Skip to main content

ಕಲಾಕೃತಿಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುತ್ತಿರುವ ಶಿಕ್ಷಕ , ಸಲೀಂ ಎಂ ಡಾಂಗೆ

ರಬಕವಿ ಬನಹಟ್ಟಿ

ಹೊಸ ವರ್ಷದ ಆಚರಣೆ  ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ .  ಇಲ್ಲೊಬ್ಬ  ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ , ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ  ಡಾಂಗೆ ಇವರು ಕಲಾ ಕೃತಿಗಳನ್ನು ವಿಶಿಷ್ಟ ರೂಪದಲ್ಲಿ ರಚನೆ ಮಾಡುತ್ತಾರೆ . ಸೂಫಿ ಸಂತರು , ಬುದ್ಧ  , ಬಸವ ಪುರಂದರದಾಸರು ಇನ್ನು ಅನೇಕ ಮಹಾತ್ಮರು ಸಮಾಜಕ್ಕೆ ಶಾಂತಿ ಸಂದೇಶಗಳನ್ನು ಸಾರಿದ ವಚನಗಳ ಸಾರವನ್ನು ತಮ್ಮ ವಿಭಿನ್ನ ಚಿತ್ರಕಲೆಗಳ ಮೂಲಕ ಗ್ರೀಟಿಂಗ್ಸ್ ಗಳಲ್ಲಿ ಬಿಡಿಸಿ , ಅದಕ್ಕೊಂದು ಒಳ್ಳೆಯ ಹೆಸರುವನ್ನು ಕೊಟ್ಟು ಅದನ್ನು ವರ್ಣ ರಂಜಿತ  ಚಿತ್ರದಲ್ಲಿ ಮುದ್ರನ (ಪ್ರಿಂಟ್ ) ಹಾಕಿ ,ಇನ್ನೇನು ಹೊಸ ವರ್ಷ ಬರುವಷ್ಟರಲ್ಲಿಯೇ ,  ವಾರದ ಮುಂಚೆ ,  ಕೋಮುಸೌಹಾರ್ದತೆ ಯನ್ನು  ಎತ್ತಿ ಹಿಡಿಯಲಿಕ್ಕೆ ,ಎಲ್ಲ ಸಮಾಜಗಳಿಗೆ ,ಶಾಂತಿ ಸಂದೇಶಗಳನ್ನು ತಮ್ಮ ವಿಭಿನ್ನ ಚಿತ್ರಕಲಾಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ರವಾನೆಯನ್ನು ಮಾಡುವುದರ ಮೂಲಕ ಅವರು  ಸತ್ - ಸಂಪ್ರದಾಯವನ್ನು ಈ ವಿಶಿಷ್ಟ ಚಿತ್ರಕಲಾ ಶಿಕ್ಷಕರು ರೂಡಿಸಿಕೊಂಡು ಬಂದಿದ್ದಾರೆ .

ದಯವೇ ಧರ್ಮದ ಮೂಲವಯ್ಯ , ನಿಮ್ಮ ಏಕತೆ  , ನನ್ನ ಪೂಜೆ , ನನ್ನ ಉಳಿಸಿ ಜಗತ್ತು  ರಕ್ಷಿಸಿ  , ಜೈ ಭಾರತ ಜನನಿಯ  ತನುಜಾತೆ , ರಾಷ್ಟ್ರೀಯ ಏಕತೆಯೇ ನನ್ನ ಸೌಂದರ್ಯ , ಹಾಗೂ ನವಿಲು ನರ್ತನ , ಇನ್ನೂ ಅನೇಕ 16 ಚಿತ್ರ ಕಲೆಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ಹೊರ ತಂದಿದ್ದಾರೆ  .


ಸಲೀಂ ಮೈನುದ್ದೀನ್ ಡಾಂಗೆ  ಇವರು ಕಲಾ ಶಿಕ್ಷಕರು ಸದ್ಯ ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೋಲಾರ್ ಪಟ್ಟಣದ ಸಿಖ್ಯಾಬ ಸಂಸ್ಥೆಯ ಉರ್ದು ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ .


ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಚಿತ್ರಕಲಾ ಶಿಕ್ಷಕರಾದ ಶ್ರೀ ಎಸ್ ಎಂ ಡಾಂಗೆ ಸುಮಾರು 30 ವರ್ಷದಿಂದ ಇಂತಹ ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನು ಪ್ರತಿ ವರ್ಷ ರಚಿಸ್ತಿದ್ದು ಈ ವರ್ಷ ಅವರು ಅವಿಭಕ್ತ ಕುಟುಂಬದ ಮಹತ್ವ , ವೃದ್ಧ ತಂದೆ ತಾಯಿ ಮತ್ತು ಮಕ್ಕಳು ಸೇರಿ ಇರುವ ಕುಟುಂಬ ಯಾವುದೇ ಸ್ವರ್ಗ ಕ್ಕಿಂತ ಕಡಿಮೆ ಇಲ್ಲ ಎನ್ನುವಂತೆ ಸರ್ವಜ್ಞ ಅವರ ವಚನವನ್ನು ಮೂಲವಾಗಿಸಿ ಈ ವರ್ಷದ ಹೊಸ ವರ್ಷದ ಶುಭಾಶಯ ಚಿತ್ರವನ್ನು ರಚಿಸಿದ್ದಾರೆ

ಪ್ರತಿಯೊಂದು ಹೊಸ ವರ್ಷಕ್ಕೆ ಅವರ ವಿಶಿಷ್ಟವಾದ ಕೋಮು ಸೌಹಾರ್ದತೆ   ಸಲುವಾಗಿ ಸಾಮ್ಯರಸ ಬದುಕಿನ ಸಂದೇಶಗಳನ್ನು ಸಾರುವ ಅಪರೂಪದ ತಮ್ಮ ವಿಶಿಷ್ಟ ಕಲಾ ಕೃತಿಗಳಲ್ಲಿ ಬಿಡಿಸಿ , ಗಣ್ಯ ವ್ಯಕ್ತಿಗಳಿಗೆ  ಹಾಗೂ ಸಾರ್ವಜನಿಕರಿಗೆ , ಉಚಿತವಾಗಿ ತಮ್ಮ  ಚಿತ್ರಕಲೆಗಳ  ಗ್ರೀಟಿಂಗ್ಸ್ ಗಳನ್ನು ಹಂಚುವುದರ ಮೂಲಕ , ಹೊಸ ವರ್ಷದ ಆಚರಣೆಯನ್ನು ಮಾಡುವುದರ ಮೂಲಕ  , ಎಲ್ಲರ ಮನೆ ಮಾತಾಗಿದ್ದಾರೆ . 

ಶಿಕ್ಷಕ ಸಲೀಂ ಎಂ ಡಾಂಗೆ  ಇವರು 1993 ದಿಂದ  2023 ರವರೆಗೆ ಕನಿಷ್ಠ 31 ವರ್ಷದಿಂದ ಈ ವಿಭಿನ್ನ ಚಿತ್ರಕಲೆಗಳ ಮೂಲಕ  ಘಣಕಾರ್ಯವನ್ನು   ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ . 1995 - 96 ರಲ್ಲಿ ದೇಶದ ರಾಷ್ಟ್ರಪತಿಗಳಿಂದ ಕೂಡ ಪ್ರಶಂಸೆಯ  ಪತ್ರವೂ ಕೂಡ ಬಂದಿದೆ .

ಪ್ರತಿಯೊಂದು, ಹೊಸ ವರ್ಷದ ಸಂದರ್ಭದಲ್ಲಿ ಬೇರೆ ಬೇರೆ  ಚಿತ್ರಕಲೆಗಳ ಮೂಲಕ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಚಿತ್ರ  ಕಲೆಗಳ ಮುಖಾಂತರ ಗ್ರೀಟಿಂಗ್ಸ್ ಗಳನ್ನು ಹೊರ ತರುತ್ತಾರೆ . ಈ ವರ್ಷ ಮಾಡಿದ್ದ ಚಿತ್ರಕಲೆಯ  ಶೈಲಿ  ಮುಂದಿನ ಹೊಸ ವರ್ಷದಲ್ಲಿ ಬೇರೆ ತರಹದ ವಿಭಿನ್ನ ರೂಪದಲ್ಲಿ ಹೊರ ತರುತ್ತಾರೆ  . ಅಂದರೆ ಈ ವರ್ಷ ಮಾಡಿದ್ದ ಚಿತ್ರಕಲೆ ,  ಬರುವ  ಹೊಸ ವರ್ಷದಲ್ಲಿ  ಚಿತ್ರಕಲೆ  ಇನ್ನೊಂದು ತರ ಇರುತ್ತದೆ .  ತಮ್ಮ ಕಲಾ ಕೃತಿಗಳ ಗ್ರೀಟಿಂಗ್ಸ್ ಗಳನ್ನು ರಚಿಸಲು ತಮ್ಮ ಸ್ವಂತ ಬಂಡವಾಳ ಹಾಕುತ್ತಾರೆ  . ಯಾರಿಂದಲೂ ಕೂಡ ಒಂದು ರೂಪಾಯಿಯ ಸಹಾಯ ಕೂಡ ಪಡೆಯುವುದಿಲ್ಲ  .

