*ಉಚಿತ ವಿದ್ಯುತ್ತ ಆದೇಶ ಆದಷ್ಟು ಬೇಗನೆ ಹೊರಡಿಸಿ , ಅಧ್ಯಕ್ಷ ಶಿವಲಿಂಗ ಟಿರಕಿ ಅಗ್ರಹ .*
ಬಾಗಲಕೋಟೆ /
*ರಬಕವಿ ಬನಹಟ್ಟಿ*
ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಉಚಿತ ವಿದ್ಯುತ್ ಆದೇಶ ಹೊರಡಿಸಿ ಆದಷ್ಟು ಬೇಗನೆ ನೇಕಾರರಿಗೆ ತಲುಪಿಸುವಂತಹ ಯೋಜನೆಯಾಗಬೇಕು ಅನೇಕ ದಿನಗಳಿಂದ ಹೋರಾಟ ಮಾಡುತ್ತಿರುವ ನೇಕಾರರು ಬಹುದಿನಗಳಿಂದ ಉಚಿತ ವಿದ್ಯುತ್ ಜಾರಿಗಾಗಿ ಕಾಯುತ್ತಿದ್ದು ,ಸರ್ಕಾರ ಇನ್ನೂ ಕೂಡ ಆದೇಶ ಹೊರಡಿಸದೆ ಇರುವುದು
ನೇಕಾರ ಸಮುದಾಯಕ್ಕೆ ನಿರಾಶೆಯಾಗಿದೆ
ಹಾಗೂ ಈಗಾಗಲೇ ಇರುವ ನಾಲ್ಕೈದು ತಿಂಗಳ ಬಾಕಿ ಬಿಲ್ಲನ್ನು ಪಾವತಿಸಲು ನೇಕಾರರಿಂದ ಆಗದ ಹಿನ್ನೆಲೆಯಲ್ಲಿ ಸರ್ಕಾರವೇ ಬರಿಸಿಕೊಳ್ಳಬೇಕು ಮತ್ತು ದಿನಾಂಕ 24 -10 -2023 ರೊಳಗೆ ಆದೇಶ ಹೊರಡಿಸಿ ಉಚಿತ ವಿದ್ಯುತ್ ನೇಕಾರರಿಗೆ ತಲುಪದೇ ಹೋದಲ್ಲಿ ರಾಜ್ಯದ್ಯಂತ ನೇಕಾರರು ಸೇರಿ ಬೃಹತ್ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ತಿರ್ಕಿ ಹೇಳಿದರು.
ಈ ಸಂದರ್ಭದಲ್ಲಿ ,
ರಬಕವಿ - ಬನಹಟ್ಟಿ ರಾಂಪುರ ತೇರದಾಳ ಹೊಸೂರ ,ಆಸಂಗಿ ಮಹಾಲಿಂಗಪುರ, ಮಾಲಾಪುರ ದಿಂದ ನೂರಾರು ನೇಕಾರರು ಭಾಗವಹಿಸಿದ್ದರು .
ಈ ಸಂದರ್ಭದಲ್ಲಿ ನೇಕಾರರ ಮುಖಂಡರಾದ , ರಾಜೇಂದ್ರ ಮಿರ್ಜಿ ಆನಂದ ಜಗದಾಳ ಸಂಗಪ್ಪ ಉದ್ಗಟ್ಟಿ ,ಲಕ್ಕಪ್ಪ ಪವಾರ್ ,ಎಸ್ಐ ಕಾಯಿಸಲಿಗಿ ,ರಾಮಣ್ಣ ಹುಲಕುಂದ್ ,ಶಿವಾನಂದ ಗಟ್ನಟ್ಟಿ ,ಮತ್ತು ಎಲ್ಲ ಊರುಗಳಿಂದ ನೂರಾರು ಜನ ಭಾಗವಹಿದ್ದರು .
ವರದಿ
ಮಹಬೂಬ್ ಎಂ ಬಾರಿಗಡ್ಡಿ
No comments:
Post a Comment