Friday, April 25, 2025

ಜಮ್ಮು ಮತ್ತು ಕಾಶ್ಮೀರ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ , ಎಸ್ ಡಿ ಪಿ ಐ ಪ್ರತಿಭಟನೆ :



 ಬಾಗಲಕೋಟೆ / ಮಹಾಲಿಂಗಪುರ  : 

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ್ ನಗರದಲ್ಲಿ ಗಾಂಧಿ ಸರ್ಕಲ್ ನಿಂದ ಚನ್ನಮ್ಮ ಸರ್ಕಲ್ ವರೆಗೆ ಕ್ಯಾಂಡಲ್ ಮತ್ತು ಟಾರ್ಚ್ ಹಚ್ಚಿ ಪ್ರತಿಭಟನೆ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಅಮಾಯಕರ ಸಾವಿಗೀಡಾಗಿರುವ ಘಟನೆಗೆ ಎಸ್‌ಡಿಪಿಐ ತೇರದಾಳ್ ವಿಧಾನಸಭಾ ಕ್ಷೇತ್ರದ ವತಿಯಿಂದ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಲಾಯಿತು.

ದೇಶದ ಶಾಂತತೆ ಮತ್ತು ಭದ್ರತೆಯನ್ನು ಭಂಗಗೊಳಿಸುವ, ಅಮಾಯಕರ ರಕ್ತ ಹರಿಸಲು ಹಿಂದೆ ಮುಂದೆ ನೋಡುವುದಿಲ್ಲದ ಭಯೋತ್ಪಾದಕರ ವಿರುದ್ಧ ದೇಶದ ಪ್ರತಿಯೊಬ್ಬ ನಾಗರಿಕನು ಏಕಕಟ್ಟಾಗಿ ನಿಲ್ಲಬೇಕಾದ ಅವಶ್ಯಕತೆಯಿದೆ.

“ಭಯೋತ್ಪಾದಕರಿಗೆ ಯಾವುದೇ ಜಾತಿ ಅಥವಾ ಧರ್ಮವಿಲ್ಲ. ಇಂತಹ ಕ್ರೂರ ಕೃತ್ಯಗಳು ಇವರ ಧರ್ಮವಾಗಿದೆ. ನಾವು ಎಲ್ಲರೂ ಮೊದಲು ಭಾರತಿಯರಾಗಬೇಕು. ಧರ್ಮ, ಜಾತಿ, ಭಾಷೆ ಎಂಬ ಭೇದಗಳನ್ನು ಮರೆತು ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು,” ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬಾರಕ್ ಅಲ್ಲಾಖಾನ್ ಹೇಳಿದರು.“2019 ರ ಪುಲ್ವಾಮಾ ದಾಳಿಯಲ್ಲಿ 350 ಕೆಜಿ RDX ಹೇಗೆ ಬಂದಿತು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚಿನ ದಾಳಿಯಲ್ಲಿಯೂ ಗುಪ್ತಚರ ಇಲಾಖೆಯ ವೈಫಲ್ಯ ಸ್ಫುಟವಾಗಿದೆ. ದೇಶದ ವಿರೋಧಿಗಳ ವಿರುದ್ಧ ಪ್ರತಿಯೊಬ್ಬರೂ ಒಗ್ಗಟ್ಟಾಗಿ ನಿಲ್ಲಬೇಕು” ಎಂದು ಜಿಲ್ಲಾ ಕಾರ್ಯದರ್ಶಿ ಉಮರ್ ಕಾಲಿಖಾನ್ ಮತ್ತು ಆಫೀಸ್ ಆಬಿದ್ ನದಾಫ್ ಹೇಳಿದರು. ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯಲ್ಲಿ ಗೌಸ್ ನದಾಫ್ ಯಾಸಿನ್ ಬಳಗಾರ ಮೌಲಾನ ರಂಜಾನ್ ಫಾರೂಕ್ ಪಕಾಲಿ ದಸ್ತಗೀರ್ ನದಾಫ್ ಶಾನೂರ್ ಚಿತವಾಡಗಿ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

ಪಹಲ್ಗಾಮ್ ನಲ್ಲಿ ಅಮಾಯಕ 28 ಜನರ ಮೇಲೆ ದಾಳಿಯನ್ನು ಖಂಡಿಸಿ, ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಮಾ ಹಿಂದ್ ಜಂಟಿಯಾಗಿ ಪ್ರತಿಭಟನೆ

