ಬನಹಟ್ಟಿಯ ಪುಣ್ಯದ ತೇರ ಕಾಡಸಿದ್ದನ ಅವತಾರ, ಧನ್ಯ ಧನ್ಯ ಮಾನವ ಜನ್ಮ , ಧನ್ಯ ಧನ್ಯ ಮಾನವ ಜನ್ಮ , ಜಾತ್ರೆ ಬಂತು ಸಡಗರ .
ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆಯು ಸಪ್ಟಂಬರ್
16 ರಿಂದ ಸತತ ಮೂರು ದಿನಗಳ ಕಾಲ ನಡೆಯಲಿದ್ದು , ಮಂಗಳವಾರ ನಡೆಯುವ ರಥೋತ್ಸವದಲ್ಲಿ ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದರ ಮುಖಾಂತರ ಕಾಡಸಿದ್ದನಿಗೆ ಭಕ್ತಿ ಅರ್ಪಣೆ ಮಾಡುತ್ತಾರೆ . ಈ ನಗರದ ಜನ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಈ ತೇರಿನ ಮುಂದುಗಡೆ ಭಯ - ಭಕ್ತಿಯಿಂದ ಮದ್ದು ಸುಡುತ್ತಾರೆ . ಈ ಮದ್ದು ಸುಡುವಧನ್ನು ನೋಡಲಿಕ್ಕೆ ಸಾವಿರಾರು ಜನ ಜಂಗುಳಿ . ಇಷ್ಟು ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದು ಜಿಲ್ಲೆಯಲ್ಲಿಯೇ ಪಟಾಕಿ ಮದ್ದಿನ ಜಾತ್ರೆ ಎಂದು ಪ್ರಸಿದ್ಧ ಹೆಸರುವಾಸಿಯಾಗಿದೆ. ಸುಟ್ಟ ಮದ್ದಿನ ಹೊಗೆ ದಟ್ಟವಾಗಿ ಇಡೀ ನಗರವೇ ಅವರಿಸಿರುತ್ತದೆ.
ಜಾತ್ರೆಯ ಮರುದಿನ ಅಂದ್ರೆ ಬುಧವಾರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಇರುತ್ತದೆ. ಈ ಕುಸ್ತಿ ಪಂದ್ಯಾವಳಿ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನ ಸೇರುತ್ತಾರೆ. ಇದೇ ರಾತ್ರಿ ನಾಟಕ - ಬೈಲಾಟ ಅಲ್ಲದೆ ಖ್ಯಾತ ಕನ್ನಡ ಜಾನಪದ ಪ್ರಸಿದ್ಧ ಖ್ಯಾತ ಹಾಡುಗಾರರ ಮನರಂಜನೆ ಕಾರ್ಯಕ್ರಮ ಕೂಡ ವಿಶೇಷವಾಗಿರುತ್ತದೆ. ಮೂರನೇ ದಿನ ಗುರುವಾರ ಅದ್ದೂರಿಯಾಗಿ ಕಳಸಾರೋಹನ ಕಾರ್ಯಕ್ರಮ ಕೂಡ ಮದ್ದು ಸುಡುವುದು ಮುಖಾಂತರ ನಗರದ ಸೋಮವಾರಪೇಟೆದವರಗೆ ಹೋಗುವದನ್ನು ವಿಶೇಷವಾಗಿರುತ್ತದೆ.
ಈ ರಥಕ್ಕೆ 150 ವರ್ಷಗಳ ಇತಿಹಾಸ ಉಂಟು .
ಆರಾಧ್ಯ ದೈವ ನಗರದ ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ದಿನ ನಡೆಯುವ ರಥೋತ್ಸವ ಸುಂದರವಾಗಿ ಕಣ್ಣಿಗೆ ಆಕರ್ಷಣೀಯ . ಈ ರಥೋತ್ಸವಕ್ಕೆ ಮೆರಗು ತರುವುದು ಭವ್ಯವಾದ ( ತೇರು ) ಈ ರಥವನ್ನು ನೆರೆಯ ಜಮಖಂಡಿ ಸಂಸ್ಥಾನದ ಮಹಾರಾಜ ಪಟವರ್ಧನ ಸರ್ಕಾರ ಅವರು ಮಂಗಳವಾರ ಪೇಟೆ ದೈವ ಮಂಡಳಿಗೆ ಕಾಣಿಕೆಯಾಗಿ ನೀಡಿದ್ದರು.
