Sunday, August 28, 2022

ನಗರಗಳಲ್ಲಿ ಗಣೇಶ ಪ್ರತಿಷ್ಠಾನ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ವಾಗಿ ಶಾಂತಿಪಾಲನಾ ಸಭೆ

 
ವರದಿ ಮಹಿಬೂಬ್ ಬಾರಿಗಡ್ಡಿ 

ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ಮಹಾಲಿಂಗಪುರ್ ಹಾಗೂ ತೇರದಾಳ ನಗರಗಳಲ್ಲಿ ಗಣೇಶ್ ಪ್ರತಿಷ್ಠಾಪನೆ ಹಾಗೂ ಅವುಗಳ ವಿಸರ್ಜನೆ ಮಾಡುವುದು ಕುರಿತು ,ಬನಹಟ್ಟಿ ನಗರ ಪೊಲೀಸ್ ಠಾಣೆಯಲ್ಲಿ ಸರ್ವಧರ್ಮ ಶಾಂತಿಪಾಲನಾ ಸಭೆ ನಡೆಯಿತು .

ಈ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಅಶೋಕ್ ಗುಡಿಮನಿ ,ಸರ್ಕಾರದ ಸುತ್ತೋಲೆಯಂತೆ ಗರಿಷ್ಠ ಐದು ಅಡಿ ಎತ್ತರದ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಇದಕ್ಕಿಂತ ಹೆಚ್ಚು ಅಡಿ ಪ್ರತಿಷ್ಠಾಪನೆ ಮಾಡುವುದು ಸರ್ಕಾರ ನಿರ್ಬಂಧನೆ ಮಾಡಲಾಗಿದೆ ಹಾಗೂ ಮಣ್ಣಿನ ಮೂರ್ತಿಗಳು ಮಾತ್ರ ಪ್ರತಿಷ್ಠಾಪನೆ ಮಾಡಬೇಕು .ಪ್ಲಾಸ್ಟರ್ ನಲ್ಲಿ ಮಾಡಿದಂತ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿದರು .

ಕಂದಾಯ  ಇಲಾಖೆ ,ಪೊಲೀಸ್ ಇಲಾಖೆ ,ವಿದ್ಯುತ್ ಇಲಾಖೆ, ನಗರಸಭೆ ಇಲಾಖೆ , ಫೈಯರ್ ಗ್ರೇಡ್ ಇಲಾಖೆ  , 5 ಇಲಾಖೆ ಅಧಿಕಾರಿಗಳ ತಂಡ ಏಕಗವಾಕ್ಷಿ ಪದ್ಧತಿ ರೂಪದಲ್ಲಿ ಅತಿ ಶೀಘ್ರವಾಗಿ ಪ್ರತಿಷ್ಠಾಪನೆಯ ಪರವಾನಿಗೆಯನ್ನು ಕೊಡತಕ್ಕಂಥ ವ್ಯವಸ್ಥೆಯನ್ನು ಸರ್ಕಾರದ ಆದೇಶದಂತೆ ನಾವು ಈಗಾಗಲೇ ಚಾಲನೆ ಮಾಡಿದ್ದೇವೆ ಎಂದು ಹೇಳಿದರು  .

