Wednesday, July 26, 2023

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ : 

ಕಣ್ಣಿನ ಚಿಕಿತ್ಸೆಯಲ್ಲಿ ಹಲವು ಬಗೆಯ ಲೇಸರ್ ಗಳು ಉಪಯೋಗವಾಗುತ್ತವೆ. LASER ಎಂದರೆ Light Amplification by Stimulated Emission of Radiation. ಅಂದರೆ ಭಾವಾರ್ಥ - ಪ್ರಚೋದಿತ ವಿಕಿರಣತೆಯ ಬಿಡುಗಡೆಯಿಂದ ಬೆಳಕಿನ ಹೆಚ್ಚಳ. ಸ್ಥೂಲವಾಗಿ ಹೇಳುವುದಾದರೆ ಅದು ಬಾರಿ ಪ್ರಮಾಣದ ಶಕ್ತಿಯನ್ನು ಒಳಗೊಂಡ ಬೆಳಕಿನ ಮೂಲ (ಆಕರ ). ಇದು ಕಣ್ಣಿನ ಚಿಕಿತ್ಸೆಯಲ್ಲಿ ಸುಮಾರು 50 ವರ್ಷಗಳಿಂದಲೂ ಹೆಚ್ಚು ಸಮಯದಿಂದ ಬಳಕೆಯಲ್ಲಿದೆ. ವೈದ್ಯಕೀಯವಾಗಿ ಮೊಟ್ಟ ಮೊದಲ ಲೇಸರ್ ಉಪಯೋಗವಾಗಿದ್ದು ಕಣ್ಣಿನ ಅಕ್ಷಿಪಟಲದ ಕಾಯಿಲೆಗಳ ಚಿಕಿತ್ಸೆಯಲ್ಲಿ. ಆದರೆ ಈಗ ಪ್ರಸ್ತುತ ಹಲವು ವಿಧದ ಲೇಸರ್ ಗಳು ಕಣ್ಣಿನ ಬೇರೆ ಬೇರೆ ರೀತಿಯ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತಿವೆ. 

ಬಹಳ ಹಿಂದಿನಿಂದಲೂ ಪ್ರಭಲವಾದ ಬೆಳಕಿನ ಕಿರಣಗಳು ಕಣ್ಣನ್ನು ಹಾನಿಗೊಳಿಸುತ್ತವೆ ಎಂಬ ಅಂಶ ತಿಳಿದಿತ್ತು. ಹಾಗಾಗಿಯೇ ಸೊಕ್ರೇಟ್ಸ್  ನಂತಹ ವಿಜ್ಞಾನಿ ನೇರವಾಗಿ ಬರೀ ಕಣ್ಣಿನಿಂದ ಸೂರ್ಯ ಗ್ರಹಣವನ್ನು ನೋಡಬಾರದು ಎಂದು ತಿಳಿಸಿದ್ದ. ಮೆಯರ್ - ಶ್ವಿಕೆರಾಥ್ ಎನ್ನುವವರು ಬೆಳಕನ್ನು ಮೊಟ್ಟ ಮೊದಲು ಕಣ್ಣಿನ ಚಿಕಿತ್ಸೆಗೆ ಬಳಸಿದರು. ಕಣ್ಣಿನ ಅಕ್ಷಿಪಟಲದಲ್ಲಿನ ಮೇಲನೋಮ ಚಿಕಿತ್ಸೆಗೆ ಇವರು ಅಕ್ಷಿಪಟಲದ ಮೇಲೆ ಬೆಳಕನ್ನು ಕ್ರೋಢೀಕರಿಸಿದರು. 1940 ರ ದಶಕದಲ್ಲಿ ಮಾರನ್  ಸಲಾಸ್ ಎನ್ನುವವರು ಕಣ್ಣಿನ ಅಕ್ಷಿಪಟಲದಲ್ಲಿ ಫೋಟೋಕೊಯಾಗುಲೇಶನ್ ಚಿಕಿತ್ಸೆಯನ್ನು ಕೈಗೊಂಡರು. ಆದರೆ ಈ ತರಹದ ಚಿಕಿತ್ಸೆಗೆ ಸೂರ್ಯನ ಬೆಳಕನ್ನು ಉಪಯೋಗಿಸಲು ಇರುವ ಮಿತಿಗಳನ್ನು ಇವರೆಲ್ಲಾ ಗಮನಿಸಿದರು. ಇದರಿಂದ ಸೂರ್ಯನ ಬೆಳಕು ಅಲ್ಲದ ಬೆಳಕುಗಳಾದ ಕಾರ್ಬನ್ ಆರ್ಕ್  ಕ್ಸಿನಾನ್ ಆರ್ಕ್ ಫೋಟೋಕೊಯಾಗುಲೇಶನ್ - ಇವು ಸ್ವಲ್ಪ
ಮಟ್ಟಿಗೆ ಪ್ರಚಲಿತಕ್ಕೆ ಬಂದವು. ಇವೆಲ್ಲವುಗಳ ಉಪಯೋಗದ ನಂತರ ಇವುಗಳಿಗಿಂತ ಲೇಸರ್ ಹೆಚ್ಚು ಉತ್ತಮ ಎಂಬ ಭಾವನೆ ಬಂದು ಅದು ಬೆಳವಣಿಗೆ ಹೊಂದುತ್ತಾ ಬಂದಿತು. ಇದು ಶಾಖದ ರೇಡಿಯೇಶನ್ ಮತ್ತು ಬೆಳಕಿನ ರೇಡಿಯೇಶನ್ ಗಿಂತ ಉತ್ತಮ ಎಂದು ತಿಳಿದುಬಂದಿತು. ಇದಕ್ಕೆ ಮುಖ್ಯ ಕಾರಣ ಲೇಸರ್ ನಲ್ಲಿಯ ಫೋಟಾನ್ ಗಳು ಕೋಹರೆಂಟ್ ಅಂದರೆ ಒಂದೇ ರೀತಿಯ ಫೇಸ್ ನಲ್ಲಿವೆ. ಹಾಗೆಯೇ ವೇವ್ ಲೆಂಗ್ತ್  ಬಹಳ ನ್ಯಾರೋ ರೇಂಜ್ ಹೊಂದಿದೆ. ಇದರಲ್ಲಿನ ಸ್ಪೇಶಿಯಲ್ ಮತ್ತು ಟೆಂಪೊರಲ್ ನ ಕೊಹರೆನ್ಸ್ ಗಳು ನಿರ್ದಿಷ್ಟ ಅಂಗಾಂಶಕ್ಕೇ ಗುರಿಯಾಗಿ ಚಿಕಿತ್ಸೆ ಮಾಡುವುದು ಸುಲಭ ಮಾಡುತ್ತದೆ. 

