Saturday, August 27, 2022

ದಲಿತರು ಮತ್ತು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಖಂಡಿಸಿ , ಬೃಹತ್ ಪ್ರತಿಭಟನೆ*


KALAAM EXPRESS NEWS
ವರದಿ ಮಹಿಬೂಬ್ ಬಾರಿಗಡ್ಡಿ  

ದೇಶದಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ಖಂಡಿಸಿ,  ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಗರದಲ್ಲಿ ರ್ಯಾಲಿ ಮೂಲಕ ಭಾರಿ ಪ್ರತಿಭಟನೆ ಮಾಡಿದರು .

ಈ ಪ್ರತಿಭಟನೆಯ ರ್ಯಾಲಿಯು ನಗರದ ,, ಬಸ್ ನಿಲ್ದಾಣದ ಹತ್ತಿರ ಗಣಪತಿ ದೇವಾಲಯದಿಂದ   ಚಾಲನೆಗೊಂಡು ,ನಗರದ  ಕಿತ್ತೂರಾಣಿ ಚೆನ್ನಮ್ಮ ಹಾಗೂ ಮಹಾತ್ಮ ಗಾಂಧಿ ಸರ್ಕಲ್ ಪುರಸಭೆವರೆಗೆ ಘೋಷಣೆಗಳ ಮೂಲಕ  ಭಾರಿ  ಪ್ರತಿಭಟನೆ ನಡೆಸಿ ,ನಂತರ  ಪುರಸಭೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಿದರು   .

ಈ ಪ್ರತಿಭಟನೆಯನ್ನು ಉದ್ದೇಶಿಸಿ ಅಲ್ಪಸಂಖ್ಯಾತರ ಮುಖಂಡ ಜಾವೇದ್ ಭಾಗವಾನ್ ಮಾತನಾಡಿದರು .

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಯಮನಪ್ಪ ಗುಣದಾಳ ನಗರದ ಅಲ್ಪಸಂಖ್ಯಾತರ ಮುಖಂಡರಾದ ಜಾವೇದ್ ಭಗವಾನ್ ಪರಶುರಾಮ್ ಮೇತ್ರಿ , ಮುಬಾರಕ್ ಅಲ್ಲಾಖಾನ್ ,ಸಿಂಹ ಮೇತ್ರಿ  ,ಭೀಮ್ ಆರ್ಮಿಯ ಮುಖಂಡರು ಲವಿತ್ ಮೇತ್ರಿ ಸಂಜು ಕಂಬಾಗಿ ,ಡಿಎಸ್ಎಸ್ ಹರಿಜನ್ ಮುಖಂಡರಾದ ಸುನಿಲ್ ಹರಿಜನ್ ,ಅರ್ಜುನ್ ದೊಡ್ಮನಿ ,  ಭೀಮ್ಸಿ ಮಾವಿನ ಹಿಂದಿ ಬಸು ಮಾವಿನಹಿಂದಿ ,ಸಿರಾಜುದ್ದೀನ್ ಮುಜಾವರ ,ಯಾಸೀನ್  ಬಳಗಾರ ,   ಯುನುಸ್ ಬೀಳಗಿ   ,    ಇನ್ನೂ ಹಲವಾರು ಮುಖಂಡರು ಭಾಗಿಯಾಗಿದ್ದರು  .

No comments:

Post a Comment