Saturday, October 19, 2024

ಬಸವನ್ ಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ದ್ವೇಷ ರಾಜಕಾರಣ : ಲೇಖನ ಮಹೆಬೂಬ್ಎಂ ಬಾರಿಗಡ್ಡಿ

ಬಸವನ್ ಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ದ್ವೇಷ ರಾಜಕಾರಣ  : 

ಕರ್ನಾಟಕ ರಾಜ್ಯದ ಐತಿಹಾಸಿಕ ನಗರ ಬಿಜಾಪುರ್ ,ಅಂದರೆ ಈಗಿನ ವಿಜಯಪುರ ನಗರ ,ಈ ನಗರದ ಜನಪ್ರತಿನಿಧಿ ಎಂ ಎಲ್ ಎ ಬಸವನ್ ಗೌಡ ಪಾಟೀಲ್ ಯತ್ನಾಳ್ , ಇವರಿಗೆ ಕಟ್ಟರ್ ಹಿಂದೂ ವಾದಿ ಯುವಕರು ಹಿಂದೂ ಹುಲಿ ಅಂತ ಬಿರುದು ಕೂಡ ಕೊಟ್ಟಿದ್ದಾರೆ , ಇವರು ಮಾ ತೆತ್ತಿದ್ದರೆ ಸಾಕು ಸಾಬ್ರು , ಪಾಕಿಸ್ತಾನ , ಟಿಪ್ಪು ಸುಲ್ತಾನ ಹಿಂದೂ-ಮುಸ್ಲಿಂ ,ಇಂತಹದೇ ಕೋಮುಸೌಹಾರ್ದ ಕ್ಕೆ  ಧಕ್ಕೆ ತರುವಂತ ಹೇಳಿಕೆ ಕೊಡುವುದರಲ್ಲಿ ನಿಶ್ಚಿಮ ,  ಒಬ್ಬ ನಗರದ ಜನಪ್ರತಿನಿಧಿಯಾಗಿ ಹಾಗೂ ರಾಜಕಾರಣಿಯಾಗಿ ಒಂದು ಸಮಾಜದ ವಿರುದ್ಧ ಒಂದು ಸಮಾಜದ ಗಣ್ಯ ವ್ಯಕ್ತಿಗಳ ವಿರುದ್ಧ , ಒಂದು ಸಮಾಜದ ಇತಿಹಾಸದ ರಾಜ ಮಹಾರಾಜ  ವಿರುದ್ಧ ಹೇಳಿಕೆಗಳನ್ನು ಕೊಡುವುದು ಎಷ್ಟರಮಟ್ಟಿಗೆ ಸರಿ , ನಗರದಲ್ಲಿ ಆಗಲಿ ಇತರ ಕಡೆ ರಾಜಕೀಯ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಒಂದು ಸಮಾಜದ ವಿರುದ್ಧ ದ್ವೇಷ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ . ಇದು ಎಷ್ಟರ ಮಟ್ಟಿಗೆ ಸರಿ ,ಒಂದು ಸಾಮಾನ್ಯ ಸಭೆಯಲ್ಲಿ ಕೂಡ ಬಾಯಿಗೆ ಬಂದದ್ದೆ  ಮಾತು . ಅವರ ಮನಸ್ಥಿತಿ ಹಾಗೂ ಸಂಸ್ಕೃತಿ ಎಷ್ಟರಮಟ್ಟಿಗೆ ಸರಿ , ಇವರ ವೀರಶೈವ ಲಿಂಗಾಯತ ಧರ್ಮದವರು , ಪ್ರತಿಯೊಂದು ಧರ್ಮದ ಅಜೆಂಡಾದಲ್ಲಿ ಮತ್ತೊಂದು ಧರ್ಮನು ಹೀನಾಯವಾಗಿ ಮಾತನಾಡಬಾರದು ಅನ್ನುವಂಥ ಎಲ್ಲ ಧರ್ಮದಲ್ಲಿ ಕೂಡ ಪಾಠ ಹೇಳಿಕೊಟ್ಟಿದೆ .


ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ವಿಧಾನಸಭೆಯ ಜನ ಪ್ರತಿನಿಧಿಯಾಗಿ ಪ್ರತಿಯೊಂದು ಸಮುದಾಯದ ಜನರ ಮನಸು ಒಂದು ಮಾಡುವುದನ್ನು ಬಿಟ್ಟು , ಸಾಬ್ರು ಹಾಗೆ ಹೀಗೆ ಅಂತ ಹೇಳಿ ಕೋಮು ದ್ವೇಷದ  ಭಾಷಣಗಳಲ್ಲಿ ಶಿಳ್ಳೆ , ಚಪ್ಪಾಳೆ ,  ಗಿಟ್ಟಿಸಿಕೊಳ್ಳುವ ಗೋಸ್ಕರ ಇವರು ಪ್ರಸ್ತುತ ರಾಜಕಾರಣ ಮಾಡುತ್ತಿದ್ದಾರೆ .

