Sunday, July 5, 2026

ರೈಲ್ವೆ ಕಾಮಗಾರಿಯಿಂದ ಮನೆ ತೆರವು ಆತಂಕ : ಶಾಂತಿನಗರ ನಿವಾಸಿಗಳಿಗೆ ‍ ಧೈರ್ಯ ತುಂಬಿದ ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ್ ಹಲಗಿಗೌಡರ





 ಸ್ಟೋರಿ    :  
 ಮೆಹಬೂಬ ಮ ಬಾರಿಗಡ್ಡಿ ಕಲಾಂ ಎಕ್ಸಪ್ರೆಸ್ ನ್ಯೂಸ್ ಸಂಪಾದಕರು 

ತೇರದಾಳ, ಜು. ೫: ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಉಪನಗರವಾದ ಶಾಂತಿನಗರ, ಹೊಸೂರು ಗ್ರಾಮದಲ್ಲಿ ಬಾಗಲಕೋಟೆ–ಕುಡಚಿ ರೈಲು ಮರ‍್ಗ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಭೇಟಿ ನೀಡಿ, ರೈಲು ಮರ‍್ಗಕ್ಕೆ ಅಡ್ಡಿಯಾಗಿರುವ ಮನೆಗಳನ್ನು ಶೀಘ್ರದಲ್ಲೇ ಖಾಲಿ ಮಾಡುವಂತೆ ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ವಿಷಯ ತಿಳಿದ ತಕ್ಷಣ ತೇರದಾಳ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ್   ಹಲಗಿಗೌಡರ ಅವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು. ಜನರ ಸಮಸ್ಯೆಗಳನ್ನು ಆಲಿಸಿ, ಯಾವುದೇ ಕುಟುಂಬಕ್ಕೂ ಅನ್ಯಾಯವಾಗದಂತೆ ಕಾನೂನುಬದ್ಧವಾಗಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ  ಮಾತನಾಡಿದ ಅರ್ಜುನ್  ಹಲಗಿಗೌಡರ ಅವರು, "ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಜನರ ಹಿತದೃಷ್ಟಿಯಿಂದ ಅಗತ್ಯವಾಗಿದ್ದರೂ, ಆ ಕಾಮಗಾರಿಗಳ ಹೆಸರಿನಲ್ಲಿ ಬಡ ಮತ್ತು ಮಧ್ಯಮ ವರ್ಗದ  ಜನರ ಬದುಕು ಬೀದಿಗೆ ಬೀಳುವಂತಾಗಬಾರದು. ಹಲವು ವರ್ಷಗಳಿಂದ  ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸರ್ಕಾರ   ಹಾಗೂ ಸಂಬಂಧಪಟ್ಟ ಇಲಾಖೆಗಳು ನ್ಯಾಯಸಮ್ಮತ ಪರಿಹಾರ, ಪುನರ್ವಸತಿ  ಮತ್ತು ಪರ‍್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜನರೊಂದಿಗೆ ಸಮಾಲೋಚನೆ ನಡೆಸದೇ ಯಾವುದೇ ರೀತಿಯ ಒತ್ತಡ ಹೇರಬಾರದು" ಎಂದು ಆಗ್ರಹಿಸಿದರು.
ಅಲ್ಲದೆ, ಅಧಿಕಾರಿಗಳು ಜನರಲ್ಲಿ ಅನಗತ್ಯ ಭಯ ಮತ್ತು ಗೊಂದಲ ಉಂಟುಮಾಡದೆ, ಸರ್ಕಾರದ  ನಿಯಮಾನುಸಾರ ಎಲ್ಲ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ಅಗತ್ಯವಿದ್ದಲ್ಲಿ ರೈಲ್ವೆ ಇಲಾಖೆ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ವಿಷಯವನ್ನು ತಂದು, ಸ್ಥಳೀಯರ ಪರವಾಗಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
 ಅರ್ಜುನ್  ಹಲಗಿಗೌಡರ ಅವರ ಭೇಟಿ ಹಾಗೂ ಭರವಸೆಯಿಂದ ಸ್ಥಳೀಯ ನಿವಾಸಿಗಳಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿದ್ದು, ತಮ್ಮ ಸಮಸ್ಯೆಗೆ ನ್ಯಾಯ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು. "ನಮ್ಮ ಪರವಾಗಿ ಧ್ವನಿಯಾಗಿರುವುದು ನಮಗೆ ಧೈರ್ಯ ತುಂಬಿದೆ. ನಮ್ಮ ಮನೆ ಹಾಗೂ ಜೀವನೋಪಾಯ ಉಳಿಯುವಂತೆ ಸರ್ಕಾರ  ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಸ್ಥಳೀಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅನೇಕ ಸ್ಥಳೀಯ ಮುಖಂಡರು, ಸಾರ್ವಜನಿಕರು   ಹಾಗೂ ಶಾಂತಿನಗರ ನಿವಾಸಿಗಳು ಉಪಸ್ಥಿತರಿದ್ದು, ರೈಲ್ವೆ ಕಾಮಗಾರಿಯಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸರ್ಕಾರ ರ ಹಾಗೂ ಸಂಬಂಧಪಟ್ಟ ಇಲಾಖೆಗಳು ಮಾನವೀಯ ದೃಷ್ಟಿಕೋನದಿಂದ ನಡೆದುಕೊಂಡು, ಯಾವುದೇ ಕುಟುಂಬ ನಿರಾಶ್ರಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು  ಸಾರ್ವಜನಿಕರು ಒತ್ತಾಯಿಸಿದರು.



 ಅರ್ಜುನ್ ಹಲಗಿಗೌಡರ ಹೇಳಿಕೆ :

"ರೈಲ್ವೆ ಕಾಮಗಾರಿಗೆ ಯಾರೂ ಅಡ್ಡಿಪಡಿಸುವುದಿಲ್ಲ; ಶಾಂತಿನಗರದ ನಿವಾಸಿಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು"
ಶಾಂತಿನಗರ ಪ್ರದೇಶದಲ್ಲಿ ನಡೆಯಲಿರುವ ರೈಲ್ವೆ ಕಾಮಗಾರಿಗೆ ನಮ್ಮಿಂದ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ. ಅಭಿವೃದ್ಧಿ ಕಾಮಗಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾಗಿದ್ದು, ಅವುಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕಾಮಗಾರಿಯಿಂದ ಮನೆಗಳನ್ನು ಕಳೆದುಕೊಳ್ಳುವ ಶಾಂತಿನಗರದ ನಿವಾಸಿಗಳಿಗೆ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಮೊದಲು ಸೂಕ್ತ ಪರ್ಯಾಯ ಸ್ಥಳದಲ್ಲಿ ಮನೆಗಳ ವ್ಯವಸ್ಥೆ ಕಲ್ಪಿಸಬೇಕು.
ಜನರನ್ನು ಸ್ಥಳಾಂತರಿಸುವ ಮೊದಲು ಅವರಿಗೆ ಸುರಕ್ಷಿತ ವಸತಿ, ಮೂಲಭೂತ ಸೌಲಭ್ಯಗಳು ಹಾಗೂ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. 

ಕುತ್ಬುದ್ದೀನ್ ಖಾಜಿ, ರಾಜ್ಯ ರೈಲ್ವೆ ಹೋರಾಟಗಾರರ ಸಮಿತಿ ಅಧ್ಯಕ್ಷರ ಹೇಳಿಕೆ  : 
ರಬಕವಿ-ಬನಹಟ್ಟಿ ಭಾಗದಲ್ಲಿ ರೈಲ್ವೆ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿರುವುದು ಅತ್ಯಂತ ಸಂತೋಷದ ಹಾಗೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಈ ಮಹತ್ವದ ಯೋಜನೆಯು ಪ್ರದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದೆ ಎಂಬ ವಿಶ್ವಾಸವಿದೆ.
ಆದರೆ, ರಬಕವಿ-ಬನಹಟ್ಟಿ ಅವಳಿ ನಗರಗಳ ಉಪನಗರದ ಹೊಸೂರು  ಶಾಂತಿ ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ರೈಲ್ವೆ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ಅಗತ್ಯ ಮೂಲಸೌಕರ್ಯ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಸ್ಥಳೀಯ ಜನರ ಸಂಚಾರ, ಸುರಕ್ಷತೆ ಮತ್ತು ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಸಾರ್ವಜನಿಕರ ಅನುಕೂಲಕ್ಕೂ ಸಮಾನ ಆದ್ಯತೆ ನೀಡಿದರೆ ಈ ಯೋಜನೆ ಇನ್ನಷ್ಟು ಜನೋಪಯೋಗಿಯಾಗಲಿದೆ ಎಂದು ರಾಜ್ಯ ರೈಲ್ವೆ ಹೋರಾಟಗಾರರ ಸಮಿತಿ ಅಧ್ಯಕ್ಷ ಕುತ್ತುಬುದ್ದೀನ್ ಖಾಜಿ ತಿಳಿಸಿದರು.