ಪಹಲ್ಗಾಮ್ ನಲ್ಲಿ ಅಮಾಯಕರ 28 ಜನರ ಮೇಲೆ  ದಾಳಿಯನ್ನು ಖಂಡಿಸಿ,  ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಮಾ ಹಿಂದ್  ಪ್ರತಿಭಟನೆ 

 ಬಾಗಲಕೋಟೆ /  ರಬಕವಿ ಬನಹಟ್ಟಿ : 
 ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಮಹಾತ್ಮ  ಗಾಂಧಿ ವೃತ್ತದಲ್ಲಿ ಜಮಿಯತೆ ಉಲೆಮಾ ಹಿಂದ್ ಸಂಘಟನೆ ಹಾಗೂ ಅಂಜುಮನ್ ಸಂಘಟನೆಗಳ ಒಕ್ಕೂಟ ಇವರ ಆಶ್ರಯದಲ್ಲಿ ಕ್ಯಾಂಡಲ್ ಮತ್ತು ಟಾರ್ಚ್ ಹಚ್ಚಿ ಪ್ರತಿಭಟನೆ ಮಾಡಿದರು . 

 ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಅಮಾಯಕರ ಸಾವಿಗೀಡಾಗಿರುವ ಈ ಘಟನೆ   ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ನಗರಗಳ ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಲೇಮಾ ಹಿಂದ್  ಮೌಲ್ವಿ ಸಂಘಟನೆ ವತಿಯಿಂದ ತೀವ್ರ ಸಂತಾಪ  ವ್ಯಕ್ತಪಡಿಸಲಾಯಿತು . ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಲಾಯಿತು .
 ಈ ಸಂದರ್ಭದಲ್ಲಿ ಮಾತನಾಡಿದ  ಜಮೀಯತೆ ಉಲೆಮಾ  ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಗೋಕಾಕ್ , 28 ಜನರ ಅಮಾಯಕರ ಮೇಲೆ ದಾಳಿ ಮಾಡಿದ್ದನ್ನು ನಾವು ಖಂಡಿಸುತ್ತೇವೆ  ಭಯೋತ್ಪಾದಕರಿಗೆ ಹಾಗೂ ಇಸ್ಲಾಂ ಧರ್ಮಕ್ಕೆ ಯಾವುದೇ ಸಂಬಂಧವಿರುವುದಿಲ್ಲ ನಮ್ಮ ದೇಶದ ಪ್ರಧಾನ ಮಂತ್ರಿ ಭಯೋತ್ಪಾದಕರ ನಿರ್ನಾಮಕ್ಕೆ ಪಣತೊಟ್ಟಿದ್ದಾರೆ   ಇದಕ್ಕೆ   ನಮ್ಮ ಸದಾ ನಮ್ಮ ಬೆಂಬಲ ಇದ್ದೇ ಇರುತ್ತದೆ  ಎಂದು ಹೇಳಿದರು.
ಭಯೋತ್ಪಾದಕರಿಗೆ ಯಾವುದೇ ಜಾತಿ ಅಥವಾ ಧರ್ಮವಿಲ್ಲ. ಇಂತಹ ಕ್ರೂರ ಕೃತ್ಯಗಳು ಇವರ ಧರ್ಮವಾಗಿದೆ. ನಾವು ಎಲ್ಲರೂ ಮೊದಲು ಭಾರತಿಯರಾಗಬೇಕು. ಧರ್ಮ, ಜಾತಿ, ಭಾಷೆ ಎಂಬ ಭೇದಗಳನ್ನು ಮರೆತು ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು, ಎಂದು ಹೇಳಿದರು . 
 ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ನಗರಗಳ ಅಂಜುಮನ್ ಅಧ್ಯಕ್ಷರು ಸದಸ್ಯರು ಹಾಗೂ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು .

Monday, April 14, 2025

ತೇರದಾಳದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಣೆ

ತೇರದಾಳದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಣೆ

ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಮಿತಿಯ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಭಾವುಕತೆಗೂಡಿದ ಹಾಗೂ ವಿಜೃಂಭಣೆಯೊಂದಿಗೆ ಆಚರಿಸಲಾಯಿತು.

