Thursday, May 30, 2024

.ಪತ್ರಕರ್ತರ ಅಂದರೂ ಕೂಡ ದಂಡ ಹಾಕಿದ ದಕ್ಷ ಖಡಕ್ ಪೊಲೀಸ್ ಠಾಣಾಧಿಕಾರಿ , ಗಿರಿ ಉಪ್ಪಾರ್


 ಈಗಿನ ಕಾಲದಲ್ಲಿ ಪೊಲೀಸ್ ಅಧಿಕಾರಿಗಳಾಗಲಿ ಮತ್ತು ಬೇರೆ ಇಲಾಖೆ ಅಧಿಕಾರಿಗಳ ಆಗಲಿ ಅವರಿಗೆ ಪತ್ರಕರ್ತರಂದರೆ ಸ್ವಲ್ಪ ಭಯ ಹೆದರಿಕೆ ಇದ್ದೇ ಇರುತ್ತದೆ ಏಕೆಂದರೆ ತಾವು ಸರ್ಕಾರಿ ಹುದ್ದೆಯಲ್ಲಿ ಇರುವಾಗ ಪತ್ರಕರ್ತರು ಯಾವುದೇ ವಿಡಿಯೋ ಆಗಲಿ ಫೋಟೋಸ್ ಆಗಲಿ ತೆಗೆದುಬಿಟ್ಟು ಪ್ರಿಂಟ್ ಮೀಡಿಯಾದಲ್ಲಾಗಲಿ ಎಲೆಕ್ಟ್ರಿಕ್ ಮೀಡಿಯಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಾಗಲಿ ಸುದ್ದಿಗಳನ್ನು ಮಾಡಿದರೆ , ನಮ್ಮ ಹುದ್ದೆಗೆ ಕಳಂಕ ತರಬಹುದು ಏನೋ ಅನ್ನುವಂತ ಭಯ ಇದ್ದೇ ಇರುತ್ತದೆ   . ಆದರೆ   ಇಲ್ಲೊಬ್ಬ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯ ಮೇಲೆ ಹಾರೂಗೇರಿ ಕ್ರಾಸ್ ಹತ್ತಿರ ಕೆಲವು ಪೊಲೀಸ್ ಸಿಬ್ಬಂದಿ ಜೊತೆ ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ  , ಎಲ್ಲ ದ್ವಿ ಚಕ್ರ ವಾಹನದ ಸವಾರರಿಗೆ ಹಾಗೂ ನಾಲ್ಕು ಚಕ್ರದ ಸವಾರರಿಗೆ ಕೂಡ ವಾಹನದ ಕಾಗದ ಪತ್ರಗಳನ್ನು ತಪಾಸಣೆ ಮಾಡಿ ದಂಡವನ್ನು ವಿಧಿಸುತ್ತಿದ್ದರು . ಅದೇ ರಾಜ್ಯ ಹೆದ್ದಾರಿ ಬನಹಟ್ಟಿಯಿಂದ ಚಿಂಚಲಿ ಪಟ್ಟಣಕ್ಕೆ ಮದುವೆಗೆ ಎಂದು ಹೋಗುತ್ತಿರುವ ನಿಷ್ಠಾವಂತ ಪತ್ರಕರ್ತ ಅವರ ಸ್ಕೂಟಿಯನ್ನು ಸೈಡ್ ಹಾಕಿದರು ಪತ್ರಕರ್ತರಿಗೆ ಒಂದು ಧೈರ್ಯ ಇದ್ದೇ ಇರುತ್ತದೆ ಏನೆಂದರೆ ಪತ್ರಕರ್ತರ ಹತ್ತಿರ ಗುರುತಿನ ಐಡಿ ಕಾರ್ಡ್ ತೋರಿಸಿದರೆ ಸಾಕು ಪೊಲೀಸರು ಬಿಟ್ಟೆ ಬಿಡುತ್ತಾರೆ ಅಂತ ನಂಬಿಕೆ   ಆದರೆ , ಅದು ಹಾಗೆ ಆಗಲಿಲ್ಲ  . ಆದ್ದರಿಂದ ಠಾಣಾಧಿಕಾರಿ  ಹತ್ತಿರ ಹೋಗಿ ಸರ್ ನಾನು ಪತ್ರಕರ್ತ ಮಹಿಬೂಬ ಬಾರಿಗಡ್ಡಿ ಬನಹಟ್ಟಿ ನಗರದವನು ಅಂತ ಪರಿಚಯ ಮಾಡಿಕೊಂಡಾಗ ,  ಠಾಣಾಧಿಕಾರಿ ಉಪ್ಪಾರ ರವರು ನೀವೇ ನಾಲ್ಕು ಜನಕ್ಕೆ ಒಳ್ಳೆಯ ಮಾತುಗಳು ಹೇಳುವವರೇ ನೀವೇ ನಿಮ್ಮ ಸೇಫ್ಟಿಯ ಸಲುವಾಗಿ ಹೆಲ್ಮೆಟ್ ಹಾಕಿಲ್ಲ ಅಂತ ತಿಳಿ ಹೇಳಿದರು  . ನಾವು ನಿಮ್ಮ ಸಲುವಾಗಿ ಒಳ್ಳೆಯದನ್ನು ಬಯಸುತ್ತೇವೆ ಅಂತ ಹೇಳಿ ಪತ್ರಕರ್ತರ ಸ್ಕೂಟಿ ಹತ್ತಿರ ಬಂದು ಗಾಡಿ ನಂಬರ್,  ಮೊಬೈಲ್ ನಂಬರ್ , ಕೇಳಿ ಆನ್ ಲೈನ್  500 ಪಾವತಿ ಮಾಡಿಬಿಟ್ಟರು. ಎಷ್ಟು ಕೇಳಿಕೊಂಡರು ಖಡಕ್ ಠಾಣಾ ಧಿಕಾರಿ ಗಿರಿ ಉಪ್ಪಾರ್ ಅವರು ಒಳ್ಳೆಯ ಮಾತುಗಳನ್ನೇ ಆಡಿದರು.

  ಹಾರೋಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಮೂಲತ : ಬನಹಟ್ಟಿ ನಗರದವರು ಅಂತ ನನಗೆ ಮೊದಲೇ ಗೊತ್ತಿದ್ರೂ ಠಾಣಾ ಅಧಿಕಾರಿ ಉಪ್ಪಾರ್  , ನಾನು ಕೂಡ ಬನಹಟ್ಟಿ ನಗರದವನು ಅಂತ ಪರಿಚಯ ಮಾಡಿಕೊಂಡರು , ಠಾಣಾಧಿಕಾರಿ ಹಾಗೂ ಪತ್ರಕರ್ತರು ಒಂದೇ ಊರಿನವರು ಅಂತ ಪತ್ರಕರ್ತರಿಗೆ ಹೆಲ್ಮೆಟ್ ಇಲ್ಲದೆ , ಬಿಡಬೇಕಾಗಿತ್ತು , 
 ಆದರೆ ನಿಷ್ಠಾವಂತ ಖಡಕ್ ಠಾಣಾಧಿಕಾರಿ ತಮ್ಮ ಹುದ್ದೆಯ ಕೆಲಸವು ಸಂಪೂರ್ಣವಾಗಿ ನಿಭಾಯಿಸಿದರು .

 ಇದೇ ರೀತಿಯಾಗಿ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ,  ತಾವುಗಳು ಹಾರೂಗೇರಿ ಪಟ್ಟಣದ ಹಾಗೂ ನೆರೆಯ ಹಳಿಗಳಲ್ಲಿ ಅನೈತಿಕ ಚಟುವಟಿಕೆಯನ್ನು ಬಹಳಷ್ಟು ನಡೆಯುತ್ತಿರುತ್ತದೆ , ಇಟ್ಟಂಗಿ ಭಟ್ಟಿ ಗಳ ಹತ್ತಿರ ಪಾನ್ ಶಾಪ್ಗಳಲ್ಲಿ ಸರಾಯಿ ,    ಮಾವಾ, ಮಟಕಾ, ಅನ್ನಭಾಗ್ಯ ಖದೀಮರು , ಅನೈತಿಕ ಮರಳುಗಾರಿಕೆ  ಇನ್ನು ಹತ್ತು ಹಲವಾರು ಅನೈತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ  ಇದಕ್ಕೆ ನೀವು ಕಡಿವಾಣ ಹಾಕಿದರೆ ಮಾತ್ರ ಹೆಲ್ಮೆಟ್ ಇಲ್ಲದೆ ನಿಷ್ಠಾವಂತ ಪತ್ರಕರ್ತರಿಗೆ ದಂಡ ಕಟ್ಟಿದ  500 ಬೆಲೆ ಬರುತ್ತದೆ   ಅನ್ನುವುದು ನನ್ನ ನಂಬಿಕೆ .  

 ಯಾರೇ ಆಗಲಿ , ಪತ್ರಕರ್ತರ ಆಗಲಿ ಕಾನೂನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ . ನಾವು ಯಾವುದೇ ಕಡೆ ಬೈಕ್ ಪ್ರಯಾಣ ಬೆಳೆಸಿದರೆ ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಲೇಬೇಕು . 
 ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಒಬ್ಬ ಪತ್ರಕರ್ತರ ಜೊತೆ ಹೇಗೆ ವರ್ತಿಸಬೇಕು  , ಹೇಗೆ ಮಾತನಾಡಬೇಕು ಅನ್ನುವುದನ್ನು , ಅವರ ಮಾತಿನ ದಾಟಿಯಿಂದಲೇ ಅವರೊಬ್ಬ ನಿಷ್ಠಾವಂತ ಖಡಕ್ ಅಧಿಕಾರಿ ಎಂದು ಗೊತ್ತಾಗುತ್ತದೆ . ಇಂತಹ ನಿಷ್ಠಾವಂತ ಖಡಕ್ ಅಧಿಕಾರಿ ನಮ್ಮ ಬನಹಟ್ಟಿ ನಗರದವರು ಇಂತಹ ಪೊಲೀಸ್ ಠಾಣಾಧಿಕಾರಿಯಾಗಿರುವುದು ನಮ್ಮ ಹೆಮ್ಮೆಯ ಸಂಗತಿ ಎಂದು ಪತ್ರಕರ್ತ ಮೆಚ್ಚಿಕೊಂಡರು . 

