Tuesday, August 8, 2023

ಮುಸ್ಲಿಂ ಮೀಸಲಾತಿ ರದ್ದು ಹಿಂಪಡೆಯಲು ಆಗ್ರಹಿಸಿ, ತಹಶೀಲ್ದಾರಗೆ ಮನವಿ,

ಬಾಗಲಕೋಟೆ :

ಮುಧೋಳ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ಆಯೋಗದ ಅನುಮತಿ ಇಲ್ಲದೆ ಮುಸ್ಲಿಂ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇದ್ದ ಶೇ.4ರ ಮೀಸಲಾತಿ ರದ್ದುಗೊಳಿಸಿರುವುದನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ಮುಸ್ಲಿಂ ಯೂನಿಟಿ ಮುಧೋಳ ತಾಲೂಕು ಘಟಕದಿಂದ ತಹಶೀಲ್ದಾರ ವಿನೂದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಗಳಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಪ್ರಕರಣದಿಂದ ಕೈ ಬಿಡುವುದು ಹಾಗೂ ಉಡುಪಿಯಲ್ಲಿ ನಡೆದ ವಿಡಿಯೋ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಹಿರಿಯ ನ್ಯಾಯವಾದಿ ಐ.ಎಚ.ಅಂಬಿ,
ಮುಸ್ಲಿಂ ಯೂನಿಟಿ ತಾಲೂಕು ಅಧ್ಯಕ್ಷ ಬಿಲಾಲ ಬಾನದಾರ, ಮಾತನಾಡಿ, ಮುಸ್ಲಿಂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪ, ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಟಿಪ್ಪು ಸುಲ್ತಾನ ಮೆರವಣಿಗೆ, ಮುಸ್ಲಿಂ ಬಾಂಧವರ ಜನ ಜಾಗೃತಿ ಸಮಾವೇಶ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮುಸ್ಲಿಂರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕೆಎಂಯೂ ಬಲವಾಗಿ ಖಂಡಿಸುತ್ತೇದೆ ಎಂದರು.
ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಮೀಸಲಾತಿ ರದ್ದು 
ಹಿಂಪಡೆಯಬೇಕು. ಅಮಾಯಕರಿಗೆ ಶಿಕ್ಷೆಯಿಂದ ಬಿಡುಗಡೆಗೊಳಿಸಬೇಕು ಹಾಗೂ ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಮುಸ್ಲಿಂ ಯುನಿಟಿ ಮುಧೋಳ ತಾಲ್ಲೂಕು ಘಟಕದ ವತಿಯಿಂದ ಮುಧೋಳ ತಹಸೀಲ್ದಾರ ರವರ ಮುಖಾಂತರ ಮುಸ್ಲಿಂ ಮೀಸಲಾತಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಮೌಲಾನ ಸಜ್ಜಾದ ಹುಸೇನ್ ಅಣ್ಣಿಗೇರಿ ಮತ್ತು ರಾಜ್ಯ ಸಮಿತಿ ಸದಸ್ಯರಾದ ಸಿರಾಜ್ ಹೊರಟ್ಟಿ, ಬಂದೇನವಾಜ್ ಧಾರವಾಡಕರ್, ಆರೀಫ್ ಪಠಾಣ, ಶಫೀಕ್ ಬೇಪಾರಿ, ತಾಲೂಕು ಘಟಕದ ಉಪಾಧ್ಯಕ್ಷರಾದ ಮೈನು ಅಂಬಿ, ದಾವಲಸಾಬ್ ನದಾಫ್,  ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಂಬಿ, ಕಾರ್ಯದರ್ಶಿ ಶರೀಫ್ ಮುಲ್ಲಾ,  ಶಾನೂರ್ ಸೊನ್ನದ, ಸಮೀರ್ ಮುಧೋಳ, ಮೈಬುಬ ನದಾಫ ನಗರದ ಮುಸ್ಲಿಂ ಸಮಾಜದ ಹಿರಿಯರಾದ  ಖಾಜಾಮಿನ ಬಾಗವಾನ, ಬಾದಷ ಬಾವಾಖಾನ, ಬಾಬುಲಾಲ್ ಮನಿಯಾರ, ಬಾದಷ ಕೌಜಲಗಿ,  ಸುಲೇಮಾನ್ ಅಂಬಿ,  ಗೈಬುಸಾಬ್  ಮೋಮಿನ,  ಮುನ್ನಾ ಜಮಾದಾರ, ನ್ಯಾಯವಾದಿ ಸದ್ದಾಂ ಕರಜಗಿ, ಯಾಸೀನ ಹೊನವಾಡ, ರಫೀಕ ಮುದ್ದಾಪುರ,ಸಾಜಿದ ಹುಲಕುಂದ,ಅರ್ಬಾಜ್ ಪಠಾಣ,ಸೇರಿದಂತೆ ಇನ್ನು ಅನೇಕ ಮುಸ್ಲಿಂ ಸಮಾಜ ಮುಖಂಡರು ಯುವಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು,

ವರದಿ :
ಮಹಬೂಬ್ ಬಾರಿಗಡ್ಡಿ

No comments:

Post a Comment