Thursday, February 23, 2023

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಬಾಗಲಕೋಟ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬ್ಲಿ*

*ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ , ಬಾಗಲಕೋಟ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ : ರಾಜೇಂದ್ರ ಅಂಬ್ಲಿ* 

 *ರಬಕವಿ ಬನಹಟ್ಟಿ :* 

 ಭಾರತೀಯ ಜನತಾ ಪಕ್ಷದಲ್ಲಿ ನಾನು ಸುಮಾರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ , ಬಿಜೆಪಿ ನಗರ ಮಂಡಲ ಅಧ್ಯಕ್ಷ , ನಗರ ಘಟಕ ಅಧ್ಯಕ್ಷ  , ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾಗಿ ಸಹ ಸಾಕಷ್ಟು ಅನುಭವವಿದ್ದು , ಅನೇಕ ವರ್ಷಗಳಿಂದ ಬಡವರ , ನೇಕಾರರ , ರೈತರ ದೀನ ದಲಿತರ ಸಾಕಷ್ಟು ಕಷ್ಟಗಳ ಸ್ಪಂದಿಸುವ ಕೆಲಸ  ಮಾಡಿರುತ್ತೇನೆ .

ಬಾಗಲಕೋಟ್ ಜಿಲ್ಲೆಯ  ಹೆಚ್ಚು ನೇಕಾರ ಇರುವಂತಹ  ತೇರದಾಳ ಮತಕ್ಷೇತ್ರದಲ್ಲಿ , ಈ ಬಾರಿ ನೇಕಾರರ ಕುಟುಂಬದವರಿಗೆ ಭಾರತೀಯ ಜನತಾ ಪಕ್ಷದಿಂದ  ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಿಗೆ  ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಧ್ಯಮ ಮುಖಾಂತರ  ಅಗ್ರಹಿಸಿದರು .

  ಭಾರತೀಯ ಜನತಾ ಪಕ್ಷದಲ್ಲಿ ನನ್ನನ್ನು ಮಲತಾಯಿ ಧೋರಣೆ ಮಾಡುತ್ತಿದ್ದು , ನನ್ನ ಮತ್ತು ಶಾಸಕ ಸಿದ್ದು ಸವದಿ ಅವರ ಸಂಬಂಧ ತಂದೆ ಮಗನ ಸಂಬಂಧ ಇದ್ದು , ಅವರ ಜೊತೆಗಿರುವ ಪಕ್ಷದ ಕೆಲವು ಮುಖಂಡರು ಶಾಸಕರ  ಮತ್ತು ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ . ಎಂದು ಆರೋಪ ಮಾಡಿದರು 

 ಕರ್ನಾಟಕ ರಾಜ್ಯದಲ್ಲಿ ನೇಕಾರರು ಸುಮಾರು 60 ಲಕ್ಷ ಜನ ಮತದಾರ ಇದ್ದು , ಆದರೆ ಪಕ್ಷದಲ್ಲಿ ಕೆಲವೇ ಎಂಎಲ್ಸಿ ಹಾಗೂ ಎಂಪಿ ಟಿಕೆಟ್ ನೀಡುವ ಮುಖಾಂತರ  ನಮ್ಮ ಸಮಾಜಕ್ಕೆ  ಅನ್ಯಾಯವಾಗುತ್ತಾ ಬಂದಿದೆ ಎಂದು ಆಕ್ರೋಶ ಹೊರ ಹಾಕಿದರು .

ಈ ಬಾರಿ ನಮ್ಮ  ನೇಕಾರದ    ಸಮಾಜದಿಂದ ಭಾರತೀಯ ಜನತಾ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ನಾನು ಕೂಡ ಆಗಿದ್ದು ,ಆದ್ದರಿಂದ ನನ್ನ  ಮಾರ್ಗದರ್ಶಕರದ ಹಾಗೂ ತೇರದಾಳ್ ಮತಕ್ಷೇತ್ರದ  ಶಾಸಕರಾದ ಸಿದ್ದು ಸವದಿಯವರು , ನಮಗೆ ಅವಕಾಶ ನೀಡಿ  ,ಮುಂದಿನ ಮುಂದಿನ ಬಾರಿ  ನಾನೇ ಮುಂದೆ ನಿಂತು ನಿಮಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.


