Tuesday, September 16, 2025

ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಪ್ರಸಿದ್ಧ ಪಟಾಕಿ ಜಾತ್ರೆ : ಪಟ್ಟವರ್ಧನ್ ಸರ್ಕಾರ ಕಾಣಿಕೆ ಕೊಟ್ಟ ರಥಕ್ಕೆ ಮದ್ದಿನ ಸುರಿಮಳೆ :



ಬನಹಟ್ಟಿಯ ಪುಣ್ಯದ ತೇರ ಕಾಡಸಿದ್ದನ ಅವತಾರ, ಧನ್ಯ ಧನ್ಯ ಮಾನವ ಜನ್ಮ , ಧನ್ಯ ಧನ್ಯ ಮಾನವ ಜನ್ಮ , ಜಾತ್ರೆ ಬಂತು ಸಡಗರ .  

 ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆಯು ಸಪ್ಟಂಬರ್
16 ರಿಂದ ಸತತ ಮೂರು ದಿನಗಳ ಕಾಲ ನಡೆಯಲಿದ್ದು , ಮಂಗಳವಾರ ನಡೆಯುವ ರಥೋತ್ಸವದಲ್ಲಿ ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದರ ಮುಖಾಂತರ ಕಾಡಸಿದ್ದನಿಗೆ ಭಕ್ತಿ ಅರ್ಪಣೆ ಮಾಡುತ್ತಾರೆ . ಈ ನಗರದ ಜನ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಈ ತೇರಿನ ಮುಂದುಗಡೆ ಭಯ - ಭಕ್ತಿಯಿಂದ ಮದ್ದು ಸುಡುತ್ತಾರೆ . ಈ ಮದ್ದು ಸುಡುವಧನ್ನು ನೋಡಲಿಕ್ಕೆ ಸಾವಿರಾರು ಜನ ಜಂಗುಳಿ . ಇಷ್ಟು ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದು ಜಿಲ್ಲೆಯಲ್ಲಿಯೇ ಪಟಾಕಿ ಮದ್ದಿನ ಜಾತ್ರೆ ಎಂದು ಪ್ರಸಿದ್ಧ ಹೆಸರುವಾಸಿಯಾಗಿದೆ. ಸುಟ್ಟ ಮದ್ದಿನ ಹೊಗೆ ದಟ್ಟವಾಗಿ ಇಡೀ ನಗರವೇ ಅವರಿಸಿರುತ್ತದೆ. 
 ಜಾತ್ರೆಯ ಮರುದಿನ ಅಂದ್ರೆ ಬುಧವಾರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಇರುತ್ತದೆ. ಈ ಕುಸ್ತಿ ಪಂದ್ಯಾವಳಿ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನ ಸೇರುತ್ತಾರೆ. ಇದೇ ರಾತ್ರಿ ನಾಟಕ - ಬೈಲಾಟ ಅಲ್ಲದೆ ಖ್ಯಾತ ಕನ್ನಡ ಜಾನಪದ ಪ್ರಸಿದ್ಧ ಖ್ಯಾತ ಹಾಡುಗಾರರ ಮನರಂಜನೆ ಕಾರ್ಯಕ್ರಮ ಕೂಡ ವಿಶೇಷವಾಗಿರುತ್ತದೆ. ಮೂರನೇ ದಿನ ಗುರುವಾರ ಅದ್ದೂರಿಯಾಗಿ ಕಳಸಾರೋಹನ ಕಾರ್ಯಕ್ರಮ ಕೂಡ ಮದ್ದು ಸುಡುವುದು ಮುಖಾಂತರ ನಗರದ ಸೋಮವಾರಪೇಟೆದವರಗೆ ಹೋಗುವದನ್ನು ವಿಶೇಷವಾಗಿರುತ್ತದೆ.

ಈ ರಥಕ್ಕೆ 150 ವರ್ಷಗಳ ಇತಿಹಾಸ ಉಂಟು .