Thursday, July 2, 2026

ಮುಖ್ಯಮಂತ್ರಿಯವರ ಸೂಚನೆಗೂ ಕ್ಯಾರೇ ಎನ್ನದ ಬಿಎಲ್‌ಒಗಳು?ರಬಕವಿ–ಬನಹಟ್ಟಿಯಲ್ಲಿ ಎಸ್‌ಐಆರ್ ಕಾರ್ಯಕ್ಕೆ ಸಾರ್ವಜನಿಕರ ಅಸಮಾಧಾನ


ಮುಖ್ಯಮಂತ್ರಿಯವರ ಸೂಚನೆಗೂ ಕ್ಯಾರೇ ಎನ್ನದ ಬಿಎಲ್‌ಒಗಳು?
ರಬಕವಿ–ಬನಹಟ್ಟಿಯಲ್ಲಿ ಎಸ್‌ಐಆರ್ ಕಾರ್ಯಕ್ಕೆ ಸಾರ್ವಜನಿಕರ ಅಸಮಾಧಾನ

ರಬಕವಿ–ಬನಹಟ್ಟಿ, ಜು. 2:
 ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಖುದ್ದಾಗಿ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟ ಸೂಚನೆ ನೀಡಿದ್ದರೂ, ರಬಕವಿ–ಬನಹಟ್ಟಿ ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಈ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಸ್ಥಳೀಯರ ಪ್ರಕಾರ, ಅನೇಕ ಮನೆಗಳಿಗೆ ಬಿಎಲ್‌ಒಗಳು ಭೇಟಿ ನೀಡಿಲ್ಲ. ಕೆಲವೆಡೆ ನಮೂನೆಗಳನ್ನು ಮನೆಗಳಿಗೆ ತಲುಪಿಸದೇ, ಸಾರ್ವಜನಿಕರೇ ಬಂದು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಪರಿಣಾಮವಾಗಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯವರು ಮನೆ ಮನೆಗೆ ತೆರಳಿ ಪ್ರತಿಯೊಬ್ಬ ಮತದಾರರನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಸೂಚಿಸಿದ್ದರೂ, ಕೆಲ ಬಿಎಲ್‌ಒಗಳು ಕೇವಲ ಔಪಚಾರಿಕತೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಅತ್ಯಂತ ಮಹತ್ವದ ಪ್ರಜಾಪ್ರಭುತ್ವದ ಪ್ರಕ್ರಿಯೆಯಾಗಿದ್ದು, ಈ ಹಂತದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಥವಾ ಮಾಹಿತಿ ದೋಷಗಳು ಉಂಟಾಗುವ ಸಾಧ್ಯತೆ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ರಬಕವಿ–ಬನಹಟ್ಟಿ ನಗರಸಭೆ ವ್ಯಾಪ್ತಿಯ ಎಸ್‌ಐಆರ್ ಕಾರ್ಯವನ್ನು ಪರಿಶೀಲಿಸಿ, ಮನೆ ಮನೆಗೆ ಭೇಟಿ ನೀಡಿ ನಮೂನೆ ವಿತರಿಸುವಂತೆ ಎಲ್ಲಾ ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜೊತೆಗೆ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೇ ವೇಳೆ, ಈ ಕುರಿತು ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ಸರ್ಕಾರದ ನಿರ್ದೇಶನದಂತೆ ನಡೆಯುವಂತೆ ಮೇಲ್ವಿಚಾರಣೆ ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
 ವರದಿ ಮಹೇಬೂಬ ಎಂ ಬಾರಿಗಡ್ಡಿ 

Wednesday, July 1, 2026

ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ

ಬನಹಟ್ಟಿ ನಗರದಲ್ಲಿ ಎಸ್‌ಡಿಪಿಐ ವತಿಯಿಂದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮ
 ರಬಕವಿ - ಬನಹಟ್ಟಿ:  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ (ಎಸ್‌ಡಿಪಿಐ) ಬನಹಟ್ಟಿ ನಗರ ಘಟಕದ ವತಿಯಿಂದ ನಗರದ ಬಿಲಾಲ್ ಮಸೀದಿ ಸಮೀಪ ಎಸ್‌ಐಆರ್ (SIR) ಮ್ಯಾಪಿಂಗ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಸ್‌ಐಆರ್ ಮ್ಯಾಪಿಂಗ್ ಹಾಗೂ ಫಾರಂ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಸಹಾಯವಾಣಿ (Help Desk) ಮೂಲಕ ಸ್ಥಳದಲ್ಲೇ ಸಾರ್ವಜನಿಕರಿಗೆ ಉಚಿತವಾಗಿ ಫಾರಂ ಭರ್ತಿ ಮಾಡಿಕೊಡುವ ಸೇವೆಯನ್ನು ಒದಗಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಪಡೆದುಕೊಂಡರು. ಮತದಾರರ ಮಾಹಿತಿಯನ್ನು ಸರಿಯಾಗಿ ದಾಖಲಿಸುವುದು ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ, ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಿಂದ ಉತ್ತಮ ಸ್ಪಂದನೆ 
ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಎಸ್‌ಡಿಪಿಐ ನಗರ ಘಟಕ ತಿಳಿಸಿದೆ. ಈ ಸಂದರ್ಭದಲ್ಲಿ
ಸಲೀಮ ನದಾಫ್ – ಬನಹಟ್ಟಿ ನಗರ ಅಧ್ಯಕ್ಷ
ಅರ್ಬಾಜ್ ಆಸಂಗಿ – ಬನಹಟ್ಟಿ ನಗರ ಕಾರ್ಯದರ್ಶಿ
ಶೋಕತ್ ಜಾರೆ – ಬನಹಟ್ಟಿ ನಗರ ಉಪಾಧ್ಯಕ್ಷ
ಆಸಿಫ್ ಅತ್ತಾರ್ 
ಸಮೀರ್ ಮುಲ್ಲಾ ಹಾಗೂ ಸದಸ್ಯರುಗಳಾದ 
ಸಾಜಿದ್ ಸಯ್ಯದ್ 
ಆರಿಫ್ ಜಮಖಂಡಿ 
ಜುಬೇರ್ ಖಲೀಫಾ  
ಅಲ್ತಾಫ್ ಮುಲ್ಲಾ ಇನ್ನಿತರರು ಇದ್ದರು.

Tuesday, June 16, 2026

ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಲು ಮುಸ್ಲಿಂ ಸಮುದಾಯ ಅಗ್ರಹ

ಜಮೀರ್ ಅಹಮ್ಮದ್ ಖಾನ್ ಆವರಿಗೆ ಸಚಿವ ಸ್ಥಾನ ನೀಡಲು ಅಗ್ರಹ .
 ತೇರದಾಳ ( ರಬಕವಿ ) : ರಬಕವಿ ಬನಹಟ್ಟಿ ತಾಲ್ಲೂಕು ಸಮಸ್ತ ಮುಸ್ಲಿಂ ಸಮುದಾಯದಿಂದ ಬಿ ಜಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಅಗ್ರಹಿಸಿದರು . ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಬಾರಿಗಡ್ಡಿ, ಜಮೀರ್ ಅಹಮ್ಮದ್ ಖಾನ್ ರವರು ಕೇವಲ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗದೇ ಸರ್ವಜನಾಂಗದ ನಾಯಕರಾಗಿ ಹೊರಹಮ್ಮಿದ್ದಾರೆ. ಆಯ್ಕೆಯಾಗಿ ಬಂದಿರುವ ಚಾಮರಾಜನಗರ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಕರ್ನಾಟಕದಾದ್ಯಂತ ಜನಪರ ಕೆಲಸಗಳ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿ ಕಾರ್ಯಗಳು ಇದಲ್ಲದೆ , ಜನಸೇವೆ ಮಾಡುತ್ತಿರುವ ಇವರಿಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅಗ್ರಹಿಸಿದರು . ಮೌಲಾನಾ ಮೋಹಸಿನ್ ಅಹಮದ್ ಗೋಕಾಕ್ ಅವರು ಬೀ ಜಡ್ ಜಮೀರ್ ಅಹ್ಮದ್ ಖಾನ್ ಅವರು ಯಾವುದೇ ಸಮುದಾಯಕ್ಕೆ ಸೀಮಿತವಾಗದೆ ಇಡೀ ರಾಜ್ಯದ್ಯಂತ ನಾಯಕರಾಗಿ ಹೊರಹೊಮ್ಮಿದ್ದು , ಡಿಕೆ ಶಿವಕುಮಾರ್ ಅವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಒಂದು ವೇಳೆ ನೀಡದಿದ್ದಲ್ಲಿ , ಮುಂದಿನ ದಿನಮಾನಗಳಲ್ಲಿ ಬೇರೆ ಮಾರ್ಗ ನೋಡಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆ ಮಾಜಿ ಅಧ್ಯಕ್ಷ ಉಸ್ಮಾನ್ ಸಾಬ್ ಲೇಂಗ್ರೆ, ಅಂಜುಮನ್ ಅಧ್ಯಕ್ಷ ಇಕ್ಬಾಲ್ ಲಿಂಗ್ರೆ , ಹಸನ್ ಕೊತ್ವಾಲ್ , ಮೌಲಾ ಪೆಂಡಾರಿ, ಅಬ್ದುಲ್ ಲೆಂಗ್ರೇ, ಸೊಹೈಲ್ ಅತ್ತಾರ್, ಇಸ್ಮಾಯಿಲ್ ನಮಾಜ್ ಕಟ್ಟಿ, ಇನ್ನಿತರರು ಇದ್ದರು.


