*ರಬಕವಿ ಬನಹಟ್ಟಿ* :
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ .
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಿಯತೆ ಉಲ್ಲೇಮಾ ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಅಹಮದ್ ಗೋಕಾಕ್ , ಮುಸ್ಲಿಂ ಸಮಾಜದ ಆಧುನಿಕದ ಶಿಕ್ಷಣವನ್ನು ಬಹಳಷ್ಟು ಕುಂಠಿತಗೊಂಡಿದೆ .ಶಿಕ್ಷಣವನ್ನು ಮೇಲಕ್ಕೆ ತರಲು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಹಾಗೂ ಶಿಕ್ಷಣವು ದೇಶವು ಮುನ್ನಡೆಸುವವಲ್ಲಿ ಅಸ್ತ್ರ ವಿದ್ದಂತೆ , ನಾವು ಅದನ್ನೇ ಕಳೆದುಕೊಂಡಿದ್ದೇವೆ ,ಆದರಿಂದ ಶಿಕ್ಷಣದ ಅಸ್ತ್ರವನ್ನು ಹುಡುಕಿ ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ಕೊಡಲಿಕ್ಕೆ ಪ್ರಯತ್ನ ಮಾಡುವದಕೋಸ್ಕರ ಸಮಾಜದ ಗಣ್ಯಮಾನ್ಯರು ಹಾಗೂ ಉಲ್ಲೇಮಗಳು ಸಹ ಆಗಮಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು .
ಜೊತೆಗೆ ಮಾತನಾಡಿದ ,ಮುಸ್ಲಿಂ ಸಮಾಜದ ಮುಖಂಡ ಮಾಹಾಲಿಂಗಪುರ್ ನಗರದ ಉದ್ಯಮಿ ಜಾವೇದ್ ಬಾಗವಾನ್, ತೇರದಾಳ ಮತ ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಂಡಿದ್ದು , ಈ ಸಮಾವೇಶದಲ್ಲಿ ಕನಿಷ್ಠ 8000 ಜನರು ಸೇರುವ ನಿರೀಕ್ಷೆ ಇದೆ ,ಆದ್ದರಿಂದ ಎಲ್ಲ ಧರ್ಮದ ಬಂಧುಗಳ ಹಾಗೂ ಪೊಲೀಸ್ ಇಲಾಖೆ ನಿಮ್ಮೆಲ್ಲರ ಈ ಸಮಾವೇಶಕ್ಕೆ ಸಹಕಾರ ಇರಲಿ , ಎಂದು ಮಾಧ್ಯಮ ಮುಖಾಂತರ ಮನವಿ ಮಾಡಿದರು .
ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆ ಸದಸ್ಯ ಯುನೋಸ್ ಚೌಗುಲೆ ,ಅಬೂಬಕ್ಕರ್ ಬಂಡೆಬುರುಜ್ ,ಅಸ್ಲಾಂ ಶಿಲೆದಾರ್ ,ಶಾನೂರ್ ಮಾಲ್ದಾರ್ , ಇನ್ನು ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು
ವರದಿ :ಮಹಬೂಬ್ ಬಾರಿಗಡ್ಡಿ
No comments:
Post a Comment