 ಆರಾಧ್ಯ ದೈವ ನಗರದ ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ದಿನ ನಡೆಯುವ ರಥೋತ್ಸವ ಸುಂದರವಾಗಿ ಕಣ್ಣಿಗೆ ಆಕರ್ಷಣೀಯ . ಈ ರಥೋತ್ಸವಕ್ಕೆ ಮೆರಗು ತರುವುದು ಭವ್ಯವಾದ ( ತೇರು ) ಈ ರಥವನ್ನು ನೆರೆಯ ಜಮಖಂಡಿ ಸಂಸ್ಥಾನದ ಮಹಾರಾಜ ಪಟವರ್ಧನ ಸರ್ಕಾರ ಅವರು ಮಂಗಳವಾರ ಪೇಟೆ ದೈವ ಮಂಡಳಿಗೆ ಕಾಣಿಕೆಯಾಗಿ ನೀಡಿದ್ದರು.
 ಜಾತ್ರೆಯ ಸಂದರ್ಭದಲ್ಲಿ ( ತೇರಿನ ) ಕೊರತೆಯಿದ್ದಾಗ ಪಟ್ಟವರ್ಧನ್ ಸರ್ಕಾರದ ಮಹಾರಾಜರು ರಥವನ್ನು ನೀಡಿ, ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಜರುಗುವ ರಥೋತ್ಸವಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ನಗರದ ದೈವ ಮಂಡಳಿಯ ಹಿರಿಯರಿಂದ ಕರಾರು ಪತ್ರ ಬರೆಯಿಸಿಕೊಂಡ ನಂತರ ತೇರವನ್ನು ( ರಥ ) ನೀಡಿದ್ದರು. ಈ ( ತೇರು ) ರಥವನ್ನು 150 ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯ ಇದ್ದುದ್ದರಿಂದ , ಈಗಷ್ಟೇ ಅದಕ್ಕೆ ಹೊಸ ಮೆರಗನ್ನು ನೀಡಿ ಈಗಲೂ ಅ ಕೇವಲ ರಥೋತ್ಸವಕ್ಕೆ ಮಾತ್ರ ಬಳಸುವುದನ್ನು ನೋಡಬಹುದು. 

 ಈ ರಥ ( ತೇರು ) ಬನಹಟ್ಟಿ ನಗರಕ್ಕೆ ಬಂದು 75 ವರ್ಷ, ಬರುವಕ್ಕಿಂತ ಮುಂಚೆ 80 ವರ್ಷ ಹಳೆಯ ರಥ . ಪಟ್ಟವರ್ಧನ್ ಸರ್ಕಾರದ ರಾಜವಾಡೆಯಲ್ಲಿ ಸೀಸವೆ ಕಟ್ಟಿಗೆಯಿಂದ ನಿರ್ಮಿಸಿದ ತೇರು 150ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯದಾದ ದಾಖಲೆಯ ಇತಿಹಾಸ ಇದೆ .

 ಪ್ರಪ್ರಥಮ ಬಾರಿಗೆ ಮಹಾಪ್ರಸಾದ ಅದ್ದೂರಿ ರೊಟ್ಟಿ ಊಟ : 

 ಶ್ರೀ ಕಾಡಸಿದ್ದೇಶ್ವರ ಜಾತ್ರಾ ಕಮಿಟಿ ಈ ವರ್ಷ ವಿಶೇಷವಾಗಿ ಅದ್ದೂರಿ ರೊಟ್ಟಿ ಊಟದ ಮುಖಾಂತರ ಬರುವಂತ ಸಾವಿರಾರು ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ . ವಿಶೇಷವಾಗಿ ನಗರದ ಎಲ್ಲಾ ಸಮಾಜದ ಬಾಂಧವರಿಗೆ ಮನೆ ಮನೆಯಿಂದ ರೊಟ್ಟಿ ತಯಾರು ಮಾಡಿಕೊಂಡು ಬರುವಂತೆ ಆಹ್ವಾನ ನೀಡಿ ವಿಶೇಷವಾಗಿ ಜಾತ್ರೆಗೆ ಮತ್ತಷ್ಟು ಮೆರಗೂ ನೀಡಲು ಪ್ರಯತ್ನ ಮಾಡಿದ್ದಾರೆ. 