ಬಸವನ್ ಗೌಡ ಪಾಟೀಲ್ ಯತ್ನಾಳ ಜಾತ್ಯತೀತ ಜನತಾದಳ ಪಕ್ಷದಲ್ಲಿ ಇದ್ದಾಗ , ಸಾಬರಿಂದಲೇ ರಾಜಕೀಯ ಜೀವ ಪಡೆದ ಸಾಬರದೋಪಿ ಹಾಕಿದಾಗ ಹಿಂದುತ್ವ ನೆನಪಿಗೆ ಬರಲಿಲ್ಲವೇ ? ಮುಸ್ಲಿಂರ ಮನೆಗೆ ಹೋಗುವದು, ಮುಸಲ್ಮಾನರ ಮಸೀದಿಗೆ ಹೋಗುವುದು , ಮುಸಲ್ಮಾನರ ಹಬ್ಬ ಹರಿ ದಿನಗಳಲ್ಲಿ ಭಾಗವಹಿಸುವುದು , ಮುಸಲ್ಮಾನರ ಮತಗಳನ್ನು ಪಡೆಯುತ್ತಿದ್ದ , ನಂತರ ಏಕಾಏಕಿ ರಾಜಕೀಯ ಬದಲಾವಣೆಯ ಗಾಳಿ ಬಿಸಿ ,ಭಾರತೀಯ ಜನತಾ ಪಾರ್ಟಿಗೆ ಪಕ್ಷಾಂತರ ಮಾಡಿ ನಂತರ ಮುಸಲ್ಮಾನರ ವಿರುದ್ಧ ಸಮಾಜದ ವಿರುದ್ಧ ಅವರ ಇತಿಹಾಸದ ಗಣ್ಯ ವ್ಯಕ್ತಿಗಳ ವಿರುದ್ಧ ಮಾತನಾಡುತ್ತಲೇ ಇರುತ್ತಾರೆ , ಹಾಗೂ ಸಾಬರ  ಗಣ್ಯ ವ್ಯಕ್ತಿಗಳಿಗೆ  ಭಾಸ್ಕಳ ಬಯ್ಯೋದು ಕೂಡ ಇವರ ಪ್ರಸ್ತುತ ರಾಜಕೀಯ ವಾಗಿಬಿಟ್ಟಿದೆ  , 

ಭಾರತ ದೇಶದ ಸಂವಿಧಾನದ ಅಡಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ನಂತರ ಎಲ್ಲ ಧರ್ಮದ ಜನರನ್ನು ಒಂದೇ ತರ ನೋಡುತ್ತೇನೆ ಎನ್ನುವುದು ಪ್ರತಿಜ್ಞೆ ಕೂಡ ಮಾಡಿ , ನಂತರ ಹಿಂದೂ - ಮುಸ್ಲಿಂ ದ್ವೇಷದ ಮಾತುಗಳಲ್ಲಿ ದ್ವೇಷ ಹುಟ್ಟಿಸಿ , ಸಾಮಾನ್ಯ ಜನರ ಮನಸ್ಸನ್ನು ಬೇರೆ ಬೇರೆ ಮಾಡಿ ,ಸಂವಿಧಾನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿರುವಂತಹ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದರೆ ಎಷ್ಟು ಮಟ್ಟಿಗೆ ಸರಿ , ಒಬ್ಬ ಕ್ಷೇತ್ರದ ಜನಪ್ರತಿನಿಧಿಯಾಗಿ ತನ್ನ ಕ್ಷೇತ್ರ ತನ್ನ ರಾಜ್ಯ ಹೇಗೆ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ತನ್ನ ಕ್ಷೇತ್ರದ ಜನರ ಮನಸ್ಸನ್ನು ಹೇಗೆ ಗೆಲ್ಲಬೇಕೆಂದು , ಗಮನ ಕೊಡುವುದನ್ನು ಬಿಟ್ಟು ,ಕೇವಲ ಧರ್ಮ ಧರ್ಮಗಳ , ಜಾತಿ ಜಾತಿಗಳ ಮಧ್ಯ ದ್ವೇಷದ ವಾತಾವರಣ ಸೃಷ್ಟಿಸಿ , ಇವರು ಪ್ರಸ್ತುತ ರಾಜಕಾರಣ ಮಾಡುತ್ತಿದ್ದಾರೆ .