 ವರದಿ  : 
ಮಹಿಬೂಬ್ಎಂ ಬಾರಿಗಡ್ಡಿ 

Sunday, March 15, 2026

ರಬಕವಿ ನಗರದಲ್ಲಿ ರಮಜಾನ್ ಪ್ರಯುಕ್ತ ಕಿಟ್ ವಿತರಣೆ ಮಾಡಿದ ಜಮಿಯತೆ ಉಲ್ಲೇಮಾ ಹಿಂದ್*

*ರಮಜಾನ್ ಪ್ರಯುಕ್ತ ಕಿಟ್ ವಿತರಣೆ ಮಾಡಿದ ಜಮಿಯತೆ ಉಲ್ಲೇಮಾ ಹಿಂದ್* 

 *ರಬಕವಿ - ಬನಹಟ್ಟಿ* : ಕಳೆದ ಹತ್ತು ವರ್ಷಗಳಿಂದ ಅನೇಕ ಸಾಮಾಜಿಕ ಸೇವೆ ಮಾಡುತ್ತಾ ಬರುತ್ತಿರುವ ಜಮೀಯತೆ ಉಲೆಮಾ ಹಿಂದ್ ಸಂಘಟನೆಯು ಪ್ರತಿ ವರ್ಷದಂತೆ , ಈ ವರ್ಷವೂ ಕೂಡ ಅತಿ ಬಡವ ಹಾಗೂ ವಿಧವೆ ಮಹಿಳೆಯರಿಗಾಗಿ ರಮಜಾನ್ ಹಬ್ಬದ ಪ್ರಯುಕ್ತ ಶುರೂಕೂರ್ಮ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು .
 ಈ ಆಹಾರದ ಕೀಟಗಳನ್ನು ನೆರೆಯ ಚಿಮ್ಮುಡ್ ,ನಾವಲಗಿ ,ಆಸಂಗಿ ಕುಳ್ಳೊಳ್ಳಿ, ಹಿಪ್ಪರಗಿ, ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ಸೇರಿದಂತೆ ಅತಿ ಬಡವ ಹಾಗೂ ವಿಧವೇ ಮಹಿಳೆಯರನ್ನು ಗುರುತಿಸಿ , ಒಟ್ಟು 600 ಕಿಟ್ಟುಗಳನ್ನು ವಿತರಣೆ ಮಾಡಿದರು.
 ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಮಾಜಿ ಅಧ್ಯಕ್ಷ ಉಸ್ಮಾನ್ ಸಾಬ್ ಲೆಂಗ್ರೆ, ನಗರದ ಅಂಜುಮನ್ ಅಧ್ಯಕ್ಷ ಇಕ್ಬಾಲ್ ಲೆಂಗ್ರೆ, ನಗರಸಭೆಯ ಸದಸ್ಯ ಯುನುಸ್ ಚೌಗುಲೆ, ನಗರದ ಉದ್ಯಮಿ ಯುನುಸ್ ನಿಪ್ಪಾಣಿ , ಬನಹಟ್ಟಿ ಅಲ್ಪ ಸಂಖ್ಯಾತರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಮೋಮಿನ್ , ಯಾಸಿನ್ ಕಾರಬಾರಿ, ಇಮ್ತಿಯಾಸ್ ಗೋಕಾಕ್, ಹಾಜಿಲಾಲ್ ಅತ್ತಾರ್, ಹಾರುನ್ ರಶೀದ್ ರಸೀದ್ ಬೇವೂರ್, ರಾಜೇ ಸಾಬ್ ಕುಲ್ಲೋಳಿ, ಅಯ್ಯೋಬ ಹೊರಟ್ಟಿ, ಮೊಹಮ್ಮದ್ ಜಾರೆ, ಸೇರಿದಂತೆ ಜಮೀಯತೆ ಒಲೆಮಾ ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಗೋಕಾಕ್, ಸಂಘಟನೆಯ ಸದಸ್ಯರು , ಪದಾಧಿಕಾರಿಗಳು ಉಪಸ್ಥಿತರಿದ್ದರು. 
 ವರದಿ :
 ಮಹಿಬೂಬ್ ಬಾರಿಗಡ್ಡಿ

Monday, February 16, 2026

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ :

15 ಗ್ರಾಂ ಬಂಗಾರ ಕದ್ದ ಕಳ್ಳ, ಈಗ ಪೊಲೀಸರ ಅತಿಥಿ : 

 ರಬಕವಿ : ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಮಹಿಳೆಯೊಬ್ಬರ ತರಕಾರಿ ಚೀಲದಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ , ಕಳ್ಳ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿ ಯಶಸ್ವಿಯಾಗಿದ್ದಾರೆ . ಪೊಲೀಸರ ಈ ಚುರುಕು ಕಾರ್ಯಾಚರಣೆಯಲ್ಲಿ, ಅಪರಾಧ ವಿಭಾಗದ ಪಿಎಸ್ಐ ಪಿ ಎಸ್ ಪೂಜಾರಿ, ಮತ್ತು ಪೊಲೀಸ್ ಸಿಬ್ಬಂದಿ ಡಿ ವಿ ಕುಂಬಾರ್ ಸಿ ಎಚ್ ಸಿ, ಪಿ ಹೆಚ್ ಗಣಿ ಸಿಪಿಸಿ, ಎಸ್ ಜಿ ಲಗಳಿ ಸಿಪಿಸಿ, ವಿ ಎಸ್ ಅಜ್ಜನಗೌಡರ್, ಎಸ್ ಎಸ್ ಬಾಡಗಿ ಸಿಪಿಸಿ, ರವರ ತಂಡ ಆರೋಪಿಗಾಗಿ ಬಲೆ ಬೀಸಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಾಂಗಲ್ಯ ಸರ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಯಂಕವ್ವ ಮಾಂತೇಶ್ ಹೂಗಾರ ಎಂಬ ಮಹಿಳೆ ತಮ್ಮ ಹೊಲದ ಚೀಲದಲ್ಲಿ ಮಾಂಗಲ್ಯ ಸರ ಇಟ್ಟು ಸಂತೆಗೆ ಹೋಗಿದ್ದರು. ತರಕಾರಿ ತೆಗೆದುಕೊಂಡು ಬಂದು ನೋಡುವಷ್ಟರಲ್ಲಿ ಚೀಲದಲ್ಲಿದ್ದ ಮಾಂಗಲ್ಯ ಸರ ಕಳ್ಳತನವಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಬನಹಟ್ಟಿ ಪೊಲೀಸರು, ಪ್ರಕರಣ ದಾಖಲಾದ ಕೇವಲ 24 ಗಂಟೆಗಳಲ್ಲಿ ಆರೋಪಿ ಅಬೂಬ್ಕರ್ ರಂಜಾನ್ ಸಾಬ್ ಮುಲ್ಲಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ಸುಮಾರು 3 ಲಕ್ಷ ರೂ. ಮೌಲ್ಯದ 10 ಗ್ರಾಂ ಮಾಂಗಲ್ಯ ಸರ, 5 ಗ್ರಾಂ ಸರ ಮತ್ತು ಕಳ್ಳತನಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರ ಯಶಸ್ವಿ ಯಶಸ್ವಿ ಕಾರ್ಯಾಚರಣೆಯಲ್ಲಿ , ಮಹದೇವ್ ಶಿರಹಟ್ಟಿ ಸಿಪಿಐ ಇವರ ನೇತೃತ್ವದ ಪೊಲೀಸ್ ಠಾಣಾ ಅಧಿಕಾರಿ ಶಿವರಾಜ್ ದರಿಗೋನ್ ಪಿಎಸ್ಐ ( ಕಾಸು ) ಹಾಗೂ ಸಿಬ್ಬಂದಿ ಯವರ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯೆಲ್ ಐಪಿಎಸ್, ರೋಷನ್ ಜಮೀರ್ ಎಸ್, ಡಿ ಎಸ್ ಪಿ ಜಮಖಂಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ .

Thursday, February 12, 2026

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ

ತನು-ಮನ-ಧನದಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿ- ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಬಾಳಿಕಾಯಿ 

ತೇರದಾಳ: ಪಟ್ಟಣದಲ್ಲಿ ಇದೇ ತಿಂಗಳು ಫೆಬ್ರವರಿ 15 ರಂದು  ಶ್ರೀ ಅಲ್ಲಮಪ್ರಭುವಿನ ದೇವಸ್ಥಾನದಲ್ಲಿಜರಗುಲಿರುವ  ದ್ವಿತೀಯ ಜಿಲ್ಲಾ ಕರ್ನಾಟಕ ಜಾನಪದ ಸಮ್ಮೇಳನ ಜರುಗಲಿದ್ದು ಎಲ್ಲ ಪದಾಧಿಕಾರಿಗಳು ಹಾಗೂ ಕಲಾವಿದರು ತನುಮನದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪೂರ್ವಭಾವಿ ಸಭೆಯಲ್ಲಿ ಹೇಳಿದರು.ಸಮಿತಿಗಳ ರಚನೆ ಹಾಗೂ ಕಾರ್ಯ ಹಂಚಿಕೆ ಕೆಲಸ ಸಮಾನ ಜೀವಿಗಳು ಒಗ್ಗೂಡಿಕೊಂಡು ಯಶಸ್ವಿಗೊಳಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ರಾಯಪ್ಪ ಕುಂಬಾರ್ ಅಭಿಮತವನ್ನು ವ್ಯಕ್ತಪಡಿಸಿದರು. ನನಗೆ ಈಗ 81 ವರ್ಷದ ಪ್ರಾಯ ನಾನು ಕೂಡ ತಾವು ವಹಿಸಿದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವೆ ಯಾವುದೇ ಕಾರ್ಯ ಕೆಲಸಗಳ ಮಾಡುವಾಗ ಹಿಂಜರಿಕೆ ಪ್ರಶ್ನೆ ಇಲ್ಲ ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗಂಗಾಧರ್ ಮೋಪಗಾರ ಮಾತನಾಡಿ ಕಾರ್ಯ ಹಂಚಿಕೆ ಹಾಗೂ ಸಮಿತಿಗಳ ಜವಾಬ್ದಾರಿ ವಹಿಸಿಕೊಂಡವರು ತನುಮನದಿಂದ  ತೊಡಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ಕಡಿಮೆ  ಸಮಯದ ಅಭಾವ ಇರೋದ್ರಿಂದ ಜಿಲ್ಲಾ ಸಮೇಳನಕ್ಕೆ ಕೆಲವೇ  ದಿನಗಳು ಉಳಿದಿದ್ದು  ಪದಾಧಿಕಾರಿಗಳು
ತಮಗೆ ವಹಿಸಿದ ಕೆಲಸದಲ್ಲಿ ಆಸಕ್ತಿವಹಿಸಿ
ಮುಂದಿನ ಕಾರ್ಯರೂಪರೇಷಗಳು ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು. ತಾಲೂಕು ನೂತನ ನಿಯೋಜಿತ ಕಜಾಪ ಅಧ್ಯಕ್ಷರಾದ ಅಶೋಕ್ ಮಹಾಲಿಂಗಪುರ್ ಮಾತನಾಡಿ ನನಗೆ ಅಧ್ಯಕ್ಷ ಸ್ಥಾನ ದೊರಕಿರುವುದು ಅನಿರೀಕ್ಷಿತ ಅದರಂತೆ ಅಲಕ್ಷಿತ ಕಲಾವಿದರು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವೆ. ಜಿಲ್ಲಾ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾರ್ಯ ಚಟುವಟಿಕೆಗಳು ಬಾಕಿ ಉಳಿದಿದ್ದು ತಮ್ಮೊಂದಿಗೆ ಸೇರಿ ಜಾನಪದ ಕಟ್ಟಾಳಾಗಿ ಕೆಲಸ ಮಾಡುವೆ ಎಂದು ಹೇಳಿದರು. ಹಿರಿಯ ಕಲಾವಿದರಾದ ಶಿವಾನಂದ್, ಸತ್ಯಪ್ಪ ಸುಣಗಾರ, ಭಾಗ್ಯಶ್ರೀ ಸುನಗಾರ, ಸಂತೋಷ್ ನಡುವಿನಕೆರೆ, ಪದ್ಮಸಾಗರ್ ನಾಗನೂರ, ಗಂಗಾಧರ ಸೇರಿದಂತೆ  ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಕಲಾವಿದರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

Friday, February 6, 2026

ಇತಿಹಾಸ ಬರೆದ ಪಂಚ ಗ್ಯಾರಂಟಿ ಯೋಜನೆಗಳು - ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ



     ಪಂಚಗ್ಯಾರoಟಿ ಯೋಜನೆಗಳು ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ . - ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ

ತೇರದಾಳ: ನಮ್ಮ ಘಣ ಸರಕಾರವು ಬಡವರ ಉದ್ಧಾರಕ್ಕಾಗಿ ಪಂಚಗ್ಯಾರoಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಬದುಕಿಗೆ ಆಸರೆಯಾಗಿದೆ. ಯಾವುದೇ ಧರ್ಮ ಜಾತಿ ಮತ ಎನ್ನದೆ ಪ್ರತಿ ಕುಟುಂಬದ ಹೆಣ್ಣುಮಗಳಿಗೆ ಅವರು ಶ್ರೀಮಂತರಿರಲಿ. ಬಡವರಿರಲಿ ಎಲ್ಲಾ ಮಹೀಳೆಯರಿಗೂ ಈ ಯೋಜನೆ ನೀಡಿ ಇಡೀ ದೇಶದಲ್ಲಿಯೇ ಹೊಸ ಚರಿತ್ರೆ ಬರೆದಿದೆ ಎಂದು ಕಾಂಗ್ರೆಸ್ ಯುವ ಧುರಿಣರಾದ ಸಿದ್ದು ಕೊಣ್ಣೂರ ಹೇಳಿದರು.
        ತೇರದಾಳ ಪಟ್ಟಣದ ಶ್ರೀ ಬ್ರಹ್ಮಾನಂದ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟೆ, ತಾಲೂಕು ಪಂಚಾಯತ ರಬಕವಿ-ಬನಹಟ್ಟಿ ಹಾಗೂ ಪುರಸಬೆ ತೇರದಾಳ ಇವರ ನೇತೃದಲ್ಲಿ ತೇರದಾಳ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ, ಅವರು ಅಧಿಕಾರಿಗಳಾದವರು ದಯವಿಟ್ಟು ನಿಮ್ಮ ಹತ್ತಿರ ಬರುವ ಯಾರನ್ನೂ ಕಚೇರಿಗೆ ಅಲೆಯುವಂತೆ ಮಾಡಬೇಡಿ. ಅವರ ನೋವಿಗೆ ಸ್ಪಂದಿಸಿ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಗ್ಯಾರಂಟಿ ಅನುಷ್ಠಾಣ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷೆ ಜಯಶ್ರೀ ತಿಮ್ಮಾಪೂರವರು ಪೂರ್ವಕಾಲದಿಂದಲೂ ಮಹಿಳೆಯು ಒಂದು ಸಂಕೋಲೆಯಲ್ಲಿ ಜೀವನ ನಡೆಸುತ್ತಾ ಬಂದಿದ್ದಾಳೆ. ಅವಳಿಗೆ ಕಾನೂನಿನಲ್ಲಿ ಸಮಾನ ಸ್ಥಾನಮಾನವಿದ್ದರೂ ಅವಳು ಒಂದು ರೀತಿಯ ಮೀತಿಯಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇತ್ತು. ಆದರೆ ಆ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ತಾಯಂದಿರನ್ನು ಬಿಡುಗಡೆಮಾಡಿ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಸ್ವಾಭಿಮಾನದ ಬದುಕನ್ನು ನೀಡಿದವರು ಧೀಮಂತ ನಾಯಕ ನಮ್ಮ ಸಿದ್ಧರಾಮಯ್ಯನವರು ಎಂದರು. ತಾಲೂಕು ಅಧ್ಯಕ್ಷ ನೇಮಣ್ಣ ಸಾವಂತನವರ, ತಹಶೀಲದಾರ ವಿಜಯಕುಮಾರ ಕಡಕೋಳ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆಯ ಮುಖ್ಯಾದಿಕಾರಿ ಎಫ್.ಬಿ.ಗಿಡ್ಡಿ, ತಾಲೂಕಾಪಂಚಾಯತ ಅಧಿಕಾರಿ ವಿನಯಕುಮಾರ ಹುಲ್ಯಾಳ ಆಹಾರ ನಿರೀಕ್ಷಕ ಎಸ್.ಐ. ಸೂಡಿ ಹಾಗೂ ಗ್ಯಾರಂಟಿ ಪ್ರಾಧಿಕಾರ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

 ವರದಿ : ಮಹೆಬೂಬ್ ಬಾರಿಗಡ್ಡಿ 




Monday, February 2, 2026

ಹಣಗಂಡಿ ಪಂಚಾಯತಿಯ ನಿಷ್ಕಾಳಜಿ . ಸೊರಗುತ್ತಿರುವ ಸ್ವಚ್ಛತಾ ವ್ಯವಸ್ಥೆ. ವಿಲೇವಾರಿಯಾಗದ ಕಸ: ಬೇಸತ್ತ ಜನ ವರದಿ; ಮಹಿಬುಬ ಮ ಬಾರಿಗಡ್ಡಿ

ಹಣಗಂಡಿ ಪಂಚಾಯತಿಯ ನಿಷ್ಕಾಳಜಿ . ಸೊರಗುತ್ತಿರುವ ಸ್ವಚ್ಛತಾ ವ್ಯವಸ್ಥೆ. ವಿಲೇವಾರಿಯಾಗದ ಕಸ:  ಬೇಸತ್ತ ಜನ 


ಮಹಿಬುಬ ಮ ಬಾರಿಗಡ್ಡಿ

ಹಣಗಂಡಿ ;  ಗ್ರಾಮ ಪಂಚಾಯಿತಿಯ ಟಿಪ್ಪು ಸುಲ್ತಾನ್ ಸರ್ಕಲ್ ಹತ್ತಿರ ಜನಬೀಡ ಪ್ರದೇಶದಲ್ಲಿ  ಕಾಣುವ ಕಸದ ರಾಶಿ ಬೀದಿನಾಯಿ-ಹಂದಿಗಳಿAದ ರಸ್ತೆಯಲ್ಲಿ  ಪಕ್ಕದಲ್ಲಿ ಬೀಳುವ ತ್ಯಾಜ್ಯದಿಂದ  ಗಲೀಜ ಗ್ರಾಮವಾಗಿ ಬದಲಾಗುತ್ತಿದೆ, ಗ್ರಾಮದಲ್ಲಿ  ನಿತ್ಯವೂ ಕಂಡುಬರುವ ದೃಶ್ಯವಿದು. ಕಸ ವಿಲೇವಾರಿಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದಾಗಿ ಕಸದ ರಾಶಿಗಳು ತಿಂಗಳುಗಟ್ಟಲೇ ಸ್ಥಳದಲ್ಲಿ  ಬಿದ್ದುಕೊಂಡಿರಬೇಕಾಗಿದೆ . ಕುಡಚಿ - ಜಮಖಂಡಿ ಪ್ರಮುಖ ರಸ್ತೆಯ, ಚಾ ಅಂಗಡಿ, ಎಗ್ ರೈಸ್ ಅಂಗಡಿ  ಸೇರಿದಂತೆ , ವಿವಿಧ ವ್ಯಾಪಾರಸ್ಥರ ಕಸವನ್ನು ಒಂದೇ ಕಡೆ ಹಾಕುವುದರಿಂದ ಕಸದ ರಾಶಿಗಳು ಹೋಗುವ  ಪ್ರಯಾಣಿಕರ ಕಣ್ಣಿಗೆ ಕಂಡು ಮುಜಗರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ . ಕಸದ ತಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿಯ  ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜನರ ಬೇಸರಕ್ಕೆ  ಕಾರಣವಾಗಿದೆ.
 ಹಣಗಂಡಿಯ ಪ್ರಸಿದ್ದ ವಾಡೆ ;  ಪಂಚಾಯತಿ ಯ್ಯಾಪ್ತಿಯಲ್ಲಿ ರಾಜ ವಾಡೆಗೆ  ಖ್ಯಾತಿ ಪಡೆದಿರುವ ಗ್ರಾಮ , ಈ ಗ್ರಾಮ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆಯಿಂದ ಹಾಗೂ ಚರಂಡಿಯ ಕೊಳಚೆ ನೀರಿ ನಿಂದ ಅಪಖ್ಯಾತಿಗೆ ಒಳಗಾಗುತ್ತಿದೆ. ಗ್ರಾಮದ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹೋಗಿದ್ದು, ಹೂಳು ತೆಗೆಯುವ ಕೆಲಸವಾಗಿಲ್ಲ. ಚರಂಡಿಯಲ್ಲಿ ನೀರು ನಿಂತು, ದುರ್ನಾತ ಬರುತ್ತಿದ್ದರೂ,  ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದರ ಜೊತೆಯಲ್ಲಿಯೇ, ಕಸದ ಸಮಸ್ಯೆಯೂ ಹೆಚ್ಚಾಗುತ್ತಲಿದೆ. ಮನೆಗಳ  ಹಾಗೂ ಅಂಗಡಿಗಳ ಸ್ಥಳದಿಂದ ಕಸ ಸಂಗ್ರಹ ಮಾಡುವ ವ್ಯವಸ್ಥೆ ಗ್ರಾಮದಲ್ಲಿ ಇದೆಯೇ? ಎನ್ನುವಂತ ಪ್ರಶ್ನೆ ಕಾಡುತ್ತಿದೆ . ಆದರೆ, ಬಹುತೇಕ ಜನರು ಇಂದಿಗೂ ರಸ್ತೆ ಅಕ್ಕ-ಪಕ್ಕದಲ್ಲಿ ಕಸ  ಹಾಕುತ್ತಿದ್ದಾರೆ. ಗ್ರಾಮದ ಪ್ರಮುಖ ವೃತ್ತಗಳಲ್ಲಿ ಕಸ ಸಂಗ್ರಹಕ್ಕೆ ವ್ಯವಸ್ಥೆ ಇಲ್ಲದಿರುವುದರಿಂದಲೇ ,ಕಸದ ಸಮಶೈ ಹೆಚ್ಚಾಗುತ್ತಿದೆ. ಕಸ
ಸಂಗ್ರಹಿಸುವ ಸಿಬ್ಬಂದಿ, ರಸ್ತೆ ಅಕ್ಕ-ಪಕ್ಕದ ಕಸದ ರಾಶಿ ಸಂಗ್ರಹಿಸುತ್ತಿಲ್ಲ ಕಾರಣಕ್ಕೆ ಹಲವು ದಿನಗಳ ಕಾಲದ  ಕಸದ ರಾಶಿ ಬದ್ದಲ್ಲೆ ಬಿದ್ದುಕೊಂಡಿರುತ್ತದೆ.
ಅಷ್ಟಾದರೂ ಕಸದ ವಿಲೇವಾರಿ ಆಗುತ್ತಿಲ್ಲವೆಂದು ಜನರು ಗ್ರಾಮ ಪಂಚಾಯಿತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆ ಬಗ್ಗೆ ಏನು ಕ್ರಮ ತೆಗೆÀದುಕೊಳ್ಳುತ್ತಿಲ್ಲ ಇದರಿಂದಾಗಿ ಕಸದ ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ' ಎಂದು ಜನರು ಅಳಲು ತೋಡಿಕೊಂಡರು.
ವಿಲೇವಾರಿಯಾದ ಕಸದ ಸ್ಥಳದಲ್ಲಿ ದುರ್ನಾತ ಬರುತ್ತಿದ್ದು, , ವಾಯು ವಿವಾಹರಕ್ಕೆ   ಹೋಗುವ ಸ್ಥಿತಿಯಿಲ್ಲ. ಹೋದರೆ, ರಸ್ತೆಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿಯಿದೆ.ಇದರಿಂದ ಆರೋಗ್ಯಕ್ಕೆ ಸಮಸ್ಯೆ ಉಂಟಾಗುವುದು ಖಚಿತ' ಎಂದು ಹೇಳಿದರು.

