Sunday, June 16, 2024

ಶಾಂತಿಯಿಂದ ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಸಡಗರದಿಂದ ಬಕ್ರೀದ್ ಹಬ್ಬ ಆಚರಣೆ

 ಬಾಗಲಕೋಟೆ / 

ರಬಕವಿ - ಬನಹಟ್ಟಿ : ತ್ಯಾಗ ಬಲಿದಾನಗಳ ಸಾಂಕೇತಿಕ ಹಬ್ಬವಾದ ಬಕ್ರೀದ್ ಹಬ್ಬ ಇಸ್ಲಾಂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪ್ರಾಣಿಗಳನ್ನು ಬಲಿ ಕೊಡುವಂತ ಪದ್ಧತಿ ಜಾರಿಯಲ್ಲಿದೆ . ಅಲ್ಲಾಹನು ತನ್ನ ಪ್ರೀತಿಯ ಪೈಗಂಬರರಾದ ಈಬ್ರಾಹಿಂ ಅಲೈ ಸಲಾಂ ಅವರ ಮನಸ್ಸು ನೋಡಲು ಬಹಳ ವರ್ಷಗಳ ನಂತರ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ನನ್ನ ಭಕ್ತಿಯ ಪ್ರೀತಿಗೆ ಬಲಿ ಕೊಡ್ತೀಯಾ ? ಎಂದು ಹೇಳಿದಾಗ ಆಗ  ಬಹಳ ವರ್ಷಗಳ ನಂತರ ಒಂದು ಗಂಡು ಮಗುವಾಗಿ ಪಡೆದ ಇಬ್ರಾಹಿಂ ಪೈಗಂಬರ ಅವರ ಮಗನಾದ ಇಸ್ಮಾಯಿಲ್ ಅಲೈ ಸಲಾಂ ನನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಅವರನ್ನು ಬಲಿಯನ್ನಾಗಿ ಕೊಡಲು ತನ್ನ ಚೂಪಾದ ಚೂರಿಯಿಂದ ಮಗನ ಬಲಿ ಕೊಡಲು ಸಿದ್ಧವಾದಾಗ ಅಲ್ಲಾಹನು ಸ್ವರ್ಗದಿಂದ ಒಂದು ಕುರಿಯನ್ನು ಪ್ರತ್ಯಕ್ಷ ಮಾಡಿಸಿ   ಓ ನನ್ನ ಪೈಗಂಬರರೇ ನೀನು ನನ್ನ ಭಕ್ತಿಗೆ ಮೆಚ್ಚುಗೆವನ್ನಾಗಿಸಿದ್ದೀರಿ ಆದ್ದರಿಂದ ಇದರ ಬದಲಾಗಿ ಈ ಕುರಿಯನ್ನು ಬಲಿ ಕೊಟ್ಟು ನನ್ನ ಆಜ್ಞೆಯ ಪಾಲಿಸುವಂತೆ ಹೇಳಿದಾಗ   ಪೈಗಂಬರರು ತನ್ನ ಮಗನನ್ನು ತೆಗೆದು ಕುರಿಯನ್ನು ಬಲಿಯನ್ನಾಗಿ ಕೊಟ್ಟರು    ಆದ್ದರಿಂದ ಆಗಿನ ಕಾಲದಿಂದ ಇವತ್ತಿನವರೆಗೆ ಕುರಿ ಬಕ್ರ  ಮುಂತಾದ ಪ್ರಾಣಿಗಳನ್ನು ಬಲಿಯ  ಪದ್ಧತಿಯಾಗಿ ಜಾರಿಯಾಯಿತು . 

 ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೆಂಡಾರಿ ಮೊಹಲ್ಲಾದ ಇದಗಾ ಮೈದಾನದಲ್ಲಿ ಸಾಮೂಹಿಕವಾಗಿ ಬಕ್ರೀದ್ ಹಬ್ಬದ ಪ್ರಾರ್ಥನೆ ಯನ್ನು ಸಲ್ಲಿಸಿದರು . ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಕೈ ಕುಲುಕಿದರ ಮೂಲಕ ಒಬ್ಬರಿಗೊಬ್ಬರು ಶುಭಾಶಯಗಳು ವಿನಮಯ ಮಾಡಿಕೊಂಡರು . 

 ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ನಾವುಗಳು ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡಿದರೆ ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ಮಾಡಬೇಕು ಹೊರತು ನಮ್ಮ ದೊಡ್ಡ ಸ್ಥಿಕೆಯನ್ನು ತೋರಿಸಲಿಕ್ಕೆ ಮಾಡಬಾರದು ಎಂದು ಹೇಳಿದರು . ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 
 
 ವರದಿ ಮಹಿಬೂಬ ಎಂ ಬಾರಿಗಡ್ಡಿ

No comments:

Post a Comment