*
*ರಬಕವಿ ಬನಹಟ್ಟಿ :*
ಬಾಗಲಕೋಟ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಜಿಲ್ಲಾ ಉಪಾಧ್ಯಕ್ಷ ರಾಜೇಶ್ವರಿ ಹಿರೇಮಠ್ ಅವರು ತಮ್ಮ ಹುಟ್ಟುಹಬ್ಬವನ್ನು ಬಡ ವಿದ್ಯಾರ್ಥಿಗಳಿಗೆ ಪೆನ್ನು ಹಾಗೂ ನೋಟ್ ಬುಕ್ ವಿತರಣೆ ಮಾಡುವುದರ ಮೂಲಕ ,ಮತ್ತು ತಾಲೂಕ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಣ್ಣು - ಹಂಪಲ ಕೊಡುವುದರ ಮೂಲಕ , ಹಾಗೂ ತೇರದಾಳ ಪಟ್ಟಣದಲ್ಲಿ ಗೋ ಶಾಲೆಗೆ ಭೇಟಿ ನೀಡಿ ಹಸುಗಳಿಗೆ ಮೇವು ಹಾಕುವುದರ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು
ಬಳಿಕ , ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ನೂತನವಾಗಿ ಕಾರ್ಯಕರ್ತರನ್ನು ಕೂಡ ಸೇರ್ಪಡೆ ಮಾಡುವುದರ ಮೂಲಕ ಕೂಡ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು .
ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಆಟೋ ಘಟಕದ ಅಧ್ಯಕ್ಷ ,ಮೊಹಮ್ಮದ್ ಹುಸೇನ್ ಲೆoಗ್ರೆ , ಉಪಾಧ್ಯಕ್ಷ ದಾದಾಪೀರ್ ಶಿವಳ್ಳಿ ,ಕರವೇ ತಾಲೂಕ ಆಟೋ ಘಟಕ ಪ್ರಧಾನ ಕಾರ್ಯದರ್ಶಿ ಜಮಾದಾರ್ ,ಅನುರಾಧ ಶಿರಗುಪ್ಪಿ , ಭಾರತಿ
ಕೊಪ್ಪದ ,ಇನ್ನೂ ಅನೇಕ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು .
KALAAM EXPRESS NEWS
RABKAVI -BANHATTI
No comments:
Post a Comment