Tuesday, August 8, 2023

ಕರ್ನಾಟಕ ರಾಜ್ಯ ರೈಲ್ವೆ ಹೋರಾಟ ಸಮಿತಿ ನಿಯೋಗ ದೆಹಲಿಗೆ

  

ಬಾಗಲಕೋಟೆ  : 
     
ರೈಲ್ವೆ ಹೋರಾಟ ಸಮಿತಿಯ ನಿಯೂಗ ಬಾಗಲಕೋಟ್ ಲೋಕಸಭಾ ಮತಕ್ಷೇತ್ರದ ಸಂಸದ PC ಗದ್ದಿಗೌಡರ ,  ಸಂಸದ ಅಣ್ಣಾ ಸಾಬ ಜೊಲ್ಲೆ ಅವರನು    ಭೇಟಿ ಮಾಡಿ ,   ಕುಡಚಿ - ಬಾಗಲಕೋಟೆ   ರೈಲ್ವೆ ಮಾರ್ಗದ     ಕಾಮಗಾರಿಯನ್ನು , ಕುಡಚಿ ಕಡೆಯಿಂದ ಲೋಕಾಪುರ   ದವರೆಗೆ ಏಕಕಾಲ ಪ್ರಾರಂಭಿಸಲು ರೈಲ್ವೆ ಮಂತ್ರಿಗಳ ಮೇಲೆ ಒತ್ತಡ   ತರಬೇಕು  ಎಂದು  ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ   ಕೂತುಬುದ್ದಿನ ಖಾಜಿ  ,    ರಾಜ್ಯ ಉಪಾಧ್ಯಕ್ಷ    ಶ್ರೀನಿವಾಸ ಬಳ್ಳಾರಿ  ,   ಖ್ಯಾತ ಬಾಗಲಕೋಟೆ ಜಿಲ್ಲೆಯ ಜವಳಿ ಉದ್ಯಮಿ   ಗಣಪತ್ತ ರಾವ ಹಜಾರೆ ,  ಜಿಲ್ಲೆಯ ಖ್ಯಾತ ವೈದ್ಯರಾದ ಡಾಕ್ಟರ್ ರವಿ ಜಮಖಂಡಿ  ,     ಇನ್ನೂ ಕೆಲವು ಹಲವು ವ್ಯಕ್ತಿಗಳ ಒಳಗೊಂಡ     ನಿಯೋಗ   ಇಂದು   ದೆಹಲಿಯಲ್ಲಿ ಒತ್ತಾಯಸಿತು.     

ಇದೇ ಸಂದರ್ಭದಲ್ಲಿ ಇಬ್ಬರು ಸಂಸದರು ಅವರನ್ನು  ಸ್ಪಂದಿಸಿ ,  ಕರ್ನಾಟಕ ರಾಜ್ಯ ರೈಲ್ವೆ ಹೋರಾಟ  ಸಮಿತಿಯ ಪದಾಧಿಕಾರಿಗಳನ್ನು ಕೇಂದ್ರ ಸಚಿವರಾದ , ಶ್ರೀ ಪ್ರಲ್ಲಾದ ಜೋಶಿ ಅವರನ್ನು ಭೆಟ್ಟಿ ಮಾಡಿಸಿ , ಕರ್ನಾಟಕ ರಾಜ್ಯ ಸರ್ಕಾರ ,ಬಾಗಲಕೋಟೆ  - ಕುಡಚಿ ರೈಲ್ವೆ ಮಾರ್ಗಕ್ಕೆ ಅಗತ್ಯವಾದಅಂತಹ ಭೂಮಿಯನ್ನು ಒದಗಿಸಿದೆ ಯಂದು ಮಾನ್ಯ ಸಚಿವರಿಗೆ ಮನವರಿಕೆ   ಮಾಡಿದರು  .  

    ಇದೇ ಸಂದರ್ಭದಲ್ಲಿ ಎರಡು ಕಡೆಯಿಂದ ಏಕಕಾಲಕ್ಕೆ  ರೈಲ್ವೆ ಕಾಮಗಾರಿ  ಪ್ರಾರಂಬಿಸಲು ಅಗ್ರಹೀಸಿ  , 2024 ರ ಒಳಗಾಗಿ ಪೂರ್ಣ ಗೊಳಿಸಲು ರೈಲ್ವೆ ಇಲಾಖೆ ಮೇಲೆ  ಒತ್ತಡ ಹೇರಬೇಕೆಂದು ,  ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾದ , P C  ಗದ್ದಿ ಗೌಡ್ರು  ,   ಅಣ್ಣ ಸಾಬ್  ಜೊಲ್ಲೆ  ಹಾಗೂ   ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.           

ಮನವಿ ಸ್ವಿಕರಿಸಿದ ಸಚಿವರು ನಿಮ್ಮ ಬೇಡಿಕೆ ಸೂಕ್ತವಾಗಿರುವಂಥದ್ದು , ತಕ್ಷಣ ಪೂರ್ಣ ಕಾಮಗಾರಿ ಪ್ರಾರಂಭಿಸಲು ರೈಲ್ವೆ ಮಂತ್ರಿ ಗಳಿಗೆ ಸುಚಿಸುತ್ತೇನೆ ಯಂದು ಹೇಳಿದರು .   

ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ   ಕೂತುಬುದ್ದಿನ ಖಾಜಿ , ಉಪಾಧ್ಯಕ್ಷ     ಶ್ರೀನಿವಾಸ್ ಬಳ್ಳಾರಿ ,  ಗಣಪತ ರಾವ ಹಜಾರೆ ,  ರವಿ ಜಮಖಂಡಿ ,    ಹಲವರು ಪ್ರಮುಖರು ಉಪಸ್ಥಿತರಿದ್ದರು .     


 ವರದಿ ಮಹಿಬೂಬ್ ಎಂ  ಬಾರಿಗಡ್ಡಿ ಬಾಗಲಕೋಟೆ

No comments:

Post a Comment