 ಲೇಖನ : 
ಮಹೆಬೂಬ್ ಬಾರಿಗಡ್ಡಿ ರಬಕವಿ ಬನಹಟ್ಟಿ ತಾಲೂಕ ವರದಿಗಾರರು ಹಾಗೂ ಲೇಖಕರು

Saturday, May 25, 2024

ಹೋರಾಟಗಾರತಿ ಜಯಶ್ರೀ ಗುರನ್ನವರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಜ್ಯ ನೇಕಾರ ಸೇವಾ ಸಂಘ*

*ಹೋರಾಟಗಾರತಿ ಜಯಶ್ರೀ ಗುರನ್ನವರ್  ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಜ್ಯ ನೇಕಾರ ಸೇವಾ ಸಂಘ* 

 ಬಾಗಲಕೋಟ / ರಬಕವಿ ಬನಹಟ್ಟಿ : ತಾಲೂಕಿನ  ಮಹಾಲಿಂಗಪುರ್     ಪಟ್ಟಣದಲ್ಲಿ  ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ  ರೈತ ಸಂಘದ ಹೋರಾಟಗಾರತಿ ಜಯಶ್ರೀ ಗುರಣ್ಣನವರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು . 

 ಬೆಳಗಾವಿ ಜಿಲ್ಲೆಯವರಾದ ಇವರು  ಅಕಾಲಿಕ ಮರಣ ಹೊಂದಿದ್ದು  ,  ರೈತ ಸಂಘದ ಗಟ್ಟಿ ಧ್ವನಿಯಾಗಿದ್ದ ಮಹಿಳಾ ಹೋರಾಟಗಾರತಿ ರೈತರ,  ನೇಕಾರರ  , ಕಾರ್ಮಿಕರ ಅನೇಕ ಹೊರಾಟಗಳಲ್ಲಿ ಮುಂಚೂಣಿ ಯಲ್ಲಿ ಭಾಗವಹಿಸಿ ಅಧಿಕಾರಿಗಳನ್ನು  ಮತ್ತು ಸರಕಾರಗಳನ್ನು ಎಚ್ಚರಿಸಿ ಜನಸಾಮಾನ್ಯರಿಗೆ ನ್ಯಾಯದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ದಿಟ್ಟ ಹೋರಾಟಗಾರತಿ ಯನ್ನು ಕಳೆದುಕೊಂಡಿದ್ದು ಸಂಘಟನಾ ಶಕ್ತಿ ಯನ್ನು  ಕುಂದಿದಂತಾಗಿದೆ ಎಂದು ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಅಳಲು ತೋಡಿಕೊಂಡರು.

 ಈ ಸಂದರ್ಭದಲ್ಲಿ 
ಶಿವಲಿಂಗ ಜಿ ಟಿರಕಿ ಸಂಗಪ್ಪ ಹಳ್ಳೂರ ರಾಜೇಂದ್ರ ಮಿರ್ಜಿ , ಬಂದೇನಮಾಜ್ ಪಕಾಲಿ , ಸಂಗಮ್ ಲಕ್ಷ್ಮಣ ಬ್ಯಾಳಿ ರಾಜು ಕುಕ್ಕುಗೋಳ, ಮಲ್ಲು ಕಾಗಿ , ಸಂಗಮೇಶ ಗಿರಮಲ್ಲ ಕೈಸೋಲಗಿ ಇನ್ನೂ ಅನೇಕರು ಇದ್ದರು. 