“ಸರ್ವಾಧಿಕಾರ ಅಳಿಯಲಿ, ಸಂವಿಧಾನ ಉಳಿಯಲಿ” ಎಂಬ ಘೋಷವಾಕ್ಯದ ಮೂಲಕ ಈ ಸಮಯದ ರಾಜಕೀಯ ಪರಿಸ್ಥಿತಿ ಸಂಪೂರ್ಣ ಸರ್ವಾಧಿಕಾರ ಶಕ್ತಿಗಳ ತಾಕೀತಿಗೆ ಒಳಪಟ್ಟು, ಅದನ್ನು ಸರಿಪಡಿಸುವ ಅಗತ್ಯತೆ ಬಗ್ಗೆ ಗಮನ ಸೆಳೆಯಲಾಯಿತು.

ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ತಂಪು ಪಾನೀಯಗಳನ್ನು ಹಂಚಲಾಯಿತು.

ಕಾರ್ಯಕ್ರಮದಲ್ಲಿ SDPI ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮುಬಾರಕ್ ಅಲ್ಲಾಖಾನ, ಜಿಲ್ಲಾ ಸಮಿತಿ ಸದಸ್ಯರು ಹುಸೇನ ಜಮಾದಾರ, ಗೌಸ್ ನದಾಫ್, ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಸ್ಲಂ ಇನಾಮದಾರ, ಮಹಾಲಿಂಗಪುರ ನಗರ ಸಮಿತಿಯ ಅಧ್ಯಕ್ಷ ಯಾಸೀನ್ ಬಳಗಾರ ಹಾಗೂ ಕಾರ್ಯದರ್ಶಿ ಮೂಸಾ ಬೂದಿಹಾಳ ಅವರುಗಳು ಉಪಸ್ಥಿತರಿದ್ದರು.

ಅದೇ ರೀತಿ ದಲಿತ ಸಮಾಜದ ಮುಖಂಡರಾದ ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ಎಂ.ಡಿ. ಆನಂದ್, ರಘು ಆಸಿಪ್ಪನವರ, ಪುಂಡಲೀಕ ಮೇತ್ರಿ, ದುರಗಪ್ಪ ಕಿರಿಕಿರಿ, ಅಭಿನಂದನ ಮುಖ್ಯನವರ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Wednesday, April 9, 2025

ನಗರಸಭೆ ವಾರ್ಡ್ ರಸ್ತೆ ಅಗಲೀಕರಣಕ್ಕಾಗಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು :

ವಾರ್ಡ್ ರಸ್ತೆ ಅಗಲೀಕರಣಕ್ಕಾಗಿ ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು : 