ಗ್ರಾಮದ ವಾರ್ಡ್ ನಂಬರ್ ೩ ರ ಇಳಿಜಾರು ಪ್ರದೇಶ ವಾಗಿದೆ. ಚರಂಡಿಯ ( ಗಟಾರು  ) ಕೆಲಸ ಅರ್ಧಕ್ಕೆ ನಿಂತಿದ್ದರಿAದ ಚರಂಡಿಯ ಕೊಳಚೆ ನೀರು ರಸ್ತೆಯ ತುಂಬೆಲ್ಲ ಹರಡಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮಳೆ ಬಂತAದರೆ ಸಾಕು ರಸ್ತೆ ತುಂಬೆಲ್ಲ ಚರಂಡಿ ನೀರು ನಿಂತು ರಸ್ತೆ ಬ್ಲಾಕ್ ವಾಗುತ್ತದೆ . ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಾರಿ ತೊಂದರೆ ಆಗುತ್ತಲಿದೆ .ಈ ಕುರಿತು ಗ್ರಾಮ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರು ಏನು ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು  ತಮ್ಮ ಅಳಲು ತೋಡಿಕೊಂಡರು.


 ಹೇಳಿಕೆ ೦೧ : ದೊಡ್ಡ ಗ್ರಾಮ, ಸಿಬ್ಬಂದಿಗಳು ಇಬ್ಬರೇ ಇರುವುದರಿಂದ ಕಸದ ಸಮಸ್ಯೆ ಆಗುತ್ತಿದೆ. ಆದ್ದರಿಂದ ೧೫ ದಿನಕ್ಕೊಮ್ಮೆ ಕಸ ತೆಗೆಯುವಂತ ವ್ಯವಸ್ಥೆ ಇದೆ. ಹೆದ್ದಾರಿ ಪಕ್ಕದಲ್ಲಿ ಬಿದ್ದ ಕಸವನ್ನು ತೆಗೆಯುವಂತಹ ಕ್ರಮ ತೆಗೆದುಕೊಳ್ಳುತ್ತೇನೆ.
  ಪಿ . ಪಿ. ರಾವಳ , ಗ್ರಾಮ ಪಂಚಾಯತ ಅಧಿಕಾರಿ

ಹೇಳಿಕೆ ೦೨  ಚರಂಡಿ ( ಗಟಾರ ) ಅರ್ದಂ ಬರ್ದ ಕಾಮಗಾರಿ ಮಾಡಿ ರಸ್ಥೆ ತುಂಬೆಲ್ಲಾ ಕೊಳಚೆ ನೀರು ಹರಡುವುದರಿಂದ ಇಲ್ಲಿನ ಸಾರ್ವಜನಿಕರಿಗೆ
  ತೊಂದರೆಯಾಗುತ್ತಿದೆ.  ಜೊತೆಗೆ ರೋಗ ಹರಡುವ ಭೀತಿ ಇರುತ್ತದೆ. ಮತ್ತು ಪ್ರಮುಖ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಳೆದ ನಾಲ್ಕು ತಿಂಗಳಿನಿoದ ಕಸ ವೀಲೇವಾರಿಯಾಗದೆ ಹಾಗೆ ಬಿದ್ದಿರುತ್ತದೆ. ಕಸವನ್ನು ನಾಯಿ ಹಂದಿಗಳು ಚೆಲ್ಲಾ ಪಿಲ್ಲಿಯಾಗಿ ಮಾಡುತ್ತಲ್ಲಿವೆ .ವಾಹನಗಳು ಹಾದಾಡುವ ಸಮಯದಲ್ಲಿ ನಾಯಿ ಹಂದಿಗಳು  ಅಡ್ಡ ಬಂದರೆ ಅನಾಹುತ ಗ್ಯಾರಂಟಿ , ಹಲವು ಬಾರಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ತಿಳಿಸಿದರೊ  ಏನೊ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಸ್ಥಳೀಯ ನಿವಾಸಿ - ಶಾನುರ ಸುಲೆಮಾನ ರಾಮದುರ್ಗ










 

Monday, January 26, 2026

ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ | ಶಾಸಕ ಸಿದ್ದು ಸವದಿ


 ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ  |  ಶಾಸಕ ಸಿದ್ದು ಸವದಿ

ತೇರದಾಳ: ಒಂದು ರಾಜ್ಯ ಅಥವಾ ದೇಶವಾಗಲಿ ಸುರಕ್ಷಿತವಾಗಿರಬೇಕಾದರೆ ಅಲ್ಲಿ ಒಂದು ಒಳ್ಳೆಯ ಆಢಳಿತವಿರಬೇಕು. ಒಳ್ಳೆಯ ಆಢಳಿತ ನಡೆಸಬೇಕಾದರೆ ಅಲ್ಲಿ ಒಂದು ಸರ್ವಶ್ರೇಷ್ಠವಾದ ಆಢಳಿತ ಗ್ರಂಥವೆ ಬೇಕಾಗುತ್ತದೆ. ಅಂತಹ ಶ್ರೇಷ್ಠವಾದ ಗ್ರಂಥವೆAದರೆ ಅದುವೇ ನಮ್ಮ ಸಂವಿಧಾನ ಎಂದು ಶಾಸಕ ಸಿದ್ದು ಸವದಿ ಹೇಳಿದರು.
 
               ಪಟ್ಟಣದಲ್ಲಿ ನಿನ್ನೆ ಜನೇವರಿ ೨೬ ಗಣರಾಜ್ಯೋತ್ಸವದ ನಿಮಿತ್ಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೭೭ ನೇ ಗಣರಾಜ್ಯೋತ್ಸದಲ್ಲಿ ಗೌರವವಂದನೆ ಸ್ವಿಕರಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಸಾವಿರಾರು ಜಾತಿಗಳಿವೆ ಹಲವಾರು ದರ್ಮಗಳಿವೆ. ವಿವಿಧ ಭಾಷೆಗಳಿವೆ, ವಿವಿಧ ಧಾರ್ಮಿಕ ಆಚರಣೆಗಳಿವೆ, ಸಂಪ್ರದಾಯಗಳು ಹೀಗೇ ಎಷ್ಟೇ ವಿವಿಧತೆಯಿದ್ದರೂ ಯಾವುದೇ ಧರ್ಮಕ್ಕಾಗಲಿ, ಜಾತಿಗಾಗಲಿ, ಆಚರಣೆಗಾಗಲಿ ಒಂದಿಷ್ಟೂ ಧಕ್ಕೆಯಾಗದ ರೀತಿಯಲ್ಲಿ ಸಂವಿಧಾನ ರಚಿಸಿ ಡಾ.ಬಾಬಾಸಾಹೇಬರು ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದರು. ನಮ್ಮ ದೇಶದಲ್ಲಿ ಸಾಕಷ್ಟು ಹಬ್ಬಗಳಿವೆ ಆದರೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರö್ಯದಿನೋತ್ಸವ ಮಾತ್ರ ಅತ್ಯಂತ ಪರಮಪವಿತ್ರ ಹಬ್ಬಗಳಾಗಿವೆ. ಇಲ್ಲಿ ಯಾವುದೇ ಧರ್ಮವಿಲ್ಲ ಜಾತಿ ಇಲ್ಲ, ಮೇಲಿಲ್ಲ ಕೀಳಿಲ್ಲ, ನಾವೆಲ್ಲರೂ ಭಾರತೀಯರು ಎಂಬ ಪವಿತ್ರ ಭಾವನೆಯನ್ನು ಮೂಡಿಸುವಂತಹ ರಾಷ್ಟಿçÃಯ ಹಬ್ಬವಾಗಿವೆ. ನಮ್ಮನಮ್ಮ ಧರ್ಮ, ಆಚರಣೆ ನಮ್ಮ ಮನೆಯಲ್ಲಿರಲಿ ಆದರೆ ರಾಷ್ಟಿçÃಯ ಹಬ್ಬಗಳು ಬಂದಾಗ ನಾವೆಲ್ಲರೂ ಒಂದಾಗಬೇಕು. ಪರಸ್ಪರರಲ್ಲಿ ಸಾಮರಸ್ಯ ಮೂಡಿಸುವ ಈ ಹಬ್ಬಗಳು ಅತ್ಯಂತ ಶ್ರೇಷ್ಠಹಬ್ಬಗಳಾಗಿವೆ. ಕಾರಣ ನಮಗೆ ಸಮಾನತೆಯಿಂದ ಗೌರಯುತವಾಗಿ ಬದುಕುವ ಮೂಲಭೂತ ಹಕ್ಕುಗಳನ್ನು ನೀಡಿದ ಈ ರಾಷ್ಟಿçÃಯ ಹಬ್ಬವನ್ನು ನಾವೆಲ್ಲರೂ ಸೇರಿ ಅತ್ಯಂತ ಸಡಗರ ಸಂಭ್ರಮದಿAದ ಆಚರಿಸೋಣ. ಈ ನಾಡಿಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ ಗೌರವಿಸೋಣ ಎಂದರು. ತಹಶೀಲದಾರ ವಿಜಯಕುಮಾರ ಕಡಕೋಳ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಎಲ್ಲಾ ಶಾಲಾ ಮಕ್ಕಳು ನಮ್ಮ ನಾಡು ನುಡಿ ಹಿರಿಮೆ ಗರಿಮೆ ಮೆರೆಯುವಂತಹ ಗೀತೆಗಳಿಗೆ ನೃತ್ಯಮಾಡಿ ಗತಕಾಲದ ವೈಭವವನ್ನು ಮರುಕಳಿಸಿದರು. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲೂಕಾಢಳಿತದಿಂದ ಗೌರವಿಸಲಾಯಿತು. ವೇದಿಕೆಯ ಮೇಲೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭೆಯ ಸರ್ವಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಟಿ.ಪತ್ತಾರ ನಿರೂಪಿಸಿ ವಂದಿಸಿದರು.  

