Sunday, January 28, 2024

ಅಂಜುಮನ್ ಆಡಳಿತ ಅವಧಿ ಮುಗಿದರು ಕೂಡ ಕ್ಯಾರೆ ಅನ್ನದ ಸಂಬಂಧಪಟ್ಟ ಅಧಿಕಾರಿಗಳು



 ಬಾಗಲಕೋಟೆ / ರಬಕವಿ - ಬನಹಟ್ಟಿ :

 ಬಾಗಲಕೋಟ್ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಅಂಜುಮನ ಎ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಮೂರು ವರ್ಷದ ಅವಧಿ ಕಳೆದ ಕೆಲವು ತಿಂಗಳ ಹಿಂದೆ ಮುಗಿದರೂ ಕೂಡ ಇದರ ಸಂಬಂಧಪಟ್ಟ ವಕ್ಪ್ಹ್ ಅಧಿಕಾರಿಗಳು ಕೂಡ ಕ್ಯಾರೆ ಅನ್ನುತ್ತಿಲ್ಲ. ಇದರ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೋ ಅಥವಾ ನಗರದ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಲಕ್ಷವೋ 
 ಎಂದು ಕಾದು ನೋಡಬೇಕಾಗಿದೆ.

 ಮುಸ್ಲಿಂ ಸಮುದಾಯದ ಸಾರ್ವಜನಿಕ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಚುನಾಯಿತರಾಗಲಿ ಅಥವಾ ಅವಿರೋಧವಾಗಿ ಕಳಿಸಿರುವ ಅಂತಹ ಸದಸ್ಯರು ಅವಧಿ ಮುಗಿದ ತಕ್ಷಣವೇ ಸಾರ್ವಜನಿಕರ ಸಭೆ ಕರೆದು ಇತ್ಯರ್ಥ ಪಡಿಸಬೇಕೆಂದು ಸಾರ್ವಜನಿಕ ಅಭಿಪ್ರಾಯವಾಗಿದೆ .

 ಯಾವುದೇ ಸಂಘ ಸಂಸ್ಥೆಗಳ ಚುನಾವಣೆ ಅವಧಿ ಮುಗಿಯುವುದರ ಎರಡು ತಿಂಗಳ ಮುಂಚೆಯೇ ಇದರ ಪ್ರಕ್ರಿಯೆ ಶುರುವಾಗುತ್ತದೆ. ಆದರೆ ಈ ಸಂಸ್ಥೆಯ ಅವಧಿ ಕೆಲವು ತಿಂಗಳ ಹಿಂದೆ ಮುಗಿದರು ಕೂಡ ಯಾವುದೇ ಸಂಬಂಧ ಪಟ್ಟ ಅಧಿಕಾರಿಗಳಾಗಲಿ, ಸಂಸ್ಥೆಯ ಆಡಳಿತ ಮಂಡಳಿ ಆಗಲಿ, ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.

 ಅಂಜುಮನ ಸಂಸ್ಥೆಯ ಆಡಳಿತ ಮಂಡಳಿ ಅವಧಿ ಮುಗಿದರು ಕೂಡ ಇದು ಯಾರ ಆಡಳಿತ ಒಳಪಟ್ಟಿದೆ ಎಂದು ಪ್ರಶ್ನಾರ್ಥಕ ಚಿನ್ನವಾಗಿದೆ .

 ವರದಿ : ಮೆಹಬೂಬ್ ಎಂ ಬಾರಿಗಡ್ಡಿ

No comments:

Post a Comment