ಲೇಸರ್ ನಿಂದ ಉಂಟಾಗುವ ಅಂಗಾಂಶದ ಪ್ರತಿಕ್ರಿಯೆಗಳು : 
1. ಫೋಟೋಥರ್ಮಲ್ - ಇದರಲ್ಲಿ ಫೋಟೋಕೊಯಾಗುಲೇಶನ್ ಮತ್ತು ಫೋಟೋವೆಪರೈಸೇಶನ್ - ಹೀಗೆ 2 ರೀತಿಯಿವೆ. 
ಫೋಟೋಕೊಯಾಗುಲೇಶನ್ : ಇದರಲ್ಲಿ ಯಾವ ಅಂಗಾಂಶಕ್ಕೆ ಗುರಿ ಇಡಲಾಗುತ್ತದೆಯೋ ಆ ಅಂಗಾಂಶ ಲೇಸರ್ ಬೀಮ್ ಅನ್ನು ಹೀರುತ್ತದೆ. ಇದರ ಶಾಖದ ಪರಿಣಾಮವಾಗಿ ಹೆಚ್ಚು ಪ್ರೋಟೀನ್ ಗಳು ಡೀನೇಚರ್ ಗೊಳ್ಳುತ್ತವೆ. ಉದಾ : ಆರ್ಗಾನ್, ಕ್ರಿಪ್ಟಾನ್, ಡಯೋಡ್ ( 810 ) ಮತ್ತು ಫ್ರೀಕ್ವೆನ್ಸಿ ದುಪ್ಪಟ್ಟು ಮಾಡಿದ ಎನ್ ಡಿ ಯಾಗ್ ಲೇಸರ್. ಕಣ್ಣಿನ ಚಿಕಿತ್ಸೆಯಲ್ಲಿ ಹೆಚ್ಚಾಗಿ ಈ ಎಲ್ಲಾ ಲೇಸರ್ ಗಳು ಉಪಯೋಗವಾಗುತ್ತವೆ. 
ಫೋಟೋವೆಪರೈಸೇಶನ್ : ಇದರಲ್ಲಿ ಜೀವಕೋಶದ ಒಳಗಿನ ಮತ್ತು ಹೊರಗಿನ ನೀರಿನ ಅಂಶದ ವೆಪರೈಸೇಶನ್ ಆಗುತ್ತದೆ. ಇದು ಶಸ್ತ್ರಕ್ರಿಯೆಯಲ್ಲಿ ನಿರ್ದಿಷ್ಟವಾದ ಉಪಯೋಗವನ್ನು ಹೊಂದಿದೆ. ಏಕೆಂದರೆ ಚಿಕಿತ್ಸೆ ಮಾಡುವ ಸ್ಥಳದ  ಆಚೀಚಿನ ರಕ್ತನಾಳಗಳು ಸಹಿತ ಚಿಕಿತ್ಸೆಗೆ ಒಳಪಡುತ್ತವೆ. ‌ಧನಾತ್ಮಕ ಅಂಶ ಎಂದರೆ ರಕ್ತವು ಸೋರಿಕೆಯಾಗುವುದಿಲ್ಲ. ಉದಾ : ಇನ್ ಫ್ರಾರೆಡ್ ಒಳಗೊಂಡ ಕಾರ್ಬನ್ ಡೈಆಕ್ಸೈಡ್ ಲೇಸರ್.

ಫೋಟೋ ಕೆಮಿಕಲ್ ವಿಧಾನ : ಇದರಲ್ಲಿ ಎರಡು ವಿಧಗಳಿವೆ. ಫೋಟೋ ರೇಡಿಯೇಶನ್ ಮತ್ತು ಫೋಟೋ ಅಬ್ಲೇಶನ್ 
ಫೋಟೋ ರೇಡಿಯೇಶನ್ : ಇದರಲ್ಲಿ ಫೋಟೋ ಸೆನ್ಸಿಟೈಸಿಂಗ್ ವಸ್ತುವನ್ನು ರಕ್ತನಾಳಕ್ಕೆ ಇಂಜೆಕ್ಷನ್ ಮೂಲಕ ಚುಚ್ಚಲಾಗುತ್ತದೆ. ನಂತರ ನಿರ್ದಿಷ್ಟ ಅಂಗಾಶವನ್ನು ಲೇಸರ್ ಕಿರಣಕ್ಕೆ ಒಳಪಡಿಸಲಾಗುತ್ತದೆ.  ಇದರಿಂದ ಸೈಟೋಟಾಕ್ಸಿಕ್ ಫ್ರೀ  ರಾಡಿಕಲ್ಸ್  ಉತ್ಪನ್ನವಾಗುತ್ತವೆ. ಹಾಗಾಗಿ ಅಂತಿಮವಾಗಿ ಫೋಟೋ ಡೈನಾಮಿಕ್ ಥೆರಪಿಯ ಮೂಲಕ ಚಿಕಿತ್ಸೆ ಮಾಡಿದ ಹಾಗಾಗುತ್ತದೆ. 
ಫೋಟೋಅಬ್ಲೇಶನ್ - ಇಲ್ಲಿ ಬೆಳಕು ಅಲ್ಟ್ರಾವೈಯಲೆಟ್ ವೇವ್ ಲೆಂಗ್ತ್ ( < 350 n m ) ನಲ್ಲಿ ಉಪಯೋಗವಾಗುತ್ತದೆ. ಇದರ ಪರಿಣಾಮವಾಗಿ ಲಾಂಗ್ ಬೈಟ್ ಟಿಷ್ಯೂ ಪಾಲಿಮರ್ ಗಳು ಸಣ್ಣ ಸಣ್ಣ ತುಣುಕುಗಳಾಗಿ ಪರಿವರ್ತನೆ ಹೊಂದುತ್ತವೆ. ಉದಾ : ಎಕ್ಸೈಮರ್ ಲೇಸರ್.
ಫೋಟೋ ಡಿಸ್ ರಪ್ಶನ್ : ಇದರಲ್ಲಿ ಯಾವ ಅಂಗಾಂಶಕ್ಕೆ ಲೇಸರ್ ಕೊಡಲಾಗುತ್ತದೆಯೋ ಅದರಲ್ಲಿನ ಎಲೆಕ್ಟ್ರಾನ್ ಗಳು ಬೇರೆ ಬೇರೆಯಾಗುತ್ತವೆ. ಇದು ಒಂದು ರೀತಿಯ ಶಾಕ್ ವೇವ್ ಉಂಟು ಮಾಡುತ್ತದೆ. ಉದಾ : ಎನ್ ಡಿ ಯಾಗ್ ಲೇಸರ್ 

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್ ಗಳು : 