Friday, January 2, 2026

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ :

ಬದುಕುಗಾಗಿ ಸಂಕಲ್ಪ ತಾಳುವುದೇ ವರ್ಷಾಚರಣೆಯ ಮೂಲ ಆಶಯ : ಶೀತಲ ನಂದೆಪ್ಪನವರ ಅಭಿಮತ

ತೇರದಾಳ : ದೇವರು ಸೃಷ್ಠಿಸಿದ ಬದುಕು ಹರಿಯುವ ನೀರಿನಂತಿದ್ದು, ಪ್ರತಿ ಕ್ಷಣ ನಮ್ಮ ಬದುಕಿನಲ್ಲಿ ಯಶಸ್ಸು ಸಂಕಲನವಾದರೆ ವಯಸ್ಸು ವ್ಯವಕಲನವಾಗಿ,ಗೆದ್ದವರಿಗೆ ಖುಷಿ ಸೋತವರಿಗೆ ದು:ಖ ಹೀಗೆ ನೋವು ನಲಿವುಗಳ ಸಮ್ಮಿಲನವೇ ಬದುಕಾಗಿದ್ದು,ಕೆಟ್ಟದನ್ನು ದೂರವಿಟ್ಟು ಒಳ್ಳೆಯದನ್ನು ಸನಿಹಕ್ಕೆ ಬರಮಾಡಿಕೊಂಡು ಸುಂದರ ಬದುಕಿಗಾಗಿ ಸಂಕಲ್ಪ ತಾಳುವುದೇ ಹೊಸ ವರ್ಷಾಚರಣೆಯ ಮೂಲ ಆಶಯವಾಗಿದೆಯಂದು ಶಿಕ್ಷಕ ಶೀತಲ ನಂದೆಪ್ಪನವರ ಅಭಿಮತವನ್ನು ವ್ಯಕ್ತಪಡಿಸಿದರು. ಸಮೀಪದ ಹಳಿಂಗಳಿ ಗ್ರಾಮದ ವಿದ್ಯಾಕಾಶಿ ಶ್ರೀ ಸದ್ಗುರು ಶರಣಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ ಹೊಸವರ್ಷಾಚರಣೆಯ ಸಂಭ್ರಮವನ್ನು ಸಸಿಗೆ ನಿರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗತಿಸಿ ಹೋದ ವರುಷದ ಕಹಿ ನೆನಪುಗಳನ್ನು ಕಟ್ಟೆಯ ಮೇಲೆ ಬಿಟ್ಟು ಸಿಹಿ ನೆನಪುಗಳನ್ನು ರಟ್ಟೆಯಲ್ಲಿ ತೆಗೆದುಕೊಂಡು ಹೊಸ ವರುಷದಲ್ಲಿ ಉತ್ತಮ ಕಾಯಕವನ್ನು ನಿರ್ವಹಿಸಿ ಏಕಾಗ್ರತೆಯಿಂದ ಅಧ್ಯಯನವನ್ನು ಕೈಗೊಂಡು ಕಲಿಸಿದ ಶಾಲೆ,ಗುರುಗಳು ಹಾಗೂ ಹೆತ್ತವರಿಗೆ ಉತ್ತಮ ಕೀರ್ತಿ ತರುವುದರೊಂದಿಗೆ ಸ್ವಾವಲಂಬಿ ಬದುಕಿಗೆ ಉತ್ತಮ ವೇದಿಕೆಯನ್ನು ನಿರ್ಮಿಸಿಕೊಂಡು ಪ್ರತಿಯೊಬ್ಬರು ಆದರ್ಶ ವಿದ್ಯಾರ್ಥಿಗಳಾಗಬೇಕೆಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಂಜನಾ.ಯು ಅಬಕಾರ ಮಾತನಾಡಿ ನಿತ್ಯ ಸುರ್ಯೋದಯ ನಮ್ಮ ಬದುಕಿನ ಸುಂದರ ಕ್ಷಣವಾಗಿದ್ದು, ವಿದ್ಯಾರ್ಥಿಗಳು ಪ್ರಯತ್ನಶೀಲರಾಗಿ,ಏಕಾಗ್ರತೆಯಿಂದ ಓದಿನೆಡೆಗೆ ಹೆಚ್ಚಿನ ಗಮನ ಹರಿಸಿ,ಜಾಗತಿಕ ಜಗತ್ತಿನ ನಾಗಾಲೋಟದ ವೇಗಕ್ಕೆ ಪೂರಕವಾಗಿ ಓಡುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ವಾಯ್.ಎಚ್ ಅಲಾಸ ವಹಿಸಿದ್ದರು, ಅತಿಥಿಗಳಾಗಿ ಉಪಪ್ರಾಚಾರ್ಯೆ ಎಸ್.ಟಿ ಘಂಟಿ,ಹಿರಿಯ ಶಿಕ್ಷಕ ಎಸ್.ಟಿ ಕುಂಬಾರ,ಸುನಿತಾ ಪಾಟೀಲ,ವಿಲಯಲಕ್ಷಿö್ಮಪೂಜಾರಿ ಇದ್ದರು. ಶಿಕ್ಷಕರಾದ ಶ್ರೀಮತಿ ಗಿರಿಜಾ ಲಾಳಿ,ಸೋನಾಲಿ ಮಠಪತಿ ಹಾಗೂ ಶ್ರೀಶೈಲ ಬಸವನ್ನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 ಸಂಪಾದಕರು   : 
ಮಹಿಬೂಬ್ ಎಂ ಬಾರಿಗಡ್ಡಿ 

 

Monday, December 29, 2025

ಬುಲ್ಡೋಜರ್ ರಾಜಕಾರಣಕ್ಕೆ ಎಸ್ ಡಿ ಪಿ ಐ ತೀವ್ರ ಖಂಡನೆ :

ಬೆಂಗಳೂರಿನ ಫಕೀರ್ ಲೇಔಟ್ ನಿರಾಶ್ರಿತರ ಪರವಾಗಿ ತೇರದಾಳದಲ್ಲಿ SDPI ಬೃಹತ್ ಪ್ರತಿಭಟನೆ
ಬುಲ್ಡೋಜರ್ ರಾಜಕಾರಣಕ್ಕೆ ತೀವ್ರ ಖಂಡನೆ
ತೇರದಾಳ: ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮನೆಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಧ್ವಂಸಗೊಳಿಸಿ ಅವರನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರದ ಅಮಾನವೀಯ **“ಬುಲ್ಡೋಜರ್ ರಾಜಕಾರಣ”**ವನ್ನು ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಜದ್ ಖಾನ್ ಇನಾಮದಾರ ಅವರು, “ಬೆಂಗಳೂರಿನ ಫಕೀರ್ ಲೇಔಟ್‌ನಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡವರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿದೆ. ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸದೇ ಮನೆಗಳನ್ನು ನೆಲಸಮಗೊಳಿಸಿರುವುದು ಸಂವಿಧಾನ ವಿರೋಧಿ ನಡೆ. ನಿರಾಶ್ರಿತರಿಗೆ ತಕ್ಷಣ ಪುನರ್ವಸತಿ ಕಲ್ಪಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಬಾರಕ್ ಅಲ್ಲಾ ಖಾನ್ ಮಾತನಾಡಿ, ಸರ್ಕಾರ ಕೇವಲ ಬಡವರನ್ನೇ ಗುರಿಯಾಗಿಸಿಕೊಂಡು ಬುಲ್ಡೋಜರ್ ಪ್ರಯೋಗ ಮಾಡುತ್ತಿದೆ. ಅಧಿಕಾರವು ಬಡವರಿಗೆ ಆಸರೆಯಾಗಲು ಇರಬೇಕೇ ಹೊರತು, ಅವರನ್ನು ಅನಾಥರನ್ನಾಗಿ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಹುಸೇನ್ ಜಮಾದರ, ನಿಸಾರ್ ಅಲಾಸ್, ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮೈನುದ್ದೀನ್ ಮೋಮಿನ್, ಜೊತೆ ಕಾರ್ಯದರ್ಶಿ ಆಸಿಫ್ ಸಂಗತ್ರಾಸ್, ಕೋಶಾಧಿಕಾರಿ ಅಕ್ರಮ್ ಜಮಾದರ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Saturday, December 27, 2025

ನಿಧನ ವಾರ್ತೆ : ಹಳಂಗಳಿ ಗ್ರಾಮದ ಮುಸ್ಲಿಂ ಧರ್ಮದ ಹಿರಿಯರಾದ ಚಾಂದಸಾಬ ಕ ಲಾಡಖಾನ ನಿಧನ.

ನಿಧನ ವಾರ್ತೆ
ಚಾಂದಸಾಬ ಕ ಲಾಡಖಾನ  
ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ಮುಸ್ಲಿಂ ಸಮುದಾಯದ ಧರ್ಮ ಗುರು ಚಾಂದಸಾಬ ಕಬೀರಸಾಬ ಲಾಡಖಾನ ನಿಧನರಾಗಿದ್ದು,ಮೃತರಿಗೆ ೪ ಜನ ಹೆಣ್ಣುಮಕ್ಕಳು ಹಾಗೂ ಒರ್ವ ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಇವರ ಅಕಾಲಿಕ ಮರಣಕ್ಕೆ ಹಳಿಂಗಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಕಂಬನಿ ಮಿಡಿದಿದ್ದು, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊಂದಿಗೆ ಗೌರವಾರ್ಪನೆಯನ್ನು ಸಲ್ಲಿಸಲಾಯಿತು.

