Saturday, January 13, 2024

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ವಿಶೇಷ ವಸ್ತು ಪ್ರದರ್ಶನ


 ಬಾಗಲಕೋಟೆ / ರಬಕವಿ- ಬನಹಟ್ಟಿ 
ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಎಕ್ಸಪರ್ಟ್ ಆಂಗ್ಲ ಮಾಧ್ಯಮ ಶಾಲೆ ರಬಕವಿ 
ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ವಿಶೇಷ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ಈ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷರಾದ ಶಿವು ಗಿರಿಸಾಗರ್ ಹಾಗೂ ಕಾರ್ಯದರ್ಶಿ ಯಾದ ಬಾಬು ಪಾಲಬಾವಿ ಹಾಗೂ ಶಾಲೆಯ ಮುಖ್ಯ ಗುರುಗಳಾದ . ಮೊಹಮ್ಮದ್ ರಫೀಕ್ ನದಾಫ್ ಅವರು ಉದ್ಘಾಟಿಸಿದರು...
ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ಸಹದಿಂದ ವಿಜ್ಞಾನ ಮಾದರಿ, ಐತಿಹಾಸಿಕ ಸ್ಮಾರಕಗಳು ,ಹಾಗೂ ಇನ್ನೂ ಅನೇಕ ರೀತಿಯ ಮಾದರಿಯ ವಸ್ತುಗಳನ್ನು ಪ್ರದರ್ಶನ ಮಾಡುವುದರ ಮೂಲಕ ಗಮನ ಸೆಳೆದರು ..
ಜ್ಞಾನ ವಸ್ತು ಪ್ರದರ್ಶನದಲ್ಲಿ ಒಟ್ಟು 240 ಕ್ಕೂ ಅಧಿಕ ವಸ್ತುಗಳನ್ನು ಪ್ರದರ್ಶನ ಮಾಡಿದರು..
ಮಕ್ಕಳು ತಮ್ಮ ತಮ್ಮ ಮಾದರಿಗಳ ವಿವರಣೆಗಳನ್ನು ಅತ್ಯಂತ ಸುಂದರವಾಗಿ ವಿವರಿಸಿದರು ...

ಈ ಸಂದರ್ಭದಲ್ಲಿ  ಶಾಲೆಯ  ನಜೀರ್  ಬಳಗಾರ , ಬಸಪ್ಪಾ ಕುರಿ,  ಜ್ಯೋತಿ  ಸಿಂಧೆ, ಶೃತಿ ಕವಾಸಿ,  ಬಸಮ್ಮ ಗಿರಿಸಾಗರ್, ಪ್ರಿಯಾಂಕ ಪರಿಟ್ , ಕಾವೇರಿ ಅಥಣಿ , ಸೋನಾಲಿ ಮಾಳಿ, ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು....
ವರದಿ
ಸಂತೋಷ್ ಹೊಸಮನಿ

No comments:

Post a Comment