ಕಣ್ಣಿನಲ್ಲಿ ಲೇಸರ್ ಗಳನ್ನು ಕಾಯಿಲೆ ಪತ್ತೆ ಹಚ್ಚಲು ಹಾಗೂ ಹಲವು ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆಯಾಗಿ - ಹೀಗೆ ಎರಡು ವಿಧದಲ್ಲಿ ಉಪಯೋಗಿಸುತ್ತೇವೆ. 
ಕಾಯಿಲೆ ಪತ್ತೆ ಹಚ್ಚಲು - ಕಣ್ಣಿನ ದೃಷ್ಟಿ ನರ ಆಪ್ಟಿಕ್ ನರದ ಎವಾಲ್ಯುಯೇಶನ್ ಗೆ ಕಾನ್ ಫೋಕಲ್ ಸ್ಕ್ಯಾನಿಂಗ್ ಲೇಸರ್ ಆಫ್ತಲ್ಮೋಸ್ಕೋಪ್ ಉಪಯೋಗಿಸಲಾಗುತ್ತದೆ. ಹಾಗೆಯೇ ಆಪ್ಟಿಕಲ್ ಕೊಹರೆನ್ಸ್ ಟೋಮೋಗ್ರಫಿ ( ಓ ಸಿ ಟಿ ) - ಇದು ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾ ಹಾಗೂ ಅಕ್ಷಿಪಟಲದ ಹಲವು ಕಾಯಿಲೆಗಳನ್ನು ಪತ್ತೆ ಹಚ್ಚಲು ಉಪಯೋಗಿಸಲಾಗುತ್ತದೆ. 

ಚಿಕಿತ್ಸೆಯಲ್ಲಿ ಲೇಸರ್ ನ ಉಪಯೋಗ : 1. ಕಣ್ಣಿನ ದೃಷ್ಟಿ ದೋಷ ಇದ್ದಾಗ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಇಲ್ಲದೆ ದೃಷ್ಟಿ ಸರಿಯಾಗಿ ಕಾಣಲು ಉಪಯೋಗಿಸುವ ಲೇಸರ್ ಗಳು ಈ ವಿಧದ್ದು. ಉದಾ : ಲ್ಯಾಸಿಕ್, ಎಪಿಲ್ಯಾಸಿಕ್, ಲೇಸಕ್, ಪಿ ಆರ್ ಕೆ ಮತ್ತಿತರ ಚಿಕಿತ್ಸೆಗಳು 
2. ಗ್ಲೊಕೊಮಾ : ಇದರಲ್ಲಿ ಯಾಗ್ ಲೇಸರ್ ಉಪಯೋಗಿಸಿ ಲೇಸರ್ ಐರಿಡಾಟಮಿ, ಐರಿಡೊಪ್ಲಾಸ್ಟಿ, ಪ್ಯುಪಿಲೋಪ್ಲಾಸ್ಟಿ, ಟ್ರಬಕ್ಯುಲೋಪ್ಲಾಸ್ಟಿ - ಈ ತರಹದ ಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತದೆ. 
3. ಕಣ್ಣಿನ ಪೊರೆ ಶಸ್ತ್ರಕ್ರಿಯೆಯಲ್ಲಿ ಫೆಮಟೋಸೆಕೆಂಡ್ ಲೇಸರ್ ಅನ್ನು ಉಪಯೋಗಿಸಲಾಗುತ್ತದೆ. ಸಹಜ ಶಸ್ತ್ರಕ್ರಿಯೆಯಿಂದ ಕಣ್ಣಿನ ಪೊರೆ ಶಸ್ತ್ರಕ್ರಿಯೆ ಕೈಗೊಂಡ ಎಷ್ಟೋ ತಿಂಗಳು, ವರ್ಷಗಳ ನಂತರ ಉಂಟಾಗಬಹುದಾದ ಸೆಕೆಂಡರಿ ಪೊರೆಯನ್ನು ಚಿಕಿತ್ಸೆ ಮಾಡಲು ಎನ್ ಡಿ ಯಾಗ್ ಲೇಸರ್ ಉಪಯೋಗಿಸಲಾಗುತ್ತದೆ. 
4. ಕಣ್ಣಿನ ಹಿಂಭಾಗದ ಕಾಯಿಲೆಗಳು : 
ಮುಖ್ಯವಾಗಿ ಡಯಾಬಿಟಿಸ್ ನಿಂದ ಕಣ್ಣಿನಲ್ಲಿ ಉಂಟಾಗುವ ರೆಟನೋಪತಿ ಚಿಕಿತ್ಸೆಯಲ್ಲಿ ಆರ್ಗಾನ್ ಲೇಸರ್ ಮತ್ತು ಡಯೋಡ್ ಲೇಸರ್ ಗಳನ್ನು ಉಪಯೋಗಿಸಲಾಗುತ್ತದೆ. ಈ ಚಿಕಿತ್ಸೆಯ ಮುಖ್ಯ ಉದ್ದೇಶ ಎಂದರೆ ಅಕ್ಷಿಪಟಲದ ರೆಟಿನೋಪತಿಗೆ ಒಳಗಾದ ಅಕ್ಷಿಪಟಲದಲ್ಲಿ ಕಾಯಿಲೆಯಿಂದ ಹಾಳಾದ ಅಕ್ಷಿಪಟಲವನ್ನು ಲೇಸರ್ ಹಾಯಿಸಿ ಸುಟ್ಟು ಆರೋಗ್ಯವಂತ ಅಕ್ಷಿಪಟಲಕ್ಕೆ ಹೆಚ್ಚಿನ ಆಮ್ಲಜನಕ ದೊರೆಯುವಂತೆ ಮಾಡುವುದು. ಹಾಗೆಯೇ ಹೊಸ ರಕ್ತನಾಳಗಳು ಹುಟ್ಟಿಕೊಳ್ಳಲು ಕಾರಣವಾಗುವ ಅಂಶಗಳನ್ನು ದೂರೀಕರಿಸುವುದು.‌ ಅಕ್ಷಿಪಟಲದ ಕಾಯಿಲೆಗಳಾದ ಅಕ್ಷಿಪಟಲದ ಅಭಿದಮನಿಯ ಮುಚ್ಚುವಿಕೆ, ಸಿಕಲ್ ಸೆಲ್ ರೆಟಿನೋಪತಿ - ಈ ರೀತಿಯ ಕಾಯಿಲೆಗಳಲ್ಲೂ ಉಪಯೋಗವಾಗುತ್ತದೆ. 
5. ಅಕ್ಷಿಪಟಲದ ಬ್ರೇಕ್ ಗಳು ಮತ್ತು ಅಕ್ಷಿಪಟಲದ ಸರಿದುಕೊಳ್ಳುವಿಕೆ ( Retinal detachment ) - ಈ ತರಹದ ಕಾಯಿಲೆಗಳಲ್ಲೂ ಈ ಆರ್ಗಾನ್, ಕ್ರಿಪ್ಟಾನ್ ಮತ್ತು ಡಯೋಡ್ ಲೇಸರ್ ಗಳು ಉಪಯೋಗವಾಗುತ್ತವೆ. 
6. ಕೊರಾಯಿಡ್ ಕಾಯಿಲೆಗಳಾದ ಕೊರಾಯಿಡ್ ನಿಯೋವ್ಯಾಸ್ಕುಲರೈಸೇಶನ್ ಗಳಲ್ಲೂ ಉಪಯೋಗವಾಗುತ್ತದೆ. 
7. ಕಣ್ಣಿನೊಳಗಿನ ಟ್ಯೂಮರ್ ಗಳ ಚಿಕಿತ್ಸೆಯಲ್ಲಿ : ರೆಟಿನೋಬ್ಲಾಸ್ಟೋಮಾ , ಮೆಲನೋಮ, ಆಂಜಿಯೋಮ‌ - ಇವುಗಳನ್ನು ಆರ್ಗಾನ್ ಮತ್ತು ಕ್ರಿಪ್ಟಾನ್ ಲೇಸರ್ ಗಳಿಂದ ಚಿಕಿತ್ಸೆ ಮಾಡಬಹುದು. 
8. ಮ್ಯಾಕ್ಯುಲಾರ್ ಎಡೀಮ : ಕಣ್ಣಿನ ಅಕ್ಷಿಪಟಲದ ಮಧ್ಯ ಭಾಗ ಮ್ಯಾಕ್ಯುಲದಲ್ಲಿ ಬೀಗಿನ ಅಂಶ ಕಂಡು ಬಂದಾಗ ಇದರಿಂದ ಚಿಕಿತ್ಸೆ ಮಾಡಬಹುದು.