 ಬಾಗಲಕೋಟೆ / 
ರಬಕವಿ - ಬನಹಟ್ಟಿ : ತಾಲೂಕಿನ ಬನಹಟ್ಟಿ ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ 5 ಮತ್ತು 6 ನೇ ವಾರ್ಡಿನ ಮಲ್ಲಿಕಾರ್ಜುನ ಚಿತ್ರಮಂದಿರ ವನ್ನು ತೆರವುಗೊಳಿಸಿದ ನಂತರ ರಸ್ತೆಯನ್ನು ಅಗಲೀಕರಣ ಮಾಡುವ ಕುರಿತು ಮಾನ್ಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ರಬಕವಿ-ಬನಹಟ್ಟಿ ನಗರಸಭೆಯ ನಗರದ ವಾರ್ಡ ನಂ. 5 ಮತ್ತು 6 ರಲ್ಲಿ ಗಾಂಧಿಚೌಕ ಹತ್ತಿರ ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಈಗಾಗಲೇ 8 ಪೂಟ ಅಗಲದ 200 ಪೂಟ ಉದ್ದದ ರಸ್ತೆ ಇದ್ದು, ಇದು ಬಹಳ ಚಿಕ್ಕದಾಗಿದ್ದು, ಇದನ್ನು ಈಗ ಅಗಲೀಕರಣ ಮಾಡುವುದು ತುಂಬಾ ಅವಶ್ಯಕವಾಗಿದೆ ಏಕೆಂದರೆ ಇಲ್ಲಿ ಪ್ರತಿ ದಿನ ಕಾಯಿಫಲೈ ವ್ಯಾಪಾರ ನಡೆಯುವುದರಿಂದ ಜನ ಸಂದನಿ ಹೆಚ್ಚಾಗಿರುತ್ತದೆ. ಆದರಿಂದ ಇಲ್ಲಿ ಹಾಯ್ದಾಡಲು ವಯೋವೃದ್ಧರಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಅಷ್ಟೆ ಅಲ್ಲದೆ ಈ ಸಮಯದಲ್ಲಿ ದ್ವಿಚಕ್ರ ವಾಹನಗಳೂ ಚಲಾಯಿಸಲು ಆಗುವುದಿಲ್ಲ. ಆದರಿಂದ ದಿನ ನಿತ್ಯ ಜಗಳ ವಾಗ್ವಾದ ನಡೆಯುವುದು ಸಹಜವಾಗಿದೆ 
ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಸದರಿ ರಸ್ತೆಯನ್ನು 20 ಪೂಟ ಅಗಲ ಮತ್ತು 200 ಪೂಟ ಉದ್ದದವರೆಗೆ ಅಗಲೀಕರಣ ಮಾಡಿ ಎಲ್ಲ ಸಾರ್ವಜನಿಕರ ಸುಗಮವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಎಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
 ಈ ಸಂದರ್ಭದಲ್ಲಿ ಬನಹಟ್ಟಿ ಅಲ್ಪಸಂಖ್ಯಾತ ಕೋಆಪರೇಟ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಇರ್ಷಾದ್ ಮೋಮಿನ್ , ಇಸುಫ್ ಮುಧೋಳ್ , ಮಲ್ಲಿಕ ಸಾಬ್ ಮುಲ್ಲಾ, ಶಿರಾ ಸಾಬ್ ಮಳಲಿ , ಜಿನ್ನಾ ಮಳಲಿ , ಮೈನು ಮಳಲಿ ಬಂದೆ ನಮಾಜ್ ಡಾಂಗೆ , ಆಸಿಫ್ ಕಡ್ಲಿಮಟ್ಟಿ , ಉಪಸ್ಥಿತರಿದ್ದರು .

Friday, March 14, 2025

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ "ರೋಜಾ" ಮಹತ್ವವಾದ ಸ್ತಂಭ, ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ? ಲೇಖನ : ಮಹಿಬೂಬ್ ಮ ಬಾರಿಗಡ್ಡಿ

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ  "ರೋಜಾ"  ಮಹತ್ವವಾದ ಸ್ತಂಭ,ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ?

1)  ಕಲ್ಮಾ ಏ ತೋಯ್ಯಬ , 2 )ರೋಜಾ ,  3 ) ಜಕಾತ್ , 4 )ನಮಾಜ್  , 5 ) ಹಜ್ ಇವೆಲ್ಲ ಇಸ್ಲಾಂ ಧರ್ಮದ ಭದ್ರಬುನಾದಿಗಳು ಅಂದರೆ 5 ಫೌಂಡೇಶನ್ ಗಳು, ಉದಾಹರಣೆಗೆ  , ಒಂದು ಮನೆಗೆ ಅದರ ಅಡಿಪಾಯ  ಫೌಂಡೇಶನ್ ಹೇಗೆ ಮುಖ್ಯವಾಗಿರುತ್ತದೆಯೋ, ಹಾಗೆ ಅದರ ಸ್ತಂಭಗಳು ಕೂಡ ಅಷ್ಟೇ ಮುಖ್ಯ , ಅದೇ ರೀತಿ ಕೂಡ ಇಸ್ಲಾಂ ಧರ್ಮದಲ್ಲಿ 5 ಸ್ತಂಭಗಳಲ್ಲಿ ಒಂದು ರಮಜಾನ್ ತಿಂಗಳಿನಲ್ಲಿ "  ರೋಜಾ " ( ಉಪವಾಸ ) ಆಚರಣೆ ಮಾಡುವಂತ ಒಂದು ಸ್ತಂಭ , ಈ ರೋಜಾ ಉಪವಾಸ ಆಚರಣೆ ಶ್ರೀಮಂತ, ಬಡವ,ಮೇಲು, ಕೀಳು  ಅನ್ನುವಂತ ಭಾವನೆ ಇಲ್ಲದೆ ಪ್ರತಿಯೊಬ್ಬರೂ ಕಂಪಲ್ಸರಿ ಮಾಡಲೇಬೇಕಾದಂತಹ  ಉಪವಾಸ  "ರೋಜಾ"  ಆಗಿದೆ . ಇಸ್ಲಾಂ ಧರ್ಮದಲ್ಲಿ ಕೇವಲ ರೋಜಾ ಉಪವಾಸ ಇರುವುದು ಅಷ್ಟೇ ಅಲ್ಲದೆ, ತನ್ನ ಇಡೀ ದೇಹ ವೆ "ರೋಜಾ " ಉಪವಾಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಉಪವಾಸ ಆಚರಣೆ ಆಗುವುದು ಸತ್ಯ. 

