Sunday, March 9, 2025

ಹೋಳಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಸ್ಥಳೀಯ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಶಾಂತಿ ಪಾಲನೆ ಸಭೆ :

ಹೋಳಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಸ್ಥಳೀಯ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಶಾಂತಿ ಪಾಲನೆ ಸಭೆ   :  

 ಬಾಗಲಕೋಟೆ / 

ರಬಕವಿ - ಬನಹಟ್ಟಿ  : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೊಲೀಸ್ ಠಾಣೆ ಆವರಣದಲ್ಲಿ, ಹೋಳಿ ಹಾಗೂ ರಮಜಾನ್ ಹಬ್ಬದ ಪ್ರಯುಕ್ತ ಸಿಪಿಐ ಸಂಜು ಬಳಗಾರ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಶಾಂತಿಪಾಲನಾ ಸಭೆಯನ್ನು ಜರುಗಿತು. 

 ಈ ಶಾಂತಿಪಾಲನ ಸಭೆಯಲ್ಲಿ ಮಾತನಾಡಿದ ಸಿಪಿಐ ಸಂಜು ಬಳಗಾರ್ , ಈಗ ಪಿಯುಸಿ ಪರೀಕ್ಷೆಯ ಸಮಯ ಇರುವುದರಿಂದ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಬಣ್ಣಗಳ ಹಾಕದಂತೆ  ನೋಡಿಕೊಳ್ಳಬೇಕು . ಹಾಗೂ ಬೇಸುಗೆಕಾಲ ಇರುವುದರಿಂದ ಕುಡಿಯುವ ನೀರು ಹಾಳ ಮಾಡದೆ  , ಹಿಂದೂ ಸಂಪ್ರದಾಯದ ಪ್ರಕಾರ ಏನು ಹೋಳಿ ಹಬ್ಬ ಆಚರಣೆ ಇದೆ ಅದೇ ಪ್ರಕಾರ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿ  , ಹಾಗೂ ವಿಷಕಾರಿ ಬಣ್ಣಗಳನ್ನು ಬಳಸದೆ  ಹಬ್ಬವನ್ನು ಆಚರಿಸಿ  , ಇದೇ ರೀತಿ ಮುಸ್ಲಿಂ ಬಾಂಧವರ ರಂಜಾನ್ ತಿಂಗಳ ಫೆಬ್ರವರಿ 28 ರಿಂದ ಮಾರ್ಚ್ 30 ರವರೆಗೆ ಇರುವುದರಿಂದ ಮುಸ್ಲಿಂ ಬಾಂಧವರು ಕೂಡ ಆಚರಣೆ ಮಾಡುತ್ತಿರುತ್ತಾರೆ  ಅವರಿಗೆ ಕೂಡ ಯಾವುದೇ ರೀತಿ ತೊಂದರೆಯಾಗದಂತೆ ನಾವು ಹಬ್ಬವನ್ನು ಖುಷಿಯಿಂದ ಇಬ್ಬರೂ ಸಮನ್ವಯ ದಿಂದ ಎರಡು ಹಬ್ಬಗಳು ಆಚರಣೆ ಮಾಡಬೇಕು ಎಂದು ಹೇಳಿದರು .

 ಈ ಸಂದರ್ಭದಲ್ಲಿ ನಗರದ ಪೊಲೀಸ್ ಠಾಣಾಧಿಕಾರಿ ಶಾಂತಾ ಹಳ್ಳಿ , ಮಂಗಳಾರ ಪೇಟ್ ದೈವ ಮಂಡಳಿಯ ಹಿರಿಯರಾದ ಶ್ರೀಶೈಲ್ ದಬಾಡಿ , ಸೋಮವಾರ ಪೇಟೆ  ದೈವ ಮಂಡಳಿಯ ಹಿರಿಯರಾದ ಹಾಗೂ ಪತ್ರಕರ್ತ ಮಲ್ಲು ತುಂಗಳ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಹಿರಿಯರಾದ ಬುಡನ್ ಜಮಾದಾರ್ ಹೊಸೂರ್ ಅಂಜುಮನ್ ಸಂಸ್ಥೆಯ ಹಿರಿಯರಾದ ಅಯ್ಯುಬ ಖಾನ್ ಹೊರಟ್ಟಿ, ನಗರದ ವೈದ್ಯ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಡಾಕ್ಟರ್ ಅಕ್ಬರ್ ತಾಂಬೋಳಿ, ರಾಂಪುರ್   ನಗರದ ಹಿರಿಯರಾದ ಸಿಂಗನ್ , ಇನ್ನೂ ಅನೇಕ ಹಿಂದೂ ಹಾಗೂ ಮುಸ್ಲಿಂ ಮುಖಂಡರುಗಳು ಭಾಗಿಯಾಗಿದ್ದರು.