ಲ್ಯಾಸಿಕ್ ಸರ್ಜರಿ ಅಥವಾ ಚಿಕಿತ್ಸೆಯ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಕನ್ನಡಕ ಅಥವಾ ಸ್ಫರ್ಷ ಮಸೂರ ಇಲ್ಲದೆ ಸ್ಪಷ್ಟವಾಗಿ ನೋಡಬೇಕೆಂಬ ದೃಷ್ಟಿ ದೋಷ ಇದ್ದವರ ಕನಸನ್ನು ನನಸಾಗಿಸಿದೆ ಈ ಚಿಕಿತ್ಸೆ. LASIK ಎಂದರೆ  Laser assisted in - situ keratomileusis ಅಂದರೆ ಒಂದು ರೀತಿಯ ಲೇಸರ್ ಉಪಯೋಗಿಸಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯದ ಮೇಲೆ ಚಿಕಿತ್ಸೆ ಮಾಡಲಾಗುತ್ತದೆ. 

ಈ ಚಿಕಿತ್ಸೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ದೃಷ್ಟಿದೋಷದ ಬಗ್ಗೆ ಸ್ವಲ್ಪ ವಿವರವಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ.
ಕಣ್ಣು ಪೊಳ್ಳಾದ ಒಂದು ಚೆಂಡಿನಂತೆ ಎಂದು ತಿಳಿಯಿರಿ. ಅದರ ಒಳಭಾಗ ಬೆಳಕನ್ನು ಗ್ರಹಿಸುವ ಅಕ್ಷಿಪಟಲ. ಹೊರಗಡೆಯಿಂದ ಬರುವ ಬೆಳಕನ್ನು  ಕೇಂದ್ರೀಕರಿಸಲು  ಮುಂಭಾಗದಲ್ಲಿ ಕಪ್ಪಾಗಿ ಕಾಣಿಸುವ  ಪಾರದರ್ಶಕ ಪಟಲ ಕಾರ್ನಿಯ‌ ಹಾಗೂ ಒಳಭಾಗದಲ್ಲಿ ಪಾರದರ್ಶಕ ಮಸೂರವಿದೆ. ದೃಷ್ಟಿದೋಷವಿಲ್ಲದ ಕಣ್ಣಿನಲ್ಲಿ ಹೊರಗಿನ ಬೆಳಕು ಈ ಎರಡು ಪಾರದರ್ಶಕ ಮಾಧ್ಯಮಗಳನ್ನು ದಾಟಿ ಅಕ್ಷಿಪಟಲದ ಮೇಲೆ ಬಿಂಬ ಕೇಂದ್ರೀಕೃತಗೊಂಡು ಮೆದುಳಿನಲ್ಲಿ ನರ ಸಂವೇದನೆ ಉಂಟು ಮಾಡಿ ನಮಗೆ ವಸ್ತುವಿನ ಅಥವಾ ಆಕೃತಿಯ ಚಿತ್ರ  ಮೂಡುತ್ತದೆ. ಕಣ್ಣು ಗುಡ್ಡೆಯ ಉದ್ದದಲ್ಲಿ ಹುಟ್ಟುವಾಗಲೇ ಇರುವ ವ್ಯತ್ಯಾಸದಿಂದ ದೃಷ್ಟಿದೋಷ ಉಂಟಾಗುತ್ತದೆ. ಹಾಗಾಗಿ ಈ ಲ್ಯಾಸಿಕ್ ಚಿಕಿತ್ಸೆಯಲ್ಲಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾದ ಮೇಲೆ ಚಿಕಿತ್ಸೆ ಮಾಡಿ ಬೆಳಕು ಕೇಂದ್ರೀಕೃತಗೊಳ್ಳಲು ಇರುವ ಅಸಮತೋಲನವನ್ನು ನಿವಾರಿಸಲು ಯತ್ನಿಸಲಾಗುತ್ತದೆ. ಎಕ್ಸೈಮರ್ ಲೇಸರ್ ಎಂಬ ಲೇಸರ್ ಕಿರಣ ಉಪಯೋಗಿಸಿ ಮೊದಲೇ ಕರಾರುವಕ್ಕಾಗಿ ಲೆಕ್ಕಾಚಾರ ಹಾಕಿದಷ್ಟು ಲೇಸರ್ ಶಕ್ತಿಯನ್ನು ಕಾರ್ನಿಯಾದ ಮೇಲೆ ಹಾಯಿಸಿ ದೃಷ್ಟಿದೋಷ ಸರಿಪಡಿಸಲಾಗುತ್ತದೆ. 