 ಲೇಖನ : ಮಹಿಬೂಬ್ ಎಂ ಬಾರಿಗಡ್ಡಿ
 ಸಂಯುಕ್ತ ಕರ್ನಾಟಕ ದಿನಪತ್ರಿಕೆಯ
  ತೇರದಾಳ್ ತಾಲೂಕ ವರದಿಗಾರರು ಹಾಗೂ ಪತ್ರಿಕೆಯ ಏಜೆಂಟರು, 
Mob : 9448698786
           9448593518

ಬನಹಟ್ಟಿ ನಗರದ ಪಟಾಕಿ ಜಾತ್ರೆಯ ಸರ್ವರಿಗೂ ಹಾರ್ದಿಕ ಶುಭಾಶಯಗಳು

ಸರ್ವರಿಗೂ ಜಾತ್ರೆಯ ಹಾರ್ದಿಕ ಶುಭಾಶಯಗಳು

ನಮ್ಮೂರ ಜಾತ್ರೆ

ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು

ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ ನೋಡಿ ಎಲ್ಲರೂ ಕುಣಿಯವರು

ಸುತ್ತುವ ಜೇಕಲಿ ಮಕ್ಕಳು ಕುಳಿತು ಕೇಕೇ ಹಾಕಿ ಹಾಡುವರು ಬಾನಲಿ ತೇಲುವ ತೊಟ್ಟಿಲಲ್ಲಿ ಕುಳಿತು ಕೊಂಡು ನಲಿಯುವರು

ಹಲವು ಬಗೆಯ ಆಟಿಕೆ ವಸ್ತು ರಂಗು ರಂಗಿನ ಬಳೆಗಳ ಸಂತೆ ನೋಡಲು ಕೊಳ್ಳಲು ಬರುವರು ಜನರು ಮರೆತು ತಮ್ಮಯ ನಿತ್ಯದ ಚಿಂತೆ

ಕಂಠಮಾಲೆಯು ರಥಕ್ಕೆ ಕಟ್ಟುತ ಹಾಲಾಗಿ ಜೇನಾಗಿ ಎಲ್ಲರೂ ಬೆರೆತು ಪೂಜೆಗೆ ತರುವರು ಕರ್ಪೂರ ಕಾಯಿ ಹಿಂದು ಮುಸ್ಲಿಮ್ ಭೇದವ ಮರೆತು

ರಥದಲ್ಲಿ ಕಾಡ ಸಿದ್ಧನ ಮೂರ್ತಿ ಅದೆಷ್ಟು ಸುಂದರ ಕಾಣುವುದು ಮನದಲ್ಲಿ ಪೂಜ್ಯ ಭಾವನೆ ಬೆಳೆಸಿ ಆತ್ಮಾನಂದವ ನೀಡುವುದು

ರುಚಿಕರ ನಮ್ಮ ಅವಲಕ್ಕಿ ಚೂಡಾ ಬೆಲ್ಲಶ್ ಬರ್ಫಿ ಪೇಡೆ ಕುಂದಾ ಬನಹಟ್ಟಿ ಜಾತ್ರೆಯ ಸೊಬಗನು ಸಾರುತ "" ಈ ಶಮ್ಸ್  ನು ರಚಿಸಿದ ಈ ಕವನಂದಾ

ರಚನೆ: ಶಮಶೋದ್ದಿನ್ ಶಮ್‌ನಿಯಾಜಿ (ಝಾರೆ ಸರ್) ಶಾಂತಿ ನಗರ ಬನಹಟ್ಟಿ-587 311 ಮೊ: 7259863787

Friday, August 1, 2025

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ :

ಸಚಿವ ಜಮೀರ ಅಹ್ಮದ ಖಾನ್ ಜನ್ಮ ದಿನಾಚರಣೆ ನಿಮಿತ್ಯ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ : 

ಮುಧೋಳ   :  ಬಡವರಪರ‌ ಕಾಳಜಿ ಹೊಂದಿರುವ ಜನಪ್ರಿಯ ನಾಯಕ‌ ಜಮೀರ್ ಅಹ್ಮದ ಅವರಿಗೆ ದೇವರು ಹೆಚ್ಚಿನ ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಕೆಪಿಸಿಸಿ‌ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಫಿಕ್ ಬೇಪಾರಿ  ಹಾರೈಸಿದರು.
ವಸತಿ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನದ ಹಿನ್ನೆಲೆ‌ ನಗರದ ಸರ್ಕಾರಿ‌ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಮಾತನಾಡಿದ ಅವರು, ಜಮೀರ್ ಅಹ್ಮದ ಅವರು ಬಡವರ ಪರ ನಿರಂತರ ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ. ನೂರಾರು ಬಡವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಸರ್ವರನ್ನು ಸಮಾನವಾಗಿ ಕಾಣು ಮನೋಭಾವ ಹೊಂದಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಜೀವನದಲ್ಲಿ ಮತ್ತಷ್ಟು‌ ಯಶಸ್ಸು ದೊರೆತು ಬಡವರಪರ‌ ಕೆಲಸ‌ ಮಾಡಲು ದೇವರು ಶಕ್ತಿ ನೀಡಬೇಕು ಎಂದು‌ ಶುಭ ಕೋರಿದರು.
 , ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಜಮಾದಾರ, ಸೈಯದ್ ಬಾಬಾವಲಿ, ದಾವಲ  ನದಾಫ, ಶಾಕಿರ್ ಬುಡ್ಡ, ಶೇಕ್  ಮುಜಮಿಲ್ ಬೇಪಾರಿ ಕೂತುಬು ನದಾಫ್, ರಫೀಕ್  ನದಾಫ್, ಫಯಾಜ್ ಮುಲ್ಲಾ 
ನಜಿರ್ ನದಾಫ್ ಸೇರಿದಂತೆ ಇತರರು ಇದ್ದರು.