 ವರದಿ: 
 ಮಹಬೂಬ್ ಎಂ ಬಾರಿಗಡ್ಡಿ

ನೀರಿನ ಟ್ಯಾಂಕ್ ಒಂದರಲ್ಲಿ ಬಿದ್ದ ಆರು ವರ್ಷದ ಮಗುವಿನ ಪ್ರಾಣ ಕಾಪಾಡಿದ ಯುವಕ ಅಸದದುಲ್ಲಾ




 *ಬಾಗಲಕೋಟೆ/*ರಬಕವಿ ಬನಹಟ್ಟಿ* : 

 ಈಗಿನ ಕಾಲದ ಮಕ್ಕಳು ತಮ್ಮದೇ ಆದ ಮೊಬೈಲ್ ಫೋನಿನ ಜಗತ್ತಿನಲ್ಲಿ ಇರುತ್ತಾರೆ, ಆದರೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಭಾರಪೇಟ ಗಲ್ಲಿಯಲ್ಲಿ  ಅಸದದುಲ್ಲಾ ಎಂಬ ಯುವಕ ತನ್ನ ಪ್ರಾಣವನ್ನು ಲೆಕ್ಕಿಸದೆ 6 ವರ್ಷದ ಮಾಹೆರಾ ಎಂಬ ಹೆಣ್ಣಮಗು  ಆಟ ಆಡುತ್ತಿರುವಾಗ  ನೀರಿನ ಟ್ಯಾಂಕ್ ಒಂದರಲ್ಲಿ  ಬಿದ್ದು ನೀರು ಕುಡಿದು ಪ್ರಜ್ಞೆಯನ್ನು ತಪ್ಪಿತ್ತು.  ಕೂಡಲೇ ನೋಡಿದ ಯುವಕನು ಆಕೆಯನ್ನು ಕೈಯಲ್ಲಿ ಗಾಬರಿ ಗೊಳ್ಳದೆ  ಎತ್ತಿಕೊಂಡು  ಹೋಗಿ ಸಮೀಪದ ಡೊರ್ಲೆ ಮಕ್ಕಳ ಆಸ್ಪತ್ರೆಗೆ  ದಾಖಲಿಸಿ  ,  ಮಗುವಿನ  ಪ್ರಾಣ ಉಳಿಸಿದ ಘಟನೆಯನ್ನು ನಡೆದಿದೆ.

  ಮಾಹೆರಾ ಅಬ್ದುರಜಾಕ ಇನಾಮ್ದಾರ್ ಎಂಬ 6 ವರ್ಷದ ಹೆಣ್ಣು ಮಗುವಿನ ಪ್ರಾಣವನ್ನು ಕಾಪಾಡಿದ ,  ಅಸದದ್ದುಲ್ಲಾ ಗದ್ಯಾಳ ಎಂಬ ಯುವಕನಿಗೆ  ಜಮಿಯತ್ ಎ ಉಲ್ಮಾ ಸಂಘಟನೆಯವರು ಕರೆದು ಇವರ ಕಾರ್ಯವನ್ನು ಮೆಚ್ಚಿ ,   ಸನ್ಮಾನ ಮಾಡಿದರು. 

 ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮೋಸಿನ್ಅಹಮದ್ ಗೋಕಾಕ್, ಮಾನವೀತೆಯ ಕೆಲಸ , ನಮ್ಮ ಸಮಾಜ ಹೆಮ್ಮೆ ಪಡುವ ಸಂಗತಿ  ಮೊದಲು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮನುಷ್ಯತ್ವ ಅಥವಾ ಮಾನವೀಯತೆ ಇಂದ್ ಜೀವನ ಸಾಗಿಸಬೇಕು ಎಂದು  ಮಹಮ್ಮದ್ ಪೈಗಂಬರ್ ರವರು ಹೇಳಿದ್ದಾರೆ ಎಂದು ಹೇಳಿದರು  . ಇಂತಹ ಕೆಲಸಕ್ಕೆ ನಾವು ಮೆಚ್ಚುಗೆ  ತಿಳಿಸುತ್ತೇವೆ.  ಕೇವಲ ಮುಸ್ಲಿಂ ಸಮಾಜ ಅಷ್ಟವಲ್ಲದೆ , ಯಾವುದೇ ಸಮಾಜವಿದ್ದರೂ ಇಂತಹ ಕೆಲಸ ಅಥವಾ ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕೆಂದು ಈಗಿನ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
 ಈ ಸಂದರ್ಭದಲ್ಲಿ 
 ಮೌಲಾನ ಮೋಸಿನ ಗೋಕಾಕ , ಗಪುರ ಮೌಲಾನ , ಕರವೇ ಗಜಸೇನೆ ತಾಲೂಕ ಅಧ್ಯಕ್ಷ ಮಹಮ್ಮದಹುಸೇನ್ ಲೆಂಗ್ರೆ ಯುವಕನ ತಂದೆ ಬಂದೆನಮಾಜ್ ಗದ್ಯಾಳ  ಇನ್ನೂ ಅನೇಕರು ಇದ್ದರು  .