1990ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯ ನಗರದ ಮುರಗೇಂದ್ರ ಲಲಿತ ಕಲಾ  ಮಹಾವಿದ್ಯಾಲಯದಲ್ಲಿ , ಆರ್ಟ್ಸ್ ಮಾಸ್ಟರ್ ಪದವಿ ಮುಗಿಸಿದ ಸಲೀಂ ಡಾಂಗೆ ಅವರಿಗೆ ಚಿತ್ರಕಲೆ , ಸಾಹಿತ್ಯ , ರಂಗಭೂಮಿ , ಲಘು ಸಂಗೀತ , ಸಂಘಟನೆ , ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಒಲವು ಇರುತ್ತದೆ .


ನಾನು ಕಷ್ಟಪಟ್ಟು ಮಾಡುತ್ತಿರುವ ಕಲಾಕೃತಿ ಗ್ರೀಟಿಂಗ್ಸ್ ಗಳ ಸಾಮ್ಯರಸ ಶಾಂತಿ ಸಂದೇಶ ಸಾರವನ್ನು ಜನಸಾಮಾನ್ಯರು  ಅರಿತುಕೊಂಡು ,ಅದರಂತೆಯೇ ನಡೆದುಕೊಂಡರೆ ಪ್ರತಿಯೊಂದು ಸಮಾಜಕ್ಕಾಗಿ ನನ್ನ ಚಿತ್ರಕಲೆಗಳ ಮೂಲಕ  ತನ್ನ ಅಳಿಲು ಸೇವೆ ಸ್ವಾರ್ಥಕವಾಗುತ್ತದೆ ಎಂದು ಕಲಾ ಶಿಕ್ಷಕ ಸಲೀಂ ಡಾಂಗೆ ಹೇಳುತ್ತಾರೆ .


ಲೇಖನ : ಮಹೆಬೂಬ್ ಎಂ ಬಾರಿಗಡ್ಡಿ 
  ಸಂಪಾದಕರು 
ಕಲಾಂ ಎಕ್ಸ್ ಪ್ರೆಸ್  ನ್ಯೂಸ್ 
9448593518

Comments

Popular posts from this blog

ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ

ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ  ರಬಕವಿ - ಬನಹಟ್ಟಿ:  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ (ಎಸ್‌ಡಿಪಿಐ) ಬನಹಟ್ಟಿ ನಗರ ಘಟಕದ ವತಿಯಿಂದ ನಗರದ ಬಿಲಾಲ್ ಮಸೀದಿ ಸಮೀಪ ಎಸ್‌ಐಆರ್ (SIR) ಮ್ಯಾಪಿಂಗ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಎಸ್‌ಐಆರ್ ಮ್ಯಾಪಿಂಗ್ ಹಾಗೂ ಫಾರಂ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಸಹಾಯವಾಣಿ (Help Desk) ಮೂಲಕ ಸ್ಥಳದಲ್ಲೇ ಸಾರ್ವಜನಿಕರಿಗೆ ಉಚಿತವಾಗಿ ಫಾರಂ ಭರ್ತಿ ಮಾಡಿಕೊಡುವ ಸೇವೆಯನ್ನು ಒದಗಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಪಡೆದುಕೊಂಡರು. ಮತದಾರರ ಮಾಹಿತಿಯನ್ನು ಸರಿಯಾಗಿ ದಾಖಲಿಸುವುದು ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ, ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು. ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಿಂದ ಉತ್ತಮ ಸ್ಪಂದನೆ  ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಎಸ್‌ಡಿಪಿಐ ನಗರ ಘಟಕ ತಿಳಿಸಿದೆ. ಈ ಸಂದರ್ಭದಲ್ಲಿ ಸಲೀಮ ನದಾಫ್ –...