ಈ ಶಾಂತಿಪಾಲನೆ ಸಭೆಯಲ್ಲಿಮಾತನಾಡಿದ ಬನಹಟ್ಟಿ ಪೊಲೀಸ್ ಠಾಣೆಯ ಸಿಪಿಐ ವೀರೇಶ್ ಮಠಪತಿ ,ವಿಸರ್ಜನೆ ಸಲುವಾಗಿ ಕೊಟ್ಟಿರುವಂತಹ ಮಾರ್ಗದಲ್ಲಿ ಯಾವುದೇ ಕೂಡ ವ್ಯತ್ಯಾಸ ಆಗಬಾರದು ,ಎಲ್ಲ ಗಣೇಶ ಪ್ರತಿಷ್ಠಾಪನ ಮಂಡಳಿಗಳು ಆದೇಶ ಪಾಲನೆ ಮಾಡಬೇಕು. ರಾತ್ರಿ 12 ಗಂಟೆಯವರೆಗೆ ವಿಸರ್ಜನೆ ಮಾಡಲಿಕ್ಕೆ ಸಮಯ ಕೊಡಬೇಕು ,ಎಂದು ಕೇಳಿದ ಗಣೇಶ ಪ್ರತಿಷ್ಠಾಪನ ಮಂಡಳಿಗಳಿಗೆ ಉತ್ತರಿಸಿದ ,ಗಣೇಶ ವಿಸರ್ಜನೆಯ ಮೆರವಣಿಗೆಯ  ಸಂದರ್ಭದಲ್ಲಿ ಮಾಡಿರುವಂತಹ ಅಲಂಕಾರಗಳನ್ನು  ನೋಡಲಿಕ್ಕೆ  ಸಾರ್ವಜನಿಕರಿಗೆ , ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಹಾಗೂ ಮಕ್ಕಳಿಗೆ ನೋಡುವಂತ ವ್ಯವಸ್ಥೆ ಆಗಬೇಕು , ಆದರೆ ವಿಸರ್ಜನೆ ಹೆಚ್ಚು ಸಮಯ ತೆಗೆದುಕೊಂಡರೆ ,ಆಯಾ ಪ್ರತಿಷ್ಠಾಪನ ಮಂಡಳಿಗಳೇ , 100 , 150 ಜನ ಕೇವಲ ತೆಗೆದುಕೊಂಡು ಹೋಗಬೇಕಾಗುತ್ತದೆ ,ಎಂದು ಉತ್ತರಿಸಿದರು .

ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ನಗರಸಭೆ ಅಧ್ಯಕ್ಷ ಸಂಜು ತೆಗ್ಗಿ ರಬಕವಿ-ಬನಹಟ್ಟಿ ನಗರದ ಗಣೇಶ ಮಿತ್ರ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಊರಿನ ಹಿರಿಯರು ಹಾಗೂ ಮುಸ್ಲಿಂ ಸಮಾಜದ ಅಕ್ಬರ್ ತಾಂಬೋಳಿ ,ಅಂಜುಮನ್ ಇಸ್ಲಾಂ ಸಂಸ್ಥೆಯ ಕಾರ್ಯದರ್ಶಿ ಮಹಿಬೂಬ್ ತಾಂಬೋಳಿ ಇನ್ನೂ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು .

Saturday, August 27, 2022

ದಲಿತರು ಮತ್ತು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಖಂಡಿಸಿ , ಬೃಹತ್ ಪ್ರತಿಭಟನೆ*


KALAAM EXPRESS NEWS
ವರದಿ ಮಹಿಬೂಬ್ ಬಾರಿಗಡ್ಡಿ  

ದೇಶದಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ಖಂಡಿಸಿ,  ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಗರದಲ್ಲಿ ರ್ಯಾಲಿ ಮೂಲಕ ಭಾರಿ ಪ್ರತಿಭಟನೆ ಮಾಡಿದರು .

ಈ ಪ್ರತಿಭಟನೆಯ ರ್ಯಾಲಿಯು ನಗರದ ,, ಬಸ್ ನಿಲ್ದಾಣದ ಹತ್ತಿರ ಗಣಪತಿ ದೇವಾಲಯದಿಂದ   ಚಾಲನೆಗೊಂಡು ,ನಗರದ  ಕಿತ್ತೂರಾಣಿ ಚೆನ್ನಮ್ಮ ಹಾಗೂ ಮಹಾತ್ಮ ಗಾಂಧಿ ಸರ್ಕಲ್ ಪುರಸಭೆವರೆಗೆ ಘೋಷಣೆಗಳ ಮೂಲಕ  ಭಾರಿ  ಪ್ರತಿಭಟನೆ ನಡೆಸಿ ,ನಂತರ  ಪುರಸಭೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಿದರು   .

