Tuesday, June 11, 2024

ಶಾಸಕರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬನಹಟ್ಟಿ ಆಟೋ ಚಾಲಕರು*



ಬಾಗಲಕೋಟೆ/ ರಬಕವಿ ಬನಹಟ್ಟಿ :

ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ 40 ರಿಂದ 50 ವರ್ಷಗಳಿಂದ ಆಟೋ ನಿಲ್ದಾಣ ಇದೆ   ಈ ಆಟೋ ನಿಲ್ದಾಣದ 400 ಕ್ಕಿಂತ ಅಧಿಕ ಆಟೋ ಚಾಲಕರು ತಮ್ಮ ತಮ್ಮ ಕುಟುಂಬದ ಉಪಜೀವನವನ್ನು ಮಾಡುತ್ತಿ ರೂವಾಗಲೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಶಕ್ತಿ ಯೋಜನೆ ಅಂದ್ರೆ ಮಹಿಳೆಯರಿಗಾಗಿ ಉಚಿತ ಬಸ್ ಮಾಡಿದ ಮೇಲೆ ಆಟೋ ಚಾಲಕರಿಗೆ ಭಾರಿ ವಾಡಿತ ಬಿದ್ದಿದೆ . ಹೀಗಿರುವಾಗ  ನಗರದ ಹೊಸ ಬಸ್ ನಿಲ್ದಾಣದ ಕಟ್ಟಡದ ಮುಕ್ತಾಯ ಹಂತ ತಲುಪಿರುವಾಗ  , ಕೆಎಸ್ಆರ್ಟಿಸಿ ಅಧಿಕಾರಿಗಳ ಆದೇಶ ಅನುಸಾರ ಬಸ್ ನಿಲ್ದಾಣದ ಜಾಗದಲ್ಲಿ ಖಾಸಗಿ ವಾಹನ ತಡೆ ಕಂಬಗಳನ್ನು ಹಾಕಲಿಕ್ಕೆ ಮುಂದಾದಾಗ ಆಟೋ ನಿಲ್ದಾಣದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ .

 ದಿಡೀರನೆ ನಗರದ 400 ಕಿಂತ ಹೆಚ್ಚು ಆಟೋಗಳನ್ನು ಬಂದು ಮಾಡಿ ಚಾಲಕರು ಹಾಗೂ ಮಾಲಕರು ಸೇರಿ ರಬಕವಿ ಬನಹಟ್ಟಿ ನಗರ ಸಭೆ ಅಧಿಕಾರಿಗಳಿಗೆ ಹಾಗೂ ತೇರದಾಳ ಮತಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರು .

 ಈ ಸಂದರ್ಭದಲ್ಲಿ ಮಾತನಾಡಿದ ಬಸ್ಸಿರ ಜಮಾದಾರ್ , ಕಳೆದ ಸುಮಾರು 40 ವರ್ಷಗಳಿಂದ ಆಟೋ ಚಾಲಕರು ಬಸ್ ನಿಲ್ದಾಣದ ಹತ್ತಿರ ನಾವು  ನಮ್ಮ ಉಪಜೀವನವನ್ನು ನಡೆಸುತ್ತಿದ್ದೇವೆ . ಬಸ್ ನಿಲ್ದಾಣದ ಹಳೆ ಕಟ್ಟಡವನ್ನು ತೆರೆವುಗೊಳಿಸಿದ್ದಾರೆ  . ಇದರಿಂದ ನಮ್ಮ ಅಟೋಗಳನ್ನು ನಿಲ್ಲುಗಡೆ ಮಾಡ್ಲಿಕ್ಕೆ ಜಾಗ  ಇರೋದಿಲ್ಲ ಇದೇ ಜಾಗದಲ್ಲಿ ನಮ್ಮ ಉಪಜೀವನ ನಡೆಯುತ್ತಿದೆ  .  ಆದ್ದರಿಂದ ನಾವುಗಳು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ ,  ಇನ್ನೊಮ್ಮೆ ಅಧಿಕಾರಿಗಳನ್ನು ಭೇಟಿ ಮಾಡಿ , ಅಧಿಕಾರಿಗಳು ಏನು ಹೇಳುತ್ತಾರೆ  ಅನ್ನುವುದನ್ನು ನೋಡಿಕೊಂಡು ಮುಂದಿನ ಹೋರಾಟದ ರೂಪುರೇಷೆ ಮಾಡಿ  , ಧರಣಿ ಮುಖಾಂತರ ಆಟೋ ನಿಲ್ದಾಣಕ್ಕೆ ಜಾಗವನ್ನು ತೆಗೆದುಕೊಳ್ಳುವಂತ ಕೆಲಸ ಮಾಡುತ್ತೆವೆ ಎಂದು ಎಚ್ಚರಿಕೆಯನ್ನು ನೀಡಿದರು  .

 ಈ ಸಂದರ್ಭದಲ್ಲಿ  ಶ್ರೀ ಕಾಡ ಸಿದ್ದೇಶ್ವರ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಅಪ್ಸರ ಭಾಷಾ ಪೆಂಡಾರಿ , ಅಶೋಕ್ ಹೊಸಕೋಟೆ, ಅಕ್ರಂ ರಾಜನ್ನವರ್ , ಮಲ್ಲಪ್ಪ  ದಿವಾನ್ದಾರ್ ಮುಸ್ತಾಕ್ ಪೆಂಡಾರಿ ,ಇಕ್ಬಾಲ್ ಮುಧೋಳ್ ಸುಭಾಷ್ ಪಾರತ್ನ ಹಳ್ಳಿ , ರಾವ್ ಸಾಬ್ ಶಿಂದೆ ಪ್ರಕಾಶ್ ಪುಕಾಳೆ ,ಈಶ್ವರ್ ,ಶಂಶೋದ್ದೀನ್ ಪೆಂಡಾರಿ , ರಾಜು ಎಂಟ್ ಗೌಡ, ಆಯಾಜ ಇನಾಮ್ದಾರ್ ಸಿದ್ದಲಿಂಗ ಗೌಡ ಪಾಟೀಲ್ ಇನ್ನೂ ಅನೇಕ ಆಟೋ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು. 

 ವರದಿ :  ಮಹಿಬೂಬ್ ಎಂ ಬಾರಿಗಡ್ಡಿ

No comments:

Post a Comment