ಲ್ಯಾಸಿಕ್ ಚಿಕಿತ್ಸೆಯನ್ನು ಎರಡು ಹಂತದಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಕಣ್ಣಿನ ದೃಷ್ಟಿದೋಷವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದು ಹಾಗೂ ಕಣ್ಣಿನಲ್ಲಿ ಇರಬಹುದಾದ  ಆಪ್ಟಿಕಲ್ ಅಬರೇಶನ್ ಅಂಶವನ್ನು ಅಳೆಯುವುದು. ಈ ಅಂಶ ವೇವ್ ಫ್ರಂಟ್ ಅಬರೋಮೆಟ್ರಿ ಎಂಬ ಹೊಸ ಸಾಧನದಿಂದ ಅಳೆಯಲ್ಪಡುತ್ತದೆ. ಹೀಗೆ ಲೆಕ್ಕ ಹಾಕಿ ಅಳೆದ ಅಂಶಗಳೆಲ್ಲ ವಿಶೇಷ ಕಂಪ್ಯೂಟರ್ ನಲ್ಲಿ ದಾಖಲಾಗುತ್ತದೆ. ಈ ಅಂಶಗಳು ಎಕ್ಸೈಮರ್ ಲೇಸರ್ ಯಂತ್ರಕ್ಕೆ ವರ್ಗಾವಣೆಯಾಗುತ್ತದೆ. ಎರಡನೆಯ ಹಂತದಲ್ಲಿ ಆಯಾಯ ದೃಷ್ಟಿದೋಷಕ್ಕನುಗುಣವಾಗಿ ಅಗತ್ಯವಿರುವ ಲೇಸರ್ ಕಿರಣವನ್ನು ಕಾರ್ನಿಯದ ಮೇಲೆ  ಹಾಯಿಸಲಾಗುತ್ತದೆ. ಈ ಚಿಕಿತ್ಸೆ ಕೆಲವೇ ಸೆಕೆಂಡುಗಳಲ್ಲಿ ಮುಗಿದುಹೋಗುತ್ತದೆ. ಯಾವ ರೀತಿಯ ನೋವು, ವೇದನೆ ಆಗುವುದಿಲ್ಲ. 
ಈ ಚಿಕಿತ್ಸೆಯಿಂದ ಸಾಮಾನ್ಯವಾಗಿ -- 6 
ರಿಂದ +14 ರವರೆಗಿನ ಹೆಚ್ಚಿನ ಎಲ್ಲಾ ರೀತಿಯ ದೃಷ್ಟಿದೋಷಗಳಿಗೂ ಚಿಕಿತ್ಸೆಯನ್ನು
ಯಶಸ್ವಿಯಾಗಿ ಕೈಗೊಳ್ಳಲಾಗುತ್ತದೆ. 18 ವರ್ಷ ದಾಟಿದ ದೃಷ್ಟಿ ದೋಷ ಬಹಳಷ್ಟು ದಿನಗಳಿಂದ ಒಂದೇ ರೀತಿಯಲ್ಲಿರುವ ಯಾರು ಬೇಕಾದರೂ ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು.

Dr. PADMAJEET A NADAGOUDA PATIL
MBBS DNB FRVS FRCS MNAMS 
VITREO RETINA SURGEON 
RABKAVI-BANAHATTI

Sunday, July 16, 2023

ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭ

ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭ



ರಬಕವಿ ಬನಹಟ್ಟಿ :

    ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ  ಲಕ್ಷ್ಮಿನಗರದ ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭವನ್ನು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ  ಅವರ ಅಧ್ಯಕ್ಷತೆಯಲ್ಲಿ ನೆರವೇರಿತು . 



ಈ ಕಾರ್ಯಕ್ರಮ ಸಂದರ್ಭದಲ್ಲಿ ಬಾಗಲಕೋಟ್ ಜಿಲ್ಲಾ ವಕಪ್ ಬೋರ್ಡ್ ಉಪಾಧ್ಯಕ್ಷ ಡಾಕ್ಟರ್ ಅಕ್ಬರ್ ತಾಂಬೋಳಿ
  , ಬನಹಟ್ಟಿ ನಗರದ ಅಂಜಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಜಮಾದಾರ್ ,
ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತರ   ನಗರ ಘಟಕದ ಅಧ್ಯಕ್ಷ ಮಲಿಕ್ ಜೆ ಬಾರಿಗಡ್ಡಿ ,

ಹಾಗೂ ನಗರಸಭೆಯ ಮಾಜಿ ಸದಸ್ಯ ನಸೀಮ್ ಮೊಕಾಸಿ ,ಆನಂದ್ ಕಂಪು ,ಅಂಜುಮನ್ ಸಂಸ್ಥೆಯ ಸದಸ್ಯ  ಅಜೀಜ್ ಶೇಕ್, ಫಿರೋಜ್ ಜಕಾತಿ ,ಚಿಸ್ತಿ ಜಕಾತಿ, ಚಿಸ್ತಿಮಿಯ ಮೋಮಿನ ,
 ಯಾಸಿನ್ ತಾಂಬೋಳಿ,
ಶಾಲಾ ಮುಖ್ಯ  ಗುರುಗಳಾದ ಕಲ್ಮಾಡಿ ಸರ್ . 
ಹಾಗೂ ಇನ್ನಿತರರು ಶಿಕ್ಷಕ ಶಿಕ್ಷಕರು ಉಪಸ್ಥಿತರಿದ್ದರು .

ವರದಿ :ಮಹಬೂಬ ಬಾರಿಗಡ್ಡಿ

Tuesday, April 25, 2023

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ರಾಜ್ಯ ಸರ್ಕಾರದ 2ಬಿ ಮುಸ್ಲಿಂ ಮೀಸಲಾತಿ ರದ್ದು ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಇಂದು ವಿಚಾರಣೆ ನಡೆಸಿದ್ದು, ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿದೆ.ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿಯನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ರದ್ದು ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ನ್ಯಾಯಪೀಠ ಇಂದು ವಿಚಾರಣೆ ನಡೆಸಿದ್ದು, ಮುಸ್ಲಿಮರಿಗೆ ನೀಡಿದ್ದ2ಬಿ ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.  




Saturday, April 22, 2023

ಬನಹಟ್ಟಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು :

 

 ರಬಕವಿ ಬನಹಟ್ಟಿ : 


ರಾಜ್ಯದಾದ್ಯಂತ  ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬ   ಅತಿ ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ  ಬನಹಟ್ಟಿ :ನಗರದ  ಲಕ್ಷ್ಮೀ ಬಡಾವಣೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು.

