Thursday, March 9, 2023

ಮುಸ್ಲಿಂ ಸಮುದಾಯದ ಬೃಹತ್ ಸ್ವಾಭಿಮಾನಿ ಸಮಾವೇಶ*


 *ರಬಕವಿ ಬನಹಟ್ಟಿ* : 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ .

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಿಯತೆ ಉಲ್ಲೇಮಾ ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಅಹಮದ್ ಗೋಕಾಕ್ , ಮುಸ್ಲಿಂ ಸಮಾಜದ ಆಧುನಿಕದ ಶಿಕ್ಷಣವನ್ನು ಬಹಳಷ್ಟು ಕುಂಠಿತಗೊಂಡಿದೆ .ಶಿಕ್ಷಣವನ್ನು ಮೇಲಕ್ಕೆ ತರಲು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಹಾಗೂ ಶಿಕ್ಷಣವು ದೇಶವು ಮುನ್ನಡೆಸುವವಲ್ಲಿ ಅಸ್ತ್ರ  ವಿದ್ದಂತೆ , ನಾವು ಅದನ್ನೇ ಕಳೆದುಕೊಂಡಿದ್ದೇವೆ ,ಆದರಿಂದ ಶಿಕ್ಷಣದ ಅಸ್ತ್ರವನ್ನು ಹುಡುಕಿ ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ಕೊಡಲಿಕ್ಕೆ ಪ್ರಯತ್ನ ಮಾಡುವದಕೋಸ್ಕರ ಸಮಾಜದ ಗಣ್ಯಮಾನ್ಯರು ಹಾಗೂ ಉಲ್ಲೇಮಗಳು ಸಹ ಆಗಮಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು .

ಜೊತೆಗೆ ಮಾತನಾಡಿದ ,ಮುಸ್ಲಿಂ ಸಮಾಜದ ಮುಖಂಡ ಮಾಹಾಲಿಂಗಪುರ್ ನಗರದ  ಉದ್ಯಮಿ ಜಾವೇದ್  ಬಾಗವಾನ್, ತೇರದಾಳ  ಮತ ಕ್ಷೇತ್ರದ  ಇತಿಹಾಸದಲ್ಲಿ  ಪ್ರಪ್ರಥಮವಾಗಿ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಂಡಿದ್ದು , ಈ ಸಮಾವೇಶದಲ್ಲಿ ಕನಿಷ್ಠ   8000 ಜನರು  ಸೇರುವ ನಿರೀಕ್ಷೆ ಇದೆ ,ಆದ್ದರಿಂದ ಎಲ್ಲ ಧರ್ಮದ  ಬಂಧುಗಳ  ಹಾಗೂ ಪೊಲೀಸ್ ಇಲಾಖೆ ನಿಮ್ಮೆಲ್ಲರ ಈ ಸಮಾವೇಶಕ್ಕೆ ಸಹಕಾರ ಇರಲಿ , ಎಂದು ಮಾಧ್ಯಮ ಮುಖಾಂತರ ಮನವಿ ಮಾಡಿದರು  .

ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆ ಸದಸ್ಯ ಯುನೋಸ್  ಚೌಗುಲೆ ,ಅಬೂಬಕ್ಕರ್ ಬಂಡೆಬುರುಜ್  ,ಅಸ್ಲಾಂ ಶಿಲೆದಾರ್ ,ಶಾನೂರ್ ಮಾಲ್ದಾರ್ , ಇನ್ನು ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು

ವರದಿ :ಮಹಬೂಬ್ ಬಾರಿಗಡ್ಡಿ

No comments:

Post a Comment