ವರದಿ ಮಹಿಬೂಬ್ ಎಂ ಬಾರಿಗಡ್ಡಿ

Wednesday, April 24, 2024

ನೇಹಾ ಹಿರೇಮಠ್ ಬರ್ಬರ ಹತ್ಯೆ ಖಂಡಿಸಿ, ಕರವೇ ಗಜಸೇನೆ ಸಂಘಟನೆಯಿಂದ ಪ್ರತಿಭಟನೆ*



 *ಬಾಗಲಕೋಟೆ* / 

 *ರಬಕವಿ - ಬನಹಟ್ಟಿ :* 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ  ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವಳ ಹತ್ಯೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ತಾಲೂಕ ಘಟಕ ವತಿಯಿಂದ ಭಾರಿ ಪ್ರತಿಭಟನೆ ನಡೆಸಿದರು.

 ನಗರದ ಮಹಾತ್ಮ ಗಾಂಧಿ ವೃತ ಹತ್ತಿರ ಕರವೇ ಗಜ ಸೇನೆಯ ಕಾರ್ಯಕರ್ತರು  ಭಾರಿ ಪ್ರತಿಭಟನೆ ನಡೆಸಿ   ಆಕ್ರೋಶ ವ್ಯಕ್ತಪಡಿಸಿದಲ್ಲದೆ , ಕೆಲವು ಕಾಲ ರಸ್ತೆ  ತಡೆದು  ವಾಹನ ಸಂಚಾರವನ್ನು ಬಂದು ಮಾಡಿದ್ದರು.

  ಈ ಪ್ರತಿಭಟನೆಯ ಸಂದರ್ಭದಲ್ಲಿ   ಮೌಲಾನಾ ಮೋಹಸಿನ್ಅಹಮದ್ ಗೋಕಾಕ್ ಮಾತನಾಡಿ , ಹುಬ್ಬಳ್ಳಿಯಲ್ಲಿ ನಡೆದಂತಹ ನೇಹಾ ಹಿರೇಮಠ ಅವರ  ಭೀಕರ ಹತ್ಯವನ್ನು ಖಂಡಿಸುತ್ತೇವೆ .  ಇಂತಹ ಘಟನೆ ನಿಜಕ್ಕೂ ದುರಂತ ,  ಇಂತಹ ಪರಿಸ್ಥಿತಿಯಲ್ಲಿ ನೆಹ ಹಿರೇಮಠ ಅವರ ತಂದೆ ರಂಜನ್ ಹಿರೇಮಠ ಅವರ ದುಃಖದಲ್ಲಿ ನಾವು ಸಹ ಭಾಗಿಯಾಗುತ್ತೇವೆ . ಹಾಗೂ ಎಂದೆಂದಿಗೂ ನಿಮ್ಮ ಜೊತೆ ನಾವು ಇರಲು ಬಯಸುತ್ತೇವೆ ಎಂದು ಹೇಳಿದರು . ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ  ಪೃವೃತ್ತರಾಗಬೇಕು.  ಈ ಘಟನೆ ಒಂದು ಎರಡು ಅಲ್ಲ ರುಕ್ಸಾನಾ ಎಂಬ ಯುವತಿಯನ್ನು ಕೂಡ ಸುಟ್ಟು ಹಾಕಿದ ಆರೋಪಿ ಪ್ರದೀಪ್, ಇದೇ ರೀತಿ ಹಿಂದೆ ಉಡುಪಿಯಲ್ಲಿ ನಡೆದ ಘಟನೆಯಲ್ಲಿ ನಾಲ್ಕು ಜನ ಮುಸ್ಲಿಂ ಅಮಾಯಕರನ್ನು ಬರ್ಬರವಾಗಿ ಹತ್ಯಮಾಡಿದ ಆರೋಪಿ ಪ್ರವೀಣ್ ಚೌಗುಲೆ ಇವನನ್ನು ಕೂಡ ಗಲ್ಲಿಗೇರಿಸಬೇಕು ಎಂದು ಹೇಳಿದರು  . ನಡೆದಂತ ಘಟನೆ ಸರ್ಕಾರವು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಇಲ್ಲವಾದರೆ ಕಾನೂನಿನ ಭಯ  ಇರುವುದಿಲ್ಲ . ಹತ್ಯಮಾಡಿದವರು ಯಾರೇ ಆಗಲಿ ಫಯಾಜ್  ಆಗಿರಲಿ  ,  ಅವರಪ್ಪನೇ ಆಗಿರಲಿ,  ಇಂತಹ ಅಮಾನುಷ ಬರ್ಬರ ಹತ್ಯೆ ಸಾರ್ವಜನಿಕರ  ಎಲ್ಲರ ಕಣ್ಣ ಮುಂದೆ ನಡೆಯುತ್ತಿರುವಾಗ  ತಮಾಷೆನ್ನಾಗಿ ನೋಡುತ್ತ ಮಗ್ನರಾಗಿದ್ರು .  ಈ ನೋಡುವಂತಹ  ಯುವಕರನ್ನು ಹೇಳಲು ಇಷ್ಟಪಡುತ್ತೇನೆ  ಇಂತಹ ಬರ್ಬರ ಅಮಾನುಷ ಹತ್ಯ ನಡೆಯುತ್ತಿರುವ ಸಂದರ್ಭದಲ್ಲಿ ನೀವು ಕೂಡ ಅದು ತಡೆಯಬಹುದಾಗಿತ್ತು  ಎಂದು ವಿಷಾದ ವ್ಯಕ್ತಪಡಿಸಿದರು. ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ವೇದಿಕೆ ಮುಖಾಂತರ  ಮನವಿ ಮಾಡಿಕೊಳ್ಳುವುದು ಇಷ್ಟೇ ನೇಹಾ ಹಿರೇಮಠ ಅವರ ಆರೋಪಿ ಫಯಾಜ್ ಆಗಲಿ , ಈ ಹಿಂದೆ ಉಡುಪಿಯಲ್ಲಿ ನಡೆದಂತಹ ಘಟನೆಯ ಆರೋಪಿ  ಪ್ರವೀಣ್ ಚೌಗಲೇ ಆಗಲಿ  ಹಾಗೂ ಪ್ರದೀಪ್ ಅನ್ನುವಂತ ಆರೋಪಿ ಈ ಎಲ್ಲಾ ಆರೋಪಿಗಳನ್ನು ಕೂಡಲೇ ಗಲ್ಲು ಶಿಕ್ಷೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು . 