Monday, July 14, 2025

500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸಂಭ್ರಮ :

500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸಂಭ್ರಮ  : 
 ಬಾಗಲಕೋಟೆ  / 
 ರಬಕವಿ - ಬನಹಟ್ಟಿ : 
ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ  ಮಹತ್ವದ ಯೋಜನೆಯದ ಶಕ್ತಿ ಯೋಜನೆಯು 11.06.2023 ಜಾರಿಗೊಳಿಸುವ ಮೂಲಕ ಎರಡು ವರ್ಷ ಪೂರೈಸಿ,  ರಾಜ್ಯದ ಎಲ್ಲಾ ಮಹಿಳೆಯರು ವಿದ್ಯಾರ್ಥಿನಿಯರು ಸೇರಿದಂತೆ ಸರಿಸುಮಾರು 500 ಕೋಟಿ ಫಲಾನುಭವಿಗಳು  ಪ್ರಯಾಣ ಮಾಡುವ ಮೂಲಕ ಶಕ್ತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. 
 ಸದರಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗ ಬನಹಟ್ಟಿ ಬಸ್ ನಿಲ್ದಾಣದಲ್ಲಿ  ಬಸ್ ಒಂದನ್ನು  ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.

ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಸಂಭ್ರಮದ ಅಂಗವಾಗಿ ಮಾತನಾಡಿದ , ತೇರದಾಳ್ ಮತಕ್ಷೇತ್ರದ ಶಾಸಕ  ಸಿದ್ದು ಸವದಿ  ಯೋಜನೆಯಿಂದ ಜನರಿಗೆ ಒಳ್ಳೆದಾಗಿದೆ . ಅದೇ ಪ್ರಕಾರ ಊರು ಕೂಡ ಡೆವಲಪ್ಮೆಂಟ್ ಆಗಬೇಕು ಅನ್ನೋದು ನನ್ನ ಭಾವನೆಯಾಗಿದೆ . ಏಕೆಂದರೆ ಎಲ್ಲ ತರಹದ ನಿತ್ಯ ಬಳಕೆಯ ವಸ್ತುಗಳ ಬೆಲೆಗಳು  ಏರಿಕೆ ಗಳಾಗಿವೆ ಇದರಿಂದ ಈ ಯೋಜನೆ ಸುಧಾರಣೆ ಆಗಿದೆ. 
 ರೆಗುಲರ್ ಆಗಿ ರಸ್ತೆಗಳು, ಚರಂಡಿಗಳು,  ಸಿಟಿ  ಡೆವಲಪ್ಮೆಂಟ್, ಸ್ಲಂ ಡೆವಲಪ್ಮೆಂಟ, ಸರ್ಕಾರವು  ಎರಡು ವರ್ಷ ಅವಧಿ ಆದರೂ ಒಂದು ಮನೆ ಕೂಡ ಬಡವರಿಗೆ ಕೊಟ್ಟಿಲ್ಲ , ಆದರಿಂದ ಈ ಶಕ್ತಿ ಗ್ಯಾರಂಟಿ ಯೋಜನೆ ಯೋಜನೆಯಿಂದ, ಇತರ ಅಭಿವೃದ್ಧಿಯ ಕೆಲಸಗಳು ಸ್ಥಗಿತ ಗೊಳ್ಳದೆ,  ಸಾಲ ಬೇಕಾದರೂ ಮಾಡಿ  ಬಡವರಿಗೆ ಅನುಕೂಲ ಮಾಡಿ . ನೀವು ಹೇಗೆ ಗ್ಯಾರಂಟಿ ಯೋಜನೆಗಳು ಎಷ್ಟು ನೀಟಾಗಿ ಮಾಡ್ತೀರಿ ಅದಕ್ಕೆ ನನ್ನ ಸ್ವಾಗತ ಇದೆ . ಅದರಂತೆ  ಇತರ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳಸದೆ ,   ಮಾಡಿ  ನಮ್ಮ ಬೆಂಬಲ ಕೂಡ ನಿಮಗೆ ಇದೆ  ಎಂದು ಹೇಳಿದರು. 

 ವರದಿ ಮಹಬೂಬ್ ಎಂ ಬಾರಿಗಡ್ಡಿ

Tuesday, July 8, 2025

ರಬಕವಿ - ಬನಹಟ್ಟಿ ನಗರಸಭೆ ವಾರ್ಡ್ ಚುನಾವಣೆ ಕಾವು :

ರಬಕವಿ - ಬನಹಟ್ಟಿ ನಗರಸಭೆ ವಾರ್ಡ್  ಚುನಾವಣೆ ಕಾವು  : 

     ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರ ಸಭೆಯ ಆಡಳಿತ ಮಂಡಳಿಯ  ಚುನಾವಣೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದ್ದರೂ,  ಈಗಲೇ ಚುನಾವಣೆ ಕಾವು ಬಲು ಜೋರಾಗಿಯೇ ಕಾಣ್ತಾ ಇದೆ. 

   ಒಂದಿಬ್ಬರು ಹಾಲಿ ಅಭ್ಯರ್ಥಿಗಳ ಹೊರತು ಪಡಿಸಿದರೆ,
ಉಳಿದೆಲ್ಲ ಇವರ ವಿರುದ್ಧ ಸೆಡ್ಡು ಹೊಡೆಯಲು ತೆರೆ ಮರೆಯಲ್ಲಿ ಅಭ್ಯರ್ಥಿಗಳು ತಯಾರಾಗುತ್ತಿದ್ದಾರೆ. ನಗರ ಸಭೆ  ಚುನಾವಣೆ ಇದಾಗಿದ್ದರೂ ಪಕ್ಷ ಮತ್ತು ಜಾತಿ ರಾಜಕಾರಣದ ಗತ್ತು, ಗಮ್ಮತ್ತು ಇಲ್ಲಿ ಸಾಕಷ್ಟು ಕೆಲಸ
ಮಾಡಲಿದೆ. 

     ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲೂ ಅಭ್ಯರ್ಥಿಗಳಾಗಲು ಮುಖಂಡರು ಸಜ್ಜಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಹುತೇಕ ಅಭ್ಯರ್ಥಿಗಳು ಬೇರೆ ಬೇರೆ ಪಕ್ಷದ ವಲಸೆ ಹೋಗುವ ಸಾಧ್ಯತೆ ಕೂಡ ತಳ್ಳಿ  ಹಾಕುವಂತಿಲ್ಲ . ವಾರ್ಡ್ ನಂಬರ್ 05 ರಲ್ಲಿ ಭಾರಿ  ತ್ರಿಕೋನ ಸ್ಪರ್ಧೆ ಮತ್ತೆ  ಆಗುವುದು  ನಿಚ್ಚಳ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಹಾಲಿ  ಗೆದ್ದ ಬಿಜೆಪಿ ಅಭ್ಯರ್ಥಿ ಸ್ಪರ್ಧೆಗೆ ಇಳಿತಾರೋ  ಇಲ್ಲವೋ , ಕಾದು ನೋಡಬೇಕಾಗಿದೆ. ಅದರಂತೆ ಸೋತ ಕಾಂಗ್ರೆಸ್ ಅಭ್ಯರ್ಥಿ ಯು ತನ್ನ  ಸ್ಥಾನ ಭದ್ರಪಡಿಸಿಕೊಳ್ಳಲು ಏನೆಲ್ಲ ತಂತ್ರಗಳ ಮೊರೆ ಹೋಗಿದ್ದಾರೆ ಅನ್ನೋದು ಕೂಡ ಕಾದು ನೋಡಬೇಕಾಗಿದೆ . ಈ ಬಾರಿ ವಾರ್ಡ್ 05 ರಲ್ಲಿ  ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆಗೆ ತೀವ್ರ ಪೈಪೋಟಿಯಾಗಲಿದೆ .