ಇಡೀ ದೇಹವೇ ರೋಜಾ ಉಪವಾಸ ಅಂದರೆ ಏನು ಅಂತೀರಾ ?  ಬನ್ನಿ ತಿಳಿಯೋಣ  , ತನ್ನ ಬುದ್ಧಿ  ಈ ಉಪವಾಸ ಆಚರಣೆಯ ಸಂದರ್ಭದಲ್ಲಿ ಕೆಟ್ಟ ದುರಾಲೋಚನೆ ಮಾಡತಕ್ಕದ್ದು  , ಕಣ್ಣುಗಳಿಂದ ಕೆಟ್ಟದ್ದನ್ನು ನೋಡ ಬಾರದು , ನಾವು ಮಾತಾಡುವಂತ ಬಾಯಿಂದ ಕೆಟ್ಟ ಪದಗಳ ಬಳಸ ಬಾರದು  ,  ಸ್ವಂತ ಹೆಂಡತಿಯನ್ನು ಕೂಡ ಕೆಟ್ಟ ರೀತಿಯಿಂದ ನೋಡ ಬಾರದು , ತನ್ನ ಕೈಯಗಳಿಂದ ಕೆಟ್ಟ ಕೆಲಸವನ್ನು ಮಾಡ ಬಾರದು   , ತನ್ನ ಕಾಲಗಳ ಮೂಲಕ ಕೆಟ್ಟ ಕೆಲಸದ ಕಡೆ ಹೋಗ ಬಾರದು   , ಈ ಪ್ರಕಾರವಾಗಿ ಉಪವಾಸ ರೋಜಾವನ್ನು ಮಾಡಿದರೆ ಮಾತ್ರ ಅಲ್ಲಾಹನಿಗೆ ಅರ್ಪಣೆ ಯಾಗುತ್ತದೆ . 
ಪವಿತ್ರ ರಮ ಜಾನ್ ತಿಂಗಳ ಉಪವಾಸ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದು . ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್, ಮೊಹರಂ, ಬಕ್ರೀದ್ ಈ ಹಬ್ಬಗಳಲ್ಲಿ ಶ್ರೇಷ್ಠ ರಮಜಾನ್ ಹಬ್ಬ . ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಬತ್ತನೆಯ ತಿಂಗಳಾಗಿ ಬರುತ್ತದೆ. ರಮಜಾನ್‌ನಲ್ಲಿ ಒಂದು ತಿಂಗಳು, ರೋಜಾ ಉಪವಾಸ ಮಾಡುವದರ ಮುಲಕ  ವೈಜ್ಞಾನಿಕವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಾನು ಜೀವಿಗಳು ಕೂಡ ಸಾಯುತ್ತವೆ  ಹಾಗೂ ಅಲ್ಲಾಹನ ಕೃಪೆಗೆ ಕೂಡ ಪಾತ್ರರಾಗುತ್ತೇವೆ . 

 *ಅಲ್ಲಾಹನು ನಮಗೆ 30 ದಿನ ಉಪವಾಸ   ರೋಜಾ ಉಪವಾಸ ಕಾರ್ಯ ಕೊಟ್ಟಿದ್ದರಿಂದ  ಅಲ್ಲಾಹನಿಗೆ ಏನು ಸಿಗುತ್ತದೆ ?*  