ಸಾಮೂಹಿಕ ನಮಾಜ್ ಬೆಳಗ್ಗೆ 9.೦0 ರಿಂದ 10.೦೦ ರವರೆಗೆ ಒಂದು ಗಂಟೆ ಕಾಲ ನಡೆದಿದ್ದು, ನಮಾಜ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ  ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ರಂಜಾನ್ ಮುಸ್ಲಿಮರ ದೊಡ್ಡ ಹಬ್ಬ. ರಂಜಾನ್ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನ ಧರಿಸಿ, ಈ ದಿನ ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿ ಪ್ರೀತಿಯ ಶುಭಾಶಯವನ್ನು  ಕೋರಿದರು. ರಂಜಾನ್ ಆಚರಣೆಯ ದಿನಾಂಕ ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ. ಚಂದ್ರನ ದರ್ಶನವಾದ ಬಳಿಕ ರಂಜಾನ್ ಹಬ್ಬವನ್ನು    ಆಚರಣೆ ಮಾಡಲಾಗುತ್ತದೆ. ಹಬ್ಬದ ಹಿನ್ನೆಲೆ  ಮುಸಲ್ಮಾನರು ನಿನ್ನೆವರೆಗೂ ಉಪವಾಸ  ರೋಜಾ ಇದ್ದರು.  ಇವತ್ತಿನ ದಿನ ನಮಾಜು ಮಾಡಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ರು.


ಹಿಂದೂ ಬಾಂಧವರು ಕೂಡ  ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರುತ್ತಿರುವುದು ವಿಶೇಷವಾಗಿತ್ತು

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನ ಝುಬೇರ್ ಸಾಬ್ ಅತ್ತಾರ್ , 
ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಬಾಳ್ವೆಯಿಂದ ಬಾಳಬೇಕು ಎಂದು ಕೋರಿದರು   ಹಾಗೂ ರಂಜಾನ್ ತಿಂಗಳಲ್ಲಿ ಉಪವಾಸ ಭಕ್ತಿಯಿಂದ ಆಚರಿಸಿದ್ದು ,    ರಂಜಾನ್ ತಿಂಗಳು ಇಲ್ಲದ ದಿನಗಳಲ್ಲಿ ಕೂಡ  ಆ ಅಲ್ಲಾಹನ ನ್ನಲ್ಲಿ  ಭಯ ಭಕ್ತಿಯಿಂದ ಇರಬೇಕು ಎಂದು ಕೋರಿದರು .

ಮೌಲಾನಾ ರಿಯಾಜ್ ಅಹಮದ್ ಹಲಗಲಿ , ಅವರು ನಮಾಜ್ ನಿರ್ವಹಣೆಯ ಬಗ್ಗೆ ತಿಳಿಸಿದರು .
ಮೌಲಾನಾ ಆಸೀಫ್ ಅತ್ತಾರ್ ಅವರು ನಮಾಜವನ್ನು ನಿರ್ವಹಿಸಿ   ಖೂತುಬಾವನ್ನು ಓದಿದರು .      ಕೊನೆಯದಾಗಿ ಮೊಲಾನಾ ಅನ್ವರ್ ಸಬ್ ದುವಾ ವನ್ನು ಮಾಡಿದರು .

ವರದಿ :  ಮಹಿಬೂಬ  ಮ  ಬಾರಿಗಡ್ಡಿ


ಕಲಾಂ ಎಕ್ಸ್ಪ್ರೆಸ್ ನ್ಯೂಸ್ ರಬಕವಿ ಬನಹಟ್ಟಿ

Friday, March 17, 2023

ಆಮ್ ಆದ್ಮಿ ಪಕ್ಷದ ಪ್ರಚಾರದ ಎಲ್ ಸಿ ಡಿ ವಾಹನ ಅಧಿಕೃತವಾಗಿ ಚಾಲನೆ


 *ರಬಕವಿ ಬನಹಟ್ಟಿ* 

ಬಾಗಲಕೋಟ್ ಜಿಲ್ಲೆಯ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ   ಪ್ರಚಾರದ LCD ಮಾದರಿಯ ವಾಹನವನ್ನು ಅಧಿಕೃತ ಚಾಲನೆ ನೀಡಿದರು .

ಪಕ್ಷದ ಪ್ರಚಾರದ ವಾಹನವನ್ನು ತೆರೆದಾಳ್ ಮತಕ್ಷೇತ್ರದ ಆಕಾಂಕ್ಷೆ ಅಭ್ಯರ್ಥಿ ಅರ್ಜುನ್ ಹಲಗಿ ಗೌಡರ್ ಅವರ ಹುಟ್ಟುರಾದ ಮಧುಬಾವಿ ಗ್ರಾಮದಲ್ಲಿ , ಗುರು ಹಿರಿಯರ ಹಾಗೂ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಮ್ಮುಖದಲ್ಲಿ ಪ್ರಚಾರದ ಎಲ್ಸಿಡಿ ಮಾದರಿಯ ವಾಹನವನ್ನು ಪೂಜೆ ಆರತಿ ಬೆಳಗುವುದರ ಮೂಲಕ ಹಾಗೂ ರಿಬ್ಬನ್ ಕಟ್ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆಯನ್ನು ನೀಡಿದರು  .

ಈ ಸಂದರ್ಭದಲ್ಲಿ ಮಾತನಾಡಿದ ತೇರದಾಳ ಮತ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲ್ಗಿ ಗೌಡರ್ ಬರುವ 2023ರ ವಿಧಾನಸಭೆ ಚುನಾವಣೆಯ ಅಂಗವಾಗಿ , ಈ ಎಲ್ ಸಿ ಡಿ ಪರದೆಯ ವಾಹನವನ್ನು ಆರಂಭ ಮಾಡಿದ್ದೇವೆ .  ಮತ್ತು ಬರುವ ದಿನಮಾನಗಳಲ್ಲಿ " *ನನ್ನ ಹಳ್ಳಿ ನನ್ನ* *ಕನಸು* " ಅನ್ನುವಂತಹ ಒಂದು ಕಾನ್ಸೆಪ್ಟ್ ಮೂಲಕ , ಪ್ರತಿಯೊಂದು ಗ್ರಾಮಕ್ಕೆ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಸಂಗ್ರಹ ಮಾಡುತ್ತೇವೆ . ಇದರ ಜೊತೆಗೆ ನಾಳೆ ಮಹಾಲಿಂಗಪೂರ  ನಗರದಲ್ಲಿ ತೇರದಾಳ   ಮತ ಕ್ಷೇತ್ರ ಯಾವ ರೀತಿ ಬದಲಾಗಬೇಕು , ಹಾಗೂ ಯಾವ ರೀತಿ ಅಭಿವೃದ್ಧಿ ಹೊಂದಬೇಕು , ಅನುವಂತ ವಿಚಾರವನ್ನು ಸಾರ್ವಜನಿಕ ಸಮ್ಮುಖದಲ್ಲಿಯೇ ಪಕ್ಷದ ಮತಕ್ಷೇತ್ರದ ಪ್ರನಾಳಿಕೆಯನ್ನು ಕೂಡ ತಯಾರು ಮಾಡುತ್ತೇವೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತೇರದಾಳ ಮತ ಕ್ಷೇತ್ರದ ಅಧ್ಯಕ್ಷ ಶಂಕರ್ ಹುಕ್ಕೇರಿ ,ವಿಟ್ಟಲ್ ಮುಧೋಳ ವಿನೋದ್ ಉಳ್ಳಾಗಡ್ಡಿ , ಸದಾಶಿವ ಕೋಳಿಕರ್, ಸದಾಶಿವ್ ಪಟ್ಟಣಶೆಟ್ಟಿ , ಶ್ರೀಶೈಲ್ ಬುದ್ನಿ , ಕುಮಾರ್ ಭಜಂತ್ರಿ , ಬಸವರಾಜ್ ಭಜಂತ್ರಿ ಇನ್ನು ಅನೇಕ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .


ವರದಿ :
ಮಹಿಬೂಬ್ ಎಂ ಬಾರಿಗಡ್ಡಿ

Saturday, March 11, 2023

ಯಶಸ್ವಿಯಾದ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಬೃಹತ್ ಸಮಾವೇಶ*


 *ರಬಕವಿ ಬನಹಟ್ಟಿ* : 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು .

 ಸ್ವಾಭಿಮಾನಿ ಬೃಹತ್ ಸಮಾವೇಶದಲ್ಲಿ ರಾಷ್ಟ್ರಗೀತೆಯನ್ನು ಹಾಡುವುದರ ಹಾಗೂ ಗೌರವಿಸುವುದರ  ಜೊತೆಗೆ ವಿಜಯಪುರದ ಮೌಲಾನ ತನ್ವೀರ್ ಹಾಸಿಮ್ ಪೀರ್ , ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆಯನ್ನು ನೀಡಿದರು 

ಈ ಸಂದರ್ಭದಲ್ಲಿ  ಮಾತನಾಡಿದ ವಿಜಯಪುರದ ಮೌಲಾನಾ ತನ್ವೀರ್ ಹಶಿಮ್ ಪೀರ್ , ಮುಸಲ್ಮಾನರು ದೇಶಕ್ಕೆ ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ದರಿದ್ದೇವೆ ಆದರೆ  ದೇಶಕ್ಕೆ ಎಂದಿಗೂ   ದ್ರೋಹ ಬಗೆಯುವುದಿಲ್ಲ , ಜೊತೆಗೆ ನಮ್ಮ ಇಸ್ಲಾಂ ಧರ್ಮ ನಮಗೆ ಹೇಳಿದ ಪಾಠ 
 ನೀವು ಜನ್ಮ ತಾಳಿದ ಯಾವುದೇ ದೇಶ ಇದ್ದರೂ ಆ ದೇಶದ  ಗೌರವವಿಸುವುದರ  ,ಜೊತೆಗೆ ಜನ್ಮ ತಾಳಿದ  ಭೂಮಿಯನ್ನು ಪ್ರೀತಿಸಬೇಕು ಹಾಗೂ  ದೇಶಕ್ಕೋಸ್ಕರ ಪ್ರಾಣ ತ್ಯಾಗಕ್ಕೂ ಸಿದ್ಧ ಇರಬೇಕು . ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಂತ ಸಂವಿಧಾನವನ್ನು ಕೆಲವೇ ಕೆಲವು ದುಷ್ಟ ಶಕ್ತಿಗಳು ಅದನ್ನೇ ತೆಗೆದುಹಾಕಲು ಪ್ರಯತ್ನ ಮಾಡುತ್ತಿವೆ  , ಆದರೆ ದೇಶದ ಸಂವಿಧಾನವನ್ನು ನಮ್ಮ ಪ್ರಾಣ ಪನಕ್ಕಿಟ್ಟು  ರಕ್ಷಣೆ   ಮಾಡ್ತೀವಿ   , ವಿಧಾನಸಭೆ ಚುನಾವಣೆ 2023 ಚುನಾವಣೆ ಗಂಭೀರವಾಗಿ ಪರಿಗಣಿಸಿ , ಮತದಾನ  ಗುರುತಿನ ಚೀಟಿ ಇಲ್ಲ  ಅಂಥವರು ಗುರುತಿನ  ಚೀಟಿ ಕಡ್ಡಾಯವಾಗಿ ಮಾಡಿಸಿ , ನೂರಕ್ಕೆ ನೂರು ರಷ್ಟು  ಮತದಾನವನ್ನು ಕಡ್ಡಾಯವಾಗಿ ಮಾಡಬೇಕು  ಎಂದು ಕಿವಿಮಾತು ಹೇಳಿದರು .

ಈ ದೇಶದಲ್ಲಿ ಕೇವಲ ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಾ ಇವೆ .ಇದು  ವಿಷಾದನೀಕರ ,ಈ ದೇಶದಲ್ಲಿ ಕೆಲವೇ ಕೆಲವು ದುಷ್ಟ ಶಕ್ತಿಗಳು ಹಿಂದೂ ಮುಸ್ಲಿಮರನ್ನು ಬೇರ್ಪಡಿಸುವುದು ಚಾಳಿಯನ್ನು ಮುಂದುವರಿಸುತ್ತಾ ಇವೆ , ಜಾತ್ಯಾತೀತ ಮನೋಭಾವ ಇರುವಂತಹ ಹಿಂದೂ ಬಾಂಧವರನ್ನು ಒಟ್ಟಿಗೆ ಕರೆದುಕೊಂಡು ನಾವು ದೇಶದ ಸಂವಿಧಾನವನ್ನು ಕಾಪಾಡಬೇಕಿದೆ . ಆದ್ದರಿಂದ ಒಂದು ಕಾಲದಲ್ಲಿ  ಹಿಂದು ಮುಸಲ್ಮಾನರು  ಪ್ರೀತಿ ವಿಶ್ವಾಸದಿಂದ ಹೇಗೆ ಇರುತ್ತಿದ್ದರೋ ,ಹಾಗೆ ಬರುವ ರಂಜಾನ್ ಹಬ್ಬದ ದಿನ ಹಿಂದೂ ಬಾಂಧವರನ್ನು ಮನೆಗೆ ಕರೆಸಿ  ಸಿಹಿಯನ್ನು ನೀಡುವುದರ   ಮೂಲಕ ಈ ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲಿಕ್ಕೆ ಈ ಮಹತ್ವವಾದಂತ ಕಾರ್ಯ   ರಬಕವಿ ಬನಹಟ್ಟಿ  ನಗರದಿಂದಲೇ ಪ್ರಾರಂಭವಾಗಬೇಕು ಎಂದು ವತ್ತಿ ಹೇಳಿದರು .