  ಒಂದು ಅಂದಾಜಿನ ಪ್ರಕಾರ   ಅಭ್ಯರ್ಥಿಗಳ ಪಟ್ಟಿಯು ದೊಡ್ಡದಾಗಲಿದೆ ಎಂದು ಅಂದಾಜಿಸಲಾಗಿದೆ .ಏಕೆಂದರೆ ಈ ಬಾರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಎಐಎಂಐಮ್ ಪಕ್ಷ  ಸ್ಪರ್ಧೆಯಲ್ಲಿ ಧುಮುಕುವ ಸಾಧ್ಯತೆ ಇದೆ. ಈ ಬಾರಿಯೂ ಭಾರಿ ಸ್ಪರ್ಧೆ ಏರ್ಪಡಿಲಿದೆ ಎನ್ನುವ ಮಾತುಗಳು ವ್ಯಾಪಕವಾಗಿದ್ದು, ವಾರ್ಡ್ ನಂಬರ್ 05 ರ ಚುನಾವಣೆ ಭಾರಿ ರೋಚಕ ವಾಗಲಿದೆ . ಅದಕ್ಕೆ ಕಾರಣಗಳು ಸಾಕಷ್ಟಿವೆ ಚುನಾವಣೆ ಹೊತ್ತಿಗೆ ಕಾರಣಗಳು ಬಹಿರಂಗವಾಗಲಿದ್ದು , ವೈಯಕ್ತಿಕ ಪ್ರತಿಷ್ಠೆಗಳು ವಿಜೃಂಭಿಸಿದೆ ಎನ್ನುವುದು ಸದ್ಯದ ಅಂದಾಜು. 
 ರಬಕವಿ ಬನಹಟ್ಟಿ ನಗರಸಭೆಯ ಆಡಳಿತ ಕ್ಷೇತ್ರಗಳಲ್ಲಿ ಚುನಾವಣೆ ಹುಟ್ಟಿಕೊಂಡಿದೆ . ಈ ವಾರ್ಡಿನ ಕ್ಷೇತ್ರದ ಹಾಲಿ ಮತ್ತು ಮಾಜಿ ಅಭ್ಯರ್ಥಿಗಳು ಸೇರಿದಂತೆ ಪ್ರತಿಷ್ಠಿತರ ನಡುವೆ ರಾಜಕೀಯ ಬಲಾಬಲ ವರೆಗಟ್ಟುವ ಅಖಾಡ ನಿರ್ಮಾಣವಾಗಲಿದೆ.

 ಒಟ್ಟಾರೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಸ್ಥಳೀಯ ಚುನಾವಣೆಯ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಾಲಿ ಅಭ್ಯರ್ಥಿಗಳ ಎದೆ ಬಡಿತ ಆರಂಭಗೊಂಡಿದೆ. ಈ ಚುನಾವಣೆ ರಾಜಕೀಯ ವಲಯದಲ್ಲೂ ಸಾಕಷ್ಟು ಕುತೂಹಲವನ್ನು, ಹುಟ್ಟು ಹಾಕಿದೆ .

 ವರದಿ : 
ಮಹಿಬೂಬ್ ಎಂ ಬಾರಿಗಡ್ಡಿ

Saturday, June 7, 2025

ಈದಗಾ ಮೈದಾನದಲ್ಲಿ ಹಬ್ಬದ ಸಡಗರ ಜೊತೆಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪಿ ಯು ಕಾಲೇಜ್ ಗೆ ಮನವಿ ಸಲ್ಲಿಸಿದ ನಗರದ ಮುಸ್ಲಿಂ ಬಾಂಧವರು ...

ಸಂಭ್ರಮ ಸಡಗರದಿಂದ ಬನಹಟ್ಟಿ   ನಗರದಲ್ಲಿ ಬಕ್ರೀದ್ ಹಬ್ಬ  ಆಚರಣೆ   : 

 ಈದಗಾ ಮೈದಾನದಲ್ಲಿ ಹಬ್ಬದ  ಸಡಗರ  ಜೊತೆಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪಿ ಯು ಕಾಲೇಜ್ ಗೆ ಮನವಿ ಸಲ್ಲಿಸಿದ ನಗರದ ಮುಸ್ಲಿಂ ಬಾಂಧವರು ...