ಅನ್ನುವ ಪ್ರಶ್ನೆ ಉದ್ಭವವಾಗುತ್ತದೆ ಮನುಷ್ಯನು ಏನೇ ಮಾಡಿದರು , ಮಾಡದಿದ್ದರೂ ಕೂಡ ಅಲ್ಲಾಹನ ಭಂಡಾರದಲ್ಲಿ ಒಂದು ಸಾಸಿವೆ ಕಾಳಷ್ಟು ಕಡಿಮೆಯಾಗುವುದಿಲ್ಲ ಹಾಗೇನೇ ಹೆಚ್ಚಿಗೆ ಕೂಡ ಆಗುವುದಿಲ್ಲ  . ಅದೇ ರೀತಿ ಮನುಷ್ಯನು ಯಾವ ರೀತಿ ಭಕ್ತಿಯಿಂದ ತನ್ನ ದೇಹವು ತ್ಯಾಗದ ಮೂಲಕ ಅರ್ಪಣೆ ಮಾಡುತ್ತಾನೋ ಅದೇ ಅಲ್ಲಾಹನಿಗೆ ಅರ್ಪಣೆ ಯಾಗುತ್ತದೆ .
 ಮತ್ತು ಅಲ್ಲಾಹನಿಗೆ  ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬಿಕೆ . ಹಾಗಾಗಿ ರಮಜಾನ್ ತಿಂಗಳಲ್ಲಿ  " ರೋಜಾ" ನಮಾಜ್, ಬಡವ ಶ್ರೀಮಂತ ಮೇಲು ಕೀಳು ಇಲ್ಲದೆ ಮಾಡುವಂತಹ ಪುಣ್ಯದ ಕಾರ್ಯ , ಆದರೆ  ಶ್ರೀಮಂತ ರಿಗೆ ಮಾತ್ರ ಹಜ್ , ಜಕಾತ್  ( ದಾನ  ) ನೀಡುವದಕ್ಕೆ ಕಟ್ಟೆಪ್ಪನೆ ನೀಡುತ್ತದೆ ಇಸ್ಲಾಂ  . 

ಉಪವಾಸವು ಕೇವಲ ದಿನವಿಡೀ ಹಸಿವಿನಿಂದ ಇರಲು ಮಾತ್ರವಲ್ಲದೆ . ಆತ್ಮ ನಿಯಂತ್ರಣ, "ತಾಳ್ಮೆ ಸಬರ ತ್ಯಾಗ, ಆಧ್ಯಾತ್ಮಿಕ ಮತ್ತು ಮಾನಸಿಕ ಶುದ್ಧಿಕರಣದೊಂದಿಗೆ ತಕ್ವಾವನ್ನು ಕಲಿಯುವುದು. 

 ಮುಸ್ಲಿಂ ಬಾಂಧವರು ಈ ರಮಜಾನ್ ತಿಂಗಳು ಗಾಗಿ ಇಡೀ ವರ್ಷ ಉತ್ಸಾಹದಿಂದ ಕಾಯುತ್ತಾರೆ.  "ಸಹೇರಿ " ಅಂದರೆ ನಸುಖಿನ ಜಾವ್ ವೇಳೆ ಅಲ್ಪ ಭೋಜನ    ಸೇವಿಸುವ ಮೂಲಕ ಉಪವಾಸವನ್ನು ಆರಂಭವಾಗಿ , ಸಾಯಂಕಾಲ ಸೂರ್ಯಸ್ತ  ಆದ ನಂತರ  ನೀರು ಮತ್ತು ಪೂರ್ಣ ಪ್ರಮಾಣದಲ್ಲಿ ಭೋಜನವನ್ನು ಮಾಡಿ  ಉಪವಾಸವನ್ನು ತೆರೆ ಮಾಡಲಾಗುತ್ತದೆ  .