 ಈ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ರಬಕವಿ ಬನಹಟ್ಟಿ ತಾಲೂಕ ತಹಶೀಲ್ದಾರ್ ಅವರಿಗೆ ಕರವೇ  ಗಜಸೇನೆ ವತಿಯಿಂದ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ರಬಕವಿ ಬನಹಟ್ಟಿ,  ಮುಸ್ಲಿಂ ಧಾರ್ಮಿಕ ಮೌಲ್ವಿಗಳು ಕೂಡ ಸಾತ ನೀಡಿದ್ದು ವಿಶೇಷವಾಗಿತ್ತು. 
 ಈ ಸಂದರ್ಭದಲ್ಲಿ 
ಕರವೇ ಗಜಸೇನೆ  ಜಿಲ್ಲಾಧ್ಯಕ್ಷ  ಚನ್ನಪ್ಪ ಪಾಟೀಲ ,  ರಬಕವಿ ಬನಹಟ್ಟಿ ತಾಲೂಕು ಅಧ್ಯಕ್ಷ  ಮಹಮ್ಮದ್ ಹುಸೇನ್ ಲೆಂಗ್ರೆ , ಶಹನೂರು ಗೋಲಬಾವಿ , ಮೌಲಾನಾ  ಮೋಸಿನಅಹಮದ್  ಗೋಕಾಕ , ಯುನುಸ ನಿಪ್ಪಾಣಿ, ಬುಡನ ಜಮಾದಾರ ,  ಶಾನೂರ ಮಾಲದಾರ ,  ಶ್ರೀ ಮತಿ ಅನುರಾಧಾ ಶಿರಗುಪ್ಪಿ ,  ಶ್ರೀ ಮತಿ ರೇಣುಕಾ ಗಾಡಿವಡ್ಡರ ,  ಮೌಲಾನ ಹಸನ ಝಾರೆ  , ಇರ್ಷಾದ ಮೊಮಿನ , ಇನ್ನು ಹಲವಾರು ಮುಖಂಡರುಗಳು ಹಾಗೂ ಕರವೇ ಗಜಸೇನೆ ಕಾರ್ಯಕರ್ತರು ಹಾಗೂ ಯುವಕರು, ಮಹಿಳೆಯರು. ಇನ್ನೂ ಅನೇಕ  ಸಾತ್ ನೀಡಿದರು . 

 ಸಂಘಟನೆ ಕಾರ್ಯಕರ್ತರು   ಸಮಾಜ ಹಿರಿಯರು ತಾಯಂದಿರು ಮಠಾಧೀಶರು ಭಾಗವಹಿಸಿದ್ದರು .

 ವರದಿ : 
ಮಹಿಬೂಬ ಎಂ ಬಾರಿಗಡ್ಡಿ

Thursday, April 11, 2024

ಸಂಭ್ರಮದ ಹಬ್ಬ ಈದ ವುಲ್ ಫಿತರ್ ಆಚರಣೆ , ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಮೌಲಾನಾ ಮೊಹಮ್ಮದ್ ಝುಬೇರ್ ನಾಯಕ್ ವಾಡಿ*