ಬಾಗಲಕೋಟೆ ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಕೂಡ ಭಾರತೀಯ ಜನತಾ ಪಕ್ಷದಿಂದ ಜನಪ್ರತಿನಿಧಿಯಾಗಿ ಎಂ ಎಲ್ಎ ಸಿದ್ದು ಸೌದಿ  ಕೂಡ ಇದ್ದಾರೆ . ಆದರೆ ಬಸವನಗೌಡ ಪಾಟೀಲ್ ಯತ್ನಾಳ  ರಾಜಕೀಯ , ಸಿದ್ದು ಸವದಿ ಅವರ ರಾಜಕೀಯ ಅಜಗಜಾಂತರ ವ್ಯತ್ಯಾಸ ಇದೆ , ಅನ್ನಬಹುದು . ಏಕೆಂದರೆ ಈ ಕ್ಷೇತ್ರದ ಜನಪ್ರತಿನಿಧಿ ಎಂಎಲ್ಎ ಸಿದ್ದು ಸವದಿ ಅವರು ಮುಸ್ಲಿಮರ ಒಡನಾಟ ನಲ್ಲಿದ್ದು  ಮುಸ್ಲಿಮರ   ಸಭೆ ಸಮಾರಂಭ ಮದುವೆಗಳಲ್ಲಿ ಭಾಗವಹಿಸಿ  ಹಲವು ಮುಸ್ಲಿಮರ ಜನರ ಮನಸ್ಸು ಗೆದ್ದಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ .

.ಬಸವನಗೌಡ ಪಾಟೀಲ್ ಯತ್ನಾಳ ಒಬ್ಬ  ಜನಪ್ರತಿನಿಧಿಯಾಗಿ ತನ್ನದೇ ಧರ್ಮ- ಜಾತಿಯ ತನ್ನದೇ ಪಕ್ಷದ ಗಣ್ಯ ವ್ಯಕ್ತಿಗಳನ್ನು ಕೂಡ ಏಕವಚನದಲ್ಲಿ ಹೀನಾಯವಾಗಿ  ಮಾತನಾಡುತ್ತಾರೆ , ಇವರು ಮುಂಬರುವ ದಿನಮಾನಗಳಲ್ಲಿ ಇವರಿಗೆ ತನ್ನದೇ ಸಮಾಜದ ಜನ ವಿರೋಧಿಸುವ ಕಾಲ  ಬರಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ , 

ಪ್ರತಿಯೊಂದು ವೇದಿಕೆಯಲ್ಲಿ ,
ಹಿಂದೂ ಸಮಾಜದ ರಕ್ಷಕನಾಗಿದ್ದ ಶಿವಾಜಿ ಛತ್ರಪತಿ ಶಿವಾಜಿ ಮಹಾರಾಜ್ ಇರದಿದ್ದರೆ ನಾವು ಇರುತ್ತಿರಲಿಲ್ಲ ಎಂದು ಹಿಂದೂ ಸಮಾಜದ ಯುವಕರ ಎಲ್ಲರನ್ನೂ ದ್ವೇಷಪೂರಿತ  ಮಾತುಗಳ ಯುವಕರ  ತಲೆಯಲ್ಲಿ ತುಂಬಿ ಮುಸ್ಲಿಮರನ್ನು ವಿರೋಧಿಸುವಂತೆ ಪ್ರಚೋದಿಸುತ್ತಾರೆ . 

ಜಗತ್ತು 5g ಐದನೇ ತಲೆಮಾರಿನಲ್ಲಿ ಸಾಗುತ್ತಿದೆ . ಆದರೆ ನಮ್ಮ ದೇಶದ ಹಾಗೂ ರಾಜ್ಯಗಳ  ಜನಪ್ರತಿನಿಧಿಯಾಗಿ , ಧರ್ಮ ಧರ್ಮಗಳ , ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವುದರಲ್ಲಿ  ಮಗ್ನರಾಗಿದ್ದಾರೆ ಅಂದರೆ ಇದು ದೇಶದ ಭವಿಷ್ಯ  ಭಾರಿ  ಭಯಾನಕವಾಗಿದೆ  , 

