Thursday, December 15, 2022

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ) ತಾಲೂಕ ರಬಕವಿ ಬನಹಟ್ಟಿ ಯಿಂದ ಶಾಸಕ ಸಿದ್ದು ಸವದಿ ರವರಿಗೆ ಮನವಿ ಸಲ್ಲಿಕೆ* :-



 *ರಬಕವಿ ಬನಹಟ್ಟಿ*: 


ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ  
ಶುಕ್ರವಾರ 16/12/2022 ರಂದು   9-  ಗಂಟೆಗೆ ತೆರೆದಾಳ್ ಮತ ಕ್ಷೇತ್ರದ ಶಾಸಕರಾದ  ಸಿದ್ದು ಸವದಿ   ನವರನ್ನು ಕಾನಿಪ ಧ್ವನಿ ಸಂಘಟನೆಯ ರಬಕವಿ ಬನಹಟ್ಟಿ ತಾಲೂಕ  ಪದಾಧಿಕಾರಿಗಳು ಸೇರಿ ಪತ್ರಕರ್ತರ ಜಲ್ವಂತ ಸಮಸ್ಯಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಾಡಿನ ದೊರೆಯಾದ ಬಸವರಾಜ್ ಬೊಮ್ಮಾಯಿ ಯವರ ಗಮನಕ್ಕೆ ತಂದು ನಾಡಿನ ಪತ್ರಕರ್ತರ ಬೇಡಿಕೆಗಳಿಗೆ ಸ್ಪಂಧಿಸಿ  ರಾಜ್ಯದ 16,000 ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಅಧ್ಯಕ್ಷ  ಮಾಳು  ದುರ್ಗನ್ನವರ್ , ಸಂಘಟನಾ ಕಾರ್ಯದರ್ಶಿ ದಿಲೀಪ್ ಕಾಂಬಳೆ , ತಾಲೂಕ ಪ್ರಧಾನ ಕಾರ್ಯದರ್ಶಿ ,ಅಮೀರ್ ಖಾನ ಅತ್ತಾರ್  ,ತಾಲೂಕ ಖಜಾಂಚಿ  ಮುಜಮಿಲ್ ಜರ್ಮನ್ ,  ಹಾಗೂ ಸದಸ್ಯರಾದ ಸತೀಶ್ ಸಣ್ಣಕ್ಕಿ , ಶಾನೂರ್ ಗೊಲಬಾವಿ , ದೇವೇಂದ್ರ ಹುಲ್ಲೂರು , ಹಾಗೂ ಕಾನಿಪ  ಧ್ವನಿ ಸಂಘಟನೆಯ ಬಾಗಲಕೋಟ್  ಜಿಲ್ಲಾ ಸದಸ್ಯರಾದ ಮಹಬೂಬ್  ಬಾರಿಗಡ್ಡಿ  ಉಪಸ್ಥಿತರಿದ್ದರು .

ವರದಿ ಮಹೆಬೂಬ್ ಬಾರಿಗಡ್ಡಿ

No comments:

Post a Comment