 *ಬಾಗಲಕೋಟೆ / ರಬಕವಿ ಬನಹಟ್ಟಿ :* 

ಮುಸ್ಲಿಮರ ಪವಿತ್ರ ತಿಂಗಳುಗಳಲ್ಲಿ ರಂಜಾನ್ ತಿಂಗಳು ಬಹಳ ಮುಖ್ಯವಾದದ್ದು , ವಿಶ್ವಾದ್ಯಂತ ಇಡೀ ತಿಂಗಳು ರೋಜಾ ಉಪವಾಸ , ಸೂರ್ಯ ಮುಳುಗಿದ ಮೇಲೆ ಆಹಾರ ಸೇವನೆ , ದಾನ ಧರ್ಮ ಈ ಪವಿತ್ರ ತಿಂಗಳಲ್ಲಿ ವಿಶೇಷವಾಗಿರುತ್ತದೆ . ಈ ಪವಿತ್ರ ತಿಂಗಳಲ್ಲಿ 30 ದಿನ ರೋಜೆ ಉಪವಾಸ ಮುಗಿದ ಮರು ದಿನವೇ ಈದ್ ಉಲ್ ಫಿತರ್ ಹಬ್ಬ , ಇವತ್ತು ಗುರುವಾರ ಇಡೀ ರಾಜ್ಯದ್ಯಂತ ಸಂಭ್ರಮಾ ಸಡಗರದೊಂದಿಗೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಲಕ್ಷ್ಮೀನಗರದ ಅರೇಬಿಕ್ ಶಾಲಾ ಅವರಣದ ಈದ್ಗಾ ಮೈದಾನದಲ್ಲಿ ಅತಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು . 

 ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನ ಮೊಹಮ್ಮದ್ ಜುಬೇರ್ ನಾಯಕ್ ವಾಡಿ , ಜಗತ್ತು ಹಾಗೂ ಈಗಿನ ಪರಿಸ್ಥಿತಿಯೂ ನಮಗೆ ಕೈಬೀಸಿ ಕರೆತಾ ಇದೆ ಮುಸ್ಲಿಮರೇ ನಿಮಗೆ ಬೇಕಾಗಿರುವುದು ನಿಮ್ಮ ದಿನನಿತ್ಯ ಜೀವನ ಶೈಲಿಗಳನ್ನು ಬದಲಿಸಬೇಕು ಮುಸ್ಲಿಮರಿಗೆ ಬೇಕಾಗಿರುವುದು ಅಲ್ಲಾಹನ ಆಜ್ಞೆ ಹಾಗೂ ಪೈಗಂಬರರ ತತ್ವ ಸಿದ್ಧಾಂತಗಳನ್ನು ಅವಳಿಸಿಕೊಂಡು ನಿಜವಾದ ಮುಸ್ಲಿಮರು ಆಗಬೇಕು ಹಾಗೂ ಈಗಿನ ಪರಿಸ್ಥಿತಿಯ ಸಂದರ್ಭದಲ್ಲಿ ನಮಗೆ ಅವಕಾಶ ಕೊಡಿ ಬಂದಿದೆ ನಿಜವಾದ ಮುಸ್ಲಿಮನಾಗಬೇಕೆಂದರೆ ನಮ್ಮ ನಡವಳಿಕೆ ನಮ್ಮ ಚಲನವನ, ವ್ಯವಹಾರ , ದಿನನಿತ್ಯದ ಜೀವನ ಶೈಲಿಗಳನ್ನು ಬದಲಿಸಬೇಕಾಗಿದೆ . ಇವತ್ತಿನ ದಿನಮಾನಗಳಲ್ಲಿ ಜಗತ್ತು ಇಸ್ಲಾಂ ಹಾಗೂ ಮುಸ್ಲಿಮರನ್ನು ಕೆಂಗಣ್ಣಿನ ಮೂಲಕ ನೋಡುತ್ತಿದೆ . ಮುಸ್ಲಿಮರ ವಿರುದ್ಧ ಇಡೀ ಜಗತ್ತಿನಲ್ಲಿ ನಾಲ್ಕು ದಿಕ್ಕುಗಳಲ್ಲಿ ಇಸ್ಲಾಂ ಧರ್ಮವು ರಕ್ತಪಾತ , ಭಯೋತ್ಪಾದನೆ , ಕೊಲ್ಲುವುದು, ಬಡಿಯುವುದು ಕೇವಲ ಅಷ್ಟೇ ಬಯಸುತ್ತಿದೆ ಎಂದು ಸುಳ್ಳಿನ ಪ್ರೊಪಗೊಂಡ ಮೂಲಕ ಜಗತ್ತಿನ ಪ್ರತಿಯೊಬ್ಬ ಮನುಷ್ಯನ ಮೆದುಳಿನಲ್ಲಿ ಇಸ್ಲಾಂ ಧರ್ಮದ ವಿರುದ್ಧ ಹಾಗೂ ಮುಸ್ಲಿಮರ ವಿರುದ್ಧ ತಲೆಯಲ್ಲಿ ತುಂಬುತ್ತಿದ್ದಾರೆ ಇಸ್ಲಾಂ ಮತ್ತು ಮುಸ್ಲಿಮರು ಯಾವುದೇ ರೀತಿಯಲ್ಲಿ ಇಸ್ಲಾಂ ಧರ್ಮವು ಅಂತ್ಯವಾಗಬೇಕೆಂದು ಷಡ್ಯಂತ್ರ ಮಾಡಲಾಗುತ್ತಿದೆ . ಇವೆಲ್ಲವೂ ಇಸ್ಲಾಂ ಧರ್ಮದ ವಿರುದ್ಧ ಸುಳ್ಳಿನ ಪ್ರೊಪಗೊಂಡ ಮೂಲಕ ದ್ವೇಷ ಹರಡುಸ್ತಾ ಇದ್ದಾರೆ . ಆದರೆ ಇದಕ್ಕೆಲ್ಲ ಕಾರಣಗಳು ಮುಸ್ಲಿಮರು ನಾವು ಏಕೆಂದರೆ ಸತ್ಯವಾದ ನಿಜವಾದ ಇಸ್ಲಾಂ ಧರ್ಮದ ತತ್ವ ಸಿದ್ಧಾಂತಗಳನ್ನು ಇಡೀ ಜಗತ್ತಿಗೆ ತೋರಿಸಲು ನಾವು ವಿಫಲರಾಗಿದ್ದೇವೆ ಎಂದು ಹೇಳಿದರು . 

