ಮಹಾಲಿಂಗಪೂರ : ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಬೆಲ್ಲದಿ ನಗರಿ ಎಂದೇ ಖ್ಯಾತ ಪಡೆದ ಮಹಾಲಿಂಗಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಎ ಗ್ರೇಡ್ ಕಬ್ಬಡ್ಡಿ ಚಾಂಪಿಯನ್ಶಿಪ್ ಮುಕ್ತಾಯಗೊಂಡಿತು .
ಅಮೇಚೂರ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ
ಕರ್ನಾಟಕ ರಾಜ್ಯ ಅಮೇಚೂರ ಕಬಡ್ಡಿ ಅಸೋಶಿಯನ್ ಅನುಮತಿಯೊಂದಿಗೆ ಹಾಗೂ ಬಾಗಲಕೋಟ್ ಅಮೇಚೂರ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ
ಸಿದ್ದು ಕೊಣ್ಣೂರ ಸ್ಪೋಟ್ಸ ಕ್ಲಬ್ ಹಾಗೂ ಕೆ.ಎಲ್.ಇ ಕಾಲೇಜ್ ಮಹಾಲಿಂಗಪುರ ವತಿಯಿಂದ ಅಖಿಲ್ ಭಾರತ ಎ -ಗ್ರೇಡ್ ಆಹ್ವಾನಿತ ಮಹಿಳಾ ಕಬಡ್ಡಿ ಪದ್ಯಾವಳಿಯ ಫೈನಲ್ ಪಂದ್ಯ ಜನೆವರಿ 4 ರಂದು ನಡೆಯಿತು.
ಫೈನಲ್ ನಲ್ಲಿ ಪ್ರಥಮ ಬಹುಮಾನ ವೆಸ್ಟರ್ನ ರೈಲ್ವೆ. ಪಡೆದುಕೊಂದಿದ್ದರೆ, ಪಾಲಂ ದೆಹಲಿ ತಂಡ 2 ಸ್ಥಾನ ಪಡೆದುಕೊಂಡಿದೆ, ಚಿಂಚಲಿಯ ಜೈ ಮಾಕಾಳಿ ತಂಡ ತೃತಿಯ ಬಹುಮಾನ ಪಡೆದುಕೊಂಡಿದೆ, ಆಳ್ವಾಸ ಮೂಡಬಿದರೆಯ ತಂಡ ನಾಲ್ಕನೇಯ ಬಹುಮಾನ ಪಡೆದುಕೊಂಡಿದೆ .
ಚಾಂಪಿಯನ್ಶಿಪ್ನಲ್ಲಿ 2ನೇ ಸ್ಥಾನ ಪಡೆದ ದೆಹಲಿ . .
ಫೈನಲ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರು ಮಾಚಿ ಸಚಿವರಾದ ರಾಮಲಿಂಗಾರೆಡ್ಡ ಅವರು.ಕೆಪಿಸಿಸಿ ಕಾರ್ಯಾದ್ಯಕ್ಷರಾದ ಸತೀಶ ಜಾರಕಿಹೊಳಿ., ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಎಸ್. ಜಿ. ನಂಜಯ್ಯನಮಠ , ಮಾಜಿ ಸಚಿವರು ಗಳಾದ ಎಸ್.ಆರ್ ಪಾಟೀಲ್ , ಆರ್ ಬಿ. ತಿಮ್ಮಾಪೂರ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕ್ರೀಡಾಸಕ್ತರು ಉಪಸ್ಥಿತರಿದ್ದರು .
ವರದಿ ಮಹಬೂಬ್ ಬಾರಿಗಡ್ಡಿ
No comments:
Post a Comment