ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಗಾರದ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಮಿತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು .
ಈ ರಕ್ತದಾನ ಶಿಬಿರ ಬಾಗಲಕೋಟ ಜಿಲ್ಲಾ ಆಸ್ಪತ್ರೆಯ ರಕ್ತದಾನ ಭಂಡಾರ ನವನಗರ ಇವರ ಸಹಯೋಗದೊಂದಿಗೆ ನಡೆಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಮಿತಿಯ ಅಧ್ಯಕ್ಷ , ಸಾಧಿಕ್ ಮಳಲಿ ರಕ್ತದಾನ ಮಾಡುವುದರಿಂದ ಯಾರಿಗೆ ಸಹಾಯವಾಗುತ್ತದೆ ಎನ್ನುವುದನ್ನು ,ಪೂರ್ಣ ವಿವರಿಸಿದರು .
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಶಾನೂರ್ ಮಾಲ್ದಾರ ,ಇರ್ಷಾದ್ ಮೋಮಿನ್ ,ಬುಡನ ಬೇಪಾರಿ, ಸೋಹಿಲ್ ಬೇಪಾರಿ , ಆಸಿಫ್ ಅತ್ತಾರ್ , ಖಲೀಲ್ ಜಾರೆ , ಸಾಯಿಲ್ ಚಿಸ್ತಿ , ಸಲೀಂ ಹಲಗಲಿ ,ರಾಜು ಜಮಖಂಡಿ ಇನ್ನೂ ಅನೇಕರು ಉಪಸ್ಥಿತರಿದ್ದರು .
ಕಲಾಂ ಎಕ್ಸ್ ಪ್ರೆಸ್ ನ್ಯೂಸ್ ರಬಕವಿ ಬನಹಟ್ಟಿ
No comments:
Post a Comment