 *ಹಬ್ಬದ ಸಂಭ್ರಮದ ನಡುವೆ ಮತ ಚಲಾವಣೆಯ ಕರೆ ಕೊಟ್ಟ ಮೌಲಾನ ಮಹಮ್ಮದ್ ಝುಬೇರ್ ನಾಯಕ್ ವಾಡಿ :* 

 ಭಾರತ ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನ ಮಾಡುವುದು ಅವಕಾಶ ಮಾಡಕೊಟ್ಟಿದ್ದು ಸಂವಿಧಾನ ನಿಜವಾದ , ಸತ್ಯವಾದ , 
ಸಾಮಾಜಿಕ ಸೇವೆಯನ್ನು ಮಾಡುವಂತಹ ವ್ಯಕ್ತಿಯನ್ನು ಸಾಕ್ಷಿ ಹಾಗೂ ಆಯ್ಕೆ ಮೂಲಕ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ವತ್ತಿ ಹೇಳಿದರು 

 ವರದಿ :
ಮಹಿಬೂಬ್ ಬಾರಿಗಡ್ಡಿ

Friday, March 22, 2024

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಶಫೀಕ್ ಎಂ ಬೇಪಾರಿ ನೇಮಕ*

*ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ  ಜಿಲ್ಲಾ ಅಧ್ಯಕ್ಷರಾಗಿ ಶಫೀಕ್ ಎಂ ಬೇಪಾರಿ ನೇಮಕ* 

 *ಬಾಗಲಕೋಟ್* : ಕರ್ನಾಟಕ ರಾಜ್ಯ ಸಮಾಜ  ಸೇವೆ ಪ್ರಶಸ್ತಿ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ್ ನಗರದ ಶಫೀಕ್  ಎಂ ಬೇಪಾರಿ  ಅವರನ್ನು ,ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾಗಿ ,  ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ  ಇಮ್ರಾನ್ ಪ್ರತಾಪ್ಗಡ ಅವರು ತಕ್ಷಣ ನೇಮಕವಾಗುವಂತೆ ಆದೇಶ ಹೊರಡಿಸಿದ್ದಾರೆ . 

ಮುಧೋಳ್ ನಗರದಲ್ಲಿ ಸಾಕಷ್ಟು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡ ಶಫೀಕ್ ಎಂ ಬೇಪಾರಿ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ , ಮತ್ತಷ್ಟು ಅವರ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದು ಉನ್ನತ ಹುದ್ದೆ ಕೊಟ್ಟು ಅವರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ .

ಶಫೀಕ್  ಎಮ್ ಬೇಪಾರಿ ಇವರನ್ನು ಪ್ರೋತ್ಸಾಹಿಸಿದ , ಉದಯ್ ಸಿಂಹ ಪಡ್ತಾರೆ , ರಾಜು ಬಾಗವಾನ್ ,   ಹಾಗೂ, ದಾನೇಶ್ ತಡೆಸಲೂರ್ ಆಯ್ ಆರ್ ರಾಮದುರ್ಗ್, ಐ ಯಾಚ್ ಅಂಬಿ ವಕೀಲರು , ಕಾಟೆ ಬಸ್ವಂತ್ ಕಾಕಾ ,ಆರಿಫ್ ಮೊಮಿನ್ , ಪ್ರಶಾಂತ್ ಕಾಳೆ, ಯೂಸುಫ್ ಜಮಾದಾರ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರನ್ನು  ಕೃತಜ್ಞತೆಗಳನ್ನು ಹೇಳಿದ್ದಾರೆ .

ವರದಿ ಮಹಿಬೂಬ್  ಎಂ ಬಾರಿಗಡ್ಡಿ