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :  ಮುಧೋಳ   :  ಬಡವರಪರ‌ ಕಾಳಜಿ ಹೊಂದಿರುವ ಜನಪ್ರಿಯ ನಾಯಕ‌ ಜಮೀರ್ ಅಹ್ಮದ ಅವರಿಗೆ ದೇವರು ಹೆಚ್ಚಿನ ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಕೆಪಿಸಿಸಿ‌ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಫಿಕ್ ಬೇಪಾರಿ  ಹಾರೈಸಿದರು. ವಸತಿ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನದ ಹಿನ್ನೆಲೆ‌ ನಗರದ ಸರ್ಕಾರಿ‌ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಮಾತನಾಡಿದ ಅವರು, ಜಮೀರ್ ಅಹ್ಮದ ಅವರು ಬಡವರ ಪರ ನಿರಂತರ ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ. ನೂರಾರು ಬಡವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಸರ್ವರನ್ನು ಸಮಾನವಾಗಿ ಕಾಣು ಮನೋಭಾವ ಹೊಂದಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಜೀವನದಲ್ಲಿ ಮತ್ತಷ್ಟು‌ ಯಶಸ್ಸು ದೊರೆತು ಬಡವರಪರ‌ ಕೆಲಸ‌ ಮಾಡಲು ದೇವರು ಶಕ್ತಿ ನೀಡಬೇಕು ಎಂದು‌ ಶುಭ ಕೋರಿದರು.  , ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಜಮಾದಾರ, ಸೈಯದ್ ಬಾಬಾವಲಿ, ದಾವಲ  ನದಾಫ, ಶಾಕಿರ್ ಬುಡ್ಡ, ಶೇಕ್  ಮುಜಮಿಲ್ ಬೇಪಾರಿ ಕೂತುಬು ನದಾಫ್, ರಫೀಕ್  ನದಾಫ್, ಫಯಾಜ್ ಮುಲ್ಲಾ  ನಜಿರ್ ನದಾಫ್ ಸೇರಿದಂತೆ ಇತರರು ಇದ್ದರು.

ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಲು ಮುಸ್ಲಿಂ ಸಮುದಾಯ ಅಗ್ರಹ

ಜಮೀರ್ ಅಹಮ್ಮದ್ ಖಾನ್ ಆವರಿಗೆ ಸಚಿವ ಸ್ಥಾನ ನೀಡಲು ಅಗ್ರಹ .  ತೇರದಾಳ ( ರಬಕವಿ ) : ರಬಕವಿ ಬನಹಟ್ಟಿ ತಾಲ್ಲೂಕು ಸಮಸ್ತ ಮುಸ್ಲಿಂ ಸಮುದಾಯದಿಂದ ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಅಗ್ರಹಿಸಿದರು . ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಬಾರಿಗಡ್ಡಿ, ಜಮೀರ್ ಅಹಮ್ಮದ್ ಖಾನ್ ರವರು ಕೇವಲ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗದೇ ಸರ್ವಜನಾಂಗದ ನಾಯಕರಾಗಿ ಹೊರಹಮ್ಮಿದ್ದಾರೆ. ಆಯ್ಕೆಯಾಗಿ ಬಂದಿರುವ ಚಾಮರಾಜನಗರ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಕರ್ನಾಟಕದಾದ್ಯಂತ ಜನಪರ ಕೆಲಸಗಳ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿ ಕಾರ್ಯಗಳು ಇದಲ್ಲದೆ , ಜನಸೇವೆ ಮಾಡುತ್ತಿರುವ ಇವರಿಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅಗ್ರಹಿಸಿದರು . ಮೌಲಾನಾ ಮೋಹಸಿನ್ ಅಹಮದ್ ಗೋಕಾಕ್ ಅವರು ಬೀ ಜಡ್ ಜಮೀರ್ ಅಹ್ಮದ್ ಖಾನ್ ಅವರು ಯಾವುದೇ ಸಮುದಾಯಕ್ಕೆ ಸೀಮಿತವಾಗದೆ ಇಡೀ ರಾಜ್ಯದ್ಯಂತ ನಾಯಕರಾಗಿ ಹೊರಹೊಮ್ಮಿದ್ದು , ಡಿಕೆ ಶಿವಕುಮಾರ್ ಅವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಒಂದು ವೇಳೆ ನೀಡದಿದ್ದಲ್ಲಿ , ಮುಂದಿನ ದಿನಮಾನಗಳಲ್ಲಿ ಬೇರೆ ಮಾರ್ಗ ನೋಡಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲ...