ರಬಕವಿ - ಬನಹಟ್ಟಿ : ನಗರದಲ್ಲಿ ರಬಕವಿ - ಬನಹಟ್ಟಿ ಮಹೇಶವಾಡಗಿ ಸೇತುವೆಯ ತ್ವರಿತ ಪೂರ್ಣ ಕಾಮಗಾರಿಗೆ ಅಗ್ರಹಿಸಿ , ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಾ ಇದೆ . ಈ ಸೇತುವೆಯು ಹಲವಾರು ವರ್ಷಗಳ ಹಿಂದೆಯೇ ಚಾಲನೆಗೊಂಡು ಬಳಿಕ ಸ್ಥಗಿತಗೊಂಡಿದ್ದನ್ನು ವಿರೋಧಿಸಿ , ಹಲವು ಬಾರಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗದೆ ಉಪವಾಸ ಸತ್ಯಾಗ್ರಹ ಒಂದೇ ದಾರಿ ಎಂದು ಭಾವಿಸಿ ಜನಸಾಮಾನ್ಯರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ . ನಗರದ ಶಂಕರಲಿಂಗ್ ದೇವಸ್ಥಾನದ ಹತ್ತಿರ ವೇದಿಕೆಯಲ್ಲಿ ಸತ್ಯಾಗ್ರಹ ನಿರತ ಡಾ. ರವಿ ಜಮಖಂಡಿ ಇವರ ಮುಖಂಡತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ವೇದಿಕೆಗೆ ಅವಳಿ ನಗರಗಳ ರಬಕವಿ - ಬನಹಟ್ಟಿ ಆಟೋ ಚಾಲಕರ ಹಾಗೂ ಮಾಲಕರ ಸಂಘಟನೆಗಳ ಒಕ್ಕೂಟವು ಬೆಂಬಲವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಬನಹಟ್ಟಿ ಶ್ರೀ ಕಾಡಸಿದ್ದೇಶ್ವರ ಆಟೋ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷ ರಂಜಾನ್ ಗೋರಿ, ಉಪಾಧ್ಯಕ್ಷ ಸುಭಾಷ್ ಪಾರ್ಥನಹಳ್ಳಿ ಸಿದ್ದಲಿಂಗ್ ಪಾಟೀಲ್ , ಗನಶೇದ್ ಹನಗಂಡಿ, ಮುಸ್ತಾಕ ಪೆಂಡಾರಿ , ಆಕ್ರಂ ರಾಜನ್ನವರ್, ಸುನಿಲ್ ಗೊಂದ ಕರ್, ಅನಿಲ ಗೊಂಡಕರ, ರಬಕವಿ ನಗರದ ಆಟೋ ಚಾಲಕರ ಸಂಘಟನೆಯ ಸದಸ್ಯರಾದ ರಮೇಶ್ ಕಾಕಾ ಹೊಸಕೋಟಿ ಹಾಗೂ ಕರವೇ ಗಜ ಸೇನೆ ಅಧ್ಯಕ್ಷ ಮಮ್ಮದ್ ಹುಸೇನ್ ಲಿಂಗರೆ , ಕೆಂಪು, ದುಂಡಪ್ಪ ಹೊಸಕೋಟಿ ಇನ್ನೂ ಹಲವಾರು ಸದಸ್ಯರು ಚಾಲಕರು ಹಾಜರಿದ್ದರು.
No comments:
Post a Comment