ಈ ಪ್ರತಿಭಟನೆಯನ್ನು ಉದ್ದೇಶಿಸಿ ಅಲ್ಪಸಂಖ್ಯಾತರ ಮುಖಂಡ ಜಾವೇದ್ ಭಾಗವಾನ್ ಮಾತನಾಡಿದರು .

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಯಮನಪ್ಪ ಗುಣದಾಳ ನಗರದ ಅಲ್ಪಸಂಖ್ಯಾತರ ಮುಖಂಡರಾದ ಜಾವೇದ್ ಭಗವಾನ್ ಪರಶುರಾಮ್ ಮೇತ್ರಿ , ಮುಬಾರಕ್ ಅಲ್ಲಾಖಾನ್ ,ಸಿಂಹ ಮೇತ್ರಿ  ,ಭೀಮ್ ಆರ್ಮಿಯ ಮುಖಂಡರು ಲವಿತ್ ಮೇತ್ರಿ ಸಂಜು ಕಂಬಾಗಿ ,ಡಿಎಸ್ಎಸ್ ಹರಿಜನ್ ಮುಖಂಡರಾದ ಸುನಿಲ್ ಹರಿಜನ್ ,ಅರ್ಜುನ್ ದೊಡ್ಮನಿ ,  ಭೀಮ್ಸಿ ಮಾವಿನ ಹಿಂದಿ ಬಸು ಮಾವಿನಹಿಂದಿ ,ಸಿರಾಜುದ್ದೀನ್ ಮುಜಾವರ ,ಯಾಸೀನ್  ಬಳಗಾರ ,   ಯುನುಸ್ ಬೀಳಗಿ   ,    ಇನ್ನೂ ಹಲವಾರು ಮುಖಂಡರು ಭಾಗಿಯಾಗಿದ್ದರು  .

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದ ನೂತನವಾಗಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ಮಾಡಿದ ಶಾಸಕ ಸನ್ಮಾನ್ಯ ಸಿದ್ದು ಸೌದಿ*



 
ವರದಿ  ಮಹಿಬೂಬ್  ಬಾರಿಗಡ್ಡಿ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ರಬಕವಿ-ಬನಹಟ್ಟಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ , ,ಕ್ಯಾಟರ್ ಪಿಲ್ಲರ  ಫೌಂಡೇಶನ್ ಬೆಂಗಳೂರು ,ಮತ್ತು  ಯುನೈಟೆಡ್ ವೇ   ಬೆಂಗಳೂರು , ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ರಬಕವಿ-ಬನಹಟ್ಟಿ, ಸಮುದಾಯ ಆರೋಗ್ಯ ಕೇಂದ್ರ ರಬಕವಿ ಬನಹಟ್ಟಿ ಇವರ ಸಹಯೋಗದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು .

 ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ತೇರದಾಳ ಮತ ಕ್ಷೇತ್ರದ ಶಾಸಕ ಸನ್ಮಾನ್ಯ ಸಿದ್ದು ಸವದಿ ಉದ್ಘಾಟನೆ ಮಾಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನ್ಯ ಸಿದ್ದು ಸವದಿ ಕಳೆದ ಕೋವಿಡ್-19 ಲ್ಲಿ ಸಾಕಷ್ಟು ಜನರಿಗೆ ಆಕ್ಸಿಜನ ಇಲ್ಲದೆ ಇರುವುದರಿಂದ ಸಾಕಷ್ಟು ಜನರ ಜೀವ ಕಳೆದುಕೊಂಡರು .ಒಂದು ಆಮ್ಲಜನಕದ ಟ್ಯಾಂಕರ್ ಜಿಲ್ಲೆಗೆ ಬಂದರೆ ಜಿಲ್ಲೆಯಲ್ಲಿ ಹಂಚು ಹರಿದು ಹೋಗುವಷ್ಟರಲ್ಲಿ ಸಾಕಷ್ಟು ಜನರು  ಆಮ್ಲಜನಕದ ತೊಂದರೆಗೆ  ಈಡಾಗುತ್ತಿದ್ದರು .ಈಗ ಬಾಗಲಕೋಟ್ ಜಿಲ್ಲೆಯ  ರಬಕವಿ ಬನಹಟ್ಟಿ ಯಲ್ಲಿ  ಆಮ್ಲಜನಕವನ್ನೇ ಅಂದ್ರೆ ಆಕ್ಸಿಜನ್ ನೆ  ಉತ್ಪಾದನೆ ಮಾಡುವಂತಹ ಘಟಕ ನಿರ್ಮಾಣವಾಗಿವೆ . ಆಮ್ಲಜನಕದ ಘಟಕಗಳು ನಿರ್ಮಾಣ ಮಾಡುವಲ್ಲಿ ಕ್ಯಾಟರ್ ಪಿಲ್ಲರ್ ಹಾಗೂ ಅಸಿಸ್ಟ್ ಇಂಟರ್ನ್ಯಾಷನಲ್ ಸಂಸ್ಥೆ ಮತ್ತು ಯುನೈಟೆಡ್ ವೇ  ಸಂಸ್ಥೆ ಜಂಟಿ ಸಹಯೋಗದೊಂದಿಗೆ ಆಮ್ಲಜನಕದ ಘಟಕಗಳು ದಾನ ಮಾಡಿರುವಂತ ದಾನಿಗಳಿಗೆ ಆ ಭಗವಂತ ಇನ್ನಷ್ಟು ದಾನಮಾಡುವ ಶಕ್ತಿ ಕೊಡ್ಲಿ ಅಂತ ಸಂದರ್ಭದಲ್ಲಿ ಹೇಳಿದರು .

ಈ ಕಾರ್ಯಕ್ರಮ ಸಂದರ್ಭದಲ್ಲಿ ಜಿಲ್ಲಾ  ಆರೋಗ್ಯ ಅಧಿಕಾರಿ ಜಯಶ್ರೀ ಎಮ್ಮಿ ಮಾತನಾಡಿದರು .

ಈ ಕಾರ್ಯಕ್ರಮ ಸಂದರ್ಭದಲ್ಲಿ .ಕ್ಯಾಟರ ಪಿಲ್ಲರ್ ಸಂಸ್ಥೆಯ ಪೀಟರ್ ,ತಾಲೂಕ ಆರೋಗ್ಯ ಅಧಿಕಾರಿ ಜಿಎಸ್ ಗಲಗಲಿ , ರಬಕವಿ-ಬನಹಟ್ಟಿ ತಾಲೂಕಾ ತಹಸೀಲ್ದಾರ್ ಸಂಜಯ್ ಇಂಗಳೆ ,ಬನಹಟ್ಟಿ ಪೊಲೀಸ್ ಠಾಣಾಧಿಕಾರಿ ನಿರೀಕ್ಷಕರು ವೀರೇಶ್ ಮಠಪತಿ ,ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜಯ್ ತೆಗ್ಗಿ , ಉಪಾಧ್ಯಕ್ಷ ಶ್ರೀಮತಿ ವಿದ್ಯಾ ದಬಾಡಿ   ,ಸಮುದಾಯ ಆರೋಗ್ಯ ಕೇಂದ್ರ ರಬಕವಿ-ಬನಹಟ್ಟಿ ಮುಖ್ಯ ವೈದ್ಯಾಧಿಕಾರಿ  N M ನದಾಫ್ .ಸಂಜಯ್ ಹಿಪ್ಪರ್ಗಿ  ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ , ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತರು  ಉಪಸ್ಥಿತರಿದ್ದರು .

Tuesday, August 23, 2022

_ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಾಲಯ ಉದ್ಘಾಟನೆ_* :



ಬಾಗಲಕೋಟೆ ಆಮ್ ಆದ್ಮಿ ಪಕ್ಷದ ಕಾರ್ಯಾಲಯ ನವನಗರದಲ್ಲಿ ರಾಜ್ಯಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ಸಮ್ಮುಖದಲ್ಲಿ ಅದ್ದೂರಿಯಾಗಿ ಉದ್ಘಾಟನೆಯಾಯಿತು .