ವಿಜಯಪುರದ ಜನತೆ ಬರುವ 2027 ರ ರಾಜ್ಯದ ಚುನಾವಣೆಯಲ್ಲಿ ಎಲ್ಲ ಸಮುದಾಯಗಳ ಸಮಾನ ರೀತಿಯಲ್ಲಿ ನೋಡುವಂತಹ ಒಬ್ಬ ಜನಪ್ರತಿನಿಧಿಯನ್ನು ವಿಧಾನಸಭೆಗೆ ಕಳುಹಿಸಬೇಕು . ಆಗಲೇ ನಗರ ಅಭಿವೃದ್ಧಿ , ಹಾಗೂ ಪ್ರತಿಯೊಂದು ಸಮಾಜದಲ್ಲಿ ,  ಶಾಂತಿ ಹಾಗೂ ಕೋಮು ಸೌಹಾರ್ದತೆಯನ್ನು  ಕಾಪಾಡುವುದರಲ್ಲಿ ಮಹತ್ವವಾದ ಕಾರ್ಯವನ್ನು ಜನಸಾಮಾನ್ಯರು ಮಾಡಬೇಕು   .


 ವಕ್ಫ್ ಆಸ್ತಿ ಅಂದರೇನು  : 

ಭಾರತ ದೇಶದ ಮುಸಲ್ಮಾನ ರಾಜ ಮಹಾರಾಜರು ದೇಶ ಸ್ವಾತಂತ್ರ್ಯ ಕ್ಕಿಂತ ಮುಂಚೆ ಹಾಗೂ  ಸ್ವಾತಂತ್ರ್ಯ ಆದ ನಂತರ ತನ್ನ ಸಾಮ್ರಾಜ್ಯದ ಬಹುಪಾಲ ಆಸ್ತಿಯನ್ನು ದೇಶದ ಖಜಾನೆಗೆ ಕೊಟ್ಟ ನಂತರ ಉಳಿದ ಆಸ್ತಿ ಮುಸ್ಲಿಂ ಸಮುದಾಯಕ್ಕೆ ದೇಣಿಗೆಯಾಗಿ ದಾನದ ರೂಪದಲ್ಲಿ ಕೊಟ್ಟಂತ ಆಸ್ತಿಗೆ ವಕ್ಫ್ ಆಸ್ತಿ ಅನ್ನುತ್ತಾರೆ . ಈ ದೇಶದ ಮುಸ್ಲಿಂ ರಾಜ ಮಹಾರಾಜರು ಹೋದ ನಂತರ ತಮ್ಮ ಆಸ್ತಿಗಳನ್ನೆಲ್ಲ ಈ ದೇಶದ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಅವರ ಸಾಮಾಜಿಕ ಧಾರ್ಮಿಕ ಶಿಕ್ಷಣ ಹಾಗೂ ಇನ್ನಿತರ ಕೆಲಸಗಳಿಗೆ ಈ ದಾನದ ರೂಪದಲ್ಲಿ ಕೊಟ್ಟಿರುವಂತಹ ಆಸ್ತಿಯೂ ಸಹಾಯಕವಾಗಬಹುದು ಅನ್ನುವ ನಿಟ್ಟಿನಲ್ಲಿ, ವಕ್ಫ್ ಬೋರ್ಡ್ ರಚನೆಯಾಗಿರುತ್ತದೆ. ಈ ಆಸ್ತಿಯೂ ಯಾವ ಸರ್ಕಾರದ ಆಸ್ತಿ ಅಲ್ಲ   , ಆದರೆ ಕೇವಲ ಈ ಆಸ್ತಿಯನ್ನು ಸರ್ಕಾರದ ಅಧೀನದಲ್ಲಿ ಒಳಪಟ್ಟಿರುತ್ತೆ ವಿನಹ ಇದು ಸರ್ಕಾರದ ಆಸ್ತಿಯಲ್ಲ . ರಾಜ್ಯ ಸರ್ಕಾರದಲ್ಲಾಗಲಿ ಕೇಂದ್ರ ಸರ್ಕಾರದ ಆಗಲಿ ಈ ವಕಪ್ ಆಸ್ತಿಗಳು ಕೇವಲ   ದೇಕ್ರೂಖಿ ಅಂದ್ರೆ ನೆದುರು ಅಥವಾ ಕಣ್ಗಾವಲು ಇಡಬಹುದು  . ಈ ಆಸ್ತಿಯೂ ಮುಸ್ಲಿಂ ಒಬ್ಬ ವ್ಯಕ್ತಿ ಒಂದು ಸಂಘಟನೆಗೆ ಒಳಪಟ್ಟಿರುವುದಿಲ್ಲ ಇಡೀ ಭಾರತೀಯ ಮುಸ್ಲಿಂ ಸಮುದಾಯದ ಜನರ ಅಭಿವೃದ್ಧಿಗಾಗಿ ಇರುತ್ತದೆ  . ಇದೇ ತರಹ ಹಿಂದೂ ಧರ್ಮದಲ್ಲಿ ದತ್ತಿ ಕಾಯ್ದೆ ಕೂಡ ಇದೆ   .


 ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ ಬಸವನಗೌಡ್ ಪಾಟೀಲ್ ಯತ್ನಾಳ್  ಅವರ ಬಾಯಿ ಇದ್ಯೋ ? ಬಚ್ಚಲು ಇದಿಯೋ ?ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ , ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ನಿಂದಿಸಿ , ಅಶ್ಲೀಲ ಪದವನ್ನು ಬಳಿಸಿ ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ . ಈ ವಿಷಯದ ಸಂಬಂಧಪಟ್ಟಂತೆ ವಿಜಯಪುರ್ ನಗರದ ಪೋಲಿಸ್ ಠಾಣೆಯಲ್ಲಿ fir ದಾಖಲಾಗಿರುತ್ತದೆ  .

ಭಾರತ ದೇಶದಲ್ಲಿ ಇರುವಂತ ಆಯಾಧರ್ಮಗಳಲ್ಲಿ ಬೆಂಕಿ ಹಚ್ಚುವ ಕೆಲಸ ಜನಪ್ರತಿನಿಧಿಗಳೇ ಮಾಡುತ್ತಿದ್ದರೆ ,ದೇಶಕ್ಕ ಗಂಡಾಂತರ ಬರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ   ,  ಜನಪ್ರತಿನಿಧಿಗಳು ಕೇವಲ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಇರಬೇಕು ಜೊತೆಗೆ ಎಲ್ಲ ಸಮುದಾಯದ ಜನರ ಸಮಸ್ಯೆಗಳನ್ನು ಆಲಿಸಿ ಬೇಕು ನಂತರ ಅದನ್ನು ಬಗೆಹರಿಸು ವಂತಹ ಕೆಲಸಗಳನ್ನು ಮಾಡಬೇಕಾಗಿರುವುದು   ಜನಪ್ರತಿನಿಧಿಗಳ ಜವಾಬ್ದಾರಿಯಾಗಬೇಕು ಹೊರತು  , ಹಿಂದೂ ಮುಸ್ಲಿಂ  ಅಂತ ನೀಚ ರಾಜಕಾರಣಿ ಪ್ರತಿನಿಧಿ  ಆಗಬಾರದು .

ಇಂತಹ ನಿಚ್ ಕೋಮು ದ್ವೇಷಿ ರಾಜಕಾರಣಿಗಳು ಇತಿಹಾಸವನ್ನು ತಿರುಚಿ , ಕೋಮು ದ್ವೇಷದ ಭಾಷಣಗಳಲ್ಲಿ ರಾಜ್ಯದ ಜನರನ್ನು ಮರಳು ಮಾಡಿ ,ತನ್ನ ರಾಜಕೀಯ ಬೆಳೆಯನ್ನು ಬೆಳೆಯುವುದೇ ಇವರ ಮುಖ್ಯ ಉದ್ದೇಶವಾಗಿರುತ್ತದೆ . ಇವರ ಭಾಷಣಗಳಲ್ಲಿ ಸಿಳ್ಳೇ ಚಪ್ಪಾಳೆಗಳು ತೀರ ಸಾಮಾನ್ಯ, ಇನ್ನೂ ಇವರ ಚಿಲ್ಲರೆ ದ್ವೇಷ ರಾಜಕೀಯ ಮಾಡುವುದರ ಮೂಲಕ ನಮ್ಮನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನುವುದನ್ನು  ಜನಸಾಮಾನ್ಯರು  ಅರಿತುಕೊಳ್ಳಬೇಕಾಗಿದೆ  , 

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಶಾಂತಿ ಕೋಮುಸೌಹಾರ್ದದಿಂದ ಅನ್ಯೂನ್ಯವಾಗಿ ,ಒಬ್ಬರೊಬ್ಬರ ಜೊತೆ ಬಾಳಿದರೆ ಮಾತ್ರ ದೇಶ ಹಾಗೂ ರಾಜ್ಯ ಉನ್ನತ ಮಟ್ಟದಲ್ಲಿ ಹೋಗಬಹುದು ಅನ್ನೋದು ಎರಡು ಮಾತಿಲ್ಲ  .


ಲೇಖನ : 
ಮಹೆಬೂಬ್ ಎಂ ಬಾರಿಗಡ್ಡಿ

No comments:

Post a Comment