ಬಾಗಲಕೋಟೆ /
ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಜಮಿಎತ್ ಹಾಗೂ ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ಜಂಟಿ ಅಂಜುಮನ್ ಸಂಸ್ಥೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಹೊಸ ವೋಟರ್ ಐಡಿ ಹಾಗೂ ಅದರ ತಿದ್ದುಪಡಿಯ ಸೇವೆ ಕಳೆದ 30 ದಿನಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ .
ಈ ಸಂದರ್ಭದಲ್ಲಿ ಪತ್ರಕರ್ತ ಮಾಧ್ಯಮದೊಂದಿಗೆ ಮಾತನಾಡಿದ ಜಮೀಯತೆ ಉಲೆಮಾ ಹಿಂದ ತಾಲೂಕಾಧ್ಯಕ್ಷ ಮೌಲಾನಾ ಮೊಸಿನ್ ಅಹಮದ್ ಅವರು ಪ್ರತಿಯೊಬ್ಬರೂ ಚುನಾವಣಾ ಗುರುತಿನ ಚೀಟಿ ಹೊಂದಲೇಬೇಕಾದ ಅವಶ್ಯಕತೆ ಇದೆ , ಆದ್ದರಿಂದ ಜಮ್ಯತೆ ಉಲೇಮ ಹಿಂದ ರಾಂಪುರ್ ಇದರ ಕಚೇರಿಯಲ್ಲಿ ಹಿಂದೂ ಮುಸ್ಲಿಂ ಅನ್ನದೆ ನಿರಂತರವಾಗಿ ಸೇವೆಯನ್ನು ನೀಡುತ್ತಿದ್ದು , ಆದ್ದರಿಂದ ನೀವೆಲ್ಲರೂ ಹೊಸ ಚುನಾವಣೆ ಗುರುತಿನ ಚೀಟಿ ಹಾಗೂ ತಿದ್ದುಪಡಿ ಇದ್ದಲ್ಲಿ ಕಚೇರಿಗೆ ಬಂದು ಸೇವೆಯನ್ನು ಸದ್ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು .
ವರದಿ : ಮಹಿಬೂಬ್ ಎಂ ಬಾರಿಗಡ್ಡಿ
No comments:
Post a Comment