Friday, December 26, 2025

ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ || ಏಕ ಪಕ್ಷಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಿoದ ಖಂಡನೆ |


ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ
ಏಕ ಪಕ್ಷಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಿoದ ಖಂಡನೆ |

ತೇರದಾಳ 26  :ಬರೀ ಹೋರಾಟದಿಂದಲೇ ಪ್ರತಿಯೊಂದನ್ನು ಪಡೆಯುವ ದೌರ್ಭಾಗ್ಯವುಳ್ಳ ತೇರದಾಳ ತಾಲೂಕಿಗೆ ಬಹುದಿನಗಳ ನಂತರ ಸರಕಾರದ ವರದಾನವಾಗಿ ಮಂಜೂರಾದ ಅಗ್ನಿ ಶಾಮಕ ಠಾಣೆಯ ಕಟ್ಟಡದ ಶಂಕು ಸ್ಥಾಪನೆ ಸದ್ದಿಲ್ಲದೇ ಏಕಪಕ್ಷೀಯವಾಗಿ ತರಾತುರಿಯಲ್ಲಿ ಕೈಗೊಂಡಿರುವುದು ಸಂಶಯಕ್ಕೆ ಕಾರಣವಾಗಿದ್ದು, ಪಕ್ಷಾತೀತವಾಗಿ ಹಬ್ಬದಂತೆ ನೆರವೇರಬೇಕಾದ ಈ ಕಾರ್ಯಕ್ರಮವು ರಾಜಕೀಯ ನಾಯಕರ ಹಗ್ಗಜಗ್ಗಾಟದಲ್ಲಿ ಸ್ಮಶಾನ ಸದೃಶ್ಯವಾಗಿದ್ದು, ಕನಿಷ್ಠ ಸೌಜನ್ಯಕ್ಕಾದರೂ ಸ್ಥಳೀಯ ಪುರ ಸಭೆ ಅಧ್ಯಕ್ಷರು ಹಾಗೂ ಇತರ ಯಾವುದೇ ಪದಾಧಿಕಾರಿಗಳಿಗೆ ಮಾಹಿತಿ ಇಲ್ಲದೇ ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಶಂಕು ಸ್ಥಾಪನೆ ನೆರವೇರಿಸಿರುವುದನ್ನ ಖಂಡಿಸುವುದಾಗಿ ತಾಲೂಕಾ ಪ-ಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ನೇಮಣ್ಣಾ ಸಾವಂತನವರ ಆಕ್ರೋಶವನ್ನು ವ್ಯಕ್ತಪಡಿಸಿದರು.
            ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಅನುಪಾಲನೆ ಮುಖ್ಯವಾಗಿದ್ದು,ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿಗೆ ಪಕ್ಷದ ಲೇಬಲ್ ಬದಲಾಗಿ ಸರ್ಕಾರದ ಲೇಬಲ್ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಯೋಜಕರು ಸ್ಥಳೀಯ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ಪ್ರಾಧಾನ್ಯತೆ ನೀಡಬೇಕಾಗಿರುವುದು ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಸ್ಥಳೀಯ ಪ್ರಾಧಿಕಾರದ ಗಮನಕ್ಕೆ ತಾರದೇ ಕೇವಲ ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಮುಖಂಡರು ಮಾತ್ರ ಸೇರಿಕೊಂಡು ಗುರುವಾರ ಪಟ್ಟಣದ ಹೊರವಲಯದಲ್ಲಿ ಅಂದಾಜು ೩ ಕೋಟಿ ಮೊತ್ತದ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ನೆರೆವೇರಿಸಿದ್ದು ಶಾಸಕರ ಪಕ್ಷಬೇಧ ನೀತಿ ಪ್ರಚುರಪಡಿಸುವಂತಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕಾದ ಶಾಸಕರೇ ಮಲತಾಯಿ ಧೋರಣೆ ತಾಳಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
           
ಮರು ಶಂಕು ಸ್ಥಾಪನೆಗೆ ಆಗ್ರಹ : ಸದರಿ ಕಾಮಗಾರಿಯನ್ನು ಮಾನ್ಯ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪೂರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಸ್ಥಳೀಯ ತಹಶೀಲ್ದಾರ ಹಾಗೂ ಸರ್ವ ಪಕ್ಷಗಳ ಸ್ಥಾನಿಕ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಕೈಗೊಳ್ಳಲು ಆಗ್ರಹಿಸುವುದಾಗಿ ತಿಳಿಸಿದರು.
             ಪತ್ರಿಕಾಗೋಷ್ಠಿಯಲ್ಲಿ ಬಾಗಲೋಟೆ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಉಪಾಧ್ಯಕ್ಷ ಪಿ,ಎಸ್.ಮಾಸ್ತಿ, ದಯಾನಂದ ಕಾಳೆ, ಗೊಪಾಲ ಮಾಂಗ, ಮೈಬೂಬ ಜಮಾದಾರ ಮಾತನಾಡಿದರು. ರಾಜಾಸಾಬ ನಗಾರ್ಜಿ, ಸಂಜು ಹಾಡಕಾರ, ಮುನ್ನಾ ತಾಂಬೋಳಿ, ಸದಾಶಿವ ಶಿಂಗೆ, ಫಯಾಜ ಅತಾರಾವುತ, ಮಗೆಪ್ಪ ರೋಡಕರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.


 




Thursday, December 18, 2025

ಉಪವಾಸ ಸತ್ಯಾಗ್ರಹ ವೇದಿಕೆಗೆ ಬೆಂಬಲ ಸೂಚಿಸಿದ ರಬಕವಿ ಬನಹಟ್ಟಿ ನಗರದ ಆಟೋ ಚಾಲಕರು :

ಉಪವಾಸ ಸತ್ಯಾಗ್ರಹ ವೇದಿಕೆಗೆ ಬೆಂಬಲ ಸೂಚಿಸಿದ ಆಟೋ ಚಾಲಕರು :* . 


ರಬಕವಿ - ಬನಹಟ್ಟಿ :  ನಗರದಲ್ಲಿ ರಬಕವಿ - ಬನಹಟ್ಟಿ ಮಹೇಶವಾಡಗಿ ಸೇತುವೆಯ ತ್ವರಿತ ಪೂರ್ಣ ಕಾಮಗಾರಿಗೆ ಅಗ್ರಹಿಸಿ , ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ  ನಡೆಯುತ್ತಾ ಇದೆ . ಈ ಸೇತುವೆಯು ಹಲವಾರು ವರ್ಷಗಳ ಹಿಂದೆಯೇ ಚಾಲನೆಗೊಂಡು ಬಳಿಕ ಸ್ಥಗಿತಗೊಂಡಿದ್ದನ್ನು ವಿರೋಧಿಸಿ , ಹಲವು ಬಾರಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗದೆ ಉಪವಾಸ ಸತ್ಯಾಗ್ರಹ ಒಂದೇ ದಾರಿ ಎಂದು ಭಾವಿಸಿ ಜನಸಾಮಾನ್ಯರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ . ನಗರದ ಶಂಕರಲಿಂಗ್ ದೇವಸ್ಥಾನದ ಹತ್ತಿರ ವೇದಿಕೆಯಲ್ಲಿ ಸತ್ಯಾಗ್ರಹ ನಿರತ ಡಾ. ರವಿ ಜಮಖಂಡಿ ಇವರ ಮುಖಂಡತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ವೇದಿಕೆಗೆ ಅವಳಿ ನಗರಗಳ ರಬಕವಿ  - ಬನಹಟ್ಟಿ ಆಟೋ ಚಾಲಕರ ಹಾಗೂ ಮಾಲಕರ ಸಂಘಟನೆಗಳ ಒಕ್ಕೂಟವು ಬೆಂಬಲವನ್ನು ಸೂಚಿಸಿದರು.
 ಈ ಸಂದರ್ಭದಲ್ಲಿ ಬನಹಟ್ಟಿ ಶ್ರೀ ಕಾಡಸಿದ್ದೇಶ್ವರ ಆಟೋ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷ ರಂಜಾನ್ ಗೋರಿ, ಉಪಾಧ್ಯಕ್ಷ ಸುಭಾಷ್ ಪಾರ್ಥನಹಳ್ಳಿ ಸಿದ್ದಲಿಂಗ್ ಪಾಟೀಲ್ , ಗನಶೇದ್ ಹನಗಂಡಿ,  ಮುಸ್ತಾಕ ಪೆಂಡಾರಿ ,  ಆಕ್ರಂ  ರಾಜನ್ನವರ್, ಸುನಿಲ್ ಗೊಂದ ಕರ್,  ಅನಿಲ ಗೊಂಡಕರ,    ರಬಕವಿ ನಗರದ ಆಟೋ ಚಾಲಕರ ಸಂಘಟನೆಯ ಸದಸ್ಯರಾದ ರಮೇಶ್ ಕಾಕಾ ಹೊಸಕೋಟಿ ಹಾಗೂ ಕರವೇ ಗಜ ಸೇನೆ ಅಧ್ಯಕ್ಷ ಮಮ್ಮದ್ ಹುಸೇನ್ ಲಿಂಗರೆ ,  ಕೆಂಪು,  ದುಂಡಪ್ಪ ಹೊಸಕೋಟಿ ಇನ್ನೂ ಹಲವಾರು ಸದಸ್ಯರು ಚಾಲಕರು ಹಾಜರಿದ್ದರು.

Tuesday, September 16, 2025

ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಪ್ರಸಿದ್ಧ ಪಟಾಕಿ ಜಾತ್ರೆ : ಪಟ್ಟವರ್ಧನ್ ಸರ್ಕಾರ ಕಾಣಿಕೆ ಕೊಟ್ಟ ರಥಕ್ಕೆ ಮದ್ದಿನ ಸುರಿಮಳೆ :



ಬನಹಟ್ಟಿಯ ಪುಣ್ಯದ ತೇರ ಕಾಡಸಿದ್ದನ ಅವತಾರ, ಧನ್ಯ ಧನ್ಯ ಮಾನವ ಜನ್ಮ , ಧನ್ಯ ಧನ್ಯ ಮಾನವ ಜನ್ಮ , ಜಾತ್ರೆ ಬಂತು ಸಡಗರ .  

 ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆಯು ಸಪ್ಟಂಬರ್
16 ರಿಂದ ಸತತ ಮೂರು ದಿನಗಳ ಕಾಲ ನಡೆಯಲಿದ್ದು , ಮಂಗಳವಾರ ನಡೆಯುವ ರಥೋತ್ಸವದಲ್ಲಿ ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದರ ಮುಖಾಂತರ ಕಾಡಸಿದ್ದನಿಗೆ ಭಕ್ತಿ ಅರ್ಪಣೆ ಮಾಡುತ್ತಾರೆ . ಈ ನಗರದ ಜನ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಈ ತೇರಿನ ಮುಂದುಗಡೆ ಭಯ - ಭಕ್ತಿಯಿಂದ ಮದ್ದು ಸುಡುತ್ತಾರೆ . ಈ ಮದ್ದು ಸುಡುವಧನ್ನು ನೋಡಲಿಕ್ಕೆ ಸಾವಿರಾರು ಜನ ಜಂಗುಳಿ . ಇಷ್ಟು ಭಾರಿ ಪ್ರಮಾಣದಲ್ಲಿ ಮದ್ದು ಸುಡುವುದು ಜಿಲ್ಲೆಯಲ್ಲಿಯೇ ಪಟಾಕಿ ಮದ್ದಿನ ಜಾತ್ರೆ ಎಂದು ಪ್ರಸಿದ್ಧ ಹೆಸರುವಾಸಿಯಾಗಿದೆ. ಸುಟ್ಟ ಮದ್ದಿನ ಹೊಗೆ ದಟ್ಟವಾಗಿ ಇಡೀ ನಗರವೇ ಅವರಿಸಿರುತ್ತದೆ. 
 ಜಾತ್ರೆಯ ಮರುದಿನ ಅಂದ್ರೆ ಬುಧವಾರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಇರುತ್ತದೆ. ಈ ಕುಸ್ತಿ ಪಂದ್ಯಾವಳಿ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನ ಸೇರುತ್ತಾರೆ. ಇದೇ ರಾತ್ರಿ ನಾಟಕ - ಬೈಲಾಟ ಅಲ್ಲದೆ ಖ್ಯಾತ ಕನ್ನಡ ಜಾನಪದ ಪ್ರಸಿದ್ಧ ಖ್ಯಾತ ಹಾಡುಗಾರರ ಮನರಂಜನೆ ಕಾರ್ಯಕ್ರಮ ಕೂಡ ವಿಶೇಷವಾಗಿರುತ್ತದೆ. ಮೂರನೇ ದಿನ ಗುರುವಾರ ಅದ್ದೂರಿಯಾಗಿ ಕಳಸಾರೋಹನ ಕಾರ್ಯಕ್ರಮ ಕೂಡ ಮದ್ದು ಸುಡುವುದು ಮುಖಾಂತರ ನಗರದ ಸೋಮವಾರಪೇಟೆದವರಗೆ ಹೋಗುವದನ್ನು ವಿಶೇಷವಾಗಿರುತ್ತದೆ.

ಈ ರಥಕ್ಕೆ 150 ವರ್ಷಗಳ ಇತಿಹಾಸ ಉಂಟು .

 ಆರಾಧ್ಯ ದೈವ ನಗರದ ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ದಿನ ನಡೆಯುವ ರಥೋತ್ಸವ ಸುಂದರವಾಗಿ ಕಣ್ಣಿಗೆ ಆಕರ್ಷಣೀಯ . ಈ ರಥೋತ್ಸವಕ್ಕೆ ಮೆರಗು ತರುವುದು ಭವ್ಯವಾದ ( ತೇರು ) ಈ ರಥವನ್ನು ನೆರೆಯ ಜಮಖಂಡಿ ಸಂಸ್ಥಾನದ ಮಹಾರಾಜ ಪಟವರ್ಧನ ಸರ್ಕಾರ ಅವರು ಮಂಗಳವಾರ ಪೇಟೆ ದೈವ ಮಂಡಳಿಗೆ ಕಾಣಿಕೆಯಾಗಿ ನೀಡಿದ್ದರು.
 ಜಾತ್ರೆಯ ಸಂದರ್ಭದಲ್ಲಿ ( ತೇರಿನ ) ಕೊರತೆಯಿದ್ದಾಗ ಪಟ್ಟವರ್ಧನ್ ಸರ್ಕಾರದ ಮಹಾರಾಜರು ರಥವನ್ನು ನೀಡಿ, ಶ್ರೀ ಕಾಡಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಜರುಗುವ ರಥೋತ್ಸವಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ನಗರದ ದೈವ ಮಂಡಳಿಯ ಹಿರಿಯರಿಂದ ಕರಾರು ಪತ್ರ ಬರೆಯಿಸಿಕೊಂಡ ನಂತರ ತೇರವನ್ನು ( ರಥ ) ನೀಡಿದ್ದರು. ಈ ( ತೇರು ) ರಥವನ್ನು 150 ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯ ಇದ್ದುದ್ದರಿಂದ , ಈಗಷ್ಟೇ ಅದಕ್ಕೆ ಹೊಸ ಮೆರಗನ್ನು ನೀಡಿ ಈಗಲೂ ಅ ಕೇವಲ ರಥೋತ್ಸವಕ್ಕೆ ಮಾತ್ರ ಬಳಸುವುದನ್ನು ನೋಡಬಹುದು. 

 ಈ ರಥ ( ತೇರು ) ಬನಹಟ್ಟಿ ನಗರಕ್ಕೆ ಬಂದು 75 ವರ್ಷ, ಬರುವಕ್ಕಿಂತ ಮುಂಚೆ 80 ವರ್ಷ ಹಳೆಯ ರಥ . ಪಟ್ಟವರ್ಧನ್ ಸರ್ಕಾರದ ರಾಜವಾಡೆಯಲ್ಲಿ ಸೀಸವೆ ಕಟ್ಟಿಗೆಯಿಂದ ನಿರ್ಮಿಸಿದ ತೇರು 150ಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯದಾದ ದಾಖಲೆಯ ಇತಿಹಾಸ ಇದೆ .

 ಪ್ರಪ್ರಥಮ ಬಾರಿಗೆ ಮಹಾಪ್ರಸಾದ ಅದ್ದೂರಿ ರೊಟ್ಟಿ ಊಟ : 

 ಶ್ರೀ ಕಾಡಸಿದ್ದೇಶ್ವರ ಜಾತ್ರಾ ಕಮಿಟಿ ಈ ವರ್ಷ ವಿಶೇಷವಾಗಿ ಅದ್ದೂರಿ ರೊಟ್ಟಿ ಊಟದ ಮುಖಾಂತರ ಬರುವಂತ ಸಾವಿರಾರು ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ . ವಿಶೇಷವಾಗಿ ನಗರದ ಎಲ್ಲಾ ಸಮಾಜದ ಬಾಂಧವರಿಗೆ ಮನೆ ಮನೆಯಿಂದ ರೊಟ್ಟಿ ತಯಾರು ಮಾಡಿಕೊಂಡು ಬರುವಂತೆ ಆಹ್ವಾನ ನೀಡಿ ವಿಶೇಷವಾಗಿ ಜಾತ್ರೆಗೆ ಮತ್ತಷ್ಟು ಮೆರಗೂ ನೀಡಲು ಪ್ರಯತ್ನ ಮಾಡಿದ್ದಾರೆ. 


 ಲೇಖನ : ಮಹಿಬೂಬ್ ಎಂ ಬಾರಿಗಡ್ಡಿ
 ಸಂಯುಕ್ತ ಕರ್ನಾಟಕ ದಿನಪತ್ರಿಕೆಯ
  ತೇರದಾಳ್ ತಾಲೂಕ ವರದಿಗಾರರು ಹಾಗೂ ಪತ್ರಿಕೆಯ ಏಜೆಂಟರು, 
Mob : 9448698786
           9448593518

ಬನಹಟ್ಟಿ ನಗರದ ಪಟಾಕಿ ಜಾತ್ರೆಯ ಸರ್ವರಿಗೂ ಹಾರ್ದಿಕ ಶುಭಾಶಯಗಳು

ಸರ್ವರಿಗೂ ಜಾತ್ರೆಯ ಹಾರ್ದಿಕ ಶುಭಾಶಯಗಳು

ನಮ್ಮೂರ ಜಾತ್ರೆ

ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು

ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ ನೋಡಿ ಎಲ್ಲರೂ ಕುಣಿಯವರು

ಸುತ್ತುವ ಜೇಕಲಿ ಮಕ್ಕಳು ಕುಳಿತು ಕೇಕೇ ಹಾಕಿ ಹಾಡುವರು ಬಾನಲಿ ತೇಲುವ ತೊಟ್ಟಿಲಲ್ಲಿ ಕುಳಿತು ಕೊಂಡು ನಲಿಯುವರು

ಹಲವು ಬಗೆಯ ಆಟಿಕೆ ವಸ್ತು ರಂಗು ರಂಗಿನ ಬಳೆಗಳ ಸಂತೆ ನೋಡಲು ಕೊಳ್ಳಲು ಬರುವರು ಜನರು ಮರೆತು ತಮ್ಮಯ ನಿತ್ಯದ ಚಿಂತೆ

ಕಂಠಮಾಲೆಯು ರಥಕ್ಕೆ ಕಟ್ಟುತ ಹಾಲಾಗಿ ಜೇನಾಗಿ ಎಲ್ಲರೂ ಬೆರೆತು ಪೂಜೆಗೆ ತರುವರು ಕರ್ಪೂರ ಕಾಯಿ ಹಿಂದು ಮುಸ್ಲಿಮ್ ಭೇದವ ಮರೆತು

ರಥದಲ್ಲಿ ಕಾಡ ಸಿದ್ಧನ ಮೂರ್ತಿ ಅದೆಷ್ಟು ಸುಂದರ ಕಾಣುವುದು ಮನದಲ್ಲಿ ಪೂಜ್ಯ ಭಾವನೆ ಬೆಳೆಸಿ ಆತ್ಮಾನಂದವ ನೀಡುವುದು

ರುಚಿಕರ ನಮ್ಮ ಅವಲಕ್ಕಿ ಚೂಡಾ ಬೆಲ್ಲಶ್ ಬರ್ಫಿ ಪೇಡೆ ಕುಂದಾ ಬನಹಟ್ಟಿ ಜಾತ್ರೆಯ ಸೊಬಗನು ಸಾರುತ "" ಈ ಶಮ್ಸ್  ನು ರಚಿಸಿದ ಈ ಕವನಂದಾ

ರಚನೆ: ಶಮಶೋದ್ದಿನ್ ಶಮ್‌ನಿಯಾಜಿ (ಝಾರೆ ಸರ್) ಶಾಂತಿ ನಗರ ಬನಹಟ್ಟಿ-587 311 ಮೊ: 7259863787