ಜಾತ್ರೆಯ ಸಂದರ್ಭದಲ್ಲಿ ( ತೇರಿನ ) ಕೊರತೆಯಿದ್ದಾಗ ಪಟ್ಟವರ್ಧನ್ ಸರ್ಕಾರದ ಮಹಾರಾಜರು ರಥವನ್ನು ನೀಡಿ, ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಜರುಗುವ ರಥೋತ್ಸವಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ನಗರದ ದೈವ ಮಂಡಳಿಯ ಹಿರಿಯರಿಂದ ಕರಾರು ಪತ್ರ ಬರೆಯಿಸಿಕೊಂಡ ನಂತರ ತೇರವನ್ನು ( ರಥ ) ನೀಡಿದ್ದರು. ಈ ( ತೇರು ) ರಥವನ್ನು 150 ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯ ಇದ್ದುದ್ದರಿಂದ , ಈಗಷ್ಟೇ ಅದಕ್ಕೆ ಹೊಸ ಮೆರಗನ್ನು ನೀಡಿ ಈಗಲೂ ಅ ಕೇವಲ ರಥೋತ್ಸವಕ್ಕೆ ಮಾತ್ರ ಬಳಸುವುದನ್ನು ನೋಡಬಹುದು.
ಈ ರಥ ( ತೇರು ) ಬನಹಟ್ಟಿ ನಗರಕ್ಕೆ ಬಂದು 75 ವರ್ಷ, ಬರುವಕ್ಕಿಂತ ಮುಂಚೆ 80 ವರ್ಷ ಹಳೆಯ ರಥ . ಪಟ್ಟವರ್ಧನ್ ಸರ್ಕಾರದ ರಾಜವಾಡೆಯಲ್ಲಿ ಸೀಸವೆ ಕಟ್ಟಿಗೆಯಿಂದ ನಿರ್ಮಿಸಿದ ತೇರು 150ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯದಾದ ದಾಖಲೆಯ ಇತಿಹಾಸ ಇದೆ .
ಪ್ರಪ್ರಥಮ ಬಾರಿಗೆ ಮಹಾಪ್ರಸಾದ ಅದ್ದೂರಿ ರೊಟ್ಟಿ ಊಟ :
ಶ್ರೀ ಕಾಡಸಿದ್ದೇಶ್ವರ ಜಾತ್ರಾ ಕಮಿಟಿ ಈ ವರ್ಷ ವಿಶೇಷವಾಗಿ ಅದ್ದೂರಿ ರೊಟ್ಟಿ ಊಟದ ಮುಖಾಂತರ ಬರುವಂತ ಸಾವಿರಾರು ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ . ವಿಶೇಷವಾಗಿ ನಗರದ ಎಲ್ಲಾ ಸಮಾಜದ ಬಾಂಧವರಿಗೆ ಮನೆ ಮನೆಯಿಂದ ರೊಟ್ಟಿ ತಯಾರು ಮಾಡಿಕೊಂಡು ಬರುವಂತೆ ಆಹ್ವಾನ ನೀಡಿ ವಿಶೇಷವಾಗಿ ಜಾತ್ರೆಗೆ ಮತ್ತಷ್ಟು ಮೆರಗೂ ನೀಡಲು ಪ್ರಯತ್ನ ಮಾಡಿದ್ದಾರೆ.
ಲೇಖನ : ಮಹಿಬೂಬ್ ಎಂ ಬಾರಿಗಡ್ಡಿ
ಸಂಯುಕ್ತ ಕರ್ನಾಟಕ ದಿನಪತ್ರಿಕೆಯ
ತೇರದಾಳ್ ತಾಲೂಕ ವರದಿಗಾರರು ಹಾಗೂ ಪತ್ರಿಕೆಯ ಏಜೆಂಟರು,
Mob : 9448698786
9448593518
No comments:
Post a Comment