ರಮಜಾನ್ ತಿಂಗಳು ಆಚರಣೆಯ ಪ್ರತಿದಿನ ರಾತ್ರಿ 9 ಘಂಟೆಯ ವೇಳೆಯಲ್ಲಿ ವಿಶೇಷ ನಮಾಜ್  "ತರಾವೀಹ್" . ವೇಳೆ  ಸಂಪೂರ್ಣವಾಗಿ ಕುರಾನ್  ಪಠಿಸಲಾಗುತ್ತದೆ. ಬಡವ ಶ್ರೀಮಂತ  ಭೇದ-ಭಾವ ಇಲ್ಲದೆ ಪುರುಷರು ಮಸೀದಿಗಳಲ್ಲಿ ಸಂಘಟಿತರಾಗಿ ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಿದರೆ, ಮಹಿಳೆಯರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ತಿಂಗಳಲ್ಲಿ ಯಾವ ರಾತ್ರಿಯ ದಿನ ಕುರಾನಿನ ಪ್ರಥಮ ವಾಕ್ಯಗಳು ಅವತೀರ್ಣ ಗೊಂಡವೋ ಅದಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ.  "ಲೈಲತುಲ್ ಕದ್ರ "ಎಂದು ಕರೆಯಲಾಗುವ ಈ ರಾತ್ರಿ ಯಾವುದೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ  ರಮಜಾನ್ ಮಾಸದಲ್ಲಿ  21, 23, 25, 27, 29ನೇ ದಿನಾಂಕದಂದು ಅಂದರೆ ಕೊನೆಯ ಹತ್ತು ದಿನಗಳ ಬೆಸ ಸಂಖ್ಯೆಗಳ ದಿನಗಳ  ರಾತ್ರಿ ಲೈಲತುಲ್ ಕದ್ರ ಆಗಿರಬಹುದು ಅನ್ನುವುದು ನಂಬಿಕೆಯಿಂದ .  27ನೇ ದಿನದ ಮುನ್ನಾರಾತ್ರಿ ಹೆಚ್ಚು ಸಂಭವನೀಯ ಇರಬಹುದು ಎಂದು ಹೆಚ್ಚಿನವರು ನಂಬಿಕೆ . ಈ ರಾತ್ರಿಯಲ್ಲಿ ನಡೆಸುವ ಪ್ರಾರ್ಥನೆಗಳು ಉಳಿದ ಸಮಯದ ಪ್ರಾರ್ಥನೆಗಿಂತ ಸಾವಿರಾರು ಪಟ್ಟು ಹೆಚ್ಚು ಪುಣ್ಯದ ಪ್ರತಿ ಫಲಪ್ರದ ಎಂದು ಹೇಳಲಾಗುತ್ತದೆ.

ರಮಜಾನ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ಮೂಲಕ ನೆನಪಿಸಿಕೊಳ್ಳುವುದು ಕುರಾನ್ ಎಂಬ ನಂಬಿಕೆ ಇದೆ. ಈ ಅವಧಿಯಲ್ಲಿ ಮುಸ್ಲಿಮರು ಮಸೀದಿಯಲ್ಲೇ "ಅಯತೇಕಾಬ " (ತಂಗುವುದು) ಭಕ್ತಿಯಿಂದ ಮಾಡುವ ಮೂಲಕ ಧಾರ್ಮಿಕ ಜ್ಞಾನವನ್ನು ಹೆಚ್ಚಿಸಿ ಗೊಂಡು . ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ.

ರಮಜಾನ್ ತಿಂಗಳಲ್ಲಿ ಜಕಾತ್ ದಾನ  ಶ್ರೀಮಂತರು ತಮ್ಮ ಸಂಪತ್ತಿನ ಅಂದರೆ ಒಂದು ವರ್ಷದ ಅವಧಿಯಲ್ಲಿ ಗಳಿಸಿದ ಆದಾಯದಲ್ಲಿ ಶೇ.2.5ರಷ್ಟು ಪಾಲನ್ನು ಜಕಾತ್ ಮತ್ತು ಸದಕಾ, ಫೀತರಾ ಎಂಬ ದಾನದ ರೂಪದಲ್ಲಿ  ಬಡವರಿಗೆ, ವಿಧವೆ , ಅನಾಥ ಮಕ್ಕಳಿಗೆ ನೀಡಲೇಬೇಕು . ಅನ್ನುವುದು ಇಸ್ಲಾಂ ಧರ್ಮದ ಕಟ್ಟಾಜ್ಞೆ ಯಾಗಿದೆ . ಇನ್ನು ದಾನ ಕೊಡುವಾಗ ಹೆಮ್ಮೆಯ ಬದಲು ವಿನೀತ ಭಾವವಿರಬೇಕು. ದಾನಕ್ಕಾಗಿ ಬಡವರು ತಮ್ಮ ಮನೆಗೆ ಬರುವುದು ಇಸ್ಲಾಂ ಧರ್ಮದಲ್ಲಿಲ್ಲ. ದಾನಿಗಳೇ ಅವರ ಮನೆಗೆ ಹೋಗಿ ದಾನ ನೀಡಬೇಕು ಎಂಬ ನಿಯಮ ಕೂಡ ಇದೆ ಎಂದು ಹೇಳಲಾಗುತ್ತಿದೆ.

 ಲೇಖನ - 
ಮಹಿಬೂಬ್ ಎಂ ಬಾರಿಗಡ್ಡಿ