ಭಾರತ್ ಮಾತಾ ಕಿ ಜೈ ,ಒಂದೇ ಮಾತರಂ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಜಯವಾಗಲಿ , ಅನ್ನುವ ಘೋಷಣೆಗಳನ್ನು ಹೇಳುತ್ತಾ ,ನಗರದ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ , ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಸೇರಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ,ನಗರದ ಪ್ರಮುಖ ಬೀದಿಗಳಲ್ಲಿ ಪಕ್ಷದ ಜೈಕಾರ ಗಳನ್ನು ಕುಗುತ್ತಾ ರ್ಯಾಲಿ ಮೂಲಕ ಸಂಚರಿಸಿ , ಕೊನೆಗೆ ಶ್ರೀನಿವಾಸ್ ಕಲ್ಯಾಣ ಮಂಟಪದಲ್ಲಿ ಸೇರಿದರು .

ಬಾಗಲಕೋಟ ಜಿಲ್ಲೆಯ ಪ್ರತಿಯೊಂದು ವಿಧಾನಸಭೆಯ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು   ಹಾಜರಿದ್ದರು .

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ  ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿದರು .

ಈ ಕಾರ್ಯಕ್ರಮ ಸಭೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಹಾಗೂ ಖ್ಯಾತ ನ್ಯಾಯವಾದಿ ರಮೇಶ್ ಬದನ್ನೂರು ,ಬೆಳಗಾವಿ ವಲಯದ ಸಂಯೋಜಕರಾದ ತೋಪನ್ನವರ್ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಆಮ್ ಆದ್ಮಿ ಪಕ್ಷದ ಮುಖಂಡ ಟೆನ್ನಿಸ್ ಕೃಷ್ಣ , ತೇರದಾಳ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳಾದ ಅರ್ಜುನ್ ಹಲಗಿ ಗೌಡರ ಹಾಗೂ ಬಾಬು ಶೇಕ್ , ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಶಂಕರ್ ಹುಕ್ಕೇರಿ , ದರೆಪ್ಪ ಘಗ್ರಿ ಯುವರಾಜ್ ಬಂಡಿ ಇನ್ನೂ ಹಲವಾರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .


KALAAM  EXPRESS NEWS
RABKAVI-BANHATTI

Sunday, July 31, 2022

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ತಾಲೂಕು ಆರೋಗ್ಯ ಕೇಂದ್ರ ಸ್ಥಾಪನೆ ಹಾಗೂ ಬಸ್ಸುನಿಲ್ದಾಣ ಕುರಿತು ಸುದ್ದಿಗೋಷ್ಠಿ :*



 *ರಬಕವಿ ಬನಹಟ್ಟಿ :* 

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ  ತಾಲೂಕಿನ ಬನಹಟ್ಟಿ ನಗರದ,  ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ , ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀ ಬಸವರಾಜ ಧರ್ಮ0ತಿ ನೇತೃತ್ವದಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ , ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳಾದ ತಾಲೂಕಾಸ್ಪತ್ರೆ ಮತ್ತು ನಗರದ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಲು ಹೋರಾಟದ ರೂಪುರೇಷೆಗಳ ಬಗ್ಗೆ ,ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು .

ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ,ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಶ್ರೀ ಬಸವರಾಜ ಧರ್ಮ0ತಿ  ,ಅವಳಿ ನಗರಗಳಾದ ರಬಕವಿ-ಬನಹಟ್ಟಿ ತಾಲೂಕು ನಂತರವೂ ಕೂಡ  ನಗರದ ಆಸ್ಪತ್ರೆಯು  ಅದೇ ರೀತಿ ಇದೆ , ಈ ಆಸ್ಪತ್ರೆಗೆ , ಕನಿಷ್ಠ  100  ಹಾಸಿಗೆಯುಳ್ಳ ಅತ್ಯಾಧುನಿಕ  ಆಸ್ಪತ್ರೆ ಆಗಬೇಕಾಗಿತ್ತು , .ಆದರೆ ಇನ್ನೂ ಕೂಡ ಆಗಿಲ್ಲ ,ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ರಬಕವಿ-ಬನಹಟ್ಟಿ ತಾಲೂಕಾ ಘೋಷಣೆಯಾಗಿತ್ತು , ಇದೇ ಸರ್ಕಾರದಲ್ಲಿ ಶ್ರೀಮತಿ ಉಮಾಶ್ರೀ ಕೂಡ ಸಂಪುಟ ಸಚಿವೆಯಾಗಿದ್ದರು ಕೂಡ ಹೆಚ್ಚಿನ ಅನುದಾನ  ತರುವಂತಹ ಕೆಲಸ ಮಾಡಲಿಲ್ಲ.