ಇದೇ ಸಂದರ್ಭದಲ್ಲಿ ಮಾತನಾಡಿದ ,ಹುಬ್ಬಳ್ಳಿಯ ಮೌಲಾನಾ ಸಿರಾಜ ಸಾಹೇಬ್ ಕಾಶ್ಮೀ  ,ಧರ್ಮ ಹಾಗೂ ರಾಜಕೀಯ ಎಂದಿಗೂ ಬೇರ್ಪಡಿಸಬಾರದು . ಏಕೆಂದರೆ ಪ್ರತಿಯೊಂದು ಧರ್ಮದ ಬಡವ ದೀನ ದಲಿತರ ಜನಸಾಮಾನ್ಯರಿಗಾಗಿ  , ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು    ಸೇವೆ  ಮಾಡಿದರೆ , ಧರ್ಮವನ್ನು ಯಾವತ್ತೂ ರಾಜಕೀಯವನ್ನು ವಿರೋಧಿಸುವುದಿಲ್ಲ , ಆದರೆ ಸ್ವಾರ್ಥಕ್ಕಾಗಿ ಯಾವುದೇ ರಾಜಕೀಯ ಧರ್ಮವನ್ನು  ಬಳಸಿಕೊಂಡರೆ ಮಾತ್ರ ಧರ್ಮವು  , ಕೆಟ್ಟ ರಾಜಕೀಯ ವನ್ನು ಮಾತ್ರ  ವಿರೋಧಿಸುತ್ತದೆ .ರಾಜಕೀಯ ಒಂದು ಕೆಸರು  ಇದ್ದಹಾಗೆ , ಅದ್ರಲ್ಲಿ ಜಾರಿ ಬಿದ್ದ ವ್ಯಕ್ತಿಯನ್ನು ಉಳಿಸಬೇಕಾದರೆ , ನಾವು ಕೂಡ ಕೆಸರಿನಲ್ಲಿ ಹೋಗಬೇಕಾಗುತ್ತದೆ . ಇಲ್ಲದಿದ್ದರೆ ಕೆಸರಿನಲ್ಲಿ   ಜಾರಿ ಬಿದ್ದ ವ್ಯಕ್ತಿ ಮೇಲಕ್ಕೆ ತರಲು ಸಾಧ್ಯವಿಲ್ಲವೋ ,ಹಾಗೇನೆ ರಾಜಕೀಯದಲ್ಲಿ ಸ್ವಾರ್ಥ ರಾಜಕಾರಣ ಯಾರು ಮಾಡುತ್ತಾರೋ ,ಕೆಟ್ಟ ರಾಜಕೀಯದಿಂದ  ಅವರನ್ನು ತೆಗೆಯಲಿಕ್ಕೆ  ನಾವು ಕೂಡ ರಾಜಕೀಯದಲ್ಲಿ ಧುಮುಕಬೇಕು ಎಂದು ಹೇಳಿದರು . 

 ತೇರದಾಳ  ಮತ ಕ್ಷೇತ್ರದ  ಇತಿಹಾಸದಲ್ಲಿ  ಪ್ರಪ್ರಥಮವಾಗಿ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶ ನಡೆದಿದ್ದು  , ಮಹಾಲಿಂಗಪುರ್ , ತೇರದಾಳ್ , ರಬಕವಿ, ರಾಂಪುರ್ ,ಹೊಸೂರು , ಬನಹಟ್ಟಿ , ಇನ್ನು ಅನೇಕ ಹಳ್ಳಿಗಳಿಂದ ಈ ಸಮಾವೇಶದಲ್ಲಿ 10  ರಿಂದ 15 ಸಾವಿರ ಜನ  ಸೇರುವುದರ  ಮೂಲಕ  ಈ ಸಮಾವೇಶವನ್ನು ಯಶಸ್ವಿಗೊಳಿಸಿದರು .


ಈ ಸಮಾವೇಶದ ವೇದಿಕೆಯಲ್ಲಿ ಮುಫ್ತಿ ಜುಬೇರ್ ಸಾಬ್ ಮಿರಜ್ ಹಾಗೂ ಜಮಿಯತ್   ಉಲ್ಮಾ ಹಿಂದ್ ಸಂಘಟನೆಯ ಎಲ್ಲಾ ಉಲೆಮಾ  ಸದಸ್ಯರು , ಹಾಗೂ ತೇರದಾಳ ಮತಕ್ಷೇತ್ರಾದ್ಯಂತ ಸ್ಥಳೀಯ ಪ್ರಭಾವಿ ಮುಖಂಡರುಗಳು ಉಪಸ್ಥಿತರಿದ್ದರು .


ವರದಿ : 
ಮಹಬೂಬ್ ಎಂ ಬಾರಿಗಡ್ಡಿ

Thursday, March 9, 2023

حالات حاضرہ اور ہماری کے عنوان پر کانفرنس کا انعقاد* *ربکوی بنھٹی*:

حالات حاضرہ اور ہماری کے عنوان پر  کانفرنس کا انعقاد*

 *ربکوی بنھٹی*:

11.03-2023 بروز ہفتہ کو         

باگل کوٹ ضلع تعلقہ ربکوی بنھٹی 
بنھٹی نگر کے ایس آر اے ہائی اسکول
 گراؤنڈ میں مسلم کمیونٹی کے تعلیمی، معاشی اور سماجی اتحاد اور مسلمانوں کی موجودہ صورتحال کے حوالے سے اپنی ذمہ داری کا احساس کرنے کے لیے مسلم کمیونٹی کی ایک بہت بڑی عزت نفس کانفرنس کا انعقاد کیا گیا، 

اس موقع پر جمعیۃ علماء تعلقہ ربکوی بنھٹی کے صدر مولانا محسن احمد نے پریس کانفرنس کرتے ہوئے کہا کہ مسلم معاشرہ کی جدید تعلیم بہت ٹھپ ہو چکی ہے، اس کانفرنس کا بنیادی مقصد تعلیم کو اوپر لانا ہے اور اس طرح تعلیم کو فروغ دینا ہے۔ ملک کی قیادت کرنے کا ہتھیار ہم نے کھو دیا ہے اس لیے ہمیں تعلیم کا ہتھیار ڈھونڈنا چاہیے اور اپنی برادری کے بچوں کو تعلیم دینے کی کوشش کرنی چاہیے، اس موقع پر انہوں نے کہا کہ معززین اور علماء کرام بھی پہنچیں گے۔

 

اس موقع پر ربکوی بنھٹی میونسپل کونسل کے رکن یونس چوگلے، جاوید باغبان ابوبکر بندے بروج، اسلم شیلیدار، شانور مالدار بڈھن جمعدار مشتاق گراڈی ذاکرنداف اور کئی دیگر معززین موجود تھے۔


رپورٹ:
محبوب ایم بریگڈی