Sunday, January 14, 2024

ಅಕ್ರಮ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಯಾವಾಗ :*

*ಅಕ್ರಮ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ  ಕಡಿವಾಣ ಯಾವಾಗ :*
 
 ಮಾವಾ , ಜೂಜಾಟ , ಮಟ್ಕಾ , ಅಕ್ರಮ ಸರಾಯಿ ಬಿಂದಾಸ್

 ರಬಕವಿ ಬನಹಟ್ಟಿ :

 ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ  ಅವಳಿ ನಗರಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾವಾ ತಯಾರಿಕೆ , ಹಾಗೂ ಮಟ್ಕಾ ತಾನವಾಗಿ ಮಾರ್ಪಟ್ಟಿದೆ . ಕೆಲವು ತಿಂಗಳ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾವಾ ತಯಾರು ಮಾಡುವಂತಹ ಅಡ್ಡೆ ಗಳಲ್ಲಿ ರೇಡ್ ಮಾಡಿದರು ಕೂಡ , ಪೊಲೀಸ್ ಇಲಾಖೆಗೆ ಗಮನಕ್ಕೆ ಇದ್ದರೂ ಕೂಡ , ನಗರದಲ್ಲಿ ಮಾವಾ ತಯಾರಕರು , ಜೂಜಟ್ ಕೋರರು, ಅಕ್ರಮ ಸರಾಯಿ ಕೋರರು ತಮ್ಮ ತಮ್ಮ  ದಂದೇ ಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿದ್ದಾರೆ . ಮಾವಾ ಒಂದು ನಿಷೇಧಿತ ಪದಾರ್ಥ, ಇದನ್ನು ಅಡಿಕೆ , ಸುನ್ನ
 ಆರೋಗ್ಯಕ್ಕೆ ಹಾನಿಕಾರಿಯಾಗುವಂತಹ ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡಿ ಮಾವಾ ಅನ್ನುವಂತ ಪ್ರದಾರ್ಥವನ್ನು ತಯಾರು ಮಾಡುತ್ತಾರೆ. ಇದನ್ನು ಮನುಷ್ಯ ಸದಾ ಅಗೆಯವುದರಿಂದ ಇದರಿಂದ ಕ್ಯಾನ್ಸರ್ ಗೆ ತುತ್ತಾಗಬಹುದು.

 ಮಾವ ಅನ್ನುವಂತಹ ನಿಷೇಧಿತ ಪ್ರಧಾರ್ಥ, ನಗರ ಪ್ರದೇಶಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರತಿಯೊಂದು ಪಾನ್ ಶಾಪ್ಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅವರ ಭಯವಿಲ್ಲದೆ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಮಾವಾ ಪದಾರ್ಥವನ್ನು ಯುವ ಪೀಳಿಗೆ ಅಷ್ಟೇ ಅಲ್ಲದೆ ಮಧ್ಯಮ ವಯಸ್ಕರ ಕೂಡ ಚಟಕ್ಕೆ ಬಲಿಯಾಗುತ್ತಿದ್ದಾರೆ . ಈ ಆಕ್ರಮ ಧoದೆಗೆ ಸಂಬಂಧ ಪಟ್ಟ ಅಧಿಕಾರಿಗಳು ಯಾವಾಗ ಕಡಿವಾಣ ಹಾಕುತ್ತಾರೆ ಎಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ .

 ಮಧ್ಯಮ ವಯಸ್ಕರು ಅಲ್ಲದೆ ಯುವ ಪೀಳಿಗೆ ಮಟ್ಕಾ ಆಟಕ್ಕೆ ಶರಣು

 ನಗರಗಳು ಮಟ್ಕಾ ತಾಣಗಳಾಗಿ ಪರಿವರ್ತನೆ ಯಾಗುತ್ತಲಿಯಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೂ ಅಕ್ರಮ ಸರಾಯಿ ಕೂಡ ಹಳ್ಳಿ ಗಳ ಕೆಲವೊಂದು ಪಾನ್ ಶಾಪ್ಗಳಲ್ಲಿ ದೊರೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ .

. ಬನಹಟ್ಟಿ ನಗರದ   ನೂತನ ಠಾನಾಧಿಕಾರಿ ಅಧಿಕಾರ ವಹಿಸಿದ  ಶಾಂತಾ ಹಳ್ಳಿ ಮೇಡಂ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರ್ನಾಥ್ ರೆಡ್ಡಿ ಅವರು ಈ ಎಲ್ಲಾ ಅಕ್ರಮ ಧ0ದೇ ಗಳಿಗೆ ಕಡಿವಾಣೆ ಹಾಕುತ್ತಾರೆಯೋ,  ಅನ್ನುವಂತ ಕಾದು ನೋಡಬೇಕಾಗಿದೆ  .

 ವರದಿ :
 ಮಹಬೂಬ್ ಎಮ್ ಬಾರಿಗಡ್ಡಿ 

No comments:

Post a Comment