Monday, January 26, 2026

ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ | ಶಾಸಕ ಸಿದ್ದು ಸವದಿ


 ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ  |  ಶಾಸಕ ಸಿದ್ದು ಸವದಿ

ತೇರದಾಳ: ಒಂದು ರಾಜ್ಯ ಅಥವಾ ದೇಶವಾಗಲಿ ಸುರಕ್ಷಿತವಾಗಿರಬೇಕಾದರೆ ಅಲ್ಲಿ ಒಂದು ಒಳ್ಳೆಯ ಆಢಳಿತವಿರಬೇಕು. ಒಳ್ಳೆಯ ಆಢಳಿತ ನಡೆಸಬೇಕಾದರೆ ಅಲ್ಲಿ ಒಂದು ಸರ್ವಶ್ರೇಷ್ಠವಾದ ಆಢಳಿತ ಗ್ರಂಥವೆ ಬೇಕಾಗುತ್ತದೆ. ಅಂತಹ ಶ್ರೇಷ್ಠವಾದ ಗ್ರಂಥವೆAದರೆ ಅದುವೇ ನಮ್ಮ ಸಂವಿಧಾನ ಎಂದು ಶಾಸಕ ಸಿದ್ದು ಸವದಿ ಹೇಳಿದರು.
 
               ಪಟ್ಟಣದಲ್ಲಿ ನಿನ್ನೆ ಜನೇವರಿ ೨೬ ಗಣರಾಜ್ಯೋತ್ಸವದ ನಿಮಿತ್ಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೭೭ ನೇ ಗಣರಾಜ್ಯೋತ್ಸದಲ್ಲಿ ಗೌರವವಂದನೆ ಸ್ವಿಕರಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಸಾವಿರಾರು ಜಾತಿಗಳಿವೆ ಹಲವಾರು ದರ್ಮಗಳಿವೆ. ವಿವಿಧ ಭಾಷೆಗಳಿವೆ, ವಿವಿಧ ಧಾರ್ಮಿಕ ಆಚರಣೆಗಳಿವೆ, ಸಂಪ್ರದಾಯಗಳು ಹೀಗೇ ಎಷ್ಟೇ ವಿವಿಧತೆಯಿದ್ದರೂ ಯಾವುದೇ ಧರ್ಮಕ್ಕಾಗಲಿ, ಜಾತಿಗಾಗಲಿ, ಆಚರಣೆಗಾಗಲಿ ಒಂದಿಷ್ಟೂ ಧಕ್ಕೆಯಾಗದ ರೀತಿಯಲ್ಲಿ ಸಂವಿಧಾನ ರಚಿಸಿ ಡಾ.ಬಾಬಾಸಾಹೇಬರು ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದರು. ನಮ್ಮ ದೇಶದಲ್ಲಿ ಸಾಕಷ್ಟು ಹಬ್ಬಗಳಿವೆ ಆದರೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರö್ಯದಿನೋತ್ಸವ ಮಾತ್ರ ಅತ್ಯಂತ ಪರಮಪವಿತ್ರ ಹಬ್ಬಗಳಾಗಿವೆ. ಇಲ್ಲಿ ಯಾವುದೇ ಧರ್ಮವಿಲ್ಲ ಜಾತಿ ಇಲ್ಲ, ಮೇಲಿಲ್ಲ ಕೀಳಿಲ್ಲ, ನಾವೆಲ್ಲರೂ ಭಾರತೀಯರು ಎಂಬ ಪವಿತ್ರ ಭಾವನೆಯನ್ನು ಮೂಡಿಸುವಂತಹ ರಾಷ್ಟಿçÃಯ ಹಬ್ಬವಾಗಿವೆ. ನಮ್ಮನಮ್ಮ ಧರ್ಮ, ಆಚರಣೆ ನಮ್ಮ ಮನೆಯಲ್ಲಿರಲಿ ಆದರೆ ರಾಷ್ಟಿçÃಯ ಹಬ್ಬಗಳು ಬಂದಾಗ ನಾವೆಲ್ಲರೂ ಒಂದಾಗಬೇಕು. ಪರಸ್ಪರರಲ್ಲಿ ಸಾಮರಸ್ಯ ಮೂಡಿಸುವ ಈ ಹಬ್ಬಗಳು ಅತ್ಯಂತ ಶ್ರೇಷ್ಠಹಬ್ಬಗಳಾಗಿವೆ. ಕಾರಣ ನಮಗೆ ಸಮಾನತೆಯಿಂದ ಗೌರಯುತವಾಗಿ ಬದುಕುವ ಮೂಲಭೂತ ಹಕ್ಕುಗಳನ್ನು ನೀಡಿದ ಈ ರಾಷ್ಟಿçÃಯ ಹಬ್ಬವನ್ನು ನಾವೆಲ್ಲರೂ ಸೇರಿ ಅತ್ಯಂತ ಸಡಗರ ಸಂಭ್ರಮದಿAದ ಆಚರಿಸೋಣ. ಈ ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ ಗೌರವಿಸೋಣ ಎಂದರು. ತಹಶೀಲದಾರ ವಿಜಯಕುಮಾರ ಕಡಕೋಳ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಎಲ್ಲಾ ಶಾಲಾ ಮಕ್ಕಳು ನಮ್ಮ ನಾಡು ನುಡಿ ಹಿರಿಮೆ ಗರಿಮೆ ಮೆರೆಯುವಂತಹ ಗೀತೆಗಳಿಗೆ ನೃತ್ಯಮಾಡಿ ಗತಕಾಲದ ವೈಭವವನ್ನು ಮರುಕಳಿಸಿದರು. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲೂಕಾಢಳಿತದಿಂದ ಗೌರವಿಸಲಾಯಿತು. ವೇದಿಕೆಯ ಮೇಲೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭೆಯ ಸರ್ವಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಟಿ.ಪತ್ತಾರ ನಿರೂಪಿಸಿ ವಂದಿಸಿದರು.  

No comments:

Post a Comment