 ವರದಿ  : 
ಮಹಿಬೂಬ್ ಎಂ ಬಾರಿಗಡ್ಡಿ

Thursday, February 27, 2025

ಬೆಳಗಾವಿ ಬಸ್ ನಿರ್ವಾಹಕನ ಮೇಲೆ ಹಲ್ಲೆಯನ್ನು ಖಂಡಿಸಿ ರಬಕವಿ ಬನಹಟ್ಟಿ ನಗರದಲ್ಲಿ ಕರವೇ ಗಜಸೇನೆ ಬೃಹತ್ ಪ್ರತಿಭಟನೆ

ಬೆಳಗಾವಿ ಬಸ್ ನಿರ್ವಾಹಕನ ಮೇಲೆ ಹಲ್ಲೆಯನ್ನು ಖಂಡಿಸಿ ಕರವೇ ಗಜಸೇನೆ ಬೃಹತ್ ಪ್ರತಿಭಟನೆ 

ರಬಕವಿ ಬನಹಟ್ಟಿ : 28.ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡೋದಾದ್ರೆ ನೀವ್ಯಾರು(ಎಂಇಎಸ್) ಕರ್ನಾಟಕದಲ್ಲಿ ಇರಬಾರದು. ಇವತ್ತೆ ಗಂಟು-ಮೂಟೆ ಕಟ್ಟಿಕೊಂಡು ಮಹಾರಾಷ್ಟ್ರಕ್ಕೆ ಹೋಗಿ. ಎಂಇಎಸ್ ಮರಾಠಿ ಗುಂಡಾಗಳಿಗೆ ಇದು ನೇರವಾದ ಎಚ್ಚರಿಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ  ಮಾಳು ದುರ್ಗನ್ನವರ ಯುವ ಘಟಕ ಅಧ್ಯಕ್ಷರು ಉತ್ತರ ಕರ್ನಾಟಕ ರವರು ಆಕ್ರೋಶ ವ್ಯಕ್ತಪಡಿಸಿದರು.

     ಮರಾಠಿ ಮತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕ ಮತ್ತು ಚಾಲಕರ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಇಂದು ಬನಹಟ್ಟಿಯಲ್ಲಿ ಮುಖ್ಯ ರಸ್ತೆ ಮೇಲೆ ರ ಬಂದ್ ಮಾಡಿ ಎಂ ಎಂ ಭದ್ರಣ್ಣವರ ಬಂಗಲೆ ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಮಾಡಿ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
    ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು, ಮಸಿ ಬಳಿಯುವುದು ನಾನು ಹಲವಾರು ವರ್ಷಗಳಿಂದ ನೋಡಿದ್ದೆನೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅದನ್ನು ಬಿಟ್ಟು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿದರೆ ಕರವೇ ಗಜಸೇನೆ ಸಹಿಸೊದಿಲ್ಲ ಎಂದರು.
      ಮರಾಠಿಗರು ಕರ್ನಾಟಕದ ಅತಿಥಿಗಳು ಎಂಬ ಅರಿವಿನಿಂದ ಬೆಳಗಾವಿಯಲ್ಲಿ ಇರಬೇಕು. ಮರಾಠ ಸಂಸ್ಕೃತಿ, ಆಚಾರ-ವಿಚಾರಗಳು ಇದ್ದರೆ ಮಹಾರಾಷ್ಟ್ರಕ್ಕೆ ಹೋಗಿ. ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡದಲ್ಲೇ ಮಾತಾನಾಡಬೇಕು. ಇಲ್ಲವಾದರೆ ಕರವೇ ಗಜಸೇನೆ ನಿಮಗೆ ತಕ್ಕ ಪಾಠ ಕಲಿಸುತ್ತೆ ಎಂದು ಎಚ್ಚರಿಕೆ ಸಂದೇಶ ಕೊಟ್ಟರು.

ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮನ ನೆಲ, ಸಂಗೊಳ್ಳಿ ರಾಯಣ್ಣನ ಪುಣ್ಯ ಭೂಮಿ. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿರಬೇಕು. ಮರಾಠಿಗರೇ ನಿಮ್ಮ ಭಾಷಾ ಪ್ರೇಮ ಇದ್ದರೆ ಮಹಾರಾಷ್ಟ್ರಕ್ಕೆ ತೆರಳಿ ಎಂದು ಮಾಧ್ಯಮದ ಮುಂದೆ ತಮ್ಮ ಆಕ್ರೋಶ ಹೊರ ಹಾಕಿದರು.

 ಈ ಪ್ರತಿಭಟನೆ ಸಂದರ್ಭದಲ್ಲಿ  ಮಾಳು ದುರ್ಗನ್ನ ವರ. ಮಹಮ್ಮದ್ ಹುಸೇನ್ ಲೆಂಗ್ರೆ. ಶಹನೂರ ಗೋಲಭಾವಿ. ಕಲ್ಮೇಶ ಅಮ್ಮಜವಗೋಳ. ನರಸಿಂಹ ಗಾಡ್ಕರ್. ಫಯಾಜ್ ಕೊಯಿಮುತ್ತೂರ್.ಉಮೇಶ್ ಪಾತ್ರೊಟ್. ಇನ್ನೂ ಅನೇಕ ಕರವೇ ಗಜಸೇನೆಯ ಹಿರಿಯರು, ಯುವಕರು ಕಾರ್ಯಕರ್ತರು ಉಪಸ್ಥಿತರಿದ್ದರು.

Saturday, February 8, 2025

ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು (ದಿ) ತಾಲೂಕ ಘಟಕ ರಬಕವಿ-ಬನಹಟ್ಟಿಯ ನೂತನ ಪದಾಧಿಕಾರಿಗಳ ಪದಗ್ರಹಣಹಾಗೂವಿವಿಧ ಸಂಘಟನೆಯ ಪದಾಧಿಕಾರಿಗಳ ಹಾಗೂ ಸಾಧಕರಿಗೆಸನ್ಮಾನ ಸಮಾರಂಭ :

ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು (ದಿ) ತಾಲೂಕ ಘಟಕ ರಬಕವಿ-ಬನಹಟ್ಟಿಯ ನೂತನ ಪದಾಧಿಕಾರಿಗಳ ಪದಗ್ರಹಣ
ಹಾಗೂವಿವಿಧ ಸಂಘಟನೆಯ ಪದಾಧಿಕಾರಿಗಳ ಹಾಗೂ ಸಾಧಕರಿಗೆ
ಸನ್ಮಾನ ಸಮಾರಂಭ :

 ಬಾಗಲಕೋಟೆ /ರಬಕವಿ - ಬನಹಟ್ಟಿ  :
 ಅವಳಿ ನಗರಗಳು ಜವಳಿ ನಗರಕ್ಕೆ ಪ್ರಸಿದ್ಧಿ ಪಡೆದು , ಈಗ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಚಾಪ್  ಮೂಡಿಸುತ್ತಿರುವ ಬನಹಟ್ಟಿ ನಗರದಲ್ಲಿ  
ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು (ರಿ) ತಾಲೂಕ ಘಟಕ   ರಬಕವಿ-ಬನಹಟ್ಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ,  ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳ ಮತ್ತು ವೃಂದ ಸಂಘಗಳ ಅಧ್ಯಕ್ಷರಗಳ, ಹಾಗೂ  ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು  ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಅವರಣದಲ್ಲಿ  ಸೋಮವಾರ ದಿನಾಂಕ: 10/02/2025 ರಂದು ಸಂಜೆ 5:30 ಘಂಟೆಗೆ ಹಮ್ಮಿಕೊಳ್ಳಲಾಗಿದೆ  . ಈ ಸದರಿ ಕಾರ್ಯಕ್ರಮಕ್ಕೆ ತೇರದಾಳ ಮತ ಕ್ಷೇತ್ರದ ಜನಪ್ರೀಯ ಶಾಸಕರಾದ ಮಾನ್ಯ ಶ್ರೀ ಸಿದ್ದು .ಕ.ಸವದಿ ರವರು ಬಾಗವಹಿಲಿದ್ದಾರೆ ಎಂದು ಆಯೋಜಕರು ಪ್ರಕಟಣೆ ಮೂಲಕ ಹೇಳಿದರು .