ಬಾಗಲಕೋಟೆ / 

ರಬಕವಿ - ಬನಹಟ್ಟಿ : ತ್ಯಾಗ ಬಲಿದಾನಗಳ ಸಾಂಕೇತಿಕ ಹಬ್ಬವಾದ ಬಕ್ರೀದ್ ಹಬ್ಬ ಇಸ್ಲಾಂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪ್ರಾಣಿಗಳನ್ನು ಬಲಿ ಕೊಡುವಂತ ಪದ್ಧತಿ ಜಾರಿಯಲ್ಲಿದೆ . ಅಲ್ಲಾಹನು ತನ್ನ ಪ್ರೀತಿಯ ಪೈಗಂಬರರಾದ ಈಬ್ರಾಹಿಂ ಅಲೈ ಸಲಾಂ ಅವರ ಮನಸ್ಸು ನೋಡಲು ಬಹಳ ವರ್ಷಗಳ ನಂತರ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ನನ್ನ ಭಕ್ತಿಯ ಪ್ರೀತಿಗೆ ಬಲಿ ಕೊಡ್ತೀಯಾ ? ಎಂದು ಹೇಳಿದಾಗ ಆಗ  ಬಹಳ ವರ್ಷಗಳ ನಂತರ ಒಂದು ಗಂಡು ಮಗುವಾಗಿ ಪಡೆದ ಇಬ್ರಾಹಿಂ ಪೈಗಂಬರ ಅವರ ಮಗನಾದ ಇಸ್ಮಾಯಿಲ್ ಅಲೈ ಸಲಾಂ ನನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಅವರನ್ನು ಬಲಿಯನ್ನಾಗಿ ಕೊಡಲು ತನ್ನ ಚೂಪಾದ ಚೂರಿಯಿಂದ ಮಗನ ಬಲಿ ಕೊಡಲು ಸಿದ್ಧವಾದಾಗ ಅಲ್ಲಾಹನು ಸ್ವರ್ಗದಿಂದ ಒಂದು ಕುರಿಯನ್ನು ಪ್ರತ್ಯಕ್ಷ ಮಾಡಿಸಿ   ಓ ನನ್ನ ಪೈಗಂಬರರೇ ನೀನು ನನ್ನ ಭಕ್ತಿಗೆ ಮೆಚ್ಚುಗೆವನ್ನಾಗಿಸಿದ್ದೀರಿ ಆದ್ದರಿಂದ ಇದರ ಬದಲಾಗಿ ಈ ಕುರಿಯನ್ನು ಬಲಿ ಕೊಟ್ಟು ನನ್ನ ಆಜ್ಞೆಯ ಪಾಲಿಸುವಂತೆ ಹೇಳಿದಾಗ   ಪೈಗಂಬರರು ತನ್ನ ಮಗನನ್ನು ತೆಗೆದು ಕುರಿಯನ್ನು ಬಲಿಯನ್ನಾಗಿ ಕೊಟ್ಟರು    ಆದ್ದರಿಂದ ಆಗಿನ ಕಾಲದಿಂದ ಇವತ್ತಿನವರೆಗೆ ಕುರಿ ಬಕ್ರ  ಮುಂತಾದ ಪ್ರಾಣಿಗಳನ್ನು ಬಲಿಯ  ಪದ್ಧತಿಯಾಗಿ ಜಾರಿಯಾಯಿತು . 

  ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಹಮೀ ರಮಜಾ ,    ನಾವುಗಳು ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡಿದರೆ ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ಮಾಡಬೇಕು ಹೊರತು ನಮ್ಮ ದೊಡ್ಡ ಸ್ಥಿಕೆಯನ್ನು ತೋರಿಸಲಿಕ್ಕೆ ಮಾಡಬಾರದು  . ಜೊತೆಗೆ ನಾವುಗಳು ದುಶ್ಚಟಗಳನ್ನು ಕೂಡ ತ್ಯಾಗವನ್ನು ಮಾಡಬೇಕು ಎಂದು ಹೇಳಿದರು.

 ಇದೇ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಸದಸ್ಯರಾದ ಬಸವರಾಜ ಕೊಕಟ್ನೂರ್ ಇವರಿಗೆ ನಗರದ ಮುಸ್ಲಿಂ ಸಮಾಜ ವತಿಯಿಂದ   ಅಬುಲ್ ಕಲಾಂ ಆಜಾದ್ ಪಿಯು ಕಾಲೇಜಿಗೆ ಮನವಿ ಸಲ್ಲಿಸಿದರು.

 ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 
 
 ವರದಿ ಮಹಿಬೂಬ ಎಂ ಬಾರಿಗಡ್ಡಿ