ರಬಕವಿ-ಬನಹಟ್ಟಿ
ವರದಿ ಮಹಿಬೂಬ್ ಬಾರಿಗಡ್ಡಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಬನಹಟ್ಟಿ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಸಾಬ್ ಜಮಾದಾರ್ ಉದ್ಘಾಟನೆ ಮಾಡಿದರು .
ಬಳಿಕ ಮಾತನಾಡಿದ ಬುಡನ್ ಜಮಾದಾರ್ n.g.o. ಸಂಸ್ಥೆಯ ಮುಖಾಂತರ ಸಾಮಾಜಿಕ ಕೆಲಸ ಮಾಡಬೇಕಾದರೆ ಯಾವುದೇ ಜಾತಿ ಭೇದ ನೋಡದೆ, ಎಲ್ಲರಿಗೂ ಸಮಾನರಾಗಿ ತಿಳಿದು ಸಾಮಾಜಿಕ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ನಗರದ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಸಾಂಗ್ಲಿಕರ್ , ನಗರಗಳಲ್ಲಿ N G O ಸಂಸ್ಥೆಗಳು ಬಹಳಷ್ಟು ಇವೆ .ಆದರೆ ಸೇವೆಗಳ ಹಾಗೂ ಕಾರ್ಯರೂಪದಲ್ಲಿ ಇಲ್ಲ , ಕಾಗದ ರೂಪದಲ್ಲಿ ಮಾತ್ರ ಇವೆ . ಆದ್ದರಿಂದ ನೀವು ಕೂಡ ಕಾಗದ ರೂಪದಲ್ಲಿರದೆ, ಬಡಜನರ ಸೇವೆಗಳ ರೂಪದಲ್ಲಿ ಇರಬೇಕು ಎಂದು ಹೇಳಿದರು .
ಈ ಸಂದರ್ಭದಲ್ಲಿ ಫಯಾಜ್ ಅಹ್ಮದ್ ಕೊಯಿಮುತ್ತೂರು ರವರು ಮಾತನಾಡಿ ,ಈ ಸಂಸ್ಥೆಯು ಜನಪರ ಹಾಗೂ ಬಡಜನರ ಕಾಗಿ ಸಾಮಾಜಿಕ ಕೆಲಸಗಳಿಗೆ ನಾವು ನಿಮಗೆ ಸದಾ ಬೆಂಬಲವಾಗಿ ನಿಲ್ಲುತ್ತವೆ ಎಂದು ಹೇಳಿದರು .
ಬಳಿಕ ಮಾತನಾಡಿದ ಮಾಜಿ ನಗರಸಭೆ ಸದಸ್ಯ ಮೊಹಮ್ಮದ್ ನಸಿಂ ಮೊಕಾಶಿ, ಸಂಸ್ಥೆಯವರು ಸಾಮಾಜಿಕ ಸೇವೆಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು .
ಈ ಉದ್ಘಾಟನಾ ಕಾರ್ಯಕ್ರಮವನ್ನು ಯುವ ಮುಖಂಡ ಹುಜೈಫಾ ಮುಲ್ಲಾ ನಿರೂಪಿಸಿದರು.
ಈ ಸಂದರ್ಭದಲ್ಲಿ ಫಯಾಜ್ ಅಹ್ಮದ್ ಕೊಯಿಮತ್ತೂರ್ ಜಾಫರ್ ಮನಿಬಂಧ್ ,ಫಿರೋಜ್ ಜಕಾತಿ ಸಲಿಮ ಬಾರಿಗಡ್ಡಿ ,ಇರ್ಷಾದ್ ಮೋಮಿನ್ ,ಸಾದಿಕ ಜಕಾತಿ , ಸಲೀಮ್ ಜಕಾತಿ , ಅಜರ್ ಮೋಮಿನ್ ,ಶಾನೂರ್ ಮಾಲ್ದಾರ್ ,ಹಾಗೂ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಹಾಗೂ ಇನ್ನಿತರರು ಹಾಜರಿದ್ದರು .
No comments:
Post a Comment