*ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ , ಬಾಗಲಕೋಟ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ : ರಾಜೇಂದ್ರ ಅಂಬ್ಲಿ*
*ರಬಕವಿ ಬನಹಟ್ಟಿ :*
ಭಾರತೀಯ ಜನತಾ ಪಕ್ಷದಲ್ಲಿ ನಾನು ಸುಮಾರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ , ಬಿಜೆಪಿ ನಗರ ಮಂಡಲ ಅಧ್ಯಕ್ಷ , ನಗರ ಘಟಕ ಅಧ್ಯಕ್ಷ , ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾಗಿ ಸಹ ಸಾಕಷ್ಟು ಅನುಭವವಿದ್ದು , ಅನೇಕ ವರ್ಷಗಳಿಂದ ಬಡವರ , ನೇಕಾರರ , ರೈತರ ದೀನ ದಲಿತರ ಸಾಕಷ್ಟು ಕಷ್ಟಗಳ ಸ್ಪಂದಿಸುವ ಕೆಲಸ ಮಾಡಿರುತ್ತೇನೆ .
ಬಾಗಲಕೋಟ್ ಜಿಲ್ಲೆಯ ಹೆಚ್ಚು ನೇಕಾರ ಇರುವಂತಹ ತೇರದಾಳ ಮತಕ್ಷೇತ್ರದಲ್ಲಿ , ಈ ಬಾರಿ ನೇಕಾರರ ಕುಟುಂಬದವರಿಗೆ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಿಗೆ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಧ್ಯಮ ಮುಖಾಂತರ ಅಗ್ರಹಿಸಿದರು .
ಭಾರತೀಯ ಜನತಾ ಪಕ್ಷದಲ್ಲಿ ನನ್ನನ್ನು ಮಲತಾಯಿ ಧೋರಣೆ ಮಾಡುತ್ತಿದ್ದು , ನನ್ನ ಮತ್ತು ಶಾಸಕ ಸಿದ್ದು ಸವದಿ ಅವರ ಸಂಬಂಧ ತಂದೆ ಮಗನ ಸಂಬಂಧ ಇದ್ದು , ಅವರ ಜೊತೆಗಿರುವ ಪಕ್ಷದ ಕೆಲವು ಮುಖಂಡರು ಶಾಸಕರ ಮತ್ತು ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ . ಎಂದು ಆರೋಪ ಮಾಡಿದರು
ಕರ್ನಾಟಕ ರಾಜ್ಯದಲ್ಲಿ ನೇಕಾರರು ಸುಮಾರು 60 ಲಕ್ಷ ಜನ ಮತದಾರ ಇದ್ದು , ಆದರೆ ಪಕ್ಷದಲ್ಲಿ ಕೆಲವೇ ಎಂಎಲ್ಸಿ ಹಾಗೂ ಎಂಪಿ ಟಿಕೆಟ್ ನೀಡುವ ಮುಖಾಂತರ ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಾ ಬಂದಿದೆ ಎಂದು ಆಕ್ರೋಶ ಹೊರ ಹಾಕಿದರು .
ಈ ಬಾರಿ ನಮ್ಮ ನೇಕಾರದ ಸಮಾಜದಿಂದ ಭಾರತೀಯ ಜನತಾ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ನಾನು ಕೂಡ ಆಗಿದ್ದು ,ಆದ್ದರಿಂದ ನನ್ನ ಮಾರ್ಗದರ್ಶಕರದ ಹಾಗೂ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿಯವರು , ನಮಗೆ ಅವಕಾಶ ನೀಡಿ ,ಮುಂದಿನ ಮುಂದಿನ ಬಾರಿ ನಾನೇ ಮುಂದೆ ನಿಂತು ನಿಮಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕೊಟ್ಟ ಮಾತಿನಂತೆ ತಾವು ಸಹ ಈ ಬಾರಿ ನಡೆಯಿರಿ ನಾನು ನೇಕಾರ ಮತ್ತು ರೈತ ಕುಟುಂಬದಿಂದ ಬಂದವನು ಸಾಕಷ್ಟು ಬಿಜೆಪಿ ಪಕ್ಷದ ಸೇವೆ ಅನುಭವ ಸಹ ನಮಗೆ ಇದ್ದು , ಸಮಾಜದ ಪರವಾಗಿ ನನಗೆ ಟಿಕೆಟ್ ನೀಡಿ ಎಂದು ವಿನಂತಿಪೂರಕವಾಗಿ ಕೇಳಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿ ಮೂಲಕ ಹಾಲಿ ಶಾಸಕರಿಗೆ ಪರೋಕ್ಷವಾಗಿ ಹೇಳಿದರು .
ಅಲ್ಲದೆ ಭಾರತೀಯ ಜನತಾ ಪಕ್ಷದಿಂದ ನಮ್ಮನ್ನು
ಹೊರಹಾಕುವ ಹುನ್ನಾರೂ ಕೂಡ ನಡೆಸುತ್ತಿದ್ದಾರೆ , ಆದರೆ ನಾವು ಯಾವುದೇ ಕಾರಣಕ್ಕೂ , ಬಗ್ಗಲ್ಲ ನಿಮ್ಮ ಸಂಚಿಗೆ ನಾನು ಮತ್ತೆ ಪುಟಿಡೇಳುತ್ತೇನೆ ಹೊರತು , ನಾನು ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ .ಮೊದಲಿನಿಂದಲೂ ಬಿಜೆಪಿ ಕುಟುಂಬದಲ್ಲಿ ಬೆಳೆದು ದೊಡ್ಡವರಾಗಿದ್ದವೇ ಮುಂದೆನೂ ಸಹ ಟಿಕೆಟ್ ಯಾರಿಗೆ ಸಿಗಲಿ ನಾವು ಬಿಜೆಪಿ ಕುಟುಂಬ ಬಿಟ್ಟು ಹೊರಗೆ ಹೋಗೋದಿಲ್ಲ ,ಎಂದು ಸ್ಪಷ್ಟೀಕರಣ ನೀಡಿದರು.
ಈ ಸಂದರ್ಭದಲ್ಲಿ ನಗರದ ಹಿರಿಯರಾದ ಕಲ್ಲಪ್ಪ ಕುಳ್ಳಿ. ಕಾಡಪ್ಪ ಬಾಬಾನಗರ. ರಾಜು ಬಾಣಕಾರ.ಕುಮಾರ್ ಕದಂ. ಚಂದ್ರು ಕಾಸರ್. ಶಿವಪ್ಪ ದೊಡ್ಡಮನಿ. ನಾಗಪ್ಪ ಮಂಡಿ. ಸೋಮು ಜಾಡಗೌಡ. ಶ್ರೀಶೈಲ್ ದಡೊತಿ. ಪ್ರವೀಣ್ ಕೋಲಾರ್. ತಿನ್ನೋ ಅನೇಕ ಹಿರಿಯರು ಯುವಕರು ಉಪಸ್ಥಿತರಿದ್ದರು.
ವರದಿ :- ಮಹೆಬೂಬ್ ಎಂ ಬಾರಿಗಡ್ಡಿ
No comments:
Post a Comment