*ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ*
ಬಾಗಲಕೋಟ್ : ಕರ್ನಾಟಕ ರಾಜ್ಯ ಸಮಾಜ ಸೇವೆ ಪ್ರಶಸ್ತಿ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ್ ನಗರದ ಶಫೀಕ್ ಎಂ ಬೇಪಾರಿ ಅವರನ್ನು ,ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ , ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅವರು ಆದೇಶ ಹೊರಡಿಸಿದ್ದಾರೆ .
ಮುಧೋಳ್ ನಗರದಲ್ಲಿ ಸಾಕಷ್ಟು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡ ಶಫೀಕ್ ಎಂ ಬೇಪಾರಿ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ , ಮತ್ತಷ್ಟು ಅವರ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದು ಉನ್ನತ ಹುದ್ದೆ ಕೊಟ್ಟು ಅವರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ .
ಶಫೀಕ್ ಎಮ್ ಬೇಪಾರಿ ಇವರನ್ನು ಪ್ರೋತ್ಸಾಹಿಸಿದ , ಹಾಸಿಮ್ ಜಕ್ಲಿ ,ಹಾಜಮೀನ ಬಾಗವಾನ್ , ಮುಧೋಳ್ ನಗರ ಸಭೆ ಸದಸ್ಯ ರಾಜು ಬೆಪಾರಿ ,ಹುಬ್ಬಳ್ಳಿಕರ್ ಹಾಗೂ ದಯಾನಂದ್ ಪಾಟೀಲ್, ದಾನೇಶ್ ತಡೆಸಲೂರ್ , ಗುರು ಊದಪುಡಿ ,ರಫೀಕ್ ಬೈರಕದ್ದಾರ , ರಹಿಮಾನ್ ತೋರಗಲ್ ,ಅಬ್ದುಲ್ ವಾಲಿಕಾರ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಕೃತಜ್ಞತೆಗಳನ್ನು ಹೇಳಿದ್ದಾರೆ .
ವರದಿ ಮಹಿಬೂಬ್ ಎಂ ಬಾರಿಗಡ್ಡಿ

No comments:
Post a Comment