Saturday, May 25, 2024

ನೀರಿನ ಟ್ಯಾಂಕ್ ಒಂದರಲ್ಲಿ ಬಿದ್ದ ಆರು ವರ್ಷದ ಮಗುವಿನ ಪ್ರಾಣ ಕಾಪಾಡಿದ ಯುವಕ ಅಸದದುಲ್ಲಾ




 *ಬಾಗಲಕೋಟೆ/*ರಬಕವಿ ಬನಹಟ್ಟಿ* : 

 ಈಗಿನ ಕಾಲದ ಮಕ್ಕಳು ತಮ್ಮದೇ ಆದ ಮೊಬೈಲ್ ಫೋನಿನ ಜಗತ್ತಿನಲ್ಲಿ ಇರುತ್ತಾರೆ, ಆದರೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಭಾರಪೇಟ ಗಲ್ಲಿಯಲ್ಲಿ  ಅಸದದುಲ್ಲಾ ಎಂಬ ಯುವಕ ತನ್ನ ಪ್ರಾಣವನ್ನು ಲೆಕ್ಕಿಸದೆ 6 ವರ್ಷದ ಮಾಹೆರಾ ಎಂಬ ಹೆಣ್ಣಮಗು  ಆಟ ಆಡುತ್ತಿರುವಾಗ  ನೀರಿನ ಟ್ಯಾಂಕ್ ಒಂದರಲ್ಲಿ  ಬಿದ್ದು ನೀರು ಕುಡಿದು ಪ್ರಜ್ಞೆಯನ್ನು ತಪ್ಪಿತ್ತು.  ಕೂಡಲೇ ನೋಡಿದ ಯುವಕನು ಆಕೆಯನ್ನು ಕೈಯಲ್ಲಿ ಗಾಬರಿ ಗೊಳ್ಳದೆ  ಎತ್ತಿಕೊಂಡು  ಹೋಗಿ ಸಮೀಪದ ಡೊರ್ಲೆ ಮಕ್ಕಳ ಆಸ್ಪತ್ರೆಗೆ  ದಾಖಲಿಸಿ  ,  ಮಗುವಿನ  ಪ್ರಾಣ ಉಳಿಸಿದ ಘಟನೆಯನ್ನು ನಡೆದಿದೆ.

  ಮಾಹೆರಾ ಅಬ್ದುರಜಾಕ ಇನಾಮ್ದಾರ್ ಎಂಬ 6 ವರ್ಷದ ಹೆಣ್ಣು ಮಗುವಿನ ಪ್ರಾಣವನ್ನು ಕಾಪಾಡಿದ ,  ಅಸದದ್ದುಲ್ಲಾ ಗದ್ಯಾಳ ಎಂಬ ಯುವಕನಿಗೆ  ಜಮಿಯತ್ ಎ ಉಲ್ಮಾ ಸಂಘಟನೆಯವರು ಕರೆದು ಇವರ ಕಾರ್ಯವನ್ನು ಮೆಚ್ಚಿ ,   ಸನ್ಮಾನ ಮಾಡಿದರು. 

 ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮೋಸಿನ್ಅಹಮದ್ ಗೋಕಾಕ್, ಮಾನವೀತೆಯ ಕೆಲಸ , ನಮ್ಮ ಸಮಾಜ ಹೆಮ್ಮೆ ಪಡುವ ಸಂಗತಿ  ಮೊದಲು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮನುಷ್ಯತ್ವ ಅಥವಾ ಮಾನವೀಯತೆ ಇಂದ್ ಜೀವನ ಸಾಗಿಸಬೇಕು ಎಂದು  ಮಹಮ್ಮದ್ ಪೈಗಂಬರ್ ರವರು ಹೇಳಿದ್ದಾರೆ ಎಂದು ಹೇಳಿದರು  . ಇಂತಹ ಕೆಲಸಕ್ಕೆ ನಾವು ಮೆಚ್ಚುಗೆ  ತಿಳಿಸುತ್ತೇವೆ.  ಕೇವಲ ಮುಸ್ಲಿಂ ಸಮಾಜ ಅಷ್ಟವಲ್ಲದೆ , ಯಾವುದೇ ಸಮಾಜವಿದ್ದರೂ ಇಂತಹ ಕೆಲಸ ಅಥವಾ ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕೆಂದು ಈಗಿನ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
 ಈ ಸಂದರ್ಭದಲ್ಲಿ 
 ಮೌಲಾನ ಮೋಸಿನ ಗೋಕಾಕ , ಗಪುರ ಮೌಲಾನ , ಕರವೇ ಗಜಸೇನೆ ತಾಲೂಕ ಅಧ್ಯಕ್ಷ ಮಹಮ್ಮದಹುಸೇನ್ ಲೆಂಗ್ರೆ ಯುವಕನ ತಂದೆ ಬಂದೆನಮಾಜ್ ಗದ್ಯಾಳ  ಇನ್ನೂ ಅನೇಕರು ಇದ್ದರು  .

ವರದಿ ಮಹಿಬೂಬ್ ಎಂ ಬಾರಿಗಡ್ಡಿ

No comments:

Post a Comment