Thursday, September 8, 2022

ಜಮೀಯತುಲ್ ಉಲೇಮಾ ಹಿಂದ್ ವತಿಯಿಂದ ಜಮಿಯತ್ ಯೂತ್ ಕ್ಲಬ್ ನಿರ್ಮಾಣ ಕುರಿತು ವಿಚಾರ ಸಂಕಿರಣ*



ರಬಕವಿ ಬನಹಟ್ಟಿ ಬಾಗಲ್ಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಬಾರ್ಬೆಟ್ ಮೊಹಲ್ಲಾದ ಜಮೀಯತುಲ್ ಉಲೇಮಾ ಹಿಂದ  ರಬಕವಿ ಬನಹಟ್ಟಿ  ಇವರ ಆಶ್ರಯದಲ್ಲಿ ,ಜಮೀಯತ್ ಯೂತ್ ಕ್ಲಬ್ ರಚನೆ ಕುರಿತು ವಿಚಾರ ಸಂಕಿರಣ ನಡೆಯಿತು .

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀಯತ್ ಉಲೇಮಾ ಇಂದ ರಾಜ್ಯಾಧ್ಯಕ್ಷ ಮೌಲನ ಹುಸೇನ್ ಸಾಬ್ ಮದನಿ ಮಜಾಹರಿ ಕಾಸ್ಮಿ ,ಜಮೀಯತ್  ಉಲೇಮಾ ಹಿಂದ್  ಸಂಘಟನೆಯೂ 1919 ರಲ್ಲಿ ಸ್ಥಾಪನೆಯಾಯಿತು .ಈ ದೇಶವನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ . ದೇಶಕ್ಕಾಗಿ ಸಾವಿರಾರು ಮೌಲ್ವಿಗಳು ಆಫೀಜ ಗಳು ಉಲೇಮಾಗಳು ಈ ದೇಶವನ್ನು ಸ್ವತಂತ್ರವಾಗಿಸಲು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು .

ಬಳಿಕ  , ಮಾತನಾಡಿದ ಹಿದಾಯತುಲ್ಲಾ ಸಿದ್ಧಿಕಿ ಯೂತ್ ಕ್ಲಬ್ ಜಿಲ್ಲಾ ತರಬೇತುದಾರ ನ್ಯೂ ದಿಲ್ಲಿ , ಇವರು ಜಮೀಯತ್ ಯೂತ್ ಕ್ಲಬ್  ಬಗ್ಗೆ ಸಂಪೂರ್ಣ ವಿವರಣೆ ನೀಡಿದರು .

ಹಾಗೂ ಭಾರತ ಸ್ಕೌಟ್ ಗೈಡ್ ಹಾಗೂ ಜಮೀಯತ್  ಯೂತ್ ಕ್ಲಬ್ ವಿಲೀನವಾಗಿ ,ಜಂಟಿಯಾಗಿ ಎರಡು 216 ದೇಶಗಳಲ್ಲಿ  ಕಾರ್ಯನಿರ್ವಹಿಸುತ್ತಿದೆ . ಈ ಜಮೀಯತ್ ಯೂತ್ ಕ್ಲಬ್  ಮಕ್ಕಳನ್ನು ತರಬೇತಿಯನ್ನು ಕೊಡುತ್ತೇವೆ . ಮಕ್ಕಳು ದೇಶಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಲಿ ಅಂತ ಜಮೀಯತ್ ಯೂತ್ ಕ್ಲಬ್  ಉದ್ದೇಶವಾಗಿದೆ ಎಂದು ನ್ಯೂ ದೆಹಲಿಯ ಸಲೀಂ ತ್ಯಾಗಿ ಮುಖ್ಯ ತರಬೇತುದಾರ ಹೇಳಿದರು .

ಈ ಸಂದರ್ಭದಲ್ಲಿ ಬಾಗಲ್ಕೋಟ್ ಜಮೀಯತ್ ಉಲೇಮಾ ಹಿಂದ್ ಬಾಗಲ್ಕೋಟ್  ಜಿಲ್ಲಾ ಅಧ್ಯಕ್ಷ , ಮೌಲಾನಾ ಯುನೋಸ್ ಜಮಖಂಡಿ , ಬಾಗಲ್ಕೋಟ್ ಜಿಲ್ಲಾ ಜನರಲ್ ಸೆಕ್ರೆಟರಿ ಮೌಲಾನ ಮೋಹಸಿನ್ , ಜಿಲ್ಲಾ ಜಮೀಯತ್  ಉಪಾಧ್ಯಕ್ಷ ಮೌಲಾನಾ ಮುಜಮ್ಮಿಲ್ ,ಜಮೀಯತ್ಉಲೇಮಾ ಹಿಂದ್   ಜಮಖಂಡಿಯ ಅಧ್ಯಕ್ಷ ಮೌಲಾನಾ ಮಂಜೂರ,ಜಮೀಯತ್ ಉಲೇಮಾ ಹಿಂದ್ ಮುಧೋಳ ಅಧ್ಯಕ್ಷ ಮೌಲಾನಾ ಹುಸೇನ್ ,ರಬಕವಿ ಬನಹಟ್ಟಿ ಜಮೀಯತ್ ಜನರಲ್ ಸೆಕ್ರೆಟರಿ ಆಫೀಜ  ಅಕ್ಬರ್ . ಜಮೀಯತ್ ರಬಕವಿ ಬನಹಟ್ಟಿ ತಾಲೂಕ ಉಪಾಧ್ಯಕ್ಷ ಆಫೀಜ  ರಿಯಾಜ್ ,ಮೌಲಾನಾ ಇಲಿಯಾಸ್ ,ಮೌಲಾನಾ ಅಸ್ಲಾಂ ,ಮೌಲಾನಾ ಆಸೀಫ್, ಆಫೀಜ ಸುಲೆಮಾನ , ಹಾಗೂ ಇನ್ನೂ ಅನೇಕ ಮೌಲ್ವಿಗಳು ಆಫೀಜಗಳು ಉಪಸ್ಥಿತರಿದ್ದರು .

No comments:

Post a Comment