 ಈಗಿನ ಸರ್ಕಾರದ ಶಾಸಕರು ಶ್ರೀ ಸಿದ್ದು ಸವದಿ ಕೂಡ , ತಾಲೂಕ  ಆಸ್ಪತ್ರೆ ಹಾಗೂ ನಗರದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು  ಸಮರ್ಪಕವಾದ ಅನುದಾನ ತರಲು ಪ್ರಯತ್ನ ಮಾಡುತ್ತಿಲ್ಲ , ಎಂದು ಆರೋಪಿಸಿದರು .

ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಪದಾಧಿಕಾರಿಗಳು , ಹಾಗೂ ಕಾರ್ಯಕರ್ತರು , ಮಹಿಳಾ ಮುಖಂಡರು ,  ಮುಖಂಡರು ಉಪಸ್ಥಿತರಿದ್ದರು .

Wednesday, July 27, 2022

ಸಿದ್ದರಾಮಯ್ಯ ಅವರ 75ನೇ ಜನ್ಮೋತ್ಸವ ಅಂಗವಾಗಿ ಪೂರ್ವಭಾವಿ ಸಭೆ :

75 ನೇಯ ಸಿದ್ದರಾಮಯ್ಯ ಅವರ ಜನ್ಮ ದಿನೋತ್ಸವ ಅಂಗವಾಗಿ ಬನಹಟ್ಟಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ತೇರದಾಳ ಮತ ಕ್ಷೇತ್ರದ ಅಭ್ಯರ್ಥಿಯಾದ ಡಾ,ಎ ಆರ್ ಬೆಳಗಲಿ ಅವರು ಭಾಗಿಯಾಗಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದಂತಹ ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯ ಅವರ  ಜನ್ಮದಿನೋತ್ಸವವನ್ನು ಕರ್ನಾಟಕದ ಎಲ್ಲಕಡೆ  ಆಚರಿಸಲಾಗುತ್ತಿದೆ.

 ನಮ್ಮ ತೇರದಾಳ್ ಮತಕ್ಷೇತ್ರದ ಎಲ್ಲಾ ಜನತೆಯು, ಪಕ್ಷದ ಕಾರ್ಯಕರ್ತರು,ಮುಖಂಡರು ಯುವ ಸಮೂಹವು ಕೂಡಿ  ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ 75ನೇ ಜನ್ಮ ದಿನೋತ್ಸವವನ್ನು ಒಂದು  ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು ಎಂದು ಅವರು ತಿಳಿಸಿದರು.

 ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ನೀಲಕಂಠ ಮುತ್ತೂರ,ಸಂಜು ಜೋತಾವರ, ಶಂಕರ ಜಾಲಿಗಿಡದ, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೇ ಸವಿತಾ ಚವಲಿ ಜೊತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.


KALAAM EXPRESS NEWS
RABKAVI BANHATTI

ತೇರದಾಳ ಪಟ್ಟಣಕ್ಕೆ ದಿಡೀರನೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್*

*ತೇರದಾಳ ಪಟ್ಟಣಕ್ಕೆ ದಿಡೀರನೆ  ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್* 

 ತೇರದಾಳ : 
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಹೋಬಳಿ ಪಟ್ಟಣಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಉಪ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದರು .

ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಸಾಯಂಕಾಲ ನಾಲ್ಕು ಗಂಟೆಗೆ ಆಗಮಿಸಿ , ಸಾರ್ವಜನಿಕ ಕುಂದು ಕೊರತೆಗಳನ್ನು ಸ್ವೀಕರಿಸಿ , ನಂತರ ಮಾಧ್ಯಮದವರ ಜತೆ ಕೆಲವು ಕಾಲ ಸಂವಾದ ನಡೆಸಿದರು .

 *ಮಾಧ್ಯಮದವರು ಕೇಳಿದ ಪ್ರಶ್ನೆ ತಾವು*  ದಿಡೀರನೆ ತೇರದಾಳ  ಪಟ್ಟಣಕ್ಕೆ ಭೇಟಿ ನೀಡಿದ ಉದ್ದೇಶವೇನು ?ಎಂದಾಗ   ,ಉದ್ದೇಶ ಏನು ಇಲ್ಲ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಒಂದು  ತಾಲೂಕಿಗೆ ಭೇಟಿ ನೀಡಬೇಕು ಎಂದು ಸರ್ಕಾರದ ವತಿಯಿಂದ ಸುತ್ತೋಲೆ ಇದೆ  ಆದ್ದರಿಂದ ಈ ದಿನ ರಬಕವಿ-ಬನಹಟ್ಟಿ ತಾಲೂಕಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು  .

ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಶಾಲೆಗಳ ದುಸ್ಥಿತಿಗಳ ಬಗ್ಗೆ  ಕೇಳಿದಾಗ ,ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಕಮಿಷನರ್ ಜೊತೆ ಸಂಪರ್ಕದಲ್ಲಿದ್ದು , ಎಜುಕೇಶನ್ ಡಿಪಾರ್ಟ್ಮೆಂಟ್ದ ಅವರೇ  ಮಾಡಬೇಕಾದ ಕೆಲಸ , ನಾನು ಶಾಸಕರಿಗೆ ಕೂಡ ವಿನಂತಿ ಮಾಡಿದ್ದೇನೆ ಶಾಸಕರ ಅನುದಾನದ ಸ್ವಲ್ಪ ಪರ್ಸೆಂಟೇಜ್ ಶಾಲೆ ಮತ್ತು ಅಂಗನವಾಡಿಗಳಿಗೆ ರಿಪೇರಿ ಮಾಡಿಸಲು ಜಿಲ್ಲೆಯ ಎಲ್ಲ cಶಾಸಕರಿಗೆ ಮನವಿ ಮೂಲಕ ಕೇಳಿದ್ದೇನೆ ಎಂದು ಹೇಳಿದರು .

 *ಇದೇ ಸಂದರ್ಭದಲ್ಲಿತಾಲೂಕುಗಳ ಸಮಸ್ಯೆಗಳ ಬಗ್ಗೆ ಕೇಳಿದಾಗ* , ಒಂದೇ ಪ್ರಸ್ತಾವನೆಯಲ್ಲಿ , ತೇರದಾಳ ತಾಲೂಕು ಹೆಡ್ ಹೋಬಳಿ ಕೇಂದ್ರವನ್ನಾಗಿ ಮಾಡುವುದು ,ಇನ್ನೊಂದು ರಬಕವಿ-ಬನಹಟ್ಟಿ  ತಾಲೂಕಿನಲ್ಲಿ , ರಬಕವಿ ಬನಹಟ್ಟಿ ಮತ್ತು ಮಹಾಲಿಂಗಪುರ್ ನಗರಗಳಲ್ಲಿ ಹೋಬಳಿಗಳನ್ನು ಮಾಡಿ , ಒಂದೇ ಬಾರಿ ಮೂರು ಕೆಲಸಗಳಿಗೆ ಪರಿಹಾರದ ,  ಪ್ರಸ್ತಾವನೆಗಳನ್ನು ಕಳಿಸಿದ್ದೇವೆ ಎಂದು ಹೇಳಿದರು .

MAHIBOOB BARIGADDI
TV6TERDALZONE
RABKAVI BANHATTI