 ಕೊಟ್ಟ ಮಾತಿನಂತೆ ತಾವು ಸಹ ಈ ಬಾರಿ ನಡೆಯಿರಿ ನಾನು ನೇಕಾರ  ಮತ್ತು ರೈತ ಕುಟುಂಬದಿಂದ ಬಂದವನು ಸಾಕಷ್ಟು ಬಿಜೆಪಿ ಪಕ್ಷದ ಸೇವೆ ಅನುಭವ ಸಹ ನಮಗೆ ಇದ್ದು , ಸಮಾಜದ ಪರವಾಗಿ ನನಗೆ ಟಿಕೆಟ್ ನೀಡಿ ಎಂದು ವಿನಂತಿಪೂರಕವಾಗಿ ಕೇಳಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿ ಮೂಲಕ ಹಾಲಿ ಶಾಸಕರಿಗೆ ಪರೋಕ್ಷವಾಗಿ ಹೇಳಿದರು .

   ಅಲ್ಲದೆ ಭಾರತೀಯ ಜನತಾ ಪಕ್ಷದಿಂದ ನಮ್ಮನ್ನು 
 ಹೊರಹಾಕುವ ಹುನ್ನಾರೂ ಕೂಡ ನಡೆಸುತ್ತಿದ್ದಾರೆ , ಆದರೆ ನಾವು ಯಾವುದೇ ಕಾರಣಕ್ಕೂ  , ಬಗ್ಗಲ್ಲ ನಿಮ್ಮ ಸಂಚಿಗೆ ನಾನು ಮತ್ತೆ ಪುಟಿಡೇಳುತ್ತೇನೆ ಹೊರತು , ನಾನು ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ .ಮೊದಲಿನಿಂದಲೂ ಬಿಜೆಪಿ ಕುಟುಂಬದಲ್ಲಿ ಬೆಳೆದು ದೊಡ್ಡವರಾಗಿದ್ದವೇ ಮುಂದೆನೂ ಸಹ ಟಿಕೆಟ್ ಯಾರಿಗೆ ಸಿಗಲಿ ನಾವು ಬಿಜೆಪಿ ಕುಟುಂಬ ಬಿಟ್ಟು ಹೊರಗೆ ಹೋಗೋದಿಲ್ಲ ,ಎಂದು ಸ್ಪಷ್ಟೀಕರಣ ನೀಡಿದರು. 

 ಈ ಸಂದರ್ಭದಲ್ಲಿ ನಗರದ ಹಿರಿಯರಾದ ಕಲ್ಲಪ್ಪ ಕುಳ್ಳಿ. ಕಾಡಪ್ಪ ಬಾಬಾನಗರ. ರಾಜು ಬಾಣಕಾರ.ಕುಮಾರ್ ಕದಂ. ಚಂದ್ರು ಕಾಸರ್. ಶಿವಪ್ಪ ದೊಡ್ಡಮನಿ. ನಾಗಪ್ಪ ಮಂಡಿ. ಸೋಮು ಜಾಡಗೌಡ. ಶ್ರೀಶೈಲ್ ದಡೊತಿ. ಪ್ರವೀಣ್ ಕೋಲಾರ್. ತಿನ್ನೋ ಅನೇಕ ಹಿರಿಯರು ಯುವಕರು ಉಪಸ್ಥಿತರಿದ್ದರು.

ವರದಿ :- ಮಹೆಬೂಬ್ ಎಂ ಬಾರಿಗಡ್ಡಿ 

No comments:

Post a Comment