Monday, June 17, 2024

ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*

*ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದ ಮುಸ್ಲಿಂ ಬಾಂಧವರು*

 ಇದ್ಗಾ ಮೈದಾನದಲ್ಲಿ ನಮಾಜ್ ಮಾಡಲು ಸಾವಿರಾರು ಜನ ಮುಸ್ಲಿಂ ಬಾಂಧವರು ಬಾಗಿ....

ಎಲ್ಲ ಜೀವರಾಶಿಗಳಲ್ಲಿ ಶ್ರೇಷ್ಠವಾದದ್ದು ಮಾನವ ಜನ್ಮ ಯಾರಿಗೂ ಕೆಟ್ಟದ್ದನ್ನು ಬಯಸದೆ ಎಲ್ಲರಿಗೂ ನಮ್ಮವರು ತಮ್ಮವರು ಅನ್ನುವ ಮನೋಭಾವದಿಂದ ಕಾಣುತ್ತಾ ದೇವರ ಜ್ಞಾನ ಮಾಡೋಣ ಪ್ರತಿದಿನ ನಮಾಜ್ ಮಾಡುವ ಮೂಲಕ ನಮಗೆ ಬಂದ ಕಷ್ಟವನ್ನು ದೂರಮಾಡು ಎಂದು ಅಲ್ಲಾ ಹತ್ತಿರ ಕೇಳಿಕೊಳ್ಳೋಣ.
ಎಲ್ಲರನ್ನೂ ಸಮಾನವಾಗಿ ನೋಡೋಣ ಭೂಮಿಯ ಮೇಲೆ ಇರುವ ಎಲ್ಲ ಜೀವ ರಾಶಿಗಳನ್ನು ಚೆನ್ನಾಗಿಟ್ಟು ಕಾಪಾಡು ಎಂದು ದೇವರ ಸ್ಮರಣೆ ಮಾಡೋಣ ಎಂದು ಮೋಸಿನ್ ಮೌಲಾನಾ ಗೋಕಾಕ್ ಎಲ್ಲರಿಗೂ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಮುಸ್ಲಿಂ ಬಾಂಧವರು ಬಹಳ ಸರಳ ಹಾಗೂ ಶಾಂತತೆಯಿಂದ 
ಸಾವಿರಾರು ಸಂಖ್ಯೆಯಲ್ಲಿ ರಬಕವಿಯ ವಿದ್ಯಾ ನಗರ ಹತ್ತಿರ ಇರುವ ಇದ್ಗಾ ಮೈದಾನಕ್ಕೆ ಬಂದು ನಮಾಜ್ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.

ವರದಿ:- ಮೊಹಮ್ಮದ್ ಹುಸೇನ್ ಲೆಂಗ್ರೆ

No comments:

Post a Comment