ ಮಹಾತ್ಮ ಗಾಂಧಿ ಮೈದಾನದಲ್ಲಿ ಆಯೋಜನೆಯನ್ನು  ಮಾಡಿದರು .   ಅಭಿನಂದನಾ ಸಮಾರಂಭದ ವೇದಿಕೆಯಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಾಜ್ಯ ಸೋಶಿಯಲ್ ಡಿಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿರುವಂತ ಬಿ ಆರ್ ಭಾಸ್ಕರ್ ಪ್ರಸಾದ್ ಅವರು  ಹೆಸರು ಹೇಳದೆ , ತೇರದಾಳ  ಮತಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಹೇಳಿದ ಮಾತು ನಮ್ಮ ಮತ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಪಕ್ಷ ಬೆಳೆಯೋಕೆ ಬಿಡಬಾರದು ಅನ್ನುವಂತ ಮಾತಿಗೆ, ನಿಮಗೆ ಸೂರ್ಯ ನ ಬಿಸಿಲು ತಡೆಯೋಕೆ ಆಗುತ್ತಾ ? ನಿಮಗೆ ಗಾಳಿ ತಡೆಯೋಕೆ ಆಗುತ್ತಾ ? ನಿಮಗೆ ಸುನಾಮಿ ತಡೆಯೋಕೆ ಆಗುತ್ತಾ ? ಅದೇ ತರ ಎಸ್ ಡಿ ಪಿ ಐ ಪಕ್ಷವು ನೀವುಗಳು ತಡೆಯೋಕೆ ಬಂದ್ರೆ ಹೆಸರು ಇಲ್ದಂಗೆ  ಕೊಚ್ಚಿಕೊಂಡು  ಹೋಗ್ತೀರಾ  ಎಂದು ಪರೋಕ್ಷವಾಗಿ ಟಾಂಗ್ ನೀಡಿದರು . ಮಾತನಾಡಿದ ರಾಜ್ಯ ನೂತನವಾಗಿ ಎಸ್ ಡಿ ಪಿ ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರ...

ಬೆಳಗಾವಿಯ ಅಧಿವೇಶನದಲ್ಲಿ ಮುಸ್ಲಿಮರಿಗಾದ ಅನ್ಯಾಯವನ್ನು ಖಂಡಿಸಿದ , ಕೆ ಎಂ ಯು ರಾಜ್ಯ ಯುವ ಘಟಕದ ಅಧ್ಯಕ್ಷ N M ನೂರ್ ಅಹ್ಮದ್,

ಬೆಂಗಳೂರು : ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ 2ಬಿ ಅಡಿಯ ಶೇ.4  ಮೀಸಲಾತಿಯನ್ನು ಯಥಾಸ್ಥಿತಿ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೇಸ್ ಪಕ್ಷ ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಾತನಾಡದೆ ಅನ್ಯಾಯ ಮಾಡಿದೆ.  ಅಷ್ಟೇ ಅಲ್ಲದೆ ರಾಜ್ಯದ ಮುಸ್ಲಿಮರ ವಿಷಯಗಳ ಪ್ರಸ್ತಾಪಕ್ಕೂ ಭಯ ಪಡುತ್ತಿದೆ.  ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮುಸ್ಲಿಮ್ ಕೋಟಾದಡಿ ಮಂತ್ರಿಗಳಾಗಿರುವ ಜಮೀರ್ ಅಹ್ಮದ ಖಾನ್, ರಹೀಂ ಖಾನ್ ಸೇರಿ ಸರ್ಕಾರದ ಅತ್ಯುನ್ನತ ಸ್ಥಾನಗಳಲ್ಲಿರುವ ನಸೀರಅಹ್ಮದ್ , ಸಲೀಂ ಅಹ್ಮದ್, ಕೆ. ಅಬ್ದುಲ್‌ಜಬ್ಬಾರ್ ರಂಥವರೂ ಕೂಡ 2 ಬಿ ಮಿಸಲಾತಿಯ ವಿಷಯ ಸದನದಲ್ಲಿ ಪ್ರಸ್ತಾಪಿಸಲು ಭಯಪಡುತ್ತಿದ್ದಾರೆ, ಒಟ್ಟಾರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಜೆಪಿಯ ಭಯದಲ್ಲಿದೆ. ಮುಸ್ಲಿಮ್ ಮೀಸಲಾತಿ ಮರು ಜಾರಿಗೊಳಿಸಲು ರಾಜ್ಯ ಸರಕಾರವು ಬಿಜೆಪಿಯ ಆದೇಶಕ್ಕಾಗಿ ಕಾಯುತ್ತಿದೆಯೇ..? ಎಂಬ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿದೆ.                ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮುಸ್ಲಿಮ್ ಸಮುದಾಯ ಶೇ.99 ಪ್ರತಿಶತ ಮತಹಾಕಿದ್ದಾರೆ. ಈ ಸಮಾಜದ ವಿಷಯಗಳು ಬಂದಾಗ ಕಾಂಗ್ರೇಸ್ ಪಕ್ಷ ನಮ್ಮದಲ್ಲದ ವಿಷಯ ಎಂಬಂತೆ ಕಡೆಗಣಿಸುತ್ತಿದೆ. ಸಾಮಾಜಿಕ ನ್ಯಾಯ ವಿರೋಧಿ ಯಾಗಿರುವ ಇಂಥಹ ದೊರಣೆಗಳಿಂದ ಮುಸ್ಲಿಮರು ಬೇಸತ್ತಿದ್ದಾರೆ.  ಅಲ್ಲದೆ, ಕಾಂಗ್ರೆಸ್ ಪಕ್ಷ ಹಾಗು ಸ...

ಬನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ

ಬನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ   ಬಾಗಲಕೋಟೆ/   ರಬಕವಿ ಬನಹಟ್ಟಿ : ತಾಲೂಕಿನ ಬನಹಟ್ಟಿ ಪೊಲೀಸ್ ಇಲಾಖೆಯ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚರಣೆ 01-12 2024 ರಿಂದ 31-12- 2024ರ ವರೆಗೆ ಒಂದು ತಿಂಗಳು ಕಾಲ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ  ಹಮ್ಮಿಕೊಂಡಿದ್ದಾರೆ  . ನಗರದ ಬಸ್ ನಿಲ್ದಾಣ ಹಾಗೂ ಆಟೋ ನಿಲ್ದಾಣಗಳಲ್ಲಿ ಈ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು . ಠಾಣಾಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ಅವರು ಅಪರಾಧ ತಡೆ ಹಾಗೂ ಅಪಘಾತಗಳ ಬಗ್ಗೆ ಆಟೋ ಚಾಲಕರಿಗೆ ಅರಿವು ನೀಡಿದರು. ನಂತರ ಬನಹಟ್ಟಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಪರಾಧ ತಡೆ ಮಾಸಾಚರಣೆ ಬಗ್ಗೆ ಮಾಹಿತಿ ನೀಡಿದರು ನಂತರ  ಬಸ್ ನಿಲ್ದಾಣದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜೊತೆ ಮಾತನಾಡಿದ ಠಾಣಾ ಅಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ಅವರು ಈ ಬಸ್ ನಿಲ್ದಾಣದಲ್ಲಿ ಯಾರೇ ಅಪರಾಧ ಮಾಡಿದರೂ ನಮ್ಮ ಪೊಲೀಸ್ ಇಲಾಖೆಗೆ ಕೂಡಲೇ ಮಾಹಿತಿಯನ್ನು ನೀಡಬೇಕು ಮತ್ತು ನಿಲ್ದಾಣದ ಮುಂಬಾಗ ಫ್ಲೆಕ್ಸ್ ಗಳನ್ನು ಕಟ್ಟದಂತೆ ನಿಗಾ ಮತ್ತು ಜಾಗೃತಿ ವಹಿಸಬೇಕು ಎಂದು ಹೇಳಿದಾಗ ನಿಲ್ದಾಣದ ಕಾರ್ಯನಿರ್ವಾಹಕ ಅಧಿಕಾರಿ, ಜನರು ಫ್ಲೆಕ್ಸ್ ಗಳನ್ನು ಕಟ್ಟಲಿಕ್ಕೆ ಬಂದಾಗ ಕಟ್ಟಬೇಡಿ ಎಂದು ಹೇಳಿದರೂ ಕೂಡ ಯಾರು ಕೇಳುವುದಿಲ್ಲ ಮೇಡಂ ಎಂದು ಉತ್ತರ ನೀಡಿದಾಗ ಠಾಣ...