Friday, October 4, 2024

ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಸ್ವಾಗತಿಸಲು ತಾಲೂಕ ಆಡಳಿತದಿಂದ ಪೂರ್ವಭಾವಿ ಸಭೆ  : 
 ಬಾಗಲಕೋಟೆ /  ರಬಕವಿ - ಬನಹಟ್ಟಿ  : ಮಂಡ್ಯದಲ್ಲಿ ಜರುಗಲಿ ರುವ 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರೆಲ್ಲರೂ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ರಾಜ್ಯದ ತುಂಬೆಲ್ಲ ಸಂಚರಿಸುತ್ತಿದ್ದು , ಅಕ್ಟೋಬರ್ 6 ರಂದು ಮುಂಜಾನೆ ಮುಂಜಾನೆ ಆಗಮಿಸಲಿದ್ದು, ಕಾರಣ ರಬಕವಿ ಬನಹಟ್ಟಿ ತಾಲೂಕ ಆಡಳಿತ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು . ಈ ಭವ್ಯ ಜ್ಯೋತಿ ಹೊತ್ತ ರಥ ಸ್ವಾಗತಿಸಲು ತಾಲೂಕ ಆಡಳಿತವೂ ಸಜ್ಜಾಗಿದೆ. ರಬಕವಿ ನಗರದ ಕಂಠಿ ಬಸವೇಶ್ವರ ಜ್ಯೋತಿ ಹೊತ್ತ ರಥ ಸ್ವಾಗತ ಮಾಡಿಕೊಂಡು  ನಗರದ ಹೊಸ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗಪುರ ನಾಕಾ , ಹಜಾರೆ ಸರ್ಕಲ್ , ಹೊಸೂರ್ ಮಾರ್ಗವಾಗಿ ಬನಹಟ್ಟಿ ನಗರಕ್ಕೆ ಆಗಮಿಸಲಿದ್ದು , ನಗರದ ಎಸ್ ಆರ್ ಎ ಕಾಲೇಜ್ ಮೂಲಕ ಮಹಾತ್ಮ ಗಾಂಧಿ ವೃತ ದಿಂದ ಹೊರಟು ವೈಭವ  ಚಿತ್ರಮಂದಿರದಿಂದ ನಗರದ ನೂಲಿನ ಗಿರಣಿ ವರೆಗೆ ನಡೆಯಲಿದೆ ಎಂದು ರಬಕವಿ ಬನಹಟ್ಟಿ ತಾಲೂಕ ಉಪ -ತಹಸಿಲ್ದಾರ್ ಎಸ್ ಬಿ   ಕಾಂಬಳೆ   ಹೇಳಿದರು.

 ಈ ಪೂರ್ವಭಾವಿಯ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕ ತಹಸಿಲ್ದಾರರಾದ ಎಸ್ ಬಿ ಕಾಂಬಳೆ ಸರ್ ರಬಕವಿ ಬನಹಟ್ಟಿ ನಗರಸಭೆ ಕಮಿಷನರ್ ಹಾಗೂ ಶಾಲಾ ಕಾಲೇಜುಗಳ ಶಿಕ್ಷಕ - ಶಿಕ್ಷಕಿಯರು , ಮತ್ತು ರಬಕವಿ ಬನಹಟ್ಟಿ ಆಟೋ ಚಾಲಕರ ಅಧ್ಯಕ್ಷರು ಹಾಗೂ ಚಾಲಕರು ಇನ್ನು ಅನೇಕರು ಇದ್ದರು . 


 ಬಾಕ್ಸ್ ಹಾಕಿ

ಕನ್ನಡ ಜ್ಯೋತಿ ಹೊತ್ತ ಕನ್ನಡದ ರಥ್ ಸ್ವಾಗತಿಸಲು ಕನ್ನಡಪರ ಸಂಘಟನೆಗಳಿಗೆ ಕರೆಯದೆ ಇರುವುದು ಖಂಡನೀಯ  : ಕರವೇ ಬಿ ಎಸ್ ಜಮಾದಾರ್  


 ಕನ್ನಡದ ಜ್ಯೋತಿ ಹೊತ್ತ ಕನ್ನಡದ ರಥ ಸ್ವಾಗತಿಸಲು ನಗರದ ಕನ್ನಡ ಪರ ಹೋರಾಟಗಾರರ  ಸಂಘಟನೆಗಳಿಗೆ ಪೂರ್ವಭಾವಿ ಸಭೆಗೆ  ಕರೆಯದೆ ಇರುವ ತಾಲೂಕ ತಹಸಿಲ್ದಾರ್ ಅನುಪಸ್ಥಿತಿಯಲ್ಲಿ  ತಾಲೂಕ ಉಪ ತಹಶಿಲ್ದಾರರಾದ ಎಸ್ ಬಿ ಕಾಂಬಳೆ ಅವರ ನಡೆ ಖಂಡನೀಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ( ನಾರಾಯಣಗೌಡರ ಬನ  ) ತಾಲೂಕ ಕಾರ್ಯದರ್ಶಿ, ಬಿಎಸ್ ಜಮಾದಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು .

 ವರದಿ ಮಹಬೂಬ್ ಎಂ ಭಾರಿಗಡ್ಡಿ

No comments:

Post a Comment