ರಬಕವಿ ಬನಹಟ್ಟಿ ಬಾಗಲ್ಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಬಾರ್ಬೆಟ್ ಮೊಹಲ್ಲಾದ ಜಮೀಯತುಲ್ ಉಲೇಮಾ ಹಿಂದ ರಬಕವಿ ಬನಹಟ್ಟಿ ಇವರ ಆಶ್ರಯದಲ್ಲಿ ,ಜಮೀಯತ್ ಯೂತ್ ಕ್ಲಬ್ ರಚನೆ ಕುರಿತು ವಿಚಾರ ಸಂಕಿರಣ ನಡೆಯಿತು .
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀಯತ್ ಉಲೇಮಾ ಇಂದ ರಾಜ್ಯಾಧ್ಯಕ್ಷ ಮೌಲನ ಹುಸೇನ್ ಸಾಬ್ ಮದನಿ ಮಜಾಹರಿ ಕಾಸ್ಮಿ ,ಜಮೀಯತ್ ಉಲೇಮಾ ಹಿಂದ್ ಸಂಘಟನೆಯೂ 1919 ರಲ್ಲಿ ಸ್ಥಾಪನೆಯಾಯಿತು .ಈ ದೇಶವನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ . ದೇಶಕ್ಕಾಗಿ ಸಾವಿರಾರು ಮೌಲ್ವಿಗಳು ಆಫೀಜ ಗಳು ಉಲೇಮಾಗಳು ಈ ದೇಶವನ್ನು ಸ್ವತಂತ್ರವಾಗಿಸಲು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು .
ಬಳಿಕ , ಮಾತನಾಡಿದ ಹಿದಾಯತುಲ್ಲಾ ಸಿದ್ಧಿಕಿ ಯೂತ್ ಕ್ಲಬ್ ಜಿಲ್ಲಾ ತರಬೇತುದಾರ ನ್ಯೂ ದಿಲ್ಲಿ , ಇವರು ಜಮೀಯತ್ ಯೂತ್ ಕ್ಲಬ್ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು .
ಹಾಗೂ ಭಾರತ ಸ್ಕೌಟ್ ಗೈಡ್ ಹಾಗೂ ಜಮೀಯತ್ ಯೂತ್ ಕ್ಲಬ್ ವಿಲೀನವಾಗಿ ,ಜಂಟಿಯಾಗಿ ಎರಡು 216 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ . ಈ ಜಮೀಯತ್ ಯೂತ್ ಕ್ಲಬ್ ಮಕ್ಕಳನ್ನು ತರಬೇತಿಯನ್ನು ಕೊಡುತ್ತೇವೆ . ಮಕ್ಕಳು ದೇಶಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಲಿ ಅಂತ ಜಮೀಯತ್ ಯೂತ್ ಕ್ಲಬ್ ಉದ್ದೇಶವಾಗಿದೆ ಎಂದು ನ್ಯೂ ದೆಹಲಿಯ ಸಲೀಂ ತ್ಯಾಗಿ ಮುಖ್ಯ ತರಬೇತುದಾರ ಹೇಳಿದರು .
ಈ ಸಂದರ್ಭದಲ್ಲಿ ಬಾಗಲ್ಕೋಟ್ ಜಮೀಯತ್ ಉಲೇಮಾ ಹಿಂದ್ ಬಾಗಲ್ಕೋಟ್ ಜಿಲ್ಲಾ ಅಧ್ಯಕ್ಷ , ಮೌಲಾನಾ ಯುನೋಸ್ ಜಮಖಂಡಿ , ಬಾಗಲ್ಕೋಟ್ ಜಿಲ್ಲಾ ಜನರಲ್ ಸೆಕ್ರೆಟರಿ ಮೌಲಾನ ಮೋಹಸಿನ್ , ಜಿಲ್ಲಾ ಜಮೀಯತ್ ಉಪಾಧ್ಯಕ್ಷ ಮೌಲಾನಾ ಮುಜಮ್ಮಿಲ್ ,ಜಮೀಯತ್ಉಲೇಮಾ ಹಿಂದ್ ಜಮಖಂಡಿಯ ಅಧ್ಯಕ್ಷ ಮೌಲಾನಾ ಮಂಜೂರ,ಜಮೀಯತ್ ಉಲೇಮಾ ಹಿಂದ್ ಮುಧೋಳ ಅಧ್ಯಕ್ಷ ಮೌಲಾನಾ ಹುಸೇನ್ ,ರಬಕವಿ ಬನಹಟ್ಟಿ ಜಮೀಯತ್ ಜನರಲ್ ಸೆಕ್ರೆಟರಿ ಆಫೀಜ ಅಕ್ಬರ್ . ಜಮೀಯತ್ ರಬಕವಿ ಬನಹಟ್ಟಿ ತಾಲೂಕ ಉಪಾಧ್ಯಕ್ಷ ಆಫೀಜ ರಿಯಾಜ್ ,ಮೌಲಾನಾ ಇಲಿಯಾಸ್ ,ಮೌಲಾನಾ ಅಸ್ಲಾಂ ,ಮೌಲಾನಾ ಆಸೀಫ್, ಆಫೀಜ ಸುಲೆಮಾನ , ಹಾಗೂ ಇನ್ನೂ ಅನೇಕ ಮೌಲ್ವಿಗಳು ಆಫೀಜಗಳು ಉಪಸ್ಥಿತರಿದ್ದರು .
No comments:
Post a Comment