ಬಾಗಲಕೋಟೆ :
ರೈಲ್ವೆ ಹೋರಾಟ ಸಮಿತಿಯ ನಿಯೂಗ ಬಾಗಲಕೋಟ್ ಲೋಕಸಭಾ ಮತಕ್ಷೇತ್ರದ ಸಂಸದ PC ಗದ್ದಿಗೌಡರ , ಸಂಸದ ಅಣ್ಣಾ ಸಾಬ ಜೊಲ್ಲೆ ಅವರನು ಭೇಟಿ ಮಾಡಿ , ಕುಡಚಿ - ಬಾಗಲಕೋಟೆ ರೈಲ್ವೆ ಮಾರ್ಗದ ಕಾಮಗಾರಿಯನ್ನು , ಕುಡಚಿ ಕಡೆಯಿಂದ ಲೋಕಾಪುರ ದವರೆಗೆ ಏಕಕಾಲ ಪ್ರಾರಂಭಿಸಲು ರೈಲ್ವೆ ಮಂತ್ರಿಗಳ ಮೇಲೆ ಒತ್ತಡ ತರಬೇಕು ಎಂದು ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕೂತುಬುದ್ದಿನ ಖಾಜಿ , ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ , ಖ್ಯಾತ ಬಾಗಲಕೋಟೆ ಜಿಲ್ಲೆಯ ಜವಳಿ ಉದ್ಯಮಿ ಗಣಪತ್ತ ರಾವ ಹಜಾರೆ , ಜಿಲ್ಲೆಯ ಖ್ಯಾತ ವೈದ್ಯರಾದ ಡಾಕ್ಟರ್ ರವಿ ಜಮಖಂಡಿ , ಇನ್ನೂ ಕೆಲವು ಹಲವು ವ್ಯಕ್ತಿಗಳ ಒಳಗೊಂಡ ನಿಯೋಗ ಇಂದು ದೆಹಲಿಯಲ್ಲಿ ಒತ್ತಾಯಸಿತು.
ಇದೇ ಸಂದರ್ಭದಲ್ಲಿ ಇಬ್ಬರು ಸಂಸದರು ಅವರನ್ನು ಸ್ಪಂದಿಸಿ , ಕರ್ನಾಟಕ ರಾಜ್ಯ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಕೇಂದ್ರ ಸಚಿವರಾದ , ಶ್ರೀ ಪ್ರಲ್ಲಾದ ಜೋಶಿ ಅವರನ್ನು ಭೆಟ್ಟಿ ಮಾಡಿಸಿ , ಕರ್ನಾಟಕ ರಾಜ್ಯ ಸರ್ಕಾರ ,ಬಾಗಲಕೋಟೆ - ಕುಡಚಿ ರೈಲ್ವೆ ಮಾರ್ಗಕ್ಕೆ ಅಗತ್ಯವಾದಅಂತಹ ಭೂಮಿಯನ್ನು ಒದಗಿಸಿದೆ ಯಂದು ಮಾನ್ಯ ಸಚಿವರಿಗೆ ಮನವರಿಕೆ ಮಾಡಿದರು .
ಇದೇ ಸಂದರ್ಭದಲ್ಲಿ ಎರಡು ಕಡೆಯಿಂದ ಏಕಕಾಲಕ್ಕೆ ರೈಲ್ವೆ ಕಾಮಗಾರಿ ಪ್ರಾರಂಬಿಸಲು ಅಗ್ರಹೀಸಿ , 2024 ರ ಒಳಗಾಗಿ ಪೂರ್ಣ ಗೊಳಿಸಲು ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರಬೇಕೆಂದು , ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾದ , P C ಗದ್ದಿ ಗೌಡ್ರು , ಅಣ್ಣ ಸಾಬ್ ಜೊಲ್ಲೆ ಹಾಗೂ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವಿಕರಿಸಿದ ಸಚಿವರು ನಿಮ್ಮ ಬೇಡಿಕೆ ಸೂಕ್ತವಾಗಿರುವಂಥದ್ದು , ತಕ್ಷಣ ಪೂರ್ಣ ಕಾಮಗಾರಿ ಪ್ರಾರಂಭಿಸಲು ರೈಲ್ವೆ ಮಂತ್ರಿ ಗಳಿಗೆ ಸುಚಿಸುತ್ತೇನೆ ಯಂದು ಹೇಳಿದರು .
ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕೂತುಬುದ್ದಿನ ಖಾಜಿ , ಉಪಾಧ್ಯಕ್ಷ ಶ್ರೀನಿವಾಸ್ ಬಳ್ಳಾರಿ , ಗಣಪತ ರಾವ ಹಜಾರೆ , ರವಿ ಜಮಖಂಡಿ , ಹಲವರು ಪ್ರಮುಖರು ಉಪಸ್ಥಿತರಿದ